Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಬೆಂಗಳೂರು ಐಟಿ ಬ್ರಹ್ಮಚಾರಿಗಳ ಹದಗೆಟ್ಟ ಬದುಕು

ಮದುವೆಯ ಹೊಸ್ತಿಲಲ್ಲಿರುವ ದುಡಿಮೆಯ ಕಾಯಕವನ್ನು ಮಾಡಿಕೊಂಡಿರುವ ಐದು ಯುವಕರಿರುವ ಮನೆಯಿಂದ ಮಂಗಳವಾರ ಬೆಳ್ಳಂಬೆಳಿಗ್ಗೆ ಒಂದು ಲ್ಯಾಪ್ಟಾಪ್ ಕಳ್ಳತನವಾಗಿದೆ. ಅಯ್ಯೋ ಅಷ್ಟೇನಾ ಅಂತ ನಿರ್ಲಕ್ಷ್ಯ ಮಾಡಬೇಡಿ. ಇಲ್ಲಿ ಲ್ಯಾಪ್ಟಾಪ್ ಕಳ್ಳತನವಾಗಿದೆ ಎನ್ನುವುದಕ್ಕಿಂತ ಈ ಯುವಕರ ಜೀವನಶೈಲಿ ಆ ಕಳ್ಳತನಕ್ಕೆ ಹೇಗೆ ಕಾರಣವಾಯಿತು ಎಂಬುದು ಇಲ್ಲಿ ಮುಖ್ಯ.
ಇರುವ ಐದು ಜನರಲ್ಲಿ ಒಬ್ಬೊಬ್ಬರು ಒಂದೊಂದು ಕಂಪನಿಯಲ್ಲಿ ಕೆಲಸಕ್ಕಿದ್ದಾರೆ, ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ. ಒಬ್ಬ ಹಿರಿಯ ತಾಯಿಯನ್ನು ಅಡುಗೆ ಮಾಡಿಕೊಡಲು ನೇಮಿಸಿಕೊಂಡಿದ್ದಾರೆ. ಜೀವನ ಆರಾಮವಾಗಿದೆ. ಕಂಪನಿಯಲ್ಲಿ ಕೈತುಂಬ ಸಂಬಳ, ಮನೆಯಲ್ಲಿ ಊಟ, ತಿಂಡಿ, ನಿದ್ದೆ, ಮಸ್ತಿ ಮಜಾಕ್ಕೇನೂ ಕೊರತೆಯಿಲ್ಲ.
ಒಬ್ಬೊಬ್ಬರದೂ ಒಂದೊಂದು ಟೈಮಿಂಗ್. ಒಬ್ಬ ಇನ್ನೂ ನಕ್ಷತ್ರಗಳು ಮಿಣುಕುತ್ತಿರುವ ಹೊತ್ತಿನಲ್ಲಿ ಬೆಳಿಗ್ಗೆ 4.30ಕ್ಕೆ ಮನೆಯಿಂದ ಅಡಿಯಿಟ್ಟರೆ, ಇನ್ನೊಬ್ಬ ಸುತ್ತಮುತ್ತಲಿನವರು ಜಾಗಿಂಗ್ ಶುರು ಮಾಡುವ ಹೊತ್ತಿನಲ್ಲಿ. ಮಗದೊಬ್ಬ ಪೇಪರಿನವ ಪೇಪರ್ ಬಿಸಾಕಿ ಹೋಗುವ ಹೊತ್ತು. ಉಳಿದಿಬ್ಬರು ಚಳಿಗೆ ರಗ್ಗುಹೊದ್ದು ಮಲಗಿರುತ್ತಾರೆ.
ಪ್ರತಿಯೊಬ್ಬರ ಕೈಯಲ್ಲೂ ಬೀಗವಿಲ್ಲದ ಕಾರಣ ಕೆಲಸಕ್ಕೆ ಹೋಗುವಾಗ, ಯಾರನ್ನೂ ಎಬ್ಬಿಸದೆ ಸುಮ್ಮನೆ ಬಾಗಿಲೆಳೆದುಕೊಂಡು ಕಚೇರಿಯ ಹಾದಿ ಹಿಡಿಯುತ್ತಾರೆ. ಇದು ದಿನಂಪ್ರತಿ ನಡೆದುಕೊಂಡು ಬಂದಿರುವ ರೀತಿರಿವಾಜು. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ತೆರೆದಿದೆ ಮನೆ ಓ ಬಾ ಅತಿಥಿ ಎಂದರೂ ಯಾರೂ ಬಂದಿರಲಿಲ್ಲ.
ಆದರೆ, ಪ್ರತಿದಿನ ಸೂರ್ಯ ಪೂರ್ವ ದಿಕ್ಕಿನಲ್ಲೇ ಹುಟ್ಟುತ್ತಾನಾದರೂ, ಎಲ್ಲ ದಿನವೂ ಒಂದೇ ರೀತಿಯಿರುವುದಿಲ್ಲವಲ್ಲ? ಇಂದಿನ ಬೆಳಗಿನ ಮುಹೂರ್ತವನ್ನು ಆಯ್ದುಕೊಂಡ ಕಿಲಾಡಿ ಕಳ್ಳನೊಬ್ಬ, ಉಳಿದಿಬ್ಬರು ಮಲಗಿದ ಕೋಣೆಗೇ ನುಗ್ಗಿ ಸದ್ದಿಲ್ಲದಂತೆ ಲ್ಯಾಪ್ ಟಾಪ್ ಎಗರಿಸಿಕೊಂಡು ಹೋಗಿದ್ದಾನೆ. ಬೆಳಕು ಹರಿದು ಕಣ್ಣು ಉಜ್ಜುವಾಗ ಇವರಿಗೆ ಜ್ಞಾನೋದಯವಾಗಿದೆ.
ಹೀಗಿದೆ ನೋಡಿ ನಮ್ಮ ಬೆಂಗಳೂರಿನ ಬ್ರಹ್ಮಚಾರಿಗಳ ಜೀವನ. ಇದು ಇವರ ಕಥೆ ಮಾತ್ರವಲ್ಲ. ಕೆಲಸಕ್ಕೆಂದು ರಾಜ್ಯದ ಅನೇಕ ಕಡೆಗಳಿಂದ ಗುಳೆಯೆದ್ದು ಬಂದಿರುವ ಅನೇಕರ ಕಥೆಯೂ ಇದೇ ರೀತಿಯಾಗಿರಬಹುದು. ಈಗ ಎಚ್ಚೆತ್ತುಕೊಳ್ಳುವ ಸರದಿ ಯುವ ಬ್ಯಾಚುಲರ್ ಗಳದ್ದು.



Click it and Unblock the Notifications