Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅಡುಗೆ ಮನೆಯಲ್ಲಿರುವ ಬೆಸ್ಟ್ ಔಷಧಿ ಯಾವುದು?

ಘಮಲು ಮಾತ್ರವಲ್ಲ, ತನ್ನದೇ ಔಷಧೀಯ ಗುಣವನ್ನೂ ಹೊಂದಿರುತ್ತದೆ. ಈ ಮಸಾಲೆ ಪದಾರ್ಥಗಳನ್ನು ಆಯುರ್ವೇದದಲ್ಲೂ ಹೆಚ್ಚು ಖ್ಯಾತಿ ಪಡೆದುಕೊಂಡಿವೆ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಔಷಧೀಯ ವಸ್ತುಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.
1. ಶುಂಠಿ: ಭಾರತೀಯ ಮಸಾಲೆ ಖಾದ್ಯಗಳಲ್ಲಿ ಶುಂಠಿಯಿಲ್ಲದೆ ರುಚಿಯೇ ಇರುವುದಿಲ್ಲ. ರಕ್ತ ಕಟ್ಟುವಿಕೆ ಮತ್ತು ಜ್ವರಕ್ಕೆ ಇದು ಒಳ್ಳೇ ಮದ್ದು. ತಲೆಸುತ್ತು ಮತ್ತು ಭೇದಿಯನ್ನೂ ಶುಂಠಿ ನಿವಾರಿಸುತ್ತದೆ.
2. ಅರಿಶಿಣ: ಕ್ಯಾನ್ಸರ್ ನಿವಾರಕ ಅಂಶ ಅರಿಶಿಣದಲ್ಲಿದೆ. ಅನೇಕ ರೋಗಗಳಿಗೆ ಅರಿಶಿಣ ಮದ್ದು. ಇದು ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವುದಲ್ಲದೆ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅರಿಶಿಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸಲೂ ಸೇವಿಸಬಹುದು. ಕೆಮ್ಮು, ನೆಗಡಿ ಶೀತಕ್ಕೆ ರಾಮಬಾಣ. ರಕ್ತ ನಾಳಗಳಲ್ಲಿ ಸೇರಿಕೊಳ್ಳುವ ಕ್ರಿಮಿಗಳನ್ನು ಅರಿಶಿಣ ಕೊಲ್ಲುವುದರಿಂದ ಹೊಳೆಯುವ ತ್ವಚೆಯನ್ನೂ ಪಡೆಯಬಹುದು.
3. ಮೆಂತ್ಯೆ: ಮೆಂತ್ಯೆ ಕಾಳಿನಲ್ಲಿ ವಿಟಮಿನ್ ಇ ಹೆಚ್ಚಿದೆ. ಕೂದಲಿನ ಬೆಳವಣಿಗೆಗೆ ಮೆಂತ್ಯೆ ತುಂಬಾ ಸಹಕಾರಿ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ಇದನ್ನು ಮಧುಮೇಹಿಗಳು ಸೇವಿಸುತ್ತಾರೆ. ಈ ಮೆಂತ್ಯೆ ಮ್ಯುಕೊಸಲ್ ಫ್ಲುಯಿಡ್ ಉತ್ಪಾದಿಸಿ ವಿಷಕಾರಿ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೂ ಮೆಂತ್ಯೆ ಒಳ್ಳೆಯದು.
4. ಇಂಗು: ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಇಂಗು ಪರಿಣಾಮಕಾರಿ. ಉಸಿರಾಟದ ತೊಂದರೆ, ಅಸ್ತಮಾ ಮತ್ತು ಕೆಮ್ಮಿದ್ದವರಿಗೂ ಇಂಗಿನ ಸೇವನೆ ಇರಬೇಕು. ಇಂಗಿನ ಒಗರು ವಾಸನೆ ಬ್ಯಾಕ್ಟೀರಿಯಾ ಕೊಂದುಹಾಕುತ್ತದೆ.
5. ಜೀರಿಗೆ: ಜೀರಿಗೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆದು, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಯನ್ನು ಹೋಗಿಸುತ್ತದೆ. ಇದರಲ್ಲಿ ಕಬ್ಬಿಣಾಂಶ ಮತ್ತು ಖನಿಕಾಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪಿತ್ತವನ್ನೂ ನಿವಾರಿಸುತ್ತದೆ.
6. ಲವಂಗ: ಲವಂಗ ಬಾಯಿಯ ಸ್ವಾಸ್ಥ್ಯಕ್ಕೆ ಹೆಚ್ಚು ಉಪಯೋಗ. ಹಲ್ಲು ನೋವಿಗೆ ಮತ್ತು ಸಂಧಿವಾತಕ್ಕೆ ಲವಂಗದ ಎಣ್ಣೆಗಿಂತ ಬೇರೆ ಮದ್ದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications