Latest Updates
-
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ತತ್ತರ: ಎಸಿ ಇಲ್ಲದೆಯೇ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಸರಳ ಉಪಾಯಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮಗಳನ್ನು ಪಾಲಿಸಿ, ಆರೋಗ್ಯವಾಗಿರಿ! -
ಕಾನ್ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಅಬ್ಬರ: ಹಳೆಯ ಸೀರೆಯಿಂದ ಸೃಷ್ಟಿಯಾದ ಈ ಫ್ಯಾಷನ್ ಮ್ಯಾಜಿಕ್ ನೋಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಾಗದಂತೆ ತಡೆಯಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಮದರ್ಸ್ ಡೇ, ಫಾದರ್ಸ್ ಡೇ ಮಧ್ಯೆ ಅನಾಥ ಪ್ರಜ್ಞೆ ನಮಗೆ ಬೇಕಾ?

ಹೀಗೆ ಕುಟುಂಬದಿಂದ ದೂರವಾಗಿ ಬೇಕಾದಷ್ಟು ಹಣ, ಕೀರ್ತಿ ಸಂಪಾದಿಸಿ ಬದುಕಿನ ಕೊನೆಯಲ್ಲಿ ನೆಮ್ಮದಿಗಾಗಿ ಅಧ್ಯಾತ್ಮದ ಮೊರೆ ಹೋಗುವ ವಿದೇಶಿಯರನ್ನು ಕಂಡೇ ಇರುತ್ತೇವೆ. ಅವರಿಗೆ ನಿಜವಾಗಿ ಬೇಕಿರುವುದು ಆಧ್ಯಾತ್ಮಿಕ ಶಾಂತಿಯಲ್ಲ.
ಸೂಕ್ತ ವಯಸ್ಸಿನಲ್ಲಿ ಸಿಗದ ಕೌಟುಂಬಿಕ ಪ್ರೀತಿ. ಅದನ್ನು ಅವರು ಬದುಕಿನುದ್ದಕ್ಕೂ ಅರಸಿ ಸೋತು ಕಡೆಯದಾಗಿ ಮಾನಸಿಕ ನೆಮ್ಮದಿಯತ್ತ ಹೊರಳಿರುತ್ತಾರೆ. ಅಂಥ ಅನಾಥ ಪ್ರಜ್ಞೆಯನ್ನು ಭಾರತೀಯರು ಕೈಯ್ಯಾರೆ ಬರಮಾಡಿಕೊಳ್ಳಬೇಕೇ?
ತಂದೆ ತಾಯಿಯೊಂದಿಗೆ ಬದುಕು ಪೂರ್ತಿ ಇರಲು ನಮ್ಮ ಸಮಾಜ ಸಮ್ಮತಿ ನೀಡಿದೆ. ಅಂಥದ್ದರಲ್ಲಿ ಪಾಶ್ಚಾತ್ಯ ಸಮಾಜವನ್ನು ಅನುಕರಿಸುವ ಅಗತ್ಯ ನಮಗೇಕೆ? ಅನುಕರಣೆಗಳಿಗೆ ಕಟ್ಟುಬಿದ್ದು ಸಂಬಂಧಗಳ ಸುಳಿಗಳಿಂದ ಹೊರಬರುವ ಪ್ರಯತ್ನದಲ್ಲಿ ಒಂಟಿಯಾಗುವತ್ತ ಹೊರಡುವ ಆತುರವೇಕೆ?
ಉದ್ಯೋಗದ ಅನಿವಾರ್ಯತೆಯಿಂದ ಕುಟುಂಬದಿಂದ ದೂರವಾಗುವವರು, ಅವಿಭಕ್ತ ಕುಟುಂಬದಿಂದ ಬೇರೆಯಾಗಿ ಗಂಡ-ಹೆಂಡತಿ ಇಬ್ಬರೇ ಬದುಕುವ ನಿರ್ಧಾರ ಮಾಡುವವರ ಸಂಖ್ಯೆ ಹೆಚ್ಚಿದಂತೆ ಅಂತರ್ಜಾತಿ ವಿವಾಹವಾದ ದಂಪತಿಗಳು ಸಂಬಂಧಿಗಳಿಂದ ದೂರವಾಗಿ ಬದುಕುವುದು ಅನಿವಾರ್ಯವಾಗಿದೆ. ಆದರೆ ಅವುಗಳ ನಡುವೆಯೇ ಸಂಬಂಧಗಳನ್ನು ನಿಭಾಯಿಸುವ ಮನಸ್ಸು ಮಾಡಬೇಕಿದೆ.



Click it and Unblock the Notifications