Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಚಿಂತೆಯಿಲ್ಲದೆ ಈ 'ಫೇಸ್ ಮಾಸ್ಕ್' ಹಚ್ಚಿ, ಖುಷಿ ಖುಷಿಯಾಗಿರಿ!
ತ್ವಚೆಯು ನಮ್ಮ ಸೌಂದರ್ಯಕ್ಕೆ ಕನ್ನಡಿ ಹಿಡಿಯುತ್ತದೆ ಎಂದರೆ ತಪ್ಪಾಗಲಾರದು. ಮುಖದ ಮೇಲಿರುವ ಕಲೆ ಹಾಗೂ ಸುಕ್ಕು ನಮ್ಮ ಆಯಸ್ಸು ಹೆಚ್ಚಾದಂತೆ ತೋರಿಸುತ್ತವೆ. ಸಾಮಾನ್ಯವಾಗಿ 35 ವರ್ಷದ ನಂತರ ಮುಖದ ಚರ್ಮಗಳು ಗಡುಸಾಗಿ, ತೇವಾಂಶ ಕಳೆದುಕೊಳ್ಳುವುದು. ಈ ಬಗೆಯ ಸಮಸ್ಯೆಗೆ ಅನೇಕರು ದುಬಾರಿ ಬೆಲೆಯ ಸೌಂದರ್ಯ ಚಿಕಿತ್ಸೆಗೆ, ವಿಟಮಿನ್ ಮಾತ್ರೆಗಳ ಸೇವನೆಗೆ ಮೊರೆಹೋಗುತ್ತಾರೆ.
ಯಾವುದೇ ಅಡ್ಡ ಪರಿಣಾಮ ಬೀರದ ಕೆಲವು ನೈಸರ್ಗಿಕ ಉತ್ಪನ್ನಗಳ ಬಳಕೆಯಿಂದ ಮುಖದ ಮಾಸ್ಕ್ಗಳನ್ನು ತಯಾರಿಸಬಹುದು. ಸುಲಭವಾಗಿ ಸಿಗುವ ಈ ಉತ್ಪನ್ನಗಳ ಗಣನೀಯ ಬಳಕೆಯಿಂದ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು. ಬೆರಳೆಣಿಕೆಯಷ್ಟು ಮಂದಿಯಲ್ಲಿ ಕೆಲವು ಉತ್ಪನ್ನಗಳು ಅಲರ್ಜಿ ಉಂಟು ಮಾಡಬಹುದು.
ಅದಕ್ಕಾಗಿ ಮೊದಲು ಮನೆಯಲ್ಲಿ ತಯಾರಿಸಿದ ಮಾಸ್ಕ್ ಮಿಶ್ರಣವನ್ನು ಕೈಮೇಲೆ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಯಾವುದೇ ತೊಂದರೆ ಇಲ್ಲ ಎನ್ನುವುದು ಅರಿವಾದ ನಂತರ ಮುಖದ ಮೇಲೆ ಲೇಪಿಸಿಕೊಳ್ಳಬಹುದು. ಈ ಲೇಪನಗಳನ್ನು ಹೇಗೆ ತಯಾರಿಸುವುದು? ಅವುಗಳ ಪರಿಣಾಮ ಮತ್ತು ಉಪಯೋಗಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ....

ಅನಾನಸ್, ಮೊಟ್ಟೆ ಮತ್ತು ಜೇನುತುಪ್ಪ
ಈ ಮೂರು ಉತ್ಪನ್ನಗಳಲ್ಲಿ ಅಂಟಿಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಶಕ್ತಿ ಸಮೃದ್ಧವಾಗಿದೆ. ಇವುಗಳ ಮಿಶ್ರಣದಿಂದ ಮುಖದ ಮಾಸ್ಕ್ ಹಾಕಿಕೊಂಡರೆ ತ್ವಚೆಯ ಮೇಲಿರುವ ಕಪ್ಪು ಕಲೆ, ಸುಕ್ಕುಗಟ್ಟುವುದನ್ನು ತಡೆಯಬಹುದು.
ವಿಧಾನ:
*2-3 ಅನಾನಸ್ ಹೋಳುಗಳನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ರುಬ್ಬಿಕೊಳ್ಳಬೇಕು.
*ನಂತರ ಒಂದು ಚಮಚ ಜೇನುತುಪ್ಪವನ್ನು ಆ ಮಿಶ್ರಣಕ್ಕೆ ಸೇರಿಸಿ. ನಂತರ ಮುಖದ *ಲೇಪನ ಮಾಡಿಕೊಂಡು 15 ನಿಮಿಷ ಬಿಡಬೇಕು.
*ತದನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

ಅರಿಶಿನ ಪುಡಿ ಮತ್ತು ತೆಂಗಿನ ಎಣ್ಣೆ
ಈ ಎರಡು ಉತ್ಪನ್ನವನ್ನು ಸಾಂಪ್ರದಾಯಿಕ ಉತ್ಪನ್ನ ಎಂದು ಕರೆಯುತ್ತಾರೆ. ಇವು ತ್ವಚೆಯ ಸ್ಥಿರತೆಯನ್ನು ಕಾಪಾಡುವುದಲ್ಲದೆ ತ್ವಚೆಯ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತವೆ.
ವಿಧಾನ:
*ಒಂದು ಚಮಚ ತೆಂಗಿನ ಎಣ್ಣೆಗೆ ಅರ್ಧ ಚಮಚ ಅರಿಶಿನ ಪುಡಿಯನ್ನು ಸೇರಿಸಿ, ಒಂದು ಮಿಶ್ರಣವನ್ನು ತಯಾರಿಸಬೇಕು.
*ನಂತರ ಅದನ್ನು ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಬೇಕು.
*ಬಳಿಕ ತಂಪಾದ ನೀರಿನಲ್ಲಿ ತೊಳೆದರೆ ಒಳ್ಳೆಯ ಪರಿಣಾಮ ಪಡೆಯಬಹುದು.

ಸೇಬು ಸೈಡರ್ ವಿನೆಗರ್, ಜೇನುತುಪ್ಪ ಮತ್ತು ಈರುಳ್ಳಿಯ ರಸ
ಇವು ಉತ್ತಮ ಆರೋಗ್ಯ ಪೂರ್ಣ ಉತ್ಪನ್ನವಾಗಿದ್ದು, ಇವುಗಳ ಮಿಶ್ರಣದಿಂದ ಕಣ್ಣಿನ ಸುತ್ತಲು ಕಾಣಿಸಿಕೊಳ್ಳುವ ಕಪ್ಪು ಕಲೆ ಹಾಗೂ ಎಲ್ಲಾ ಬಗೆಯ ತ್ವಚೆಯ ಸಮಸ್ಯೆಗಳು ಗುಣಮುಖ ವಾಗುವವು.
ವಿಧಾನ:
*ಒಂದು ಚಮಚ ಜೇನುತುಪ್ಪ ಮತ್ತು ಈರುಳ್ಳಿ ರಸಕ್ಕೆ ಅರ್ಧ ಮಚಚ ಸೇಬು ಸೈಡರ್ ವಿನೆಗರ್ಅನ್ನು ಸೇರಿಸಿ ಒಂದು ಮಿಶ್ರಣ ತಯಾರಿಸಬೇಕು.
*ಈ ಮಿಶ್ರಣ ಮುಖದ ಮೇಲೆ 10 ನಿಮಿಷ ಇರುವಂತೆ ಲೇಪಿಸಿಕೊಳ್ಳಬೇಕು. ನಂತರ ತೊಳೆಯಬೇಕು.
*ಹೀಗೆ ಗಣನೀಯವಾಗಿ ಮಾಡಿದರೆ ಉತ್ತಮ ತ್ವಚೆಯನ್ನು ಪಡೆಯಬಹುದು.

ಕಡಲೆ ಹಿಟ್ಟು ಮತ್ತು ಟೊಮೆಟೋ
ಇವುಗಳಲ್ಲಿರುವ ಜೀವಸತ್ವಗಳು ತ್ವಚೆಯ ಸ್ಥಿರತೆಯನ್ನು ಕಾಪಾಡಿ ಕಪ್ಪುಕಲೆಯನ್ನು ಹೋಗಲಾಡಿಸುತ್ತವೆ.
ವಿಧಾನ:
*ಒಂದು ಚಮಚ ಕಡಲೆ ಹಿಟ್ಟು ಮತ್ತು ಟೊಮೇಟೋ ರಸವನ್ನು ಸೇರಿಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಬೇಕು.
*ನಂತರ ಮುಖಕ್ಕೆ ಅನ್ವಯಿಸಿ 20 ನಿಮಿಷ ಬಿಡಬೇಕು. ಕನಿಷ್ಠವೆಂದರೂ ವಾರಕ್ಕೊಮ್ಮೆ ಈ ಮಾಸ್ಕ್ ಧರಿಸಿದರೆ ತ್ವಚೆಯು ಆರೋಗ್ಯ ನೈಸರ್ಗಿಕವಾಗಿ ಕಂಗೊಳಿಸುವುದು.

ಬಾದಾಮಿ ಎಣ್ಣೆ ಮತ್ತು ಬಾಳೆಹಣ್ಣು
ಈ ಎರಡು ಉತ್ಪನ್ನಗಳು ತ್ವಚೆಯ ಆಯುಷ್ಯವನ್ನು ಹೆಚ್ಚಿಸುತ್ತದೆ. ಚರ್ಮದ ತೇವಾಂಶವನ್ನು ಕಾಪಾಡಿ ಕಪ್ಪು ಕಲೆಯಿಂದ ದೂರ ಇರುವಂತೆ ಮಾಡುವುದು.
ವಿಧಾನ:
*ಒಂದು ಅಳಿತ ಬಾಳೆಹಣ್ಣಿಗೆ ಒಂದು ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಬೇಕು.
*ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15 ನಿಮಿಷ ಬಿಡಬೇಕು.
*ಹೀಗೆ ತಿಂಗಳಿಗೆ ಎರಡುಬಾರಿ ಮಾಡಿಕೊಂಡರೆ ತ್ವಚೆಯ ಆರೋಗ್ಯ ವೃದ್ಧಿಸುವುದು.

ಸಕ್ಕರೆ, ಅರಿಶಿನ ಪುಡಿ ಮತ್ತು ನಿಂಬೆ ರಸ
ಈ ಮೂರು ಉತ್ಪನ್ನಗಳು ಸಮೃದ್ಧವಾದ ವಿಟಮಿನ್ಸ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿವೆ. ಇವು ತ್ವಚೆ ಸುಕ್ಕುಗಟ್ಟುವುದು ಮತ್ತು ಕಪ್ಪು ಕಲೆಗಳನ್ನು ನಿವಾರಿಸುವವು.
ವಿಧಾನ:
*ಒಂದು ಚಮಚ ನಿಂಬೆ ರಸ ಮತ್ತು ಅರಿಶಿನ ಪುಡಿಗೆ ಅರ್ಧ ಚಮಚ ಸಕ್ಕರೆ ಪುಡಿಯನ್ನು ಸೇರಿಸಿ, ಮಿಶ್ರಣ ತಯಾರಿಸಬೇಕು.
*ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷದ ಬಳಿಕ ತೊಳೆಯಬೇಕು. ಇದು ಉತ್ತಮ ಪರಿಣಾಮ ನೀಡುವುದು.

ಓಟ್ಮೀಲ್, ನಿಂಬೆ ರಸ ಮತ್ತು ಅಲೋವೆರಾ ಜೆಲ್
ಇವುಗಳಲ್ಲಿ ವಿಟಮಿನ್ ಮತ್ತು ಉತ್ಕರ್ಷಣ ಗುಣವು ಸಮೃದ್ಧವಾಗಿವೆ. ಇವು ತ್ವಚೆಯ ಮೇಲಿರುವ ಕಪ್ಪುಕಲೆಗಳನ್ನು ಹೋಗಲಾಡಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ವಿಧಾನ:
ಒಂದು ಚಮಚ ಓಟ್ಮೀಲ್, ನಿಂಬೆ ರಸ ಮತ್ತು ಅಲೋವೆರಾ ಜೆಲ್ ಸೇರಿಸಿ, ಪೇಸ್ಟ್ ತಯಾರಿಸಬೇಕು. ಈ ಮಿಶ್ರಣವನ್ನು ಎರಡುವಾರಕ್ಕೊಮ್ಮೆ ಅನ್ವಯಿಸುತ್ತಾ ಬರಬೇಕು

ಮೊಟ್ಟೆ ಮತ್ತು ಪೀಚ್ ಹಣ್ಣು
ಇವೆರಡರಲ್ಲೂ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿವೆ. ಇವು ತ್ವಚೆಯ ಎಲ್ಲಾತರಹದ ಆರೋಗ್ಯವನ್ನು ಕಾಪಾಡುತ್ತವೆ.
ವಿಧಾನ:
*ಪೀಚ್ ಹಣ್ಣಿನ ತಿರುಳಿಗೆ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ, ಒಂದು ಮಿಶ್ರಣ ತಯಾರಿಸಬೇಕು.
*ಮುಖಕ್ಕೆ ಅನ್ವಯಿಸಿ, 20 ನಿಮಿಷಗಳ ಕಾಲ ಬಿಟ್ಟರೆ, ಮುಖವನ್ನು ಸ್ವಚ್ಛಗೊಳಿಸಿ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.



Click it and Unblock the Notifications
