Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಬ್ಯೂಟಿ ಟಿಪ್ಸ್: 'ಖರ್ಜೂರ' ಹಣ್ಣಿನ ಫೇಸ್ ಪ್ಯಾಕ್
ಖರ್ಜೂರ ನಮ್ಮ ತ್ವಚೆಗೂ ಉತ್ತಮ ಆರೈಕೆ ನೀಡುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಲೇಪ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಘಾಸಿಗೊಂಡಿದ್ದ ಚರ್ಮ ಮತ್ತೆ ತನ್ನ ಪೂರ್ವ ಸ್ಥಿತಿಯನ್ನು ತಲುಪುತ್ತದೆ ಅಲ್ಲದೇ ಕಾಂತಿಯೂ ಹೆಚ್ಚುತ್ತದೆ
ಸಿಹಿಯಾದ ಗಾಢಕಂದು ಬಣ್ಣದ ಸಿಹಿಯಾದ ಖರ್ಜೂರ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ ಎಂಬುದು ಈಗಾಗಲೇ ಸಾಬೀತು ಆಗಿದೆ. ಇದರ ಸೇವನೆಯಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ರಕ್ತ ಶುದ್ಧೀಕರಣ, ಮಲಬದ್ಧತೆ ಇಲ್ಲವಾಗುವ ಉಪಯೋಗಗಳೂ ಇವೆ.
ಆದರೆ ಖರ್ಜೂರ ನಮ್ಮ ತ್ವಚೆಗೂ ಉತ್ತಮ ಆರೈಕೆ ನೀಡುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಲೇಪ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಘಾಸಿಗೊಂಡಿದ್ದ ಚರ್ಮ ಮತ್ತೆ ತನ್ನ ಪೂರ್ವ ಸ್ಥಿತಿಯನ್ನು ತಲುಪುತ್ತದೆ ಅಲ್ಲದೇ ಕಾಂತಿಯೂ ಹೆಚ್ಚುತ್ತದೆ. ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!
ಈ ಮುಖಲೇಪದಲ್ಲಿ (ಫೇಸ್ ಪ್ಯಾಕ್) ಉತ್ತಮ ಪ್ರಮಾಣದ ವಿಟಮಿನ್ B5 ಇದೆ. ಈ ಪೋಷಕಾಂಶ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಚರ್ಮ ಸಡಿಲವಾಗಲೂ, ನೆರಿಗೆ ಬೀಳಲೂ ಈ ಕಣಗಳೇ ಮುಖ್ಯ ಕಾರಣವಾಗಿದ್ದು ಈ ಕಣಗಳನ್ನು ನಿಷ್ಟೇಷ್ಠಿತಗೊಳಿಸುವ ಮೂಲಕ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ. ಬನ್ನಿ, ಈ ಮುಖಲೇಪವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.....

ಹಂತ 1
ಸುಮಾರು ಮೂರರಿಂದ ಐದು ಚೆನ್ನಾಗಿ ಹಣ್ಣಾದ ಖರ್ಜೂರಗಳ ಬೀಜ ನಿವಾರಿಸಿ ಇದನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಹೊರ ಭಾಗದಲ್ಲಿ ಅಂಟಿಕೊಂಡಿದ್ದ ಮರಳು, ಧೂಳನ್ನು ನಿವಾರಿಸಿ.

ಹಂತ 2
ಅರ್ಧ ಕಪ್ ಹಾಲನ್ನು ಚಿಕ್ಕ ಉರಿಯಲ್ಲಿ ಐದು ನಿಮಿಷ ಬಿಸಿಮಾಡಿ. ಬಳಿಕ ಉರಿ ಆರಿಸಿ ಇದರಲ್ಲಿ ಖರ್ಜೂರವನ್ನು ಚಿಕ್ಕ ಚಿಕ್ಕ ತುಂಡುಗಳಾಗಿಸಿ ಮುಳುಗಿಸಿ ಅರ್ಧ ಗಂಟೆ ಹಾಗೇ ನೆನೆಯಲು ಬಿಡಿ.

ಹಂತ 3
ಈ ಖರ್ಜೂರದ ತುಂಡುಗಳನ್ನು ಸೋಸಿ ತೆಗೆದು ಕೊಂಚ ಹಾಲಿನ ಜೊತೆಗೆ ನುಣ್ಣಗೆ ಅರೆಯಿರಿ.

ಹಂತ 4
ಇದಕ್ಕೆ ಒಂದು ದೊಡ್ಡ ಚಮಚ ಗೋಧಿರವೆ ಅಥವಾ ಚಿರೋಟಿ ರವೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಗೊಟಾಯಿಸಿ. ಇದು ದಪ್ಪನೆಯ ಜೇನಿನಷ್ಟು ದಪ್ಪಗಿರಬೇಕು ಅಷ್ಟು ಮಾತ್ರ ಹಾಲನ್ನು ಬೆರೆಸಿ. ಬಳಿಕ ಒಂದು ದೊಡ್ಡ ಚಮಚ ಜೇನು ಮತ್ತು ಕೆಲವು ಹನಿ ಪ್ರಿಮ್ರೋಸ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 5
ಲೇಪನ ತಯಾರಾದ ಬಳಿಕ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಬಳಿಕ ಈ ಲೇಪನವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪನ ಸುಮಾರು ಮೂವತ್ತು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ.

ಹಂತ 6
ಬಳಿಕ ಮುಖದ ಮೇಲೆ ತಣ್ಣೀರಿನಿಂದ ಪ್ರೋಕ್ಷಳಿಸಿ. ಕೆಲವು ಕ್ಷಣಗಳ ಬಳಿಕ ಈ ಲೇಪನ ಸಡಿಲವಾಗುತ್ತದೆ. ಈಗ ಬೆರಳಿನಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ನಡುನಡುವೆ ನೀರನ್ನು ಎರಚಿಕೊಳ್ಳುತ್ತಾ ತೊಳೆದುಕೊಳ್ಳಿ. ಲೇಪನ ಪೂರ್ಣವಾಗಿ ತೊಳೆದು ಹೋದ ಬಳಿಕ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ವಾರಕ್ಕೊಂದು ಬಾರಿ ಪುನರಾವರ್ತಿಸಿ
ಈ ವಿಧಾನವನ್ನು ವಾರಕ್ಕೊಂದು ಬಾರಿ ಪುನರಾವರ್ತಿಸಿ. ಕೆಲವೇ ವಾರಗಳಲ್ಲಿ ನಿಮ್ಮ ಚರ್ಮದ ಬಣ್ಣ ಪ್ರಖರಗೊಳ್ಳುವುದನ್ನೂ ನೆರಿಗೆಗಳು ಮಾಯವಾಗುವುದನ್ನೂ ಕಾಣಬಹುದು. ಒಂದು ವೇಳೆ ನಿಮ್ಮಲ್ಲಿಯೂ ಉತ್ತಮವಾದ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.



Click it and Unblock the Notifications