Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಧುಮೇಹಿಗಳು ಈ ಸಿಹಿ ಹಣ್ಣುಗಳನ್ನು ತಿನ್ನಬಹುದು
ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರಗಳನ್ನು ತಿನ್ನಬೇಕು. ಸಿಹಿ ಅಂತೂ ಮುಟ್ಟಲೇಬಾರದು.
ಹಾಗಂತ ಸಿಹಿ ಹಣ್ಣುಗಳಲ್ಲಿ ಕೆಲವೊಂದು ಹಣ್ಣುಗಳನ್ನು ತಿನ್ನಬಹುದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸುವುದಿಲ್ಲ, ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಈ ಕೆಳಗೆ ಕೆಲವೊಂದು ಹಣ್ಣುಗಳ ಪಟ್ಟಿ ನೀಡಲಾಗಿದೆ. ಈ ಹಣ್ಣುಗಳಲ್ಲಿ ಸಕ್ಕರೆಯಂಶ ಕಡಿಮೆ ಇದ್ದು ಪ್ರೊಟೀನ್, ವಿಟಮಿನ್ಸ್ ಅಧಿಕವಿರುತ್ತದೆ. ಮಧುಮೇಹಿಗಳಿಗೆ ಸಿಹಿ ತಿನ್ನಬೇಕೆಂದು ಅನಿಸಿದಾಗ ಈ ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಎಲ್ಲಿ ಅಪಾಯ ಉಂಟಾಗುತ್ತದೆ ಎಂಬ ಭಯ ಪಡಬೇಕಾದ ಅವಶ್ಯಕತೆ ಕೂಡ ಇಲ್ಲ.

ಪೇರಳೆ (ಪಿಯರ್ಸ್)
ಇದರಲ್ಲಿ ಪೆಕ್ಟಿನ್ ಅಂಶ ಅಧಿಕವಿದ್ದು, ಇದನ್ನು ಮಿತಿಯಲ್ಲಿ ತಿಂದರೆ ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಆಪ್ರಿಕಾಟ್
ತಾಜಾ ಆಪ್ರಿಕಾಟ್ ಗಳನ್ನು ತಿನ್ನುವ ಬದಲು ಒಣ ಆಪ್ರಿಕಾಟ್ ತಿನ್ನುವುದು ಒಳ್ಳೆಯದು. ಇದರಲ್ಲಿ ಪೊಟಾಷ್ಯಿಯಂ ಅಧಿಕವಿದ್ದು ಮಧುಮೇಹಿಗಳ ಆರೋಗ್ಯಕ್ಕೆ ಈ ಪೋಷಕಾಂಶ ಅವಶ್ಯಕ.

ಬೆರ್ರಿ
ಎಲ್ಲಾ ಬಗೆಯ ಬೆರ್ರಿ ಹಣ್ಣುಗಳನ್ನು ತಿನ್ನಬಹುದು. ಈ ಬೆರ್ರಿ ಹಣ್ಣುಗಳು ಮಧುಮೇಹಿಗಳ ದೇಹದಲ್ಲಿರುವ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ.

ಚೆರ್ರಿ
ತುಂಬಾ ಸಿಹಿ ತಿನ್ನಬೇಕೆಂದು ಅನಿಸಿದಾಗ ಕೃತಕ ಸಿಹಿ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ. ಚೆರ್ರಿ ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ. ಇದರಲ್ಲಿರುವ ನಾರಿನಂಶ ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ.

ದ್ರಾಕ್ಷಿ
ದ್ರಾಕ್ಷಿಯನ್ನು ಮಿತಿಯಲ್ಲಿ ತಿನ್ನಬಹುದು. ಹೆಚ್ಚು ತಿಂದರೆ ಇದರಲ್ಲಿ ಕಾರ್ಬೋಹೈಟ್ರೇಟ್ ಇದ್ದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸಬಬಹುದು. ಆದ್ದರಿಂದ ತಿನ್ನಬೇಕೆಂದು ಅನಿಸಿದಾಗ ದಿನದಲ್ಲಿ 3-4 ದ್ರಾಕ್ಷಿ ತಿನ್ನಬಹುದು.

ಪ್ಲಮ್ಸ್
ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹಾಗೂ ಕ್ಯಾಲೋರಿ ಕಡಿಮೆಯಿದ್ದು ನಾರಿನಂಶ ಅಧಿಕವಿರುತ್ತದೆ. ಆದ್ದರಿಂದ ಮಧುಮೇಹಿಗಳಿಗೆ ತಿನ್ನಲು ಸೂಕ್ತವಾದ ಹಣ್ಣು ಇದಾಗಿದೆ.

ಕಿತ್ತಳೆ
ಇದರಲ್ಲಿ ವಿಟಮಿನ್ ಸಿ ಇದ್ದು, ಇದರಲ್ಲಿರುವ ನಾರಿನಂಶ ದೇಹವು ಸಕ್ಕರೆಯಂಶವನ್ನು ಹೀರಿಕೊಳ್ಳುವುದನ್ನು ನಿಧಾನ ಮಾಡುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.

ಗ್ರೇಪ್ ಫ್ರೂಟ್
ಇದನ್ನು ತಿಂದರೆ ನೈಸರ್ಗಿಕವಾಗಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳಬಹುದು, ಅಲ್ಲದೆ ಇದು ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.

ಬೆಣ್ಣೆ ಹಣ್ಣು
ಈ ಹಣ್ಣಿನಲ್ಲಿ ಪೊಟಾಷ್ಯಿಯಂ ಅಧಿಕವಿದೆ. ಇದನ್ನು ತಿಂದರೆ triglyceride ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಕರ್ಬೂಜದ ಹಣ್ಣು
ಈ ಹಣ್ಣು ಕೂಡ ಸಿಹಿಯಾಗಿದ್ದು, ಮಧುಮೇಹಿಗಳನ್ನು ಈ ಹಣ್ಣನ್ನು ತಿಂದರೆ ಯಾವುದೇ ಅಪಾಯ ಉಂಟಾಗುವುದಿಲ್ಲ. ತುಂಬಾ ಹಣ್ಣಾದ ಕರ್ಬೂಜವನ್ನು ತಿನ್ನದಿರುವುದು ಒಳ್ಳೆಯದು.

ಸೇಬು
ಸೇಬು ತಿಂದರೆ ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳು ಪ್ರತಿದಿನ ಒಂದು ಸೇಬು ತಿನ್ನುವುದು ಒಳ್ಳೆಯದು.



Click it and Unblock the Notifications
