Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು

ಮದುವೆಯ ಹೊಸ್ತಿಲಲ್ಲಿರುವ ದುಡಿಮೆಯ ಕಾಯಕವನ್ನು ಮಾಡಿಕೊಂಡಿರುವ ಐದು ಯುವಕರಿರುವ ಮನೆಯಿಂದ ಮಂಗಳವಾರ ಬೆಳ್ಳಂಬೆಳಿಗ್ಗೆ ಒಂದು ಲ್ಯಾಪ್ಟಾಪ್ ಕಳ್ಳತನವಾಗಿದೆ. ಅಯ್ಯೋ ಅಷ್ಟೇನಾ ಅಂತ ನಿರ್ಲಕ್ಷ್ಯ ಮಾಡಬೇಡಿ. ಇಲ್ಲಿ ಲ್ಯಾಪ್ಟಾಪ್ ಕಳ್ಳತನವಾಗಿದೆ ಎನ್ನುವುದಕ್ಕಿಂತ ಈ ಯುವಕರ ಜೀವನಶೈಲಿ ಆ ಕಳ್ಳತನಕ್ಕೆ ಹೇಗೆ ಕಾರಣವಾಯಿತು ಎಂಬುದು ಇಲ್ಲಿ ಮುಖ್ಯ.
ಇರುವ ಐದು ಜನರಲ್ಲಿ ಒಬ್ಬೊಬ್ಬರು ಒಂದೊಂದು ಕಂಪನಿಯಲ್ಲಿ ಕೆಲಸಕ್ಕಿದ್ದಾರೆ, ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ. ಒಬ್ಬ ಹಿರಿಯ ತಾಯಿಯನ್ನು ಅಡುಗೆ ಮಾಡಿಕೊಡಲು ನೇಮಿಸಿಕೊಂಡಿದ್ದಾರೆ. ಜೀವನ ಆರಾಮವಾಗಿದೆ. ಕಂಪನಿಯಲ್ಲಿ ಕೈತುಂಬ ಸಂಬಳ, ಮನೆಯಲ್ಲಿ ಊಟ, ತಿಂಡಿ, ನಿದ್ದೆ, ಮಸ್ತಿ ಮಜಾಕ್ಕೇನೂ ಕೊರತೆಯಿಲ್ಲ.
ಒಬ್ಬೊಬ್ಬರದೂ ಒಂದೊಂದು ಟೈಮಿಂಗ್. ಒಬ್ಬ ಇನ್ನೂ ನಕ್ಷತ್ರಗಳು ಮಿಣುಕುತ್ತಿರುವ ಹೊತ್ತಿನಲ್ಲಿ ಬೆಳಿಗ್ಗೆ 4.30ಕ್ಕೆ ಮನೆಯಿಂದ ಅಡಿಯಿಟ್ಟರೆ, ಇನ್ನೊಬ್ಬ ಸುತ್ತಮುತ್ತಲಿನವರು ಜಾಗಿಂಗ್ ಶುರು ಮಾಡುವ ಹೊತ್ತಿನಲ್ಲಿ. ಮಗದೊಬ್ಬ ಪೇಪರಿನವ ಪೇಪರ್ ಬಿಸಾಕಿ ಹೋಗುವ ಹೊತ್ತು. ಉಳಿದಿಬ್ಬರು ಚಳಿಗೆ ರಗ್ಗುಹೊದ್ದು ಮಲಗಿರುತ್ತಾರೆ.
ಪ್ರತಿಯೊಬ್ಬರ ಕೈಯಲ್ಲೂ ಬೀಗವಿಲ್ಲದ ಕಾರಣ ಕೆಲಸಕ್ಕೆ ಹೋಗುವಾಗ, ಯಾರನ್ನೂ ಎಬ್ಬಿಸದೆ ಸುಮ್ಮನೆ ಬಾಗಿಲೆಳೆದುಕೊಂಡು ಕಚೇರಿಯ ಹಾದಿ ಹಿಡಿಯುತ್ತಾರೆ. ಇದು ದಿನಂಪ್ರತಿ ನಡೆದುಕೊಂಡು ಬಂದಿರುವ ರೀತಿರಿವಾಜು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ತೆರೆದಿದೆ ಮನೆ ಓ ಬಾ ಅತಿಥಿ ಎಂದರೂ ಯಾರೂ ಬಂದಿರಲಿಲ್ಲ.
ಆದರೆ, ಪ್ರತಿದಿನ ಸೂರ್ಯ ಪೂರ್ವ ದಿಕ್ಕಿನಲ್ಲೇ ಹುಟ್ಟುತ್ತಾನಾದರೂ, ಎಲ್ಲ ದಿನವೂ ಒಂದೇ ರೀತಿಯಿರುವುದಿಲ್ಲವಲ್ಲ? ಇಂದಿನ ಬೆಳಗಿನ ಮುಹೂರ್ತವನ್ನು ಆಯ್ದುಕೊಂಡ ಕಿಲಾಡಿ ಕಳ್ಳನೊಬ್ಬ, ಉಳಿದಿಬ್ಬರು ಮಲಗಿದ ಕೋಣೆಗೇ ನುಗ್ಗಿ ಸದ್ದಿಲ್ಲದಂತೆ ಲ್ಯಾಪ್ ಟಾಪ್ ಎಗರಿಸಿಕೊಂಡು ಹೋಗಿದ್ದಾನೆ. ಬೆಳಕು ಹರಿದು ಕಣ್ಣು ಉಜ್ಜುವಾಗ ಇವರಿಗೆ ಜ್ಞಾನೋದಯವಾಗಿದೆ.
ಹೀಗಿದೆ ನೋಡಿ ನಮ್ಮ ಬೆಂಗಳೂರಿನ ಬ್ರಹ್ಮಚಾರಿಗಳ ಜೀವನ. ಇದು ಇವರ ಕಥೆ ಮಾತ್ರವಲ್ಲ. ಕೆಲಸಕ್ಕೆಂದು ರಾಜ್ಯದ ಅನೇಕ ಕಡೆಗಳಿಂದ ಗುಳೆಯೆದ್ದು ಬಂದಿರುವ ಅನೇಕರ ಕಥೆಯೂ ಇದೇ ರೀತಿಯಾಗಿರಬಹುದು. ಈಗ ಎಚ್ಚೆತ್ತುಕೊಳ್ಳುವ ಸರದಿ ಯುವ ಬ್ಯಾಚುಲರ್ ಗಳದ್ದು.



Click it and Unblock the Notifications