Latest Updates
-
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ?
ಕೋವಿಡ್-19 ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ನೀಡಬೇಕಾದ ಆಹಾರಗಳಿವು
ಭಾರತದಲ್ಲಿ 5 ತಿಂಗಳ ಹಿಂದೆ 500-1000ದ ಒಳಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 30 ಲಕ್ಷ ತಲುಪಿದೆ. ಕರ್ನಾಟಕದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ ಎರಡು ಲಕ್ಷ ಮೀರಿದೆ. ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗುತ್ತಿದೆ. ಆದರೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಂಖ್ಯೆಯೂ ಭಾರತದಲ್ಲಿ ಅಧಿಕವಿದೆ.
ಯಾರು ಕೊರೊನಾ ಸೋಂಕಿಗೆ ಒಳಗಾಗಿರುತ್ತಾರೋ ಅವರಿಗೆ ಔಷಧಿಯ ಜೊತೆಗೆ ಬೇಗನೆ ಚೇತರಿಸಿಕೊಳ್ಳಲು ಪೌಷ್ಠಿಕ ಆಹಾರಗಳ ಸೇವನೆಯೂ ಅಷ್ಟೇ ಮುಖ್ಯ. ಇದಕ್ಕಾಗಿ ಕರ್ನಾಟಕ ಸರ್ಕಾರವೂ ಜುಲೈನಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ಆಹಾರದ ಮೆನು ಹೇಗಿರಬೇಕು ಎಂಬ ಮಾರ್ಗ ಸೂಚಿಯನ್ನು ಕೂಡ ನೀಡಿತ್ತು.

ಇದೀಗ ಹೆಚ್ಚಿನ ರೋಗ ಲಕ್ಷಣಗಳು ಇಲ್ಲದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೂಡ ಆಹಾರ ಕ್ರಮದ ಕಡೆ ಗಮನ ನೀಡುವುದು ಒಳ್ಳೆಯದು. ಇದರಿಂದ ಬೇಗನೆ ಚೇತರಿಸಿಕೊಳ್ಳಬೇಕಾಗಿದೆ.
ಸರ್ಕಾರಕ್ಕೆ ತಜ್ಞರು ನೀಡಿರುವ ಸಲಹೆ ಆಧಾರದ ಮೇಲೆ ನಾವಿಲ್ಲಿ ಕೊರೊನಾ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ನೀಡಬೇಕಾದ ಆಹಾರಕ್ರಮದ ಬಗ್ಗೆ ಹೇಳಿದ್ದೇವೆ ನೋಡಿ:

7 ಗಂಟೆಗೆ ಬ್ರೇಕ್ಫಾಸ್ಟ್
ಕೊರೊನಾ ಸೋಂಕಿತರಿಗೆ ಬೆಳಗ್ಗೆ 7 ಗಂಟೆಗೆ ಆಹಾರ ನೀಡಬೇಕು
ಬೆಳಗ್ಗೆ 7 ಗಂಟೆಗೆ ಬಿಸಿ ಉಪಾಹಾರ ನೀಡಬೇಕು. ಉಪಾಹಾರಕ್ಕೆ ರವೆ ಇಡ್ಲಿ, ಪೊಂಗಲ್ , ದೋಸೆ, ಕಿಚಡಿ, ಉಪ್ಪಿಟ್ಟು ಈ ರೀತಿಯ ಆಹಾರಗಳನ್ನು ನೀಡಬಹುದು. 10 ಗಂಟೆಗೆ ಹಣ್ಣಿನ ಜ್ಯೂಸ್ ಅಥವಾ ಗಂಜಿ ನೀಡಬೇಕು.

ಮಧ್ಯಾಹ್ನದ ಊಟ
ಮಧ್ಯಾಹ್ನ ಬಿಸಿ ಬಿಸಿಯಾದ ಅನ್ನ ಅಥವಾ ಚಪಾತಿ ತಿನ್ನಬಹುದು. ಇನ್ನು ಆಹಾರದಲ್ಲಿ ಮೊಸರು, ಮೊಟ್ಟೆ, ಪಲ್ಯ ಇವುಗಳನ್ನು ನೀಡಬೇಕು. ಮೊಟ್ಟೆ ತಿನ್ನದವರು ಮೊಟ್ಟೆಯ ಬದಲಿಗೆ ಬಾಳೆಹಣ್ಣು ಸೇವಿಸುವುದು ಒಳ್ಳೆಯದು.

ಸಂಜೆ
ಸಂಜೆ ಹಣ್ಣುಗಳು, ಏಲಕ್ಕಿ ಬಾಳೆಹಣ್ಣು, ಪ್ರೊಟೀನ್ ಬಿಸ್ಕೆಟ್, ಖರ್ಜೂರ, ವಿಟಮಿನ್ ಸಿ ಅಧಿಕವಿರುವ ಹಣ್ಣುಗಳನ್ನು ನೀಡಬೇಕು..

ರಾತ್ರಿ
ರಾತ್ರಿ ಚಪಾತಿ, ಪಲ್ಯ, ಬೇಳೆ ಸಾರು, ಬೇಕಿದ್ದರೆ ಸ್ವಲ್ಪ ಅನ್ನ ಇವುಗಳನ್ನು ನೀಡಬೇಕು. ರೋಗಿಗೆ ಕೊಡುವ ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚಿರಲಿ. ಇದರಿಂದ ಪೌಷ್ಠಿಕಾಂಶಗಳು ದೊರೆಯುತ್ತದೆ. ಪಪ್ಪಾಯಿ ಹಣ್ಣು, ಕಿವಿ ಹಣ್ಣು, ಮೂಸಂಬಿ, ಕಿತ್ತಳೆ ಇವೆಲ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಆಹಾರಗಳನ್ನು ನೀಡಿದರೆ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ.

ಸರ್ಕಾರ ನೀಡಿರುವ ಫುಡ್ ಮೆನು
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರ ನೀಡಿರುವ ಫುಡ್ ಮೆನು ಹೀಗಿದೆ:
ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬಿಸಿ ಬೇಳೆಬಾತ್, ಶನಿವಾರ ಉಪ್ಪಿಟ್ಟು , ಭಾನುವಾರ ಸೆಟ್ ದೋಸೆ ಬ್ರೇಕ್ಫಾಸ್ಟ್ಗೆ ನೀಡಲಾಗುವುದು.
ಇನ್ನು ಕಲ್ಲಂಗಡಿ, ಪಪ್ಪಾಯಿ, ಕರ್ಬೂಜ, ತರಕಾರಿ ಸೂಪ್ ಇವುಗಳನ್ನು ಬೆಳಗ್ಗೆ 10 ಗಂಟೆಗೆ ಹಾಗೂ ಪಾಪಾಕ್, ಟೊಮೆಟೊ, ಕ್ಯಾರೆಟ್ ಸೂಪ್, ರಾಂಗಿ ಗಂಜಿ ಇವುಗಳನ್ನು ನೀಡುವಂತೆ ಸೂಚಿಸಲಾಗಿದೆ.



Click it and Unblock the Notifications