Just In
- 31 min ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 1 hr ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
- 6 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 13 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
Don't Miss
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- News 2nd Phase Election: ಇಂದಿನಿಂದ 12 ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭ
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Movies ಲೋಕಸಭೆ ಚುನಾವಣೆ: ಬಿಜೆಪಿ 7ನೇ ಪಟ್ಟಿಯಲ್ಲಿ ದರ್ಶನ್ ಜೊತೆ ನಟಿಸಿದ್ದ ನಟಿಗೂ ಸಿಕ್ತು ಟಿಕೆಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ಯೂಟಿ ಟಿಪ್ಸ್: ಹೆಚ್ಚು ಹಣ್ಣಾದ ಬಾಳೆಹಣ್ಣಿನಿಂದ ಸೌಂದರ್ಯ ಚಿಕಿತ್ಸೆ!
ಬಾಳೆಹಣ್ಣು ತಿಂದರೆ ಅದರಿಂದ ದೇಹಕ್ಕೆ ಆಗುವಂತಹ ಆರೋಗ್ಯ ಲಾಭಗಳು ಅಪಾರ. ಇಂತಹ ಬಾಳೆಹಣ್ಣು ಹದವಾಗಿ ಹಣ್ಣಾಗಿದ್ದರೆ ತಿನ್ನಲು ರುಚಿ. ಅತಿಯಾಗಿ ಹಣ್ಣಾಗಿ ಕೊಳೆತಂತೆ ಕಾಣುವ ಬಾಳೆಹಣ್ಣನ್ನು ತಿನ್ನಲು ಯಾರು ಕೂಡ ಇಷ್ಟಪಡುವುದಿಲ್ಲ. ಇದನ್ನು ಹೆಚ್ಚಿನವರು ಕಸದ ಬುಟ್ಟಿಗೆ ಬಿಸಾಡುವರು. ಆದರೆ ಇತಹ ಹಣ್ಣುಗಳಿಂದ ನಿಮ್ಮ ಸೌಂದರ್ಯವು ವೃದ್ಧಿಯಾಗುವುದು ಎಂದರೆ ಆಗ ನೀವು ಕೂಡ ಇಂತಹ ಹಣ್ಣನ್ನು ಇನ್ನು ಮುಂದಕ್ಕೆ ಬಿಸಾಡಲಿಕ್ಕಿಲ್ಲ.
ಯಾಕೆಂದರೆ ಇದು ನಿಮ್ಮ ತ್ವಚೆಯನ್ನು ಯೌವನಯುತ ಹಾಗೂ ಕಾಂತಿಯುತವಾಗಿಸುವುದು. ಅತಿಯಾಗಿ ಹಣ್ಣಾಗಿರುವಂತಹ ಬಾಳೆಹಣ್ಣಿನಿಂದ ನಿಮ್ಮ ತ್ವಚೆಗೆ ಹಲವಾರು ರೀತಿಯ ಲಾಭಗಳು ಇವೆ. ಚರ್ಮವು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವಲ್ಲಿ ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿರುವ ಹಲವಾರು ರೀತಿಯ ವಿಟಮಿನ್ ಹಾಗೂ ಖನಿಜಾಂಶಗಳು ಚರ್ಮವನ್ನು ಪುನರ್ ನಿರ್ಮಿಸುವುದು ಮತ್ತು ಸರಿಪಡಿಸುವುದು.
ದಿನಕ್ಕೊಂದು ಬಾಳೆಹಣ್ಣು ತಿಂದರೆ ಸಾಕು, ಯಾವ ಕಾಯಿಲೆಯೂ ಬರಲ್ಲ..
ಬಾಳೆಹಣ್ಣನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ವಿಟಮಿನ್ ಹಾಗೂ ಖನಿಜಾಂಶಗಳು ಚರ್ಮಕ್ಕೆ ಲಭ್ಯವಾಗುವುದು. ಅತಿಯಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಚರ್ಮದ ಪದರವನ್ನು ತುಂಬಾ ಸುಲಭವಾಗಿ ದಾಟಿಕೊಂಡು ಹೋಗಿ ಚರ್ಮಕ್ಕೆ ಬೇಗನೆ ಪೋಷಣೆ ನೀಡುವುದು. ಇದು ನೆರಿಗೆ ಹಾಗೂ ಕಲೆಗಳ ನಿವಾರಣೆ ಮಾಡುವುದು ಮತ್ತು ಚರ್ಮದ ರಂಧ್ರಗಳ ಗಾತ್ರ ಕುಗ್ಗಿಸುವುದು. ಯೌವನ ಮರಳಿ ಪಡೆದಂತೆ ಇರಲು ಹಾಗೂ ಕಾಂತಿಯುತ ಚರ್ಮಕ್ಕಾಗಿ ಹಣ್ಣಾದ ಬಾಳೆಹಣ್ಣು ಬಳಸುವುದು ಹೇಗೆ ಮತ್ತು ಅದರ ಲಾಭಗಳು ಏನು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಇದು ಚರ್ಮ ಮತ್ತು ಕೂದಲಿಗೆ ತುಂಬಾ ಉಪಯುಕ್ತವಾಗಲಿದೆ...
ಎಣ್ಣೆಯುಕ್ತ ಚರ್ಮಕ್ಕೆ ಬಾಳೆಹಣ್ಣು
ಒಂದು ಹೆಚ್ಚು ಹಣ್ಣಾಗಿ ಬಾಳೆಹಣ್ಣನ್ನು ಮೂರು ಚಮಚ ಲಿಂಬೆರಸ ಜತೆ ಬೆರೆಸಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ. ಈ ವೇಳೆ ಮುಖದಲ್ಲಿರುವ ಜಿಡ್ಡಿನಾಂಶವನ್ನು ಬಾಳೆಹಣ್ಣು ತೆಗೆಯುವುದು.
ಒಣ ಹಾಗೂ ಒರಟು ಕೂದಲಿಗೆ
ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಅದಕ್ಕೆ ಅರ್ಧ ಕಪ್ ಮೊಸರು ಮತ್ತು ಒಂದು ಹಣ್ಣು ಅವಕಾಡೋ ಹಾಕಿ ಮಿಶ್ರಣ ಮಾಡಿ ಹೇರ್ ಮಾಸ್ಕ್ ಮಾಡಿ. ಈ ಮಾಸ್ಕ್ ನ್ನು ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು ತುಂಬಾ ನಯ ಹಾಗೂ ಹೊಳಪು ನೀಡುವುದು.
ನೈಸರ್ಗಿಕ ಮಾಯಿಶ್ಚರೈಸರ್
ಮುಖಕ್ಕೆ ಬಾಳೆಹಣ್ಣು ಒಳ್ಳೆಯ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುವುದು. ರಾಸಾಯನಿಕ ಹೊಂದಿರುವ ಕ್ರೀಮ್ ಬಳಸುವುದರಿಂದ ದೂರವಿದ್ದು, ಬಾಳೆಹಣ್ಣನ್ನು ಬಳಸಿಕೊಳ್ಳಿ. ಒಂದು ಹಣ್ಣು ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿ. ಹತ್ತು ನಿಮಿಷ ಹಾಗೆ ಬಿಡಿ ಮತ್ತು ಮಗುವಿನಂತಹ ತ್ವಚೆ ಪಡೆಯಲು ಮುಖ ತೊಳೆಯಿರಿ.
ಮುಖದಲ್ಲಿನ ನೆರಿಗೆಗೆ
ಹಣ್ಣು ಬಾಳೆಹಣ್ಣನ್ನು ಹಿಚುಕಿಕೊಳ್ಳಿ ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ 15 ನಿಮಿಷ ಕಾಲ ಹಾಗೆ ಬಿಡಿ. ನೆರಿಗೆ ದೂರ ಮಾಡಲು ಇದನ್ನು ದಿನಕ್ಕೆ ಎರಡು ಸಲ ಬಳಸಿಕೊಳ್ಳಿ. ಇದನ್ನು ಬಿಸಿನೀರಿನಿಂದ ತೊಳೆದು ಒರೆಸಿಕೊಳ್ಳಿ.
ಸತ್ತ ಚರ್ಮ ನಿವಾರಿಸಲು ಬಾಳೆಹಣ್ಣು
ಒಂದು ಹಣ್ಣಾದ ಬಾಳೆಹಣ್ಣು, 3 ಚಮಚ ಓಟ್ಸ್ ಮತ್ತು ಮೂರು ಚಮಚ ಕೋಕಾ ಹುಡಿ ಹಾಕಿ ಮಿಶ್ರಣ ಮಾಡಿ. ಬಾಳೆಹಣ್ಣು, ಓಟ್ಸ್ ಮತ್ತು ಕೋಕಾ ಹಾಲಿನಿಂದ ಫೇಸ್ ಮಾಸ್ಕ್ ಮಾಡಿ. ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಹತ್ತು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಕಪ್ಪು ವೃತ್ತಗಳು
ಪ್ರತಿನಿತ್ಯ ಐದು ನಿಮಿಷ ಕಾಲ ಹಣ್ಣಾಗಿರುವ ಬಾಳೆಹಣ್ಣನ್ನು ಕಣ್ಣಿನ ಕೆಳಭಾಗದಲ್ಲಿ ಉಜ್ಜಿಕೊಳ್ಳುವುದರಿಂದ ಕಪ್ಪು ವೃತ್ತಗಳನ್ನು ನಿವಾರಿಸಬಹುದು. ಬಾಳೆಹಣ್ಣಿನಲ್ಲಿ ಇರುವಂತಹ ಕ್ಯಾಲ್ಸಿಯಂ ಕಪ್ಪು ವೃತ್ತಗಳ ವಿರುದ್ಧ ಹೋರಾಡಿ ಕಪ್ಪು ವೃತ್ತಗಳನ್ನು ಮಾಯ ಮಾಡುವುದು. ಇದು ಕಣ್ಣಿನ ಸುತ್ತಲು ಇರುವ ಕಲೆಗಳ ನಿವಾರಣೆಗೆ ಒಳ್ಳೆಯ ಮನೆಮದ್ದು.
ಒಡೆದ ಪಾದಗಳಿಗೆ
ಎರಡು ಹಣ್ಣು ಬಾಳೆಹಣ್ಣನ್ನು ಹಿಚುಕಿ ಮತ್ತು ಇದನ್ನು ಒಡೆದಿರುವ ಪಾದಗಳಿಗೆ ಹಚ್ಚಿಕೊಳ್ಳಿ. ಪಾದಗಳಿಗೆ ಬೆಳ್ಳಿ ಫಾಯಿಲ್ ಕಟ್ಟಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಡಿ. ಮಲಗುವ ಮೊದಲು ಇದನ್ನು ನೀವು ಪ್ರತಿನಿತ್ಯ ಮಾಡಬಹುದು. ಒಡೆದ ಹಿಮ್ಮಡಿಗೆ ಶಮನ ನೀಡಲು ರಾತ್ರಿ ಹೀಗೆ ಮಾಡಿದರೆ ಒಳ್ಳೆಯದು.