Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ತ್ವಚೆಯ ಆರೈಕೆಗೆ ತೊಗರಿಕಾಳು-ಆಲೂಗಡ್ಡೆಯ ಫೇಸ್ ಪ್ಯಾಕ್
ಚಳಿಗಾಲ ಅಂದ್ರೆ ಮುಖದ ಕಾಂತಿ ಕಳೆಗುಂದುತ್ತೆ. ರಿಂಕಲ್ಸ್ ಆಗುತ್ತೆ. ಚಳಿಗೆ ಮುಖ ಬಿರುಕುಬಿಟ್ಟಂತಾಗಿ ಸೌಂದರ್ಯ ಹೇಳಹೆಸರಿಲ್ಲದಂತೆ ಹೊರಟು ಹೋಗುತ್ತೆ. ಅದಕ್ಕೆ ಸರಿಯಾಗಿ ಹಾಳಾದ ವಾತಾವರಣ ಬೇರೆ ಬೆಂಕಿಗೆ ತುಪ್ಪ ಸುರಿದಂತೆ ನಿಮ್ಮ ಸೌಂದರ್ಯದ ಶತ್ರುವಾಗುತ್ತೆ. ಇನ್ನು ಇದೆಲ್ಲವನ್ನು ಮೇಕಪ್ ಮಾಡಿ ಮರೆಮಾಚಿ ಬಿಡೋಣ ಅಂದ್ರೆ ಅದಕ್ಕೂ ಶನಿ ವಕ್ಕರಿಸಿದಂತಾಗಿರುತ್ತೆ.
ಮೇಕಪ್ ಕೂಡ ಹಾಳಾದ ತ್ವಚೆಯ ಮೇಲೆ ಸರಿಯಾಗಿ ಕೂರೋದಿಲ್ಲ. ಏನು ಮಾಡೋದು ಅಂತ ಚಿಂತೆ ಆವರಿಸಿ ಬಿಡೋದು ಹೆಚ್ಚಿನ ಮಹಿಳೆಯರ ಕಾಮನ್ ಪ್ರಾಬ್ಲಂ..ಅದಕ್ಕೊಂದು ಸಿಂಪಲ್ ಪರಿಹಾರ ಇದೆ.. ಅದಕ್ಕಾಗಿ ನೀವು ಮಾಡ್ಬೇಕಾಗಿರೋದು ಇಷ್ಟೇ.. ಕೊರೆಯುವ ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ
ಬೇಕಾಗಿರುವ ಸಾಮಗ್ರಿಗಳು
1.ಒಂದು ಬೌಲ್ ತೊಗರಿ ಕಾಳು ಸುಮಾರು 150 ಗ್ರಾಮ್ ನಷ್ಟು
2.ಮೀಡಿಯಮ್ ಸೈಜಿನ ಮೂರು ಆಲೂಗಡ್ಡೆ
3. ಹಾಲಿನ ಕೆನೆ - ಒಂದು ಚಮಚ

ಏನು ಮಾಡ್ಬೇಕು?
ಈಗಂತೂ ತೊಗರಿ ಸೀಸನ್.. ಎಲ್ಲೆಲ್ಲೂ ಹಸಿ ತೊಗರಿಕಾಳುಗಳು ಸಿಗುತ್ತೆ. ಒಂದು ಬೌಲ್ ನಷ್ಟು ತೊಗರಿಕಾಳುಗಳನ್ನು ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಿ.. ನಂತ್ರ ಮೂರು ಆಲೂಗಡ್ಡೆಯನ್ನು ಸಿಪ್ಪೆ ಬಿಡಿಸಿ ಹೆಚ್ಚಿಕೊಳ್ಳಿ.. ಎರಡನ್ನು ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ ನಾಲ್ಕರಿಂದ ಐದು ಲೋಟ ನೀರು ಹಾಕಿ ಬೇಯಿಸಿ.. ಕುಕ್ಕರ್ ಮೂರು ವಿಷಿಲ್ ಬಂದ ನಂತ್ರ ಆಫ್ ಮಾಡಿ ಪ್ರೆಷರ್ ಇಳಿಯಲು ಬಿಡಿ. ತಣ್ಣಗಾದ ನಂತ್ರ ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ನೀರಿನಿಂದ ಬೇರ್ಪಡಿಸಿ.. ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ಈಗ ಪೇಸ್ಟ್ ತಯಾರಿಸಿಕೊಳ್ಳಿ. ಎಲೆಮರೆಕಾಯಿ ಆಲೂಗಡ್ಡೆಯ ಜಾದೂಗೆ ಬೆರಗಾಗಲೇಬೇಕು!
ನಂತ್ರ ಆ ಪೇಸ್ಟಿಗೆ ಒಂದು ಚಮಚ ಹಾಲಿನ ಕೆನೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ..ಪೇಸ್ಟ್ ಗಟ್ಟಿಯಾಗಿರಲಿ..ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿಕೊಂಡು ಒಂದು ಅರ್ಧ ಗಂಟೆ ಹಾಗೆಯೇ ಬಿಡಿ..ಆ ಪೇಸ್ಟ್ ನಿಮ್ಮ ಮುಖದಲ್ಲಿ ಒಣಗುವವರೆಗೂ ನೀವು ಹಾಗೆಯೇ ಇದ್ದರೂ ಪರವಾಗಿಲ್ಲ. ನಂತ್ರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.. ಯಾವುದೇ ಕೆಮಿಕಲ್ ಬಳಸದೇ ಫೇಸ್ ವಾಷ್ ಮಾಡಿದ್ರೆ ಒಳ್ಳೇದು..
ಹೀಗೆ ಮಾಡೋದ್ರಿಂದ ನಿಮ್ಮ ಕಳೆಗುಂದಿದ ತ್ವಚೆಗೆ ಮರುಜೀವ ಬರುತ್ತೆ. ಅಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಾಗುತ್ತೆ. ಅಲ್ಲದೆ ವಾತಾವರಣದ ಧೂಳಿನಿಂದ ಹಾಳಾಗಿರುವ ನಿಮ್ಮ ಮುಖದ ಚರ್ಮಕ್ಕೆ ಈ ಫೇಸ್ ಪ್ಯಾಕ್ ರಿಲ್ಯಾಕ್ಸ್ ಫೀಲ್ ನೀಡುತ್ತೆ. ಕೊಳೆ ತೊಡೆದು ಹಾಕಿ ಚರ್ಮ ಉಸಿರಾಡುವಂತೆ ಮಾಡಿ ಮುಖ ಫಳಫಳ ಹೊಳೆಯುವಂತೆ ಮಾಡುತ್ತೆ.
ಎಲ್ಲರಿಗೂ ಗೊತ್ತಿರೋ ಹಾಗೆ ಆಲೂಗಡ್ಡೆ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ತೊಗರಿ ಕಾಳು ಕೂಡ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವ ಎಲ್ಲಾ ಗುಣಗಳನ್ನು ಹೊಂದಿದೆ. ಇನ್ನು ಚಳಿಗಾಲದಲ್ಲಿ ಚರ್ಮಕ್ಕೆ ಎಷ್ಟು ಆರೈಕೆ ಇದ್ರೂ ಸಾಕಾಗಲ್ಲ. ಅದ್ರಲ್ಲೂ ಮುಖಕ್ಕೆ ಮಹಿಳೆಯರು ಮೇಕಪ್ ಕೂಡ ಮಾಡೋದ್ರಿಂದ ಎಷ್ಟು ಕಾಳಜಿ ವಹಿಸಿದ್ರೂ ಕಡಿಮೆಯೇ. ಹಾಗಾಗಿ ಈ ಫೇಸ್ ಪ್ಯಾಕ್ ಅವ್ರ ಸೌಂದರ್ಯವನ್ನು ಸ್ವಲ್ಪವೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತೆ. ನಿಮ್ಗೂ ಕೂಡ ಮುಖದ ಚರ್ಮ ಬಿರುಕುಬಿಟ್ಟಂತಾಗಿದೆ ಅನ್ನೋ ಫೀಲ್ ಇದ್ರೆ ಈ ಪೇಸ್ ಪ್ಯಾಕ್ ಟ್ರೈ ಮಾಡಿ ನೋಡಿ..



Click it and Unblock the Notifications

