Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಧುಮೇಹಿಗಳು ಪಪ್ಪಾಯ ಹಣ್ಣು ತಿನ್ನಬಹುದೇ? ತಿಂದರೆ ಸಮಸ್ಯೆ ಆಗುವುದೇ?
ಇಂದಿನ ದಿನದಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿ ಬಿಟ್ಟಿದೆ. ಒಂದು ಮಾಹಿತಿಯ ಪ್ರಕಾರ ಶೇ.100 ರಷ್ಟು ಜನರಲ್ಲಿ ಶೇ. 50ರಷ್ಟು ಮಂದಿಗೆ ಸಕ್ಕರೆ ಕಾಯಿಲೆಯಿದೆ. ಮಧುಮೇಹ ರೋಗಿಯು ತನ್ನ ಆಹಾರ ಸೇವನೆಯಲ್ಲಿ ಸೂಕ್ತ ಕ್ರಮ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ರೋಗ ಉಲ್ಬಣವಾಗುವುದು.
ಜೀರ್ಣಾಂಗ ವ್ಯವಸ್ಥೆ ಹಾಗೂ ಮೂತ್ರ ಪಿಂಡಗಳ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುವುದು. ಹಾಗಾಗಿ ಅದೆಷ್ಟೇ ಇಷ್ಟಪಟ್ಟ ತಿಂಡಿ ಅಥವಾ ಹಣ್ಣಾಗಿದ್ದರೂ ಸೇವಿಸುವ ಹಾಗಿಲ್ಲ. ಇನ್ನೊಂದು ವಿಚಾರವೆಂದರೆ, ಮಧುಮೇಹದಿಂದ ಬಳಲುತ್ತಿದ್ದೀರಿ ಎಂದಾದರೆ ಜನರೆಲ್ಲರೂ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಾರೆ. ಆ ಹಣ್ಣು, ಈ ತಿಂಡಿ ತಿನ್ನಬಾರದು ಎನ್ನುತ್ತಾರೆ.
ಏಕೆಂದರೆ ಅದು ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಿಸುತ್ತದೆ ಎನ್ನುವ ಉದ್ದೇಶವಷ್ಟೇ. ಈ ನಿಟ್ಟಿನಲ್ಲೇ ಹಣ್ಣನ್ನು ತಿನ್ನಬಾರದು ಎಂದು ಹೇಳುತ್ತಾರೆ. ಆದರೆ ನಿಮಗೊಂದು ಸತ್ಯ ತಿಳಿದಿರಲಿ. ಮಧುಮೇಹಿಗಳು ಪಪ್ಪಾಯ ಹಣ್ಣನ್ನು ನಿಯಮಿತವಾಗಿಯೇ ಸೇವಿಸಬಹುದು. ಇದು ಮಧುಮೇಹಕ್ಕೆ ಒಳ್ಳೆಯದು. ಅದು ಹೇಗೆ ಎನ್ನುವ ವಿವಿರಣೆ ಇಲ್ಲಿದೆ ನೋಡಿ....

ಕಡಿಮೆ ಸಕ್ಕರೆ ಪ್ರಮಾಣ
ಪಪ್ಪಾಯ ಹಣ್ಣಿನಲ್ಲಿ 8.3ರಷ್ಟು ಸಕ್ಕರೆ ಪ್ರಮಾಣವಿದೆ. ಸೂಕ್ತ ಅಧ್ಯಯನವೊಂದು ಹೇಳುವ ಪ್ರಕಾರ ಪಪ್ಪಾಯದಲ್ಲಿರುವ ಸಂಯುಕ್ತಗಳು ಮಧುಮೇಹದ ಮಟ್ಟವನ್ನು ತಗ್ಗಿಸುತ್ತದೆ. ಇದರಲ್ಲಿರುವ ಪಪೈನ್ ಎನ್ನುವ ಕಿಣ್ವ ಅಧಿಕ ಪ್ರಮಾಣದಲ್ಲಿರುವುದರಿಂದ ದೇಹದಲ್ಲುಂಟಾಗುವ ಗಾಯ ಗುಣಮಪಡಿಸುತ್ತದೆ.

ಅಧಿಕ ಪ್ರಮಾಣದ ವಿಟಮಿನ್ಗಳು
ವಿಟಮಿನ್ ಎ ಮತ್ತು ಸಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿದೆ. ಹೈಪೊಗ್ಲೈಸೆಮಿಕ್ ಪ್ರಕ್ರಿಯೆಯಿಂದ ಮಧುಮೇಹಿ ಸಂಬಂಧಿತ ಹೃದಯ ಕಾಯಿಲೆ ತಡೆಯುತ್ತದೆ.

ಉತ್ತಮ ನಾರಿನಂಶ
ಪಪ್ಪಾಯವು ಅಧಿಕ ಪ್ರಮಾಣದ ನಾರಿನಂಶದಿಂದ ಕೂಡಿದೆ. ಇದರ ಸೇವನೆಯಿಂದ ಸೂಕ್ತ ರೀತಿಯಲ್ಲಿ ಚಯಾಪಚಯ ಕ್ರಿಯೆ ನಡೆಯುತ್ತದೆ.

ಗ್ಲೈಸೆಮಿಕ್ ಸೂಚಿಯಲ್ಲಿ ಕಡಿಮೆ
ಗ್ಲೈಸೆಮಿಕ್ ಸೂಚಿಯ ಪ್ರಕಾರ ಪಪ್ಪಾಯ ಹಣ್ಣು ನೈಸರ್ಗಿಕವಾಗಿ ನಿಧಾನ ರೀತಿಯಲ್ಲೇ ಸಕ್ಕರೆ ಪ್ರಮಾಣವನ್ನು ಬಿಡುಗಡೆಮಾಡುತ್ತದೆ. ಹಾಗಾಗಿ ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದು. ಅಷ್ಟೇ ಅಲ್ಲದೆ ಬೆರಿ ಹಣ್ಣು, ಅವಕಾಡೂಗಳು, ಕಲ್ಲಂಗಡಿ, ಪ್ಲಮ್ ಮತ್ತು ಪೇರಳೆ ಹಣ್ಣುಗಳನ್ನು ಸಹ ನಿಮ್ಮ ಆಹಾರ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.



Click it and Unblock the Notifications
