Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಗುರೂಜಿ ಪ್ರವಚನಕ್ಕೆ ತಲೆಬಾಗುವ ಮುನ್ನ ಇದನ್ನು ಓದಿ

ಜ್ವರ ಬಂದು ಮಲಗಿದ್ದರೂ ಅಮ್ಮ, ಮಕ್ಕಳು ಹಸಿದಿರುತ್ತಾರೆ ಎಂಬ ಕಾಳಜಿಯಿಂದ ಅಡುಗೆ ಮಾಡುವುದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಹಣ ಕೂಡಿಡಲು ಅಪ್ಪ ಆಫೀಸಿಗೆ ನಡೆದೇ ಹೋಗುವುದು, ತಮ್ಮನ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಅಣ್ಣ ತನ್ನ ಸಂಗೀತದ ತಾಲೀಮನ್ನು ಮುಂದೂಡುವುದು, ಅಕ್ಕನಿಗೆ ಇಷ್ಟವಾದ ಜಿಲೇಬಿ ಮಾಡಲು ತಂಗಿ ತನ್ನಿಡೀ ದಿನ ಕಳೆಯುವುದು ತ್ಯಾಗ ಅಥವಾ ಕಾಳಜಿ ಎನಿಸಿಕೊಳ್ಳದೇ 'ಟೈಂ ವೇಸ್ಟ್' ಎನಿಸಿಕೊಂಡಿದೆ.
ಕೈ ತುಂಬಾ ದುಡಿದರೂ ಹೊಟ್ಟೆ ತುಂಬಾ ನೆಮ್ಮದಿಯಾಗಿ ತಿನ್ನದ ಜೀವನವನ್ನೇ ಕ್ರಿಯಾಶೀಲತೆ, ವೃತ್ತಿಪರತೆ ಎಂದೆಲ್ಲಾ ಹೊಗಳಿಕೊಂಡು ಬದುಕುವ ಮನಸ್ಸುಗಳು ಬೆಳೆಯುತ್ತಿವೆ. ಯಾವ ಕೆಲಸದಿಂದ ಆರ್ಥಿಕವಾಗಿ ಲಾಭ ಇಲ್ಲವೋ ಅದು ಕೆಲಸವೇ ಅಲ್ಲ ಎಂಬ ಇವರ ಯೋಚನೆಯಂತೂ ಅಸಹ್ಯ ಹುಟ್ಟಿಸುತ್ತದೆ.
ಸಂಬಂಧ, ವಿದ್ಯೆ, ಬದುಕನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲು ಆರಂಭಿಸಿರುವ ಯುವಜನರು ಈ ದಾರಿಯಲ್ಲಿ ತುಂಬಾ ದೂರ ಹೋಗುವ ಮೊದಲೇ ಶೈಕ್ಷಣಿಕವಾಗಿ ಅವರನ್ನು ಸರಿದಾರಿಗೆ ತರಬೇಕಿದೆ.
ಆಧುನಿಕ ಜಗತ್ತಿಗೆ ತೆರೆದುಕೊಂಡಂತೆಲ್ಲಾ ಮನಸ್ಸು ಕಟುವಾಸ್ತವವನ್ನು ಯೋಚಿಸುವುದು ಸಹಜ. ಅಲ್ಲಿ ಭಾವನೆಗಳಿಗೆ ಜಾಗ ಕಡಿಮೆ. ಭಾವನೆಗಳೇ ಇಲ್ಲದೇ ಹೋದರೆ ಸಂತಸಕ್ಕೆ ಎಡೆ ಇರುವುದಿಲ್ಲ. ಅದರಿಂದ ಅನುಕರಿಸುವ ಗೋಜಿನಿಂದ ಹೊರಬಂದು ಸಹಜ ಭಾವನೆಗಳನ್ನು ಸ್ಥಾಪಿಸಿಕೊಳ್ಳುವತ್ತ ಮನಸ್ಸು ಹರಿಸಬೇಕಿದೆ.



Click it and Unblock the Notifications