Just In
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 4 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿಯ ವ್ರತಾಚರಣೆಗೆ ಸಹಕಾರಿಯಾಗಿರುವ ಸಾತ್ವಿಕ ಆಹಾರಗಳು
ನವರಾತ್ರಿ ಹಬ್ಬ ಹಿಂದೂಗಳಿಗೆ ಅತಿ ವಿಶೇಷವಾದುದು ಎಂಬ ಪ್ರತೀತಿ ಇದೆ. ಒಂಭತ್ತು ದಿನಗಳು ದೇವಿಯ ಆರಾಧನೆಯನ್ನು ಮಾಡಿ ದೇವರ ಆಶೀರ್ವಾದವನ್ನೂ ಕೃಪಾಕಟಾಕ್ಷವನ್ನೂ ಬೇಡಿಕೊಂಡು ಹೆಚ್ಚು ಪವಿತ್ರವಾಗಿ ಈ ದಿನವನ್ನು ನಾವು ಕಳೆಯುತ್ತೇವೆ. ನವ ದುರ್ಗೆಯರ ಆರಾಧನೆಯನ್ನು ಈ ಒಂಭತ್ತು ದಿನಗಳು ಒಳಗೊಂಡಿದ್ದು ಅತಿ ವಿಶೇಷ ಎಂದೆನಿಸಿದೆ. ನವರಾತ್ರಿಗೆ ಸುಲಭದಲ್ಲಿ ಮಾಡಬಹುದಾದ ಸ್ನ್ಯಾಕ್ಸ್ ರೆಸಿಪಿ
ಈ ದಿನಗಳಲ್ಲಿ ನಾವು ಮುಂಜಾನೆಯೇ ಎದ್ದು ಸ್ನಾನವನ್ನು ಮಾಡಿ ದೇವರ ಸ್ತೋತ್ರಗಳನ್ನು ಪಠಿಸಿ ದೇವರನ್ನು ಆರಾಧಿಸಬೇಕು. ಈ ದಿನಗಳಲ್ಲಿ ಆದಷ್ಟು ಸಾತ್ವಿಕ ಆಹಾರಗಳನ್ನು ಸೇವಿಸಬೇಕು ಎಂಬುದು ಕಡ್ಡಾಯವಾಗಿದೆ. ಶಾಖಾಹಾರಿ ಆಹಾರಗಳಿಗೆ ಈ ದಿನಗಳಲ್ಲಿ ಪ್ರಾಶಸ್ತ್ಯ ಹೆಚ್ಚು. ದೇವಿಯನ್ನು ಆರಾಧಿಸುವುದರಿಂದ ಆದಷ್ಟು ಶುಚಿಯಾಗಿ ಕಟ್ಟುನಿಟ್ಟಾಗಿ ನವರಾತ್ರಿ ವ್ರತವನ್ನು ಕೈಗೊಳ್ಳಬೇಕಾಗುತ್ತದೆ. ಈ ದಿನಗಳಲ್ಲಿ ಹೆಚ್ಚಿನವರು ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಬರಿಯ ಹಣ್ಣು ಹಂಪಲುಗಳನ್ನು ಸೇವಿಸಿ ದೇವರ ನಾಮ ಸ್ಮರಣೆಯಲ್ಲಿ ನಿರತರಾಗಿರುತ್ತಾರೆ. ನವರಾತ್ರಿಗಾಗಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸುವುದು ಹೇಗೆ?
ನೀವು
ಸೇವಿಸುವ
ಆಹಾರ
ಹೇಗಿರಬೇಕು
ಮತ್ತ
ಉಪವಾಸವನ್ನು
ಕೈಗೊಂಡರೂ
ಅದು
ನಿಮ್ಮ
ಆರೋಗ್ಯದ
ಮೇಲೆ
ಹೇಗೆ
ಕೆಟ್ಟ
ಪರಿಣಾಮವನ್ನು
ಬೀರಬಾರದು
ಎಂಬ
ಅಂಶಗಳ
ಮೇಲೆ
ಇಂದಿನ
ನಮ್ಮ
ಲೇಖನ
ದೃಷ್ಟಿ
ಬೀರುತ್ತಿದೆ.
ವ್ರತವನ್ನು
ಕೈಗೊಳ್ಳುವವರು
ಆದಷ್ಟು
ಆಯುರ್ವೇದ
ಗುಣಗಳಿರುವ
ಆಹಾರವನ್ನು
ಸೇವಿಸುವುದು
ಹೆಚ್ಚು
ಉತ್ತಮವಾಗಿರುತ್ತದೆ.
ಹಾಗಿದ್ದರೆ
ಇಂದಿನ
ಲೇಖನದಲ್ಲಿ
ಆರ್ಯರ್ವೇದ
ಗುಣಗಳಿರುವ
ಆಹಾರಗಳ
ಪಟ್ಟಿಯನ್ನು
ನಾವು
ನಿಮಗೆ
ನೀಡುತ್ತಿದ್ದು
ಇದು
ನಿಜಕ್ಕೂ
ನಿಮ್ಮ
ವ್ರತಾಚರಣೆಯಲ್ಲಿ
ಯಾವುದೇ
ಹಾನಿಯನ್ನು
ಉಂಟು
ಮಾಡದೇ
ನಿಮ್ಮ
ಆರೋಗ್ಯವನ್ನು
ಕಾಪಾಡುತ್ತದೆ.
ರಾತ್ರಿ ಸಮಯದಲ್ಲಿ ಆರೋಗ್ಯಪೂರ್ಣ ಆಹಾರಗಳನ್ನು ಸೇವಿಸಿ
ವ್ರತಾಚರಣೆ ಮಾಡುವ ಹಿಂದಿನ ದಿನ ಆರೋಗ್ಯ ಪೂರ್ಣ ಆಹಾರಗಳನ್ನು ಸೇವಿಸಿ ಇದರಿಂದ ವ್ರತದ ದಿನ ಸಾಕಷ್ಟು ಶಕ್ತಿ ನಿಮಗುಂಟಾಗುತ್ತದೆ. ವ್ರತದ ದಿನದಂದು ಆರೋಗ್ಯಪೂರ್ಣ ಜೀರ್ಣಕ್ರಿಯೆಗೆ ಇದು ಸಹಕಾರಿ.
ತಾಜಾ ಹಣ್ಣುಗಳನ್ನು ಸೇವಿಸಿ
ಉಪವಾಸದ ಸಮಯದಲ್ಲಿ ನೀವು ಸೇವಿಸುವ ಹಣ್ಣುಗಳು ತಾಜಾ ಆಗಿರಲಿ. ದೇಹಕ್ಕೆ ಅಗತ್ಯವಿರುವ ನ್ಯೂಟ್ರೀನ್ ಪ್ರೊಟೀನ್ಗಳನ್ನು ಇದು ಒದಗಿಸುತ್ತದೆ. ಬಾಳೆಹಣ್ಣನ್ನು ಒಂದು ಲೋಟ ಹಾಲಿನೊಂದಿಗೆ ಸ್ವೀಕರಿಸುವುದು ಹೊಟ್ಟೆಯನ್ನು ತುಂಬಿಸುತ್ತದೆ.
ಹಣ್ಣಿನ ರಸ
ತಾಜಾ ಹಣ್ಣಿನ ರಸವನ್ನು ಸೇವಿಸಿ. ಮಿಲ್ಕ್ ಶೇಕ್ ಅನ್ನು ಸೇವಿಸುವುದು ನಿಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ.
ಹುರಿದ ಆಹಾರಗಳು ಬೇಡ
ವ್ರತದ ಸಂದರ್ಭದಲ್ಲಿ, ಜನರು ಹುರಿದ ಆಹಾರಗಳನ್ನು ಸಾಕಷ್ಟು ತೆಗೆದುಕೊಳ್ಳುತ್ತಾರೆ. ಅತಿಯಾದ ತೂಕವನ್ನು ನಿವಾರಿಸಲು ಈ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸದಿರಿ.
ಖರ್ಜೂರ
ಬರೀ ಒಂದು ಆಹಾರ ತೆಗೆದುಕೊಳ್ಳುವಾಗ ಅದರ ಜೊತೆ ಖರ್ಜೂರವನ್ನು ತಿನ್ನಲು ಮರೆಯದಿರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದು ಮಾತ್ರವಲ್ಲ, ಹೊಟ್ಟೆ ಹಸಿವನ್ನು ನಿಯಂತ್ರಿಸಿ, ನೀವು ಮಾಡುವ ಕೆಲಸದಲ್ಲಿ ಕಾರ್ಯಮಗ್ನರಾಗುವಂತೆ ಮಾಡುತ್ತದೆ.
ತುಪ್ಪ
ವ್ರತದ ಅಡುಗೆಗಳನ್ನು ತಯಾರಿಸುವಾಗ ತುಪ್ಪವನ್ನು ಹಾಕಿ ತಯಾರಿಸಲು ಮರೆಯಬೇಡಿ. ಇದು ನರಗಳಿಗೆ ಶಕ್ತಿಯನ್ನು ತುಂಬುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಬಾದಾಮಿ
ಆಹಾರವನ್ನು ತೆಗೆದುಕೊಳ್ಳುವಾಗ 2-3 ಬಾದಾಮಿಯನ್ನು ಬಾಯಿಗೆ ಹಾಕಿಕೊಳ್ಳಿ. ಇದರಲ್ಲಿರುವ ಪೋಷಕಾಂಶ ನಿಮ್ಮ ಸುಸ್ತನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಅಂಜೂರ
ಉಪವಾಸ ಮಾಡುವವರು ತಿನ್ನಬೇಕಾದ ಮತ್ತೊಂದು ಬೆಸ್ಟ್ ಹಣ್ಣೆಂದರೆ ಅಂಜೂರ. ಇದರಲ್ಲಿ ಅಧಿಕ ಪೋಷಕಾಂಶವಿದ್ದು, 2 ಹೊತ್ತು ಊಟ ಮಾಡದೆ ಬರೀ ಒಂದು ಹೊತ್ತು ಊಟ ಮಾಡಿದರೂ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಅಂಜೂರದಿಂದ ಪಡೆಯಬಹುದು.
ನಿಂಬೆ ಹಣ್ಣು
ಉಪವಾಸ ಮಾಡುವವರು ಆಹಾರವನ್ನು ತೆಗೆದುಕೊಳ್ಳುವಾಗ ಲೋಟ ನಿಂಬೆ ಶರಬತ್ತು ಕುಡಿಯಿರಿ. ಇದು ದೇಹದಲ್ಲಿ ಉತ್ಸಾಹವನ್ನು ತುಂಬಿ ಸುಸ್ತನ್ನು ಹೋಗಲಾಡಿಸುತ್ತದೆ.
ಸೇಬು ಹಣ್ಣುಗಳು
ಹಣ್ಣುಗಳನ್ನು ತಿನ್ನುವಾಗ ಸೀಸನ್ ಫುಡ್ ತಿನ್ನಿ, ಆಹಾರ ತಿಂದ ಬಳಿಕ ಒಂದು ಸೇಬು ತಿನ್ನುವುದು ಒಳ್ಳೆಯದು.
ಶುಂಠಿ
ಈರುಳ್ಳಿ, ಬೆಳ್ಳುಳ್ಳಿ ವ್ರತ ಅಡುಗೆಗಳಲ್ಲಿ ಬಳಸುವುದಿಲ್ಲ, ಆದರೆ ಶುಂಠಿಯನ್ನು ಬಳಸಬಹುದು, ಶುಂಠಿ ಬಳಸಿ, ಅದರ ಗುಣ ಪಡೆಯಿರಿ.
ಸರಿಯಾಗಿ ನೀರು ಕುಡಿಯಿರಿ
ಆರೋಗ್ಯಕರ ಉಪವಾಸಕ್ಕಾಗಿ ಇದೊಂದು ಒಳ್ಳೆಯ ಸಲಹೆಯಾಗಿದೆ. ಏನನ್ನೂ ತಿನ್ನದೆ ವ್ರತವನ್ನು ಹಿಡಿಯುವ ಭಕ್ತಾದಿಗಳು ಸಾಕಷ್ಟು ನೀರನ್ನು ಕುಡಿಯಲೇಬೇಕು. ಇದು ನಿಮ್ಮನ್ನು ಹೊಟ್ಟೆ ಭರ್ತಿಯಾಗಿರುವಂತೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.