Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈ 5 ಮಾತನಾಡಿದರೆ ಶ್ರುತಿ ತಪ್ಪುವುದು ಸಂಸಾರದಲ್ಲಿ

ಮದುವೆಯ ನಂತರ ಗಂಡ-ಹೆಂಡತಿ ನಡುವೆ ವಾದ-ವಿವಾದಗಳು ಹಣ, ಆಸ್ತಿ, ಮಾಜಿ ಸ್ನೇಹಿತ ಅಥವ ಸ್ನೇಹಿತೆ, ಮನೆ ಕೆಲಸ, ಪೋಷಕರು, ಜವಬ್ದಾರಿ ಹೀಗೆ ಇವುಗಳ ಸುತ್ತನೇ ಹೆಚ್ಚಾಗಿ ಇರುತ್ತದೆ. ಚಿಕ್ಕದಾಗಿ ಪ್ರಾರಂಭವಾಗುವ ನಂತರ ದೊಡ್ಡ ರಂಪಾಟಕ್ಕೆ ಕೂಡ ಕಾರಣವಾಗುವುದು. ಆಗ ಈ ಕೆಳಗಿನ ಅಂಶಗಳು ದೊಡ್ಡ ವಿಷಯವಾಗಿರುತ್ತದೆ.
ನೀನು ನನ್ನ ಪ್ರೀತಿಸುತ್ತಿಲ್ಲ: ಮದುವೆಯಾದ ಶುರುವಿನಲ್ಲಿ ಪ್ರಣಯ ಪಕ್ಷಿಗಳಂತೆ ಇರುತ್ತಾರೆ. ಹಾಗಂತ ಯಾವತ್ತೂ ಇರಲು ಸಾಧ್ಯವಿಲ್ಲ. ಅದರಲ್ಲೂ ಪುರುಷರಿಗೆ ಹೆಚ್ಚು ಜವಬ್ದಾರಿ ಹೆಚ್ಚಾಗುವುದರಿಂದ ಹೆಚ್ಚಿನ ಸಮಯವನ್ನು ಜೊತೆಯಲ್ಲಿ ಕಳೆಯಲು ಆಗದೇ ಹೋಗಬಹುದು. ಆದರೆ ಇದನ್ನೇ ತುಂಬಾ ಹೆಣ್ಣು ಮಕ್ಕಳು ಅಪಾರ್ಥ ಮಾಡಿಕೊಳ್ಳುತ್ತಾರೆ. ಅದರಲ್ಲೂ ಪ್ರೀತಿಸಿ ಮದುವೆಯಾದ ಹೆಣ್ಣು ಮಕ್ಕಳಂತೂ ಈ ವಿಷಯದಲ್ಲಿ ತುಂಬಾ ಕೊರಗುತ್ತರೆ. ಮದುವೆಗೆ ಮುಂಚೆ ನನ್ನ ನೋಡಲು ಬರಲು ಯಾವುದೇ ಬ್ಯೂಸಿ ಇರಲಿಲ್ಲ, ಸಿನಿಮಾ, ಪಾರ್ಕ್ ಅಂತ ಸಮಯ ಕಳಿಯುತ್ತಿದ್ದವು ಆದರೆ ಮದುವೆಯಾದ ಮೇಲೆ ಬದಲಾಗಿದ್ದಾರೆ. ಈಗ ನನ್ನ ಮುಂಚಿನಂತೆ ಪ್ರೀತಿಸುತ್ತಿಲ್ಲ ಅಂತ ಸುಮ್ಮನೆ ಕೊರಗುತ್ತಾರೆ. ನನ್ನ ನೀನು ಮುಂಚೆಯಷ್ಟು ಪ್ರೀತಿಸುತ್ತಿಲ್ಲ ಅಂತ ಹೇಳಿ ಗಂಡನಿಗೆ ಕೊಪ ಬರುವಂತೆ ಮಾಡುತ್ತಾರೆ. ಇದರಿಂದ ಇಬ್ಬರ ಮಾನಸಿಕ ನೆಮ್ಮದಿ ಹಾಳಾಗುವುದು.
ಆದರೆ ಈ ಸಮಯದಲ್ಲಿ ಹೆಣ್ಣು ಮಕ್ಕಳು ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸಬೇಕು. ಮುಂಚೆಯ ರೀತಿ ಮದುವೆಯ ನಂತರ ಕೂಡ ನಿಮ್ಮ ಹತ್ತಿರನೆ ಇದ್ದರೆ ಮುಂದಿನ ಜೀವನ ನಡೆಯ ಬೇಡ್ವೆ? ನೀವು ಅವರನ್ನು ಮೊದಲಿನಷ್ಟೆ, ಅದಕ್ಕಿಂತ ಹೆಚ್ಚೇ ಪ್ರೀತಿಸಿ. ಆಗ ಅವರಿಗೂ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುವುದು. ಏನೇ ವಿಷಯವಿದ್ದರೂ ಇಬ್ಬರೂ ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಎಲ್ಲಾ ನಿರ್ಧಾರವನ್ನು ಇಬ್ಬರೂ ಜೊತೆಗೂಡಿ ಕೈಗೊಳ್ಳಬೇಕು. ಈ ರೀತಿ ಮಾಡಿದರೆ ಒಬ್ಬರನ್ನೊಬ್ಬರು ನಿರ್ಲಕ್ಷ್ಯ ಮಾಡಿದಂತಾಗುವುದಿಲ್ಲ, ಸಂಬಂಧ ಗಟ್ಟಿಯಾಗುವುದು.
ನಂಬಿಕೆ : ಸಂಸಾರ ಎಂಬ ದೋಣಿ ಸಾಗಲು ನಂಬಿಕೆ ಅನ್ನುವುದು ಮುಖ್ಯ. ನಂಬಿಕೆಯಿಲ್ಲದಿದ್ದರೆ ಆ ಸಂಬಂಧ ಮುರಿದು ಬೀಳುವುದು ಖಂಡಿತ. ಗಂಡ-ಹೆಂಡತಿ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಒಬ್ಬರ ಮೇಲೆ ತುಂಬಾ ನಂಬಿಕೆಯಿಟ್ಟರೆ ಅವರಿಗೆ ನಮ್ಮ ನಂಬಿಕೆಗೆ ದ್ರೋಹ ಬಗೆಯಲು ಮನಸ್ಸು ಬರುವುದಿಲ್ಲ. ಆದರೆ ಸಂಶಯ ಪಡುವ ಗುಣವಿದ್ದರೆ ಮುಂದೆ ನಿಮ್ಮ ಸಂಶಯ ನಿಜವಾಗುವುದು. ಏಕೆಂದರೆ ನೀವು ಅವರನ್ನು ಸಂಶಯ ಪಡುವಾಗ ಏಕೆ ಹಾಗೇ ಮಾಡಬಾರದು ಅನಿಸುತ್ತದೆ. ಅದು ಮನುಷ್ಯನ ಗುಣ. ಆದ್ದರಿಂದ ಸಂಸಾರದಲ್ಲಿ ಸಂಶಯ ಅನ್ನುವುದು ಬೇಡ.



Click it and Unblock the Notifications











