Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗುರೂಜಿ ಪ್ರವಚನಕ್ಕೆ ತಲೆಬಾಗುವ ಮುನ್ನ ಇದನ್ನು ಓದಿ

ಜ್ವರ ಬಂದು ಮಲಗಿದ್ದರೂ ಅಮ್ಮ, ಮಕ್ಕಳು ಹಸಿದಿರುತ್ತಾರೆ ಎಂಬ ಕಾಳಜಿಯಿಂದ ಅಡುಗೆ ಮಾಡುವುದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಹಣ ಕೂಡಿಡಲು ಅಪ್ಪ ಆಫೀಸಿಗೆ ನಡೆದೇ ಹೋಗುವುದು, ತಮ್ಮನ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಅಣ್ಣ ತನ್ನ ಸಂಗೀತದ ತಾಲೀಮನ್ನು ಮುಂದೂಡುವುದು, ಅಕ್ಕನಿಗೆ ಇಷ್ಟವಾದ ಜಿಲೇಬಿ ಮಾಡಲು ತಂಗಿ ತನ್ನಿಡೀ ದಿನ ಕಳೆಯುವುದು ತ್ಯಾಗ ಅಥವಾ ಕಾಳಜಿ ಎನಿಸಿಕೊಳ್ಳದೇ 'ಟೈಂ ವೇಸ್ಟ್' ಎನಿಸಿಕೊಂಡಿದೆ.
ಕೈ ತುಂಬಾ ದುಡಿದರೂ ಹೊಟ್ಟೆ ತುಂಬಾ ನೆಮ್ಮದಿಯಾಗಿ ತಿನ್ನದ ಜೀವನವನ್ನೇ ಕ್ರಿಯಾಶೀಲತೆ, ವೃತ್ತಿಪರತೆ ಎಂದೆಲ್ಲಾ ಹೊಗಳಿಕೊಂಡು ಬದುಕುವ ಮನಸ್ಸುಗಳು ಬೆಳೆಯುತ್ತಿವೆ. ಯಾವ ಕೆಲಸದಿಂದ ಆರ್ಥಿಕವಾಗಿ ಲಾಭ ಇಲ್ಲವೋ ಅದು ಕೆಲಸವೇ ಅಲ್ಲ ಎಂಬ ಇವರ ಯೋಚನೆಯಂತೂ ಅಸಹ್ಯ ಹುಟ್ಟಿಸುತ್ತದೆ.
ಸಂಬಂಧ, ವಿದ್ಯೆ, ಬದುಕನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲು ಆರಂಭಿಸಿರುವ ಯುವಜನರು ಈ ದಾರಿಯಲ್ಲಿ ತುಂಬಾ ದೂರ ಹೋಗುವ ಮೊದಲೇ ಶೈಕ್ಷಣಿಕವಾಗಿ ಅವರನ್ನು ಸರಿದಾರಿಗೆ ತರಬೇಕಿದೆ.
ಆಧುನಿಕ ಜಗತ್ತಿಗೆ ತೆರೆದುಕೊಂಡಂತೆಲ್ಲಾ ಮನಸ್ಸು ಕಟುವಾಸ್ತವವನ್ನು ಯೋಚಿಸುವುದು ಸಹಜ. ಅಲ್ಲಿ ಭಾವನೆಗಳಿಗೆ ಜಾಗ ಕಡಿಮೆ. ಭಾವನೆಗಳೇ ಇಲ್ಲದೇ ಹೋದರೆ ಸಂತಸಕ್ಕೆ ಎಡೆ ಇರುವುದಿಲ್ಲ. ಅದರಿಂದ ಅನುಕರಿಸುವ ಗೋಜಿನಿಂದ ಹೊರಬಂದು ಸಹಜ ಭಾವನೆಗಳನ್ನು ಸ್ಥಾಪಿಸಿಕೊಳ್ಳುವತ್ತ ಮನಸ್ಸು ಹರಿಸಬೇಕಿದೆ.



Click it and Unblock the Notifications
