Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಡುಗೆ ಮನೆಯಲ್ಲಿರುವ ಬೆಸ್ಟ್ ಔಷಧಿ ಯಾವುದು?

ಘಮಲು ಮಾತ್ರವಲ್ಲ, ತನ್ನದೇ ಔಷಧೀಯ ಗುಣವನ್ನೂ ಹೊಂದಿರುತ್ತದೆ. ಈ ಮಸಾಲೆ ಪದಾರ್ಥಗಳನ್ನು ಆಯುರ್ವೇದದಲ್ಲೂ ಹೆಚ್ಚು ಖ್ಯಾತಿ ಪಡೆದುಕೊಂಡಿವೆ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಔಷಧೀಯ ವಸ್ತುಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.
1. ಶುಂಠಿ: ಭಾರತೀಯ ಮಸಾಲೆ ಖಾದ್ಯಗಳಲ್ಲಿ ಶುಂಠಿಯಿಲ್ಲದೆ ರುಚಿಯೇ ಇರುವುದಿಲ್ಲ. ರಕ್ತ ಕಟ್ಟುವಿಕೆ ಮತ್ತು ಜ್ವರಕ್ಕೆ ಇದು ಒಳ್ಳೇ ಮದ್ದು. ತಲೆಸುತ್ತು ಮತ್ತು ಭೇದಿಯನ್ನೂ ಶುಂಠಿ ನಿವಾರಿಸುತ್ತದೆ.
2. ಅರಿಶಿಣ: ಕ್ಯಾನ್ಸರ್ ನಿವಾರಕ ಅಂಶ ಅರಿಶಿಣದಲ್ಲಿದೆ. ಅನೇಕ ರೋಗಗಳಿಗೆ ಅರಿಶಿಣ ಮದ್ದು. ಇದು ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವುದಲ್ಲದೆ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅರಿಶಿಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸಲೂ ಸೇವಿಸಬಹುದು. ಕೆಮ್ಮು, ನೆಗಡಿ ಶೀತಕ್ಕೆ ರಾಮಬಾಣ. ರಕ್ತ ನಾಳಗಳಲ್ಲಿ ಸೇರಿಕೊಳ್ಳುವ ಕ್ರಿಮಿಗಳನ್ನು ಅರಿಶಿಣ ಕೊಲ್ಲುವುದರಿಂದ ಹೊಳೆಯುವ ತ್ವಚೆಯನ್ನೂ ಪಡೆಯಬಹುದು.
3. ಮೆಂತ್ಯೆ: ಮೆಂತ್ಯೆ ಕಾಳಿನಲ್ಲಿ ವಿಟಮಿನ್ ಇ ಹೆಚ್ಚಿದೆ. ಕೂದಲಿನ ಬೆಳವಣಿಗೆಗೆ ಮೆಂತ್ಯೆ ತುಂಬಾ ಸಹಕಾರಿ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ಇದನ್ನು ಮಧುಮೇಹಿಗಳು ಸೇವಿಸುತ್ತಾರೆ. ಈ ಮೆಂತ್ಯೆ ಮ್ಯುಕೊಸಲ್ ಫ್ಲುಯಿಡ್ ಉತ್ಪಾದಿಸಿ ವಿಷಕಾರಿ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೂ ಮೆಂತ್ಯೆ ಒಳ್ಳೆಯದು.
4. ಇಂಗು: ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಇಂಗು ಪರಿಣಾಮಕಾರಿ. ಉಸಿರಾಟದ ತೊಂದರೆ, ಅಸ್ತಮಾ ಮತ್ತು ಕೆಮ್ಮಿದ್ದವರಿಗೂ ಇಂಗಿನ ಸೇವನೆ ಇರಬೇಕು. ಇಂಗಿನ ಒಗರು ವಾಸನೆ ಬ್ಯಾಕ್ಟೀರಿಯಾ ಕೊಂದುಹಾಕುತ್ತದೆ.
5. ಜೀರಿಗೆ: ಜೀರಿಗೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆದು, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಯನ್ನು ಹೋಗಿಸುತ್ತದೆ. ಇದರಲ್ಲಿ ಕಬ್ಬಿಣಾಂಶ ಮತ್ತು ಖನಿಕಾಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪಿತ್ತವನ್ನೂ ನಿವಾರಿಸುತ್ತದೆ.
6. ಲವಂಗ: ಲವಂಗ ಬಾಯಿಯ ಸ್ವಾಸ್ಥ್ಯಕ್ಕೆ ಹೆಚ್ಚು ಉಪಯೋಗ. ಹಲ್ಲು ನೋವಿಗೆ ಮತ್ತು ಸಂಧಿವಾತಕ್ಕೆ ಲವಂಗದ ಎಣ್ಣೆಗಿಂತ ಬೇರೆ ಮದ್ದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
