Latest Updates
-
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ!
ಮೊಡವೆ ಉಪಟಳಕ್ಕೆ, ಕಿತ್ತಳೆ-ಲೋಳೆಸರದ ಜ್ಯೂಸ್
ಬೆಳಿಗ್ಗೆ ಎದ್ದು ಹೋಗಿ ಕನ್ನಡಿಯಲ್ಲಿ ನೋಡಿದಾಗ ಮುಖದ ತುಂಬಾ ಮೊಡವೆಗಳು ಹಾಗೂ ಬೊಕ್ಕೆಗಳು ಕಾಣಿಸಿಕೊಂಡರೆ ಒಮ್ಮೆ ಎದೆ ಒಡೆದು ಹೋದಂತೆ ಆಗುತ್ತದೆ. ನಿರಾಶೆಯೊಂದಿಗೆ ಇದನ್ನು ಹೇಗಪ್ಪಾ ನಿವಾರಿಸುವುದು ಎನ್ನುವ ಆತಂಕ ಕಾಡಲು ಆರಂಭಿಸುತ್ತದೆ. ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..!
ಮೊಡವೆ ಕಾಣಿಸಿಕೊಂಡಾಗ ಹೆಚ್ಚಿನವರು ತಕ್ಷಣ ಮಾರುಕಟ್ಟೆಗೆ ಹೋಗಿ ಅಲ್ಲಿ ಸಿಗುವ ಯಾವುದಾದರೂ ಕ್ರೀಮ್ ಅನ್ನು ಎತ್ತಿಕೊಂಡು ಬಂದುಮೊಡವೆಗಳಿಗೆ ಹಚ್ಚಲು ಆರಂಭಿಸುತ್ತಾರೆ. ಇದರಿಂದ ಚರ್ಮವು ಕಾಂತಿಯನ್ನು ಪಡೆಯುವುದು ಎಂದು ನಾವು ನಂಬಿರುತ್ತೇವೆ. ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?
ಆದರೆ ಈ ರಾಸಾಯನಿಕಯುಕ್ತ ಉತ್ಪನ್ನಗಳು ತ್ವಚೆಗೆ ಹಲವಾರು ರೀತಿಯ ಹಾನಿಯನ್ನುಂಟು ಮಾಡುತ್ತದೆ. ಆದರೆ ಮನೆಯಲ್ಲಿಯೇ ಸಿಗುವ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಂಡು ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದಾಗಿದೆ. ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾ ಅಥವಾ ಲೋಳೆಸರದ ಜ್ಯೂಸ್ ಬಳಸಿದರೆ ತ್ವಚೆಯು ಬೆಳ್ಳಗಾಗಿ ಕಾಂತಿಯನ್ನು ಪಡೆಯುವುದು. ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದಿಂದ ಚರ್ಮದ ಮಾಸ್ಕ್ ಅನ್ನು ಯಾವ ರೀತಿ ಮಾಡುವುದು ಎಂದು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು
*ಕಿತ್ತಳೆ ಜ್ಯೂಸ್ 3 ಚಮಚ
*ಅಲೋವೆರಾದ ತಿರುಳು 2 ಚಮಚ

ತಯಾರಿಸುವ ವಿಧಾನ
*ಹೇಳಿದಷ್ಟು ಪ್ರಮಾಣದಲ್ಲಿ ಸಾಮಗ್ರಿಯನ್ನು ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಿ.
*ಈ ಮಿಶ್ರಣವನ್ನು ತ್ವಚೆಗೆ ಹಚ್ಚಿಕೊಳ್ಳಿ.
*20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಅದನ್ನು ತೊಳೆಯಿರಿ.
*ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದಿಂದ ಮಾಡಿದ ಮಾಸ್ಕ್ನಿಂದ ತ್ವಚೆಗೆ ಆಗುವಂತಹ ಲಾಭಗಳನ್ನು ತಿಳಿದುಕೊಳ್ಳಿ.

ಚರ್ಮ ಒಣಗುವುದನ್ನು ಕಡಿಮೆ ಮಾಡುವುದು
ಈ ನೈಸರ್ಗಿಕ ಮಿಶ್ರಣವು ಚರ್ಮದ ಪ್ರತಿಯೊಂದು ರಂಧ್ರಕ್ಕೆ ತೇವಾಂಶವನ್ನು ನೀಡುವುದು. ಇದರಿಂದ ಒಣಚರ್ಮವು ದೂರವಾಗಿ ಚರ್ಮವು ಮೃಧುವಾಗಿ ಕಾಂತಿಯನ್ನು ಪಡೆಯುವುದು.

ನೆರಿಗೆ ನಿವಾರಣೆ
ಮಾಸ್ಕ್ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದು ಕೋಶಗಳಿಗೆ ವಯಸ್ಸಾಗುವುದನ್ನು ತಡೆಯುವುದು. ಇದರಿಂದ ನೆರಿಗೆ ಮತ್ತು ಚರ್ಮ ಜೋತು ಬೀಳುವುದು ಕಡಿಮೆಯಾಗುತ್ತದೆ.

ಗಾಯಗಳಿಗೆ ಚಿಕಿತ್ಸೆ
ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದ ಮಾಸ್ಕ್ ನಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಇದರಿಂದ ಸಣ್ಣ ಪ್ರಮಾಣದ ಗಾಯ, ಸುಟ್ಟಗಾಯ ಮತ್ತು ಕೀಟಗಳಿಂದ ಆಗುವ ಕಡಿತ ನಿವಾರಣೆಯಾಗುವುದು.

ಕಾಂತಿ ನೀಡುವುದು
ಈ ಮಾಸ್ಕ್ನಲ್ಲಿರುವ ವಿಟಮಿನ್ ಸಿ ಅಂಶವು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುವುದರಿಂದ ನಿಯಮಿತವಾಗಿ ಬಳಸುವುದರಿಂದ ಚರ್ಮವು ಕಾಂತಿಯನ್ನು ಪಡೆಯುವುದು.

ಕಪ್ಪುಕಲೆ ನಿವಾರಣೆ
ಕಿತ್ತಳೆ ಜ್ಯೂಸ್ ಮತ್ತು ಅಲೋವೆರಾದ ಮಾಸ್ಕ್ ಚರ್ಮದ ರಂಧ್ರಗಳಲ್ಲಿ ಅಡಗಿರುವಂತಹ ಧೂಳು ಮತ್ತು ಕಲ್ಮಶವನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮದಲ್ಲಿ ಮೂಡುವ ಕಪ್ಪು ಕಲೆಗಳು ನಿವಾರಣೆಯಾಗುವುದು.



Click it and Unblock the Notifications