Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು

ಮದುವೆಯ ಹೊಸ್ತಿಲಲ್ಲಿರುವ ದುಡಿಮೆಯ ಕಾಯಕವನ್ನು ಮಾಡಿಕೊಂಡಿರುವ ಐದು ಯುವಕರಿರುವ ಮನೆಯಿಂದ ಮಂಗಳವಾರ ಬೆಳ್ಳಂಬೆಳಿಗ್ಗೆ ಒಂದು ಲ್ಯಾಪ್ಟಾಪ್ ಕಳ್ಳತನವಾಗಿದೆ. ಅಯ್ಯೋ ಅಷ್ಟೇನಾ ಅಂತ ನಿರ್ಲಕ್ಷ್ಯ ಮಾಡಬೇಡಿ. ಇಲ್ಲಿ ಲ್ಯಾಪ್ಟಾಪ್ ಕಳ್ಳತನವಾಗಿದೆ ಎನ್ನುವುದಕ್ಕಿಂತ ಈ ಯುವಕರ ಜೀವನಶೈಲಿ ಆ ಕಳ್ಳತನಕ್ಕೆ ಹೇಗೆ ಕಾರಣವಾಯಿತು ಎಂಬುದು ಇಲ್ಲಿ ಮುಖ್ಯ.
ಇರುವ ಐದು ಜನರಲ್ಲಿ ಒಬ್ಬೊಬ್ಬರು ಒಂದೊಂದು ಕಂಪನಿಯಲ್ಲಿ ಕೆಲಸಕ್ಕಿದ್ದಾರೆ, ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ. ಒಬ್ಬ ಹಿರಿಯ ತಾಯಿಯನ್ನು ಅಡುಗೆ ಮಾಡಿಕೊಡಲು ನೇಮಿಸಿಕೊಂಡಿದ್ದಾರೆ. ಜೀವನ ಆರಾಮವಾಗಿದೆ. ಕಂಪನಿಯಲ್ಲಿ ಕೈತುಂಬ ಸಂಬಳ, ಮನೆಯಲ್ಲಿ ಊಟ, ತಿಂಡಿ, ನಿದ್ದೆ, ಮಸ್ತಿ ಮಜಾಕ್ಕೇನೂ ಕೊರತೆಯಿಲ್ಲ.
ಒಬ್ಬೊಬ್ಬರದೂ ಒಂದೊಂದು ಟೈಮಿಂಗ್. ಒಬ್ಬ ಇನ್ನೂ ನಕ್ಷತ್ರಗಳು ಮಿಣುಕುತ್ತಿರುವ ಹೊತ್ತಿನಲ್ಲಿ ಬೆಳಿಗ್ಗೆ 4.30ಕ್ಕೆ ಮನೆಯಿಂದ ಅಡಿಯಿಟ್ಟರೆ, ಇನ್ನೊಬ್ಬ ಸುತ್ತಮುತ್ತಲಿನವರು ಜಾಗಿಂಗ್ ಶುರು ಮಾಡುವ ಹೊತ್ತಿನಲ್ಲಿ. ಮಗದೊಬ್ಬ ಪೇಪರಿನವ ಪೇಪರ್ ಬಿಸಾಕಿ ಹೋಗುವ ಹೊತ್ತು. ಉಳಿದಿಬ್ಬರು ಚಳಿಗೆ ರಗ್ಗುಹೊದ್ದು ಮಲಗಿರುತ್ತಾರೆ.
ಪ್ರತಿಯೊಬ್ಬರ ಕೈಯಲ್ಲೂ ಬೀಗವಿಲ್ಲದ ಕಾರಣ ಕೆಲಸಕ್ಕೆ ಹೋಗುವಾಗ, ಯಾರನ್ನೂ ಎಬ್ಬಿಸದೆ ಸುಮ್ಮನೆ ಬಾಗಿಲೆಳೆದುಕೊಂಡು ಕಚೇರಿಯ ಹಾದಿ ಹಿಡಿಯುತ್ತಾರೆ. ಇದು ದಿನಂಪ್ರತಿ ನಡೆದುಕೊಂಡು ಬಂದಿರುವ ರೀತಿರಿವಾಜು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ತೆರೆದಿದೆ ಮನೆ ಓ ಬಾ ಅತಿಥಿ ಎಂದರೂ ಯಾರೂ ಬಂದಿರಲಿಲ್ಲ.
ಆದರೆ, ಪ್ರತಿದಿನ ಸೂರ್ಯ ಪೂರ್ವ ದಿಕ್ಕಿನಲ್ಲೇ ಹುಟ್ಟುತ್ತಾನಾದರೂ, ಎಲ್ಲ ದಿನವೂ ಒಂದೇ ರೀತಿಯಿರುವುದಿಲ್ಲವಲ್ಲ? ಇಂದಿನ ಬೆಳಗಿನ ಮುಹೂರ್ತವನ್ನು ಆಯ್ದುಕೊಂಡ ಕಿಲಾಡಿ ಕಳ್ಳನೊಬ್ಬ, ಉಳಿದಿಬ್ಬರು ಮಲಗಿದ ಕೋಣೆಗೇ ನುಗ್ಗಿ ಸದ್ದಿಲ್ಲದಂತೆ ಲ್ಯಾಪ್ ಟಾಪ್ ಎಗರಿಸಿಕೊಂಡು ಹೋಗಿದ್ದಾನೆ. ಬೆಳಕು ಹರಿದು ಕಣ್ಣು ಉಜ್ಜುವಾಗ ಇವರಿಗೆ ಜ್ಞಾನೋದಯವಾಗಿದೆ.
ಹೀಗಿದೆ ನೋಡಿ ನಮ್ಮ ಬೆಂಗಳೂರಿನ ಬ್ರಹ್ಮಚಾರಿಗಳ ಜೀವನ. ಇದು ಇವರ ಕಥೆ ಮಾತ್ರವಲ್ಲ. ಕೆಲಸಕ್ಕೆಂದು ರಾಜ್ಯದ ಅನೇಕ ಕಡೆಗಳಿಂದ ಗುಳೆಯೆದ್ದು ಬಂದಿರುವ ಅನೇಕರ ಕಥೆಯೂ ಇದೇ ರೀತಿಯಾಗಿರಬಹುದು. ಈಗ ಎಚ್ಚೆತ್ತುಕೊಳ್ಳುವ ಸರದಿ ಯುವ ಬ್ಯಾಚುಲರ್ ಗಳದ್ದು.



Click it and Unblock the Notifications
