Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮದುವೆಯ ನಂತರ ಇದೆಲ್ಲಾ ಬೇಕಾ? ಹಿಂದಿನ ಕಥೆಯೆಲ್ಲಾ ಮರೆತುಬಿಡಿ!
ಮದುವೆಗೆ ಮೊದಲು ಪ್ರೀತಿಯಲ್ಲಿ ಬೀಳುವುದು, ಆ ಪ್ರೀತಿ ಮುರಿದು ಹೋಗುವುದು ಇದು ಇಂದಿನ ದಿನಗಳಲ್ಲಿ ಸಾಮಾನ್ಯ. ಪ್ರೀತಿ-ಪ್ರೇಮಕ್ಕೆ ಬೆಲೆಯೇ ಇಲ್ಲದಿರುವ ಈಗಿನ ಕಾಲದಲ್ಲಿ ಪ್ರೀತಿ ಎನ್ನುವುದು ಕೇವಲ ಆಟಿಕೆಯ ವಸ್ತುವಾಗಿದೆ. ಅದರಲ್ಲೂ ಕೆಲವು ಮಂದಿ ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗುತ್ತಾರೆ. ಇನ್ನು ಕೆಲವರು ಹಲವರನ್ನು ಪ್ರೀತಿಸಿ ಕೊನೆಗೆ ಮದುವೆಯಾಗದೆ ಉಳಿಯುತ್ತಾರೆ ಅಥವಾ ಮನೆಯವರು ಹೇಳಿದವರನ್ನು ಮದುವೆಯಾಗುವರು. ಇದಕ್ಕೆ ಹೆಣ್ಣು ಅಥವಾ ಗಂಡು ಎಂಬ ಭೇದವಿಲ್ಲ.
ಮದುವೆಯಾದ ಬಳಿಕ ನೀವು ಪ್ರೀತಿಸುತ್ತಿದ್ದ ವ್ಯಕ್ತಿಯ ಬಗ್ಗೆ ಸಂಗಾತಿಗೆ ತಿಳಿಸಿದರೆ ಆಗ ಅವರಿಗೆ ಅಸೂಯೆಯಾಗುವುದು ಖಚಿತ. ಇದನ್ನು ಪೂರ್ವಾನ್ವಯ ಅಸೂಯೆ ಎನ್ನಲಾಗುತ್ತದೆ. ನೀವು ತುಂಬಾ ಸುಂದರವಾಗಿರುವ ಮಹಿಳೆಯರನ್ನು ಮದುವೆಗೆ ಮೊದಲು ಪ್ರೀತಿಸುತ್ತಾ ಇದ್ದೀರಿ. ಆದರೆ ಬೇರೆಯವರನ್ನು ಮದುವೆಯಾದಿರಿ. ಇದರ ಬಗ್ಗೆ ಪತ್ನಿಗೆ ಹೇಳಿದರೆ ಆಕೆಗೆ ಪೂರ್ವಾನ್ವಯ ಅಸೂಯೆಯಾಗುವುದು. ಅದೇ ರೀತಿ ಪತ್ನಿ ತನ್ನ ಪ್ರಿಯಕರನ ಬಗ್ಗೆ ಹೇಳಿದರೂ ಪತಿಗೆ ಹೀಗೆ ಆಗುವುದು. ದಂಪತಿ ಇದನ್ನು ಹೇಗೆ ನಿಭಾಯಿಸುತ್ತಾರೆ. ಇದರ ಹಿಂದಿರುವ ಸತ್ಯಗಳನ್ನು ಬೋಲ್ಡ್ ಸ್ಕೈ ಹೊರಹಾಕಲಿದೆ....

ನಿಜವಾದ ಕಾರಣ
ಅಸುರಕ್ಷತೆಯ ಭಾವದಿಂದ ಇಂತಹ ಪೂರ್ವಾನ್ವಯ ಅಸೂಯೆ ಹುಟ್ಟುವುದು. ಸಂಗಾತಿಯ ಮಾಜಿ ಪ್ರೇಮಿ/ ಪ್ರೇಯಸಿ ತುಂಬಾ ಸುಂದರವಾಗಿದ್ದರೆ ಆಗ ನಿಮ್ಮಲ್ಲಿ ಪೂರ್ವಾನ್ವಯ ಅಸೂಯೆ ಕಾಣಿಸಿಕೊಳ್ಳುತ್ತದೆ. ಮಾಜಿ ಪ್ರೇಯಸಿ ಮತ್ತೆ ತನ್ನ ಸಂಗಾತಿಯ ಜೀವನದಲ್ಲಿ ಬರಬಹುದು ಎನ್ನುವ ಅಸುರಕ್ಷಿತ ಭಾವವೇ ಇದಕ್ಕೆ ಕಾರಣ.

ನಿಜವಾದ ಕಾರಣ
ಭಯವನ್ನು ನಿಯಂತ್ರಿಸಿಕೊಳ್ಳುವುದು ಅತೀ ಅಗತ್ಯ. ಇಲ್ಲವೆಂದಾದರೆ ನೀವು ಒಳಗಿನಿಂದೊಳಗೆ ಕುದಿಯುತ್ತಾ ಇರುತ್ತೀರಿ ಮತ್ತು ಜೀವನ ಒಳ್ಳೆಯ ರೀತಿಯಿಂದ ಸಾಗುವುದಿಲ್ಲ. ಭಯದ ಬಗ್ಗೆ ಸಂಗಾತಿಗೆ ಹೇಳಿಬಿಡಿ. ನಿಮ್ಮ ಸಂಗಾತಿಗೆ ಪೂರ್ವಾನ್ವಯ ಅಸೂಯೆಯಾಗುತ್ತಾ ಇದ್ದರೆ ನೀವು ತಾಳ್ಮೆಯಿಂದ ಇದ್ದು ಭಯದ ಬಗ್ಗೆ ತಿಳಿ ಹೇಳಿ.

ಏನು ಮಾಡಬೇಕು?
ಸಂಗಾತಿಯ ಭಯ ನಿವಾರಿಸಲು ಏನು ಮಾಡಬೇಕು ಎನ್ನುವ ಪ್ರಶ್ನೆ ಬರುವುದು. ನೀವು ಯಾವುದನ್ನೂ ಮುಚ್ಚಿಡಬೇಡಿ. ನಿಮ್ಮ ಜೀವನದ ಬಗ್ಗೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಿ. ಸಂಗಾತಿಯಿಂದ ಯಾವುದೇ ವಿಚಾರ ಮುಚ್ಚಿಟ್ಟರೂ ಅಸೂಯೆ ಹೆಚ್ಚಾಗುವುದು. ಪೂರ್ವಾನ್ವಯ ಅಸೂಯೆಯಿಂದ ನೀವು ಬಳಲುತ್ತಾ ಇದ್ದರೆ ಆಗ ಇದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ಮನಸ್ಸಿನಲ್ಲಿರುವ ಅಸುರಕ್ಷಿತ ಮನೋಭಾವ ತೆಗೆದುಹಾಕಿ.

ಸಾಮಾಜಿಕ ಜಾಲತಾಣ ಲೈಕ್, ಕಮೆಂಟ್.....
ಸಾಮಾಜಿಕ ಜಾಲತಾಣದ ಬಗ್ಗೆ ನಿಮ್ಮ ನಡವಳಿಕೆ ಸ್ಪಷ್ಟವಾಗಿರಲಿ. ಇದು ಸರಳವಾಗಿದ್ದಷ್ಟು ನಿಮ್ಮ ಸಂಗಾತಿಯ ಭೀತಿ ಕಡಿಮೆಯಾಗುವುದು. ಲೈಕ್, ಕಮೆಂಟ್ ಮತ್ತು ಮಾಜಿ ಪ್ರೇಯಸಿ ಅಥವಾ ಪ್ರಿಯತಮನನ್ನು ಛೇಡಿಸುವುದು ನಿಮ್ಮ ಸಂಗಾತಿಯ ಭೀತಿ ಹೆಚ್ಚಿಸಬಹುದು. ನೀವು ಪೂರ್ವಾನ್ವಯ ಭೀತಿಗೆ ಒಳಗಾಗಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸಂಗಾತಿ ತುಂಬಾ ವಿಚಿತ್ರವಾಗಿ ವರ್ತಿಸುವ ಬಗ್ಗೆ ಪ್ರಶ್ನಿಸಿ.

ಹಿಂದಿನದ್ದನ್ನು ಮರೆತುಬಿಡಿ
ವರ್ತಮಾನದಲ್ಲಿ ಬದುಕಲು ಕಲಿಯಿರಿ. ನಿಮ್ಮ ಮಾಜಿ ಪ್ರೇಯಸಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳಿ. ಇದರಿಂದ ನಿಮ್ಮ ಈಗಿನ ಸಂಬಂಧ ಚೆನ್ನಾಗಿರುವುದು. ನಿಮಗೆ ಪೂರ್ವಾನ್ವಯ ಅಸೂಯೆಯಾಗುತ್ತಾ ಇದ್ದರೆ ನಿಮ್ಮ ಸಂಗಾತಿಯಲ್ಲಿ ಹಿಂದಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲು ಹೇಳಿ.

ಒಳ್ಳೆಯ ಹೆಜ್ಜೆಯನ್ನಿಡಿ
ಸಂಗಾತಿಯು ನಿಮ್ಮೊಂದಿಗಿನ ಸಂಬಂಧದಲ್ಲಿ ಒಳ್ಳೆಯ ಭಾವನೆ ಹೊಂದಿರಲಿ ಮತ್ತು ಸಂಬಂಧವು ವಿಶೇಷವಾಗಿದೆ ಎಂದು ಅವರಿಗೆ ಅನಿಸಲಿ. ನಿಮ್ಮ ಸಂಗಾತಿಯು ನೀವು ಅಸೂಯೆ ಪಡುವಂತೆ ಮಾಡುತ್ತಾ ಇದ್ದರೆ ಆಗ ನಿಮ್ಮ ಭಾವನೆಗಳನ್ನು ಆತ ಅಥವಾ ಆಕೆಗೆ ಹೇಳಿ ಮತ್ತು ಅಸುರಕ್ಷಿತ ಭಾವನೆ ಇರದಂತೆ ನೋಡಿಕೊಳ್ಳಿ. ನಿಮಗೆ ಭೀತಿಯಿದ್ದರೂ ಸಂಗಾತಿ ಮಾತ್ರ ಇದನ್ನು ನಿವಾರಣೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದರೆ ಆಗ ನಿಮ್ಮ ಸಂಗಾತಿಗೆ ಕೌನ್ಸಿಲಿಂಗ್ ಬೇಕಾಗುವುದು. ಸಂಬಂಧಕ್ಕೆ ಬೆಲೆ ಕೊಡುತ್ತಾ ಇದ್ದರೆ ಖಂಡಿತವಾಗಿಯೂ ತನ್ನ ಸಂಗಾತಿಯು ಪೂರ್ವಾನ್ವಯ ಭೀತಿಯಿಂದ ಹೊರಬರಲು ಆತ ಅಥವಾ ಆಕೆ ನೆರವಾಗುತ್ತಾರೆ.



Click it and Unblock the Notifications