Latest Updates
-
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ!
ಒಣಚರ್ಮವೇ? ಅಲೋವೆರಾ ಫೇಸ್ ಪ್ಯಾಕ್ ಪ್ರಯತ್ನಿಸಿ ನೋಡಿ...
ಚರ್ಮದ ಆರೋಗ್ಯಕ್ಕೆ ಆರ್ದ್ರತೆ ಬಹಳ ಮುಖ್ಯ. ಕೆಲವರ ಚರ್ಮ ಆರ್ದತೆಯನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆಯನ್ನು ಕೊಂಚ ಕಡಿಮೆ ಹೊಂದಿರುವ ಕಾರಣ ಇವರ ಚರ್ಮ ಸದಾ ಒಣದಾಗಿಯೇ ಇರುತ್ತದೆ.
ವಾತಾವರಣದಲ್ಲಿ ಕೊಂಚ ಒಣಹವೆ ಕಂಡುಬಂದರೂ ಇವರ ಚರ್ಮ ಒಣಗಿ ಬಿರುಕು ಬಿಡಲಾರಂಭಿಸುತ್ತದೆ. ಅದರಲ್ಲೂ ವಿಪರೀತ ಶುಷ್ಕ ಹವೆ ಇದ್ದಾಗ ಚರ್ಮ ಒಣಗಿ ಬಿಗಿಯಾಗಿ ನಗುವುದೂ ಕಷ್ಟಕರವಾಗುತ್ತದೆ.

ಪರೋಕ್ಷವಾಗಿ ವೃದ್ಧಾಪ್ಯದ ಲಕ್ಷಣಗಳನ್ನು ಚಿಕ್ಕವಯಸ್ಸಿನಲ್ಲಿಯೇ ಮೂಡಿಸುತ್ತವೆ. ಈ ತೊಂದರೆಯನ್ನು ಸಮರ್ಥವಾಗಿ ನಿಭಾಯಿಸಲು ನಿಸರ್ಗ ನೀಡಿರುವ ಅತ್ಯುತ್ತಮ ಪರಿಹಾರವೆಂದರೆ ಲೋಳೆಸರ. ಬನ್ನಿ, ಈ ನಿಟ್ಟಿನಲ್ಲಿ ಲೋಳೆಸರವನ್ನು ಹೇಗೆ ಬಳಸಬಹುದು ಎಂಬುದನ್ನು ಮೂರು ಮುಖಲೇಪಗಳ ಮುಖಾಂತರ ವಿವರಿಸಲಾಗಿದೆ: 'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!
ಲೋಳೆಸರ (ಅಲೋವೆರಾ) ಮತ್ತು ಮೊಸರು: ಕೆಂಪಗಾಗಿರುವ ಚರ್ಮಕ್ಕಾಗಿ
ಲೋಳೆಸರ ಮತ್ತು ಅರಿಶಿನ: ಮುಖದ ಕಾಂತಿ ಹೆಚ್ಚಿಸಲು
ಒಂದು ವೇಳೆ ಒಣಚರ್ಮದ ಕಾರಣದಿಂದ ಮುಖದ ಕಾಂತಿ ಮತ್ತು ಹೊಳಪು ಇಲ್ಲವಾಗಿದ್ದರೆ ಈ ಮುಖಲೇಪ ಸಮರ್ಥವಾದ ಉತ್ತರವಾಗಿದೆ. ಅರಿಶಿನ ಮುಖದ ಕಾಂತಿ ಹೆಚ್ಚಿಸುತ್ತದಾದರೂ ಒಣಚರ್ಮವನ್ನು ಇನ್ನಷ್ಟು ಒಣಗಿಸುವ ಕಾರಣ ಬರೆಯ ಅರಿಶಿನ ಸಾಕಾಗುವುದಿಲ್ಲ.
ಆದರೆ ಇದರೊಂದಿಗೆ ಕೊಂಚ ಲೋಳೆಸರದ ರಸ ಬೆರೆಸಿ ಹಚ್ಚಿದರೆ ಒಣಚರ್ಮಕ್ಕೆ ಆರ್ದ್ರತೆ ಮತ್ತು ಅರಿಶಿನದ ಪೋಷಣೆ ದೊರೆತು ಒಣಚರ್ಮದವರೂ ಇತರರಂತೆ ಕಾಂತಿಯುಕ್ತ ಮುಖವನ್ನು ಹೊಂದಬಹುದು. ಇದಕ್ಕಾಗಿ ಒಂದು ದೊಡ್ಡ ಚಮಚ ಲೋಳೆಸರದ ರಸಕ್ಕೆ ಚಿಟಿಕೆಯಷ್ಟು ಅರಿಶಿನ ಬೆರೆಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ತ್ವಚೆಯ ಸರ್ವ ರೋಗಕ್ಕೂ ಲೋಳೆ ಸರದ ಫೇಸ್ ಪ್ಯಾಕ್
ಲೋಳೆಸರ ಮತ್ತು ಪಪ್ಪಾಯಿ: ಮುಖದ ಅನಗತ್ಯ ಕೂದಲು ನಿವಾರಿಸಲು
ಪಪ್ಪಾಯಿಯಲ್ಲಿರುವ ಕೆಲವು ಕಿಣ್ವಗಳು ಮುಖದ ಮೇಲಿರುವ ಅನಗತ್ಯ ಕೂದಲುಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ನಿಯಮಿತವಾಗಿ ಈ ಮುಖಲೇಪವನ್ನು ಬಳಸುತ್ತಾ ಬಂದರೆ ಬೇಡದ ಕೂದಲ ನಿವಾರಣೆಗಾಗಿ ದುಬಾರಿ ಬ್ಯೂಟಿ ಪಾರ್ಲರುಗಳಲ್ಲಿ ಪ್ರತ್ಯೇಕ ಆರೈಕೆ ಪಡೆದುಕೊಳ್ಳುವ ಅಗತ್ಯವೇ ಇಲ್ಲ.
ಇದಕ್ಕಾಗಿ ಕೊಂಚ ಲೋಳೆಸರದ ರಸ ಮತ್ತು ಪಪ್ಪಾಯಿ ಹಣ್ಣಿನ ಚಿಕ್ಕ ತುಂಡನ್ನು ಜಜ್ಜಿ ಬೆರೆಸಿ ನಯವಾದ ಲೇಪವಾಗಿಸಿ. ಈ ಲೇಪವನ್ನು ಮುಖದ ಮೇಲೆ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುವ ಜೊತೆಗೇ ಬೇಡದ ಕೂದಲೂ ಬುಡಸಮೇತ ಹೋಗಿರುತ್ತದೆ.



Click it and Unblock the Notifications














