Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ತರಚು ಗಾಯಕ್ಕೆ ಪರಿಣಾಮಕಾರಿ ಮನೆಮದ್ದು

1. ಗಾಯವಾದ ಭಾಗಕ್ಕೆ ಐಸ್ ಪ್ಯಾಕ್ ಇಡಬೇಕು. ಈ ರೀತಿ 20ರಿಂದ 30 ನಿಮಿಷ ಇಡಬೇಕು. ಈ ರೀತಿ ಮಾಡಿದರೆ ಗಾಯದ ಉರಿ ಕಡಿಮೆಯಾಗಿ ರಕ್ತ ಹೆಪ್ಪುಗಟ್ಟುವುದು. ಆದರೆ ಈ ರೀತಿ ಐಸ್ ಪ್ಯಾಕ್ ಇಡುವಾಗ ಐಸ್ ತುಂಡುಗಳನ್ನು ನೇರವಾಗಿ ಗಾಯದ ಮೇಲೆ ಇಡಬಾರದು. ಐಸ್ ಅನ್ನು ಒಂದು ಟವಲ್ ನಲ್ಲಿ ಸುತ್ತಿ ನಂತರ ಗಾಯದ ಮೇಲೆ ಇಡಬೇಕು.
2. ಕಾಲು ಅಥವಾ ಕೈಗೆ ತರಚು ಗಾಯಗಳಾಗಿದ್ದರೆ ಆ ಭಾಗಗಳನ್ನು ಆದಷ್ಟು ಮೇಲಕ್ಕೆ ಎತ್ತಿ ಇಡಬೇಕು.
3. ಗಾಯಗಳಾದರೆ ಆಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಆಸ್ಪಿರಿನ್ ರಕ್ತ ಬೇಗನೆ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
4. ಗಾಯವಾಗಿ 48 ಗಂಟೆಗಳ ಬಳಿಕ ಬಟ್ಟೆಯನ್ನು ಬಿಸಿ ಮಾಡಿ ಶಾಖ ಕೊಡಬೇಕು. ಈ ರೀತಿ ಮಾಡಿದರೆ ಆ ಭಾಗದಲ್ಲಿ ರಕ್ತ ಸಂಚಾರಕ್ಕೆ ಸಹಾಯಕವಾಗುತ್ತದೆ.
ವೈದ್ಯಕೀಯ ನೆರವು ಯಾವಾಗ ಪಡೆಯಬೇಕು?
1. ಗಾಯವಾಗಿ ಅದು ಬೇಗನೆ ಒಣಗದೆ ಆ ಭಾಗ ದಪ್ಪವಾಗಿ ತುಂಬಾ ನೋವಾಗುತ್ತಿದ್ದರೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.
2. ಯಾವುದೇ ಕಾರಣವಿಲ್ಲದೆ ಶರೀರದಲ್ಲಿ ಗಾಯ ಕಂಡುಬಂದರೆ ವೈದ್ಯರನ್ನು ಕಾಣಬೇಕು.
3. ಹೆಬ್ಬರಳು ಮತ್ತು ಕೈಬೆರಳುಗಳಲ್ಲಿ ಗಾಯ ಕಂಡು ಬಂದು ಆ ಭಾಗ ತುಂಬಾ ನೋಯುತ್ತಿದ್ದರೆ ವೈದ್ಯರನ್ನು ಕಂಡು ಪರೀಕ್ಷಿಸಬೇಕು.
4. ಗಾಯವಾಗಿ ಎರಡು ವಾರಗಳಾದರೂ ಗಾಯ ಒಣಗದಿದ್ದರೆ ಸುಮ್ಮನೆ ಇರದೆ ವೈದ್ಯರನ್ನು ಕಂಡು ಸಲಹೆ ಪಡೆಯಬೇಕು.
5. ಕೆಲವೊಮ್ಮೆ ತಲೆಯಲ್ಲಿ ಬಿದ್ದು ಗಾಯವಾದಂತೆ ಗಾಯ ಕಂಡು ಬರುತ್ತದೆ ಆದರೆ ಆ ವ್ಯಕ್ತಿ ಎಲ್ಲಿಯೂ ಬಿದ್ದಿರುವುದಿಲ್ಲ ಅಥವಾ ಯಾವುದೇ ಅಪಘಾತ ಉಂಟಾಗಿರುವುದಿಲ್ಲ ಆದರೂ ಗಾಯ ಕಂಡು ಬಂದಿರುತ್ತದೆ. ಈ ರೀತಿ ಕಂಡು ಬಂದರೆ ತಲೆಯಲ್ಲಿ ಯಾವುದೋ ಕಾಯಿಲೆ ಇರುತ್ತದೆ ಆದ್ದರಿಂದ ಈ ರೀತಿ ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications