Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ನೇಲ್ ಪಾಲಿಷ್ ಕಲೆ ನಿವಾರಿಸಲು ಸಮರ್ಥ ವಿಧಾನಗಳು
ಉಗುರಿಗೆ ಬಣ್ಣ ಹಚ್ಚುವುದೇನೋ ದೊಡ್ಡ ಕೆಲಸವಲ್ಲ. ಆದರೆ ಕೆಲದಿನಗಳ ಬಳಿಕ ಬಣ್ಣ ನಿಧಾನವಾಗಿ ಮಾಸಿದಂತೆ ಕಲೆಯಿಲ್ಲದಂತೆ ನಿವಾರಿಸುವುದೇ ದೊಡ್ಡ ಸಮಸ್ಯೆ. ಏಕೆಂದರೆ ಬಣ್ಣ ಹಚ್ಚಿದ್ದಾಗ ಉಗುರಿನ ಬುಡ ಮತ್ತು ಅಂಚುಗಳಲ್ಲಿ ಸೇರಿದ್ದ ಬಣ್ಣ ಗಮನಕ್ಕೆ ಬರುವುದಿಲ್ಲ. ಆದರೆ ನೇಲ್ ಪಾಲಿಶ್ ರಿಮೂವರ್ ದ್ರವ ಬಳಸಿ ಉಗುರಿನ ಮೇಲ್ಭಾಗವನ್ನು ಸುಲಭವಾಗಿ ನಿವಾರಿಸಬಹುದಾದರೂ ಅಂಚು ಮತ್ತು ಬುಡದ ಬಣ್ಣವನ್ನು ನಿವಾರಿಸುವುದು ಸುಲಭಸಾಧ್ಯವಲ್ಲ ಎಂದು ತಕ್ಷಣವೇ ಗೊತ್ತಾಗುತ್ತದೆ. ಬಲವಂತ ಮಾಡಿದರೆ ಈ ಸೂಕ್ಷ್ಮಭಾಗಗಳಿಗೆ ಹಾನಿ ಮತ್ತು ನೋವು ಉಂಟಾಗಬಹುದು. ಇದನ್ನು ಕಲೆಯಿಲ್ಲದೇ ಸೌಂದರ್ಯತಜ್ಞರು ಹೇಗೆ ನಿವಾರಿಸುತ್ತಾರೆ ಎಂಬುದನ್ನು ಮುಂದೆ ಓದಿ...

*ಕ್ಯೂಟಿಕಲ್ ಆಯಿಲ್ ಬಳಸಿ
ಒಂದು ಹನಿ ಕ್ಯೂಟಿಕಲ್ ಆಯಿಲ್ ಬಳಸಿ ಉಗುರುಗಳ ಅಂಚಿನಲ್ಲಿ ಉಗುರಿನ ಮೇಲೆ ಹರಡಿ. ಇದರಿಂದ ಉಗುರುಬಣ್ಣ ಉಗುರಿನ ಮೇಲೆ ಸಾಧಿಸಿದ್ದ ಹಿಡಿತವನ್ನು ಸಡಿಲಿಸಿದಂತಾಗುತ್ತದೆ. ಬಳಿಕ ನೇಲ್ ಪಾಲಿಶ್ ರಿಮೂವರ್ ದ್ರವವನ್ನು ಹಾಕಿ, ಇದು ಬಣ್ಣದ ಬುಡದವರೆಗೆ ತಲುಪಿ ತಳಸಹಿತ ಕೀಳಲು ನೆರವಾಗುತ್ತದೆ. ಅಲ್ಲದೇ ಉಗುರಿನಲ್ಲಿ ಕಲೆ ಉಳಿಯದಂತೆ ಅಥವಾ ಅತಿ ಕಡಿಕೆ ಕಲೆ ಉಳಿಯುವಂತೆ ಮಾಡುತ್ತದೆ.
*ಒಂದು ವೇಳೆ ಈ ಕಲೆ ಗಮನಾರ್ಹವಾಗಿದ್ದರೆ ಎಣ್ಣೆಯಂಶ ಹೆಚ್ಚಿರುವ ಅಸಿಟೋನ್ ದ್ರಾವಣವನ್ನು ಬಳಸಿ ಕಲೆಯನ್ನು ನಿವಾರಿಸಬಹುದು. ಇದಕ್ಕಾಗಿ ಹತ್ತಿಯುಂಡೆಯನ್ನು ಅಸಿಟೋನ್ ದ್ರಾವಣದಲ್ಲಿ ಮುಳುಗಿಸಿ ಕೆಲೆಯಿದ್ದ ಭಾವನ್ನು ಆವರಿಸಿ. ಹತ್ತು ನಿಮಿಷ ಈ ಉಂಡೆ ಹಾಗೇ ಇರಲಿ ಬಳಿಕ ನಿವಾರಿಸಿ ಇನ್ನಷ್ಟು ಹತ್ತಿಯ ಉಂಡೆ ಅಥವಾ ಉರುಳೆಯಿಂದ ಸ್ವಲ್ಪವೇ ಒತ್ತಡ ನೀಡಿ ಒರೆಸಿಕೊಳ್ಳಿ.
*ಅಂತಿಮವಾಗಿ ಹಳೆಯ ಹಲ್ಲುಜ್ಜುವ ಬ್ರಶ್ ಒಂದನ್ನು ಬಳಸಿ ಕೊಂಚ ಅಡುಗೆ ಸೋಡಾ ಮತ್ತು ನೀರು ಬೆರೆಸಿದ ಲೇಪನವನ್ನು ಉಗುರಿನ ಮೇಲೆ ನಯವಾಗಿ ಉಜ್ಜಿಕೊಳ್ಳಿ. ಅಡುಗೆ ಸೋಡಾದ ಕ್ಷಾರೀಯ ಗುಣ ಉಗುರುಬಣ್ಣದ ಕಲೆಯನ್ನು ನಿವಾರಿಸುತ್ತದೆ. ಅಲ್ಲದೇ ಅಡುಗೆ ಸೋಡಾದ ಬಿಳಿಚಿಸುವ ಗುಣ ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣಗಳು ಉಗುರು ಮತ್ತು ಬೆರಳಿನ ಕಾಂತಿ ಮತ್ತು ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತವೆ.
*ಇನ್ನೊಂದು ವಿಧಾನವೆಂದರೆ ಲಿಂಬೆಹಣ್ಣಿನ ಬಳಕೆ. ಇದಕ್ಕಾಗಿ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಲಿಂಬೆರಸವನ್ನು ಬೆರೆಸಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಕೈಬೆರಳುಗಳನ್ನು ಮುಳುಗಿಸಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಕೈ ತೊಳೆದುಕೊಂಡು ಒಣಗಿಸಿ ತೇವಕಾರಕ ದ್ರವ (ಮಾಯಿಶ್ಚರೈಸಿಂಗ್ ಲಿಕ್ವಿಡ್) ಬೆರಳುಗಳಿಗೆ ಹಚ್ಚಿಕೊಳ್ಳಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವ ಮೂಲಕ ಉಗುರುಗಳಲ್ಲಿ ಕಲೆ ನಿವಾರಣೆಯಾಗಿರುವುದನ್ನು ಕಾಣಬಹುದು.



Click it and Unblock the Notifications












