Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಸಂಸಾರದಲ್ಲಿ ಕಲಹ ತರುವ ಅಂಶಗಳಿವು

ಹಳೆಯ ವಿಷಯಗಳನ್ನು ಬಿಟ್ಟು ಇರುವ ಜೀವನದ ಕುರಿತು ಚಿಂತಿಸಬೇಕು. ಒಂದು ವೇಳೆ ಮದುವೆಗೆ ಮುಂಚೆ ಪ್ರೇಮವಿದ್ದೂ ನಂತರ ಬೇರೆಯವರ ಜೊತೆ ಮದುವೆಯಾದರೆ ಹಳೆಯ ಬದುಕನ್ನು ಮರೆತು ಸಿಕ್ಕಿರುವ ಬದುಕನ್ನು ಪ್ರೀತಿಸಬೇಕು. ಅಲ್ಲದೆ ಹಳೆಯ ಪ್ರೇಮಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಬದುಕನ್ನು ಕೈಯಾರೆ ಹಾಳು ಮಾಡಿದಂತಾಗುವುದು.
ನಿನಗೆ ನನ್ನ ಜೊತೆ ಕಳೆಯಲು ಮಾತ್ರ ಸಮಯವಿಲ್ಲ: ಎಲ್ಲಿಗಾದರೂ ಹೋಗಬೇಕೆಂದು ಕಾಯುತ್ತಿರುತ್ತೀರಿ. ಆದರೆ ನಿಮ್ಮ ಗಂಡ ಫ್ರೆಂಡ್ಸ್ ಮನೆಯಲ್ಲಿ ಪಾರ್ಟಿ ಇದೆ ಅಂತ ಹೊರಟು ಬಿಡುತ್ತಾರೆ. ಆ ಸಂದರ್ಭದಲ್ಲಿ ಕೋಪ ಬರುತ್ತದೆ. ಆದರೂ 'ನನಗೆ ಕೊಡಲು ಮಾತ್ರ ನಿಮಗೆ ಸಮಯವಿಲ್ಲ' ಎಂಬ ಮಾತು ಆಡಬೇಡಿ. ಏಕೆಂದರೆ ಈ ರೀತಿ ಹೇಳಿದಾಗ ಅವರಿಗೆ ಸಂಸಾರ ಅನ್ನುವುದು ಬಂಧನವಾಗುತ್ತದೆ. ಗಂಡಸರು ಆದಷ್ಟು ಸ್ವತಂತ್ರ ಆಗಿರಲು ಬಯಸುತ್ತಾರೆ. ಒಂದು ವೇಳೆ ನಿಮ್ಮನ್ನು ಸಿನಿಮಾಕ್ಕೆ ಕರಕ್ಕೊಂಡು ಹೋಗುತ್ತೇನೆ ಎಂದು ಹೇಳಿ ಅವರು ಫ್ರೆಂಡ್ಸ್ ಜೊತೆ ಹೋದಾರೆ, ಅವರು ಬಂದ ತಕ್ಷಣ ಕೋಪಗೊಳ್ಳಬೇಡಿ. ನಿಮಗೆ ಎಷ್ಟು ನಿರಾಸೆಯಾಯಿತು ಅಂತ ಅವರಿಗೆ ಸಮಧಾನವಾಗಿ ಹೇಳಿ.
ಕೆಲವು ಗಂಡಂದಿರು ಹೆಂಡತಿಯನ್ನು ತವರು ಮನೆ ಹೋಗಿ ಎರಡು ದಿನ ನಿಲ್ಲಲೂ ಬಿಡುವುದಿಲ್ಲ. ಯಾವತ್ತೂ ನೀನು ನನ್ನ ಬಳಿ ಇರಬೇಕು ಅಂತಾರೆ. ಆದರೆ ಅತೀಯಾದ ಪ್ರೀತಿ ಉಸಿರು ಕಟ್ಟಿಸಿದ ಅನುಭವ ತರಬಹುದು. ಆದ್ದರಿಂದ ಒಬ್ಬರಿಗೊಬ್ಬರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.ಇಷ್ಟ-ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಬೇಕು ಹಾಗೂ ಅರ್ಥ ಮಾಡಿಕೊಳ್ಳಬೇಕು.
ನನಗೆ ಸಾಕಾಯಿತು, ನೀನು ಮಾತ್ರ ಯಾವತ್ತಿಗೂ ಅರ್ಥ ಮಾಡಿಕೊಳ್ಳುವುದಿಲ್ಲ: ತುಂಬಾ ಕೋಪ ಬಂದಾಗ ಈ ಮಾತು ಆಡುವುದು ಸಹಜ ಆದರೆ ಹಾಗೇ ಆಡದಿರುವುದು ಒಳ್ಳೆಯದು. ಮನೆ ಕೆಲಸವನ್ನು ಹೆಂಡತಿ ಮಾತ್ರ ಮಾಡಬೇಕೆಂಬ ನಿಯಮ ಇಟ್ಟುಕೊಳ್ಳುವುದು ಸರಿಯಲ್ಲ. ಈಗ ತುಂಬಾ ಹೆಣ್ಣು ಮಕ್ಕಳು ಹೊರಗೆ ದುಡಿದು ಬಂದು ಮನೆಯಲ್ಲೂ ದುಡಿಯುತ್ತಿರುತ್ತಾರೆ. ಅಗ ಸುಮ್ಮನೆ ಕೂತುಕೊಳ್ಳದೆ ಅವರಿಗೆ ಸಹಾಯ ಮಾಡಬೇಕು. ಈ ರೀತಿ ಮಾಡಿದರೆ ಸಂಸಾರದಲ್ಲಿ ಪ್ರೀತಿ ಮತ್ತಷ್ಟು ಹೆಚ್ಚಾಗುವುದು.
ಸಂಸಾರ ಅನ್ನುವುದೇ ಹೊಂದಾಣಿಕೆ. ಸುಖ ಸಂಸಾರಕ್ಕಾಗಿ ಕೆಲವೊಂದು ನಮ್ಮ ಅಹಂಗಳನ್ನು ತ್ಯಾಗ ಮಾಡುವುದರಲ್ಲಿ ತಪ್ಪೇನಿಲ್ಲ.



Click it and Unblock the Notifications