Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆರ್ಯುವೇದದ 7 ಬ್ಯೂಟಿ ಸೀಕ್ರೆಟ್ ಇಲ್ಲಿದೆ
ತ್ವಚೆ ರಕ್ಷಣೆ ಬೆಲೆ ಬಾಳುವ ಕ್ರೀಮ್ ಬಳಸಿದರೆ ಮಾತ್ರ ಸಾಧ್ಯ ಹಾಗೇ ನಿಲ್ಲ ! ಅನೇಕ ಸೌಂದರ್ಯವರ್ಧಕ ಗುಣಗಳು ನೈಸರ್ಗಿಕ ವಸ್ತುಗಳಲ್ಲಿವೆ. ಆದ್ದರಿಂದ ಸೌಂದರ್ಯ ಹೆಚ್ಚಿಸಲು ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ನಾವು ಆರ್ಯುವೇದಗಳಿಂದ ಪರಿಹಾರ ಕಂಡುಕೊಳ್ಳುವುದು ಒಳ್ಳೆಯ ಆಲೋಚನೆ ಕೂಡ ಹೌದು.
ಆರ್ಯುವೇದ ಪದ್ಧತಿಯನ್ನು ಪಾಲಿಸಿದರೆ ದೊರೆಯುವ ಅತೀ ದೊಡ್ಡ ಪ್ರಯೋಜನವೆಂದರೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದು. ಇಲ್ಲಿ ನಾವು 7 ಸರಳ ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಕಲೆರಹಿತ, ಮೃದುವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು:

ನೆರಿಗೆ ತಡೆಗಟ್ಟಲು
ದಿನಾವೂ ಹರಳಣ್ಣೆಯನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಮುಖ ತೊಳೆದರೆ ಮುಖದಲ್ಲಿ ಯೌವನದ ಕಳೆ ತುಂಬಾ ಕಾಲದವರೆಗೆ ಇರುತ್ತದೆ. ಅಕಾಲಿಕ ನೆರಿಗೆ ಸಮಸ್ಯೆ ಉಂಟಾಗುವುದಿಲ್ಲ.

2. ಕಲೆರಹಿತ ತ್ವಚೆ
ಕಲೆರಹಿತ ತ್ವಚೆಗಾಗಿ ದಿನಾ ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ ಅದರಿಂದ ಮುಖವನ್ನು ಕ್ಲೆನ್ಸ್ ಮಾಡಬೇಕು.ಈ ರೀತಿ ಮಾಡಿದರೆ ಕಲೆ ರಹಿತ ತ್ವಚೆ ನಿಮ್ಮದಾಗುವುದು.

3. ಮಾಯಿಶ್ಚರೈಸರ್
ಮೊಟ್ಟೆಯ ಬಿಳಿ, ನಿಂಬೆ ಮತ್ತು ಕಿತ್ತಳೆ ರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

4.ಸ್ಕಿನ್ ಕಂಡೀಷನರ್
2 ಚಮಚ ಕೆನೆಗೆ 1/2 ಚಮಚ ಜೇನು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಡಬೇಕು. ನಂತರ ಟವಲ್ ನೆನೆಸಿ ಅದರಿಂದ ಮುಖವನ್ನು ಉಜ್ಜಬೇಕು.

5. ಕಪ್ಪು ಚುಕ್ಕಿಗಳು
ಹಸಿ ಆಲೂಗೆಡ್ಡೆ ದಿನವೂ ಮುಖಕ್ಕೆ 10 ನಿಮಿಷ ಉಜ್ಜಿದರೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

6. ಮೃದುವಾದ ತ್ವಚೆಗಾಗಿ
ದಿನಾವೂ 10 ನಿಮಿಷ ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚುತ್ತಿದ್ದರೆ ತ್ವಚೆ ಮೃದುವಾಗುತ್ತದೆ.

7. ಮುಖದಲ್ಲಿರುವ ಬೇಡದ ಕೂದಲನ್ನು ಹೋಗಲಾಡಿಸಲು
ಸಾಸಿವೆ ಎಣ್ಣೆ, ಅರಿಶಿಣ ಮತ್ತು ಗೋಧಿ ಹಿಟ್ಟು ಈ ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ತಿಕ್ಕಿದರೆ ಬೇಡದ ಕೂದಲನ್ನು ಹೋಗಲಾಡಿಸಬಹುದು.



Click it and Unblock the Notifications











