Latest Updates
-
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ!
ಬ್ಯೂಟಿ ಟಿಪ್ಸ್: 'ಖರ್ಜೂರ' ಹಣ್ಣಿನ ಫೇಸ್ ಪ್ಯಾಕ್
ಖರ್ಜೂರ ನಮ್ಮ ತ್ವಚೆಗೂ ಉತ್ತಮ ಆರೈಕೆ ನೀಡುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಲೇಪ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಘಾಸಿಗೊಂಡಿದ್ದ ಚರ್ಮ ಮತ್ತೆ ತನ್ನ ಪೂರ್ವ ಸ್ಥಿತಿಯನ್ನು ತಲುಪುತ್ತದೆ ಅಲ್ಲದೇ ಕಾಂತಿಯೂ ಹೆಚ್ಚುತ್ತದೆ
ಸಿಹಿಯಾದ ಗಾಢಕಂದು ಬಣ್ಣದ ಸಿಹಿಯಾದ ಖರ್ಜೂರ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ ಎಂಬುದು ಈಗಾಗಲೇ ಸಾಬೀತು ಆಗಿದೆ. ಇದರ ಸೇವನೆಯಿಂದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ರಕ್ತ ಶುದ್ಧೀಕರಣ, ಮಲಬದ್ಧತೆ ಇಲ್ಲವಾಗುವ ಉಪಯೋಗಗಳೂ ಇವೆ.
ಆದರೆ ಖರ್ಜೂರ ನಮ್ಮ ತ್ವಚೆಗೂ ಉತ್ತಮ ಆರೈಕೆ ನೀಡುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಲೇಪ ತಯಾರಿಸಿ ಹಚ್ಚಿಕೊಳ್ಳುವ ಮೂಲಕ ಘಾಸಿಗೊಂಡಿದ್ದ ಚರ್ಮ ಮತ್ತೆ ತನ್ನ ಪೂರ್ವ ಸ್ಥಿತಿಯನ್ನು ತಲುಪುತ್ತದೆ ಅಲ್ಲದೇ ಕಾಂತಿಯೂ ಹೆಚ್ಚುತ್ತದೆ. ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!
ಈ ಮುಖಲೇಪದಲ್ಲಿ (ಫೇಸ್ ಪ್ಯಾಕ್) ಉತ್ತಮ ಪ್ರಮಾಣದ ವಿಟಮಿನ್ B5 ಇದೆ. ಈ ಪೋಷಕಾಂಶ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಚರ್ಮ ಸಡಿಲವಾಗಲೂ, ನೆರಿಗೆ ಬೀಳಲೂ ಈ ಕಣಗಳೇ ಮುಖ್ಯ ಕಾರಣವಾಗಿದ್ದು ಈ ಕಣಗಳನ್ನು ನಿಷ್ಟೇಷ್ಠಿತಗೊಳಿಸುವ ಮೂಲಕ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ. ಬನ್ನಿ, ಈ ಮುಖಲೇಪವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.....

ಹಂತ 1
ಸುಮಾರು ಮೂರರಿಂದ ಐದು ಚೆನ್ನಾಗಿ ಹಣ್ಣಾದ ಖರ್ಜೂರಗಳ ಬೀಜ ನಿವಾರಿಸಿ ಇದನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು ಹೊರ ಭಾಗದಲ್ಲಿ ಅಂಟಿಕೊಂಡಿದ್ದ ಮರಳು, ಧೂಳನ್ನು ನಿವಾರಿಸಿ.

ಹಂತ 2
ಅರ್ಧ ಕಪ್ ಹಾಲನ್ನು ಚಿಕ್ಕ ಉರಿಯಲ್ಲಿ ಐದು ನಿಮಿಷ ಬಿಸಿಮಾಡಿ. ಬಳಿಕ ಉರಿ ಆರಿಸಿ ಇದರಲ್ಲಿ ಖರ್ಜೂರವನ್ನು ಚಿಕ್ಕ ಚಿಕ್ಕ ತುಂಡುಗಳಾಗಿಸಿ ಮುಳುಗಿಸಿ ಅರ್ಧ ಗಂಟೆ ಹಾಗೇ ನೆನೆಯಲು ಬಿಡಿ.

ಹಂತ 3
ಈ ಖರ್ಜೂರದ ತುಂಡುಗಳನ್ನು ಸೋಸಿ ತೆಗೆದು ಕೊಂಚ ಹಾಲಿನ ಜೊತೆಗೆ ನುಣ್ಣಗೆ ಅರೆಯಿರಿ.

ಹಂತ 4
ಇದಕ್ಕೆ ಒಂದು ದೊಡ್ಡ ಚಮಚ ಗೋಧಿರವೆ ಅಥವಾ ಚಿರೋಟಿ ರವೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಗೊಟಾಯಿಸಿ. ಇದು ದಪ್ಪನೆಯ ಜೇನಿನಷ್ಟು ದಪ್ಪಗಿರಬೇಕು ಅಷ್ಟು ಮಾತ್ರ ಹಾಲನ್ನು ಬೆರೆಸಿ. ಬಳಿಕ ಒಂದು ದೊಡ್ಡ ಚಮಚ ಜೇನು ಮತ್ತು ಕೆಲವು ಹನಿ ಪ್ರಿಮ್ರೋಸ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 5
ಲೇಪನ ತಯಾರಾದ ಬಳಿಕ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡು ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಬಳಿಕ ಈ ಲೇಪನವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪನ ಸುಮಾರು ಮೂವತ್ತು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ.

ಹಂತ 6
ಬಳಿಕ ಮುಖದ ಮೇಲೆ ತಣ್ಣೀರಿನಿಂದ ಪ್ರೋಕ್ಷಳಿಸಿ. ಕೆಲವು ಕ್ಷಣಗಳ ಬಳಿಕ ಈ ಲೇಪನ ಸಡಿಲವಾಗುತ್ತದೆ. ಈಗ ಬೆರಳಿನಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ನಡುನಡುವೆ ನೀರನ್ನು ಎರಚಿಕೊಳ್ಳುತ್ತಾ ತೊಳೆದುಕೊಳ್ಳಿ. ಲೇಪನ ಪೂರ್ಣವಾಗಿ ತೊಳೆದು ಹೋದ ಬಳಿಕ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ವಾರಕ್ಕೊಂದು ಬಾರಿ ಪುನರಾವರ್ತಿಸಿ
ಈ ವಿಧಾನವನ್ನು ವಾರಕ್ಕೊಂದು ಬಾರಿ ಪುನರಾವರ್ತಿಸಿ. ಕೆಲವೇ ವಾರಗಳಲ್ಲಿ ನಿಮ್ಮ ಚರ್ಮದ ಬಣ್ಣ ಪ್ರಖರಗೊಳ್ಳುವುದನ್ನೂ ನೆರಿಗೆಗಳು ಮಾಯವಾಗುವುದನ್ನೂ ಕಾಣಬಹುದು. ಒಂದು ವೇಳೆ ನಿಮ್ಮಲ್ಲಿಯೂ ಉತ್ತಮವಾದ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.



Click it and Unblock the Notifications