Just In
- 7 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 8 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 8 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 10 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು
ಮದುವೆಯ ಹೊಸ್ತಿಲಲ್ಲಿರುವ ದುಡಿಮೆಯ ಕಾಯಕವನ್ನು ಮಾಡಿಕೊಂಡಿರುವ ಐದು ಯುವಕರಿರುವ ಮನೆಯಿಂದ ಮಂಗಳವಾರ ಬೆಳ್ಳಂಬೆಳಿಗ್ಗೆ ಒಂದು ಲ್ಯಾಪ್ಟಾಪ್ ಕಳ್ಳತನವಾಗಿದೆ. ಅಯ್ಯೋ ಅಷ್ಟೇನಾ ಅಂತ ನಿರ್ಲಕ್ಷ್ಯ ಮಾಡಬೇಡಿ. ಇಲ್ಲಿ ಲ್ಯಾಪ್ಟಾಪ್ ಕಳ್ಳತನವಾಗಿದೆ ಎನ್ನುವುದಕ್ಕಿಂತ ಈ ಯುವಕರ ಜೀವನಶೈಲಿ ಆ ಕಳ್ಳತನಕ್ಕೆ ಹೇಗೆ ಕಾರಣವಾಯಿತು ಎಂಬುದು ಇಲ್ಲಿ ಮುಖ್ಯ.
ಇರುವ ಐದು ಜನರಲ್ಲಿ ಒಬ್ಬೊಬ್ಬರು ಒಂದೊಂದು ಕಂಪನಿಯಲ್ಲಿ ಕೆಲಸಕ್ಕಿದ್ದಾರೆ, ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ. ಒಬ್ಬ ಹಿರಿಯ ತಾಯಿಯನ್ನು ಅಡುಗೆ ಮಾಡಿಕೊಡಲು ನೇಮಿಸಿಕೊಂಡಿದ್ದಾರೆ. ಜೀವನ ಆರಾಮವಾಗಿದೆ. ಕಂಪನಿಯಲ್ಲಿ ಕೈತುಂಬ ಸಂಬಳ, ಮನೆಯಲ್ಲಿ ಊಟ, ತಿಂಡಿ, ನಿದ್ದೆ, ಮಸ್ತಿ ಮಜಾಕ್ಕೇನೂ ಕೊರತೆಯಿಲ್ಲ.
ಒಬ್ಬೊಬ್ಬರದೂ ಒಂದೊಂದು ಟೈಮಿಂಗ್. ಒಬ್ಬ ಇನ್ನೂ ನಕ್ಷತ್ರಗಳು ಮಿಣುಕುತ್ತಿರುವ ಹೊತ್ತಿನಲ್ಲಿ ಬೆಳಿಗ್ಗೆ 4.30ಕ್ಕೆ ಮನೆಯಿಂದ ಅಡಿಯಿಟ್ಟರೆ, ಇನ್ನೊಬ್ಬ ಸುತ್ತಮುತ್ತಲಿನವರು ಜಾಗಿಂಗ್ ಶುರು ಮಾಡುವ ಹೊತ್ತಿನಲ್ಲಿ. ಮಗದೊಬ್ಬ ಪೇಪರಿನವ ಪೇಪರ್ ಬಿಸಾಕಿ ಹೋಗುವ ಹೊತ್ತು. ಉಳಿದಿಬ್ಬರು ಚಳಿಗೆ ರಗ್ಗುಹೊದ್ದು ಮಲಗಿರುತ್ತಾರೆ.
ಪ್ರತಿಯೊಬ್ಬರ ಕೈಯಲ್ಲೂ ಬೀಗವಿಲ್ಲದ ಕಾರಣ ಕೆಲಸಕ್ಕೆ ಹೋಗುವಾಗ, ಯಾರನ್ನೂ ಎಬ್ಬಿಸದೆ ಸುಮ್ಮನೆ ಬಾಗಿಲೆಳೆದುಕೊಂಡು ಕಚೇರಿಯ ಹಾದಿ ಹಿಡಿಯುತ್ತಾರೆ. ಇದು ದಿನಂಪ್ರತಿ ನಡೆದುಕೊಂಡು ಬಂದಿರುವ ರೀತಿರಿವಾಜು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ತೆರೆದಿದೆ ಮನೆ ಓ ಬಾ ಅತಿಥಿ ಎಂದರೂ ಯಾರೂ ಬಂದಿರಲಿಲ್ಲ.
ಆದರೆ, ಪ್ರತಿದಿನ ಸೂರ್ಯ ಪೂರ್ವ ದಿಕ್ಕಿನಲ್ಲೇ ಹುಟ್ಟುತ್ತಾನಾದರೂ, ಎಲ್ಲ ದಿನವೂ ಒಂದೇ ರೀತಿಯಿರುವುದಿಲ್ಲವಲ್ಲ? ಇಂದಿನ ಬೆಳಗಿನ ಮುಹೂರ್ತವನ್ನು ಆಯ್ದುಕೊಂಡ ಕಿಲಾಡಿ ಕಳ್ಳನೊಬ್ಬ, ಉಳಿದಿಬ್ಬರು ಮಲಗಿದ ಕೋಣೆಗೇ ನುಗ್ಗಿ ಸದ್ದಿಲ್ಲದಂತೆ ಲ್ಯಾಪ್ ಟಾಪ್ ಎಗರಿಸಿಕೊಂಡು ಹೋಗಿದ್ದಾನೆ. ಬೆಳಕು ಹರಿದು ಕಣ್ಣು ಉಜ್ಜುವಾಗ ಇವರಿಗೆ ಜ್ಞಾನೋದಯವಾಗಿದೆ.
ಹೀಗಿದೆ ನೋಡಿ ನಮ್ಮ ಬೆಂಗಳೂರಿನ ಬ್ರಹ್ಮಚಾರಿಗಳ ಜೀವನ. ಇದು ಇವರ ಕಥೆ ಮಾತ್ರವಲ್ಲ. ಕೆಲಸಕ್ಕೆಂದು ರಾಜ್ಯದ ಅನೇಕ ಕಡೆಗಳಿಂದ ಗುಳೆಯೆದ್ದು ಬಂದಿರುವ ಅನೇಕರ ಕಥೆಯೂ ಇದೇ ರೀತಿಯಾಗಿರಬಹುದು. ಈಗ ಎಚ್ಚೆತ್ತುಕೊಳ್ಳುವ ಸರದಿ ಯುವ ಬ್ಯಾಚುಲರ್ ಗಳದ್ದು.