Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಸಂಸಾರದಲ್ಲಿ ಕಲಹ ತರುವ ಅಂಶಗಳಿವು

ಹಳೆಯ ವಿಷಯಗಳನ್ನು ಬಿಟ್ಟು ಇರುವ ಜೀವನದ ಕುರಿತು ಚಿಂತಿಸಬೇಕು. ಒಂದು ವೇಳೆ ಮದುವೆಗೆ ಮುಂಚೆ ಪ್ರೇಮವಿದ್ದೂ ನಂತರ ಬೇರೆಯವರ ಜೊತೆ ಮದುವೆಯಾದರೆ ಹಳೆಯ ಬದುಕನ್ನು ಮರೆತು ಸಿಕ್ಕಿರುವ ಬದುಕನ್ನು ಪ್ರೀತಿಸಬೇಕು. ಅಲ್ಲದೆ ಹಳೆಯ ಪ್ರೇಮಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಬದುಕನ್ನು ಕೈಯಾರೆ ಹಾಳು ಮಾಡಿದಂತಾಗುವುದು.
ನಿನಗೆ ನನ್ನ ಜೊತೆ ಕಳೆಯಲು ಮಾತ್ರ ಸಮಯವಿಲ್ಲ: ಎಲ್ಲಿಗಾದರೂ ಹೋಗಬೇಕೆಂದು ಕಾಯುತ್ತಿರುತ್ತೀರಿ. ಆದರೆ ನಿಮ್ಮ ಗಂಡ ಫ್ರೆಂಡ್ಸ್ ಮನೆಯಲ್ಲಿ ಪಾರ್ಟಿ ಇದೆ ಅಂತ ಹೊರಟು ಬಿಡುತ್ತಾರೆ. ಆ ಸಂದರ್ಭದಲ್ಲಿ ಕೋಪ ಬರುತ್ತದೆ. ಆದರೂ 'ನನಗೆ ಕೊಡಲು ಮಾತ್ರ ನಿಮಗೆ ಸಮಯವಿಲ್ಲ' ಎಂಬ ಮಾತು ಆಡಬೇಡಿ. ಏಕೆಂದರೆ ಈ ರೀತಿ ಹೇಳಿದಾಗ ಅವರಿಗೆ ಸಂಸಾರ ಅನ್ನುವುದು ಬಂಧನವಾಗುತ್ತದೆ. ಗಂಡಸರು ಆದಷ್ಟು ಸ್ವತಂತ್ರ ಆಗಿರಲು ಬಯಸುತ್ತಾರೆ. ಒಂದು ವೇಳೆ ನಿಮ್ಮನ್ನು ಸಿನಿಮಾಕ್ಕೆ ಕರಕ್ಕೊಂಡು ಹೋಗುತ್ತೇನೆ ಎಂದು ಹೇಳಿ ಅವರು ಫ್ರೆಂಡ್ಸ್ ಜೊತೆ ಹೋದಾರೆ, ಅವರು ಬಂದ ತಕ್ಷಣ ಕೋಪಗೊಳ್ಳಬೇಡಿ. ನಿಮಗೆ ಎಷ್ಟು ನಿರಾಸೆಯಾಯಿತು ಅಂತ ಅವರಿಗೆ ಸಮಧಾನವಾಗಿ ಹೇಳಿ.
ಕೆಲವು ಗಂಡಂದಿರು ಹೆಂಡತಿಯನ್ನು ತವರು ಮನೆ ಹೋಗಿ ಎರಡು ದಿನ ನಿಲ್ಲಲೂ ಬಿಡುವುದಿಲ್ಲ. ಯಾವತ್ತೂ ನೀನು ನನ್ನ ಬಳಿ ಇರಬೇಕು ಅಂತಾರೆ. ಆದರೆ ಅತೀಯಾದ ಪ್ರೀತಿ ಉಸಿರು ಕಟ್ಟಿಸಿದ ಅನುಭವ ತರಬಹುದು. ಆದ್ದರಿಂದ ಒಬ್ಬರಿಗೊಬ್ಬರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.ಇಷ್ಟ-ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಬೇಕು ಹಾಗೂ ಅರ್ಥ ಮಾಡಿಕೊಳ್ಳಬೇಕು.
ನನಗೆ ಸಾಕಾಯಿತು, ನೀನು ಮಾತ್ರ ಯಾವತ್ತಿಗೂ ಅರ್ಥ ಮಾಡಿಕೊಳ್ಳುವುದಿಲ್ಲ: ತುಂಬಾ ಕೋಪ ಬಂದಾಗ ಈ ಮಾತು ಆಡುವುದು ಸಹಜ ಆದರೆ ಹಾಗೇ ಆಡದಿರುವುದು ಒಳ್ಳೆಯದು. ಮನೆ ಕೆಲಸವನ್ನು ಹೆಂಡತಿ ಮಾತ್ರ ಮಾಡಬೇಕೆಂಬ ನಿಯಮ ಇಟ್ಟುಕೊಳ್ಳುವುದು ಸರಿಯಲ್ಲ. ಈಗ ತುಂಬಾ ಹೆಣ್ಣು ಮಕ್ಕಳು ಹೊರಗೆ ದುಡಿದು ಬಂದು ಮನೆಯಲ್ಲೂ ದುಡಿಯುತ್ತಿರುತ್ತಾರೆ. ಅಗ ಸುಮ್ಮನೆ ಕೂತುಕೊಳ್ಳದೆ ಅವರಿಗೆ ಸಹಾಯ ಮಾಡಬೇಕು. ಈ ರೀತಿ ಮಾಡಿದರೆ ಸಂಸಾರದಲ್ಲಿ ಪ್ರೀತಿ ಮತ್ತಷ್ಟು ಹೆಚ್ಚಾಗುವುದು.
ಸಂಸಾರ ಅನ್ನುವುದೇ ಹೊಂದಾಣಿಕೆ. ಸುಖ ಸಂಸಾರಕ್ಕಾಗಿ ಕೆಲವೊಂದು ನಮ್ಮ ಅಹಂಗಳನ್ನು ತ್ಯಾಗ ಮಾಡುವುದರಲ್ಲಿ ತಪ್ಪೇನಿಲ್ಲ.



Click it and Unblock the Notifications
