Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮದರ್ಸ್ ಡೇ, ಫಾದರ್ಸ್ ಡೇ ಮಧ್ಯೆ ಅನಾಥ ಪ್ರಜ್ಞೆ ನಮಗೆ ಬೇಕಾ?

ಹೀಗೆ ಕುಟುಂಬದಿಂದ ದೂರವಾಗಿ ಬೇಕಾದಷ್ಟು ಹಣ, ಕೀರ್ತಿ ಸಂಪಾದಿಸಿ ಬದುಕಿನ ಕೊನೆಯಲ್ಲಿ ನೆಮ್ಮದಿಗಾಗಿ ಅಧ್ಯಾತ್ಮದ ಮೊರೆ ಹೋಗುವ ವಿದೇಶಿಯರನ್ನು ಕಂಡೇ ಇರುತ್ತೇವೆ. ಅವರಿಗೆ ನಿಜವಾಗಿ ಬೇಕಿರುವುದು ಆಧ್ಯಾತ್ಮಿಕ ಶಾಂತಿಯಲ್ಲ.
ಸೂಕ್ತ ವಯಸ್ಸಿನಲ್ಲಿ ಸಿಗದ ಕೌಟುಂಬಿಕ ಪ್ರೀತಿ. ಅದನ್ನು ಅವರು ಬದುಕಿನುದ್ದಕ್ಕೂ ಅರಸಿ ಸೋತು ಕಡೆಯದಾಗಿ ಮಾನಸಿಕ ನೆಮ್ಮದಿಯತ್ತ ಹೊರಳಿರುತ್ತಾರೆ. ಅಂಥ ಅನಾಥ ಪ್ರಜ್ಞೆಯನ್ನು ಭಾರತೀಯರು ಕೈಯ್ಯಾರೆ ಬರಮಾಡಿಕೊಳ್ಳಬೇಕೇ?
ತಂದೆ ತಾಯಿಯೊಂದಿಗೆ ಬದುಕು ಪೂರ್ತಿ ಇರಲು ನಮ್ಮ ಸಮಾಜ ಸಮ್ಮತಿ ನೀಡಿದೆ. ಅಂಥದ್ದರಲ್ಲಿ ಪಾಶ್ಚಾತ್ಯ ಸಮಾಜವನ್ನು ಅನುಕರಿಸುವ ಅಗತ್ಯ ನಮಗೇಕೆ? ಅನುಕರಣೆಗಳಿಗೆ ಕಟ್ಟುಬಿದ್ದು ಸಂಬಂಧಗಳ ಸುಳಿಗಳಿಂದ ಹೊರಬರುವ ಪ್ರಯತ್ನದಲ್ಲಿ ಒಂಟಿಯಾಗುವತ್ತ ಹೊರಡುವ ಆತುರವೇಕೆ?
ಉದ್ಯೋಗದ ಅನಿವಾರ್ಯತೆಯಿಂದ ಕುಟುಂಬದಿಂದ ದೂರವಾಗುವವರು, ಅವಿಭಕ್ತ ಕುಟುಂಬದಿಂದ ಬೇರೆಯಾಗಿ ಗಂಡ-ಹೆಂಡತಿ ಇಬ್ಬರೇ ಬದುಕುವ ನಿರ್ಧಾರ ಮಾಡುವವರ ಸಂಖ್ಯೆ ಹೆಚ್ಚಿದಂತೆ ಅಂತರ್ಜಾತಿ ವಿವಾಹವಾದ ದಂಪತಿಗಳು ಸಂಬಂಧಿಗಳಿಂದ ದೂರವಾಗಿ ಬದುಕುವುದು ಅನಿವಾರ್ಯವಾಗಿದೆ. ಆದರೆ ಅವುಗಳ ನಡುವೆಯೇ ಸಂಬಂಧಗಳನ್ನು ನಿಭಾಯಿಸುವ ಮನಸ್ಸು ಮಾಡಬೇಕಿದೆ.



Click it and Unblock the Notifications
