Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಸಂಸಾರದಲ್ಲಿ ಕಲಹ ತರುವ ಅಂಶಗಳಿವು

ಹಳೆಯ ವಿಷಯಗಳನ್ನು ಬಿಟ್ಟು ಇರುವ ಜೀವನದ ಕುರಿತು ಚಿಂತಿಸಬೇಕು. ಒಂದು ವೇಳೆ ಮದುವೆಗೆ ಮುಂಚೆ ಪ್ರೇಮವಿದ್ದೂ ನಂತರ ಬೇರೆಯವರ ಜೊತೆ ಮದುವೆಯಾದರೆ ಹಳೆಯ ಬದುಕನ್ನು ಮರೆತು ಸಿಕ್ಕಿರುವ ಬದುಕನ್ನು ಪ್ರೀತಿಸಬೇಕು. ಅಲ್ಲದೆ ಹಳೆಯ ಪ್ರೇಮಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಬದುಕನ್ನು ಕೈಯಾರೆ ಹಾಳು ಮಾಡಿದಂತಾಗುವುದು.
ನಿನಗೆ ನನ್ನ ಜೊತೆ ಕಳೆಯಲು ಮಾತ್ರ ಸಮಯವಿಲ್ಲ: ಎಲ್ಲಿಗಾದರೂ ಹೋಗಬೇಕೆಂದು ಕಾಯುತ್ತಿರುತ್ತೀರಿ. ಆದರೆ ನಿಮ್ಮ ಗಂಡ ಫ್ರೆಂಡ್ಸ್ ಮನೆಯಲ್ಲಿ ಪಾರ್ಟಿ ಇದೆ ಅಂತ ಹೊರಟು ಬಿಡುತ್ತಾರೆ. ಆ ಸಂದರ್ಭದಲ್ಲಿ ಕೋಪ ಬರುತ್ತದೆ. ಆದರೂ 'ನನಗೆ ಕೊಡಲು ಮಾತ್ರ ನಿಮಗೆ ಸಮಯವಿಲ್ಲ' ಎಂಬ ಮಾತು ಆಡಬೇಡಿ. ಏಕೆಂದರೆ ಈ ರೀತಿ ಹೇಳಿದಾಗ ಅವರಿಗೆ ಸಂಸಾರ ಅನ್ನುವುದು ಬಂಧನವಾಗುತ್ತದೆ. ಗಂಡಸರು ಆದಷ್ಟು ಸ್ವತಂತ್ರ ಆಗಿರಲು ಬಯಸುತ್ತಾರೆ. ಒಂದು ವೇಳೆ ನಿಮ್ಮನ್ನು ಸಿನಿಮಾಕ್ಕೆ ಕರಕ್ಕೊಂಡು ಹೋಗುತ್ತೇನೆ ಎಂದು ಹೇಳಿ ಅವರು ಫ್ರೆಂಡ್ಸ್ ಜೊತೆ ಹೋದಾರೆ, ಅವರು ಬಂದ ತಕ್ಷಣ ಕೋಪಗೊಳ್ಳಬೇಡಿ. ನಿಮಗೆ ಎಷ್ಟು ನಿರಾಸೆಯಾಯಿತು ಅಂತ ಅವರಿಗೆ ಸಮಧಾನವಾಗಿ ಹೇಳಿ.
ಕೆಲವು ಗಂಡಂದಿರು ಹೆಂಡತಿಯನ್ನು ತವರು ಮನೆ ಹೋಗಿ ಎರಡು ದಿನ ನಿಲ್ಲಲೂ ಬಿಡುವುದಿಲ್ಲ. ಯಾವತ್ತೂ ನೀನು ನನ್ನ ಬಳಿ ಇರಬೇಕು ಅಂತಾರೆ. ಆದರೆ ಅತೀಯಾದ ಪ್ರೀತಿ ಉಸಿರು ಕಟ್ಟಿಸಿದ ಅನುಭವ ತರಬಹುದು. ಆದ್ದರಿಂದ ಒಬ್ಬರಿಗೊಬ್ಬರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.ಇಷ್ಟ-ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಬೇಕು ಹಾಗೂ ಅರ್ಥ ಮಾಡಿಕೊಳ್ಳಬೇಕು.
ನನಗೆ ಸಾಕಾಯಿತು, ನೀನು ಮಾತ್ರ ಯಾವತ್ತಿಗೂ ಅರ್ಥ ಮಾಡಿಕೊಳ್ಳುವುದಿಲ್ಲ: ತುಂಬಾ ಕೋಪ ಬಂದಾಗ ಈ ಮಾತು ಆಡುವುದು ಸಹಜ ಆದರೆ ಹಾಗೇ ಆಡದಿರುವುದು ಒಳ್ಳೆಯದು. ಮನೆ ಕೆಲಸವನ್ನು ಹೆಂಡತಿ ಮಾತ್ರ ಮಾಡಬೇಕೆಂಬ ನಿಯಮ ಇಟ್ಟುಕೊಳ್ಳುವುದು ಸರಿಯಲ್ಲ. ಈಗ ತುಂಬಾ ಹೆಣ್ಣು ಮಕ್ಕಳು ಹೊರಗೆ ದುಡಿದು ಬಂದು ಮನೆಯಲ್ಲೂ ದುಡಿಯುತ್ತಿರುತ್ತಾರೆ. ಅಗ ಸುಮ್ಮನೆ ಕೂತುಕೊಳ್ಳದೆ ಅವರಿಗೆ ಸಹಾಯ ಮಾಡಬೇಕು. ಈ ರೀತಿ ಮಾಡಿದರೆ ಸಂಸಾರದಲ್ಲಿ ಪ್ರೀತಿ ಮತ್ತಷ್ಟು ಹೆಚ್ಚಾಗುವುದು.
ಸಂಸಾರ ಅನ್ನುವುದೇ ಹೊಂದಾಣಿಕೆ. ಸುಖ ಸಂಸಾರಕ್ಕಾಗಿ ಕೆಲವೊಂದು ನಮ್ಮ ಅಹಂಗಳನ್ನು ತ್ಯಾಗ ಮಾಡುವುದರಲ್ಲಿ ತಪ್ಪೇನಿಲ್ಲ.



Click it and Unblock the Notifications











