Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಪ್ರೀತಿ ವಿಫಲವಾದ್ರೆ ಸ್ನೇಹಕ್ಕೂ ಕೊಳ್ಳಿಯಿಟ್ಟುಬಿಡಿ..

ಒಬ್ಬ ಒಳ್ಳೆಯ ಫ್ರೆಂಡ್ ಪ್ರೇಮಿ ಆಗಬಹುದು. ಆದರೆ ಪ್ರೇಮಿ ಪುನಃ ಒಳ್ಳೆಯ ಗೆಳಯರಾಗಲು ಸಾಧ್ಯನೆ ಇಲ್ಲ. ಪ್ರೇಮಕ್ಕೂ ಗೆಳತನಕ್ಕೂ ಅಜ-ಗಜಾಂತರ ವ್ಯತ್ಯಾಸ ಮತ್ತು ಇತಿ ಮಿತಿಗಳಿರುತ್ತವೆ. ಗೆಳತನ ಅನ್ನುವುದರಲ್ಲಿ ಪರಿಶುದ್ಧತೆ ಇದ್ದರೆ ಪ್ರೇಮದಲ್ಲಿ ತನ್ನದು, ನನ್ನವಳು/ನನ್ನವನು ಎಂಬ ಸ್ವಾರ್ಥ ಇರುತ್ತದೆ.
ಪ್ರೀತಿ ಮುರಿದ ಮೇಲೆ ಗೆಳೆಯರಾದರೆ ಆ ಗೆಳತನದಲ್ಲಿ ನಿಷ್ಕಲ್ಮಶವಾಗಲಿ, ಸಂತೋಷವಾಗಲಿ ಇರುವುದಿಲ್ಲ, ಅಲ್ಲದೆ ಹಳೆ ನೆನಪುಗಳು ಮತ್ತೆ-ಮತ್ತೆ ಚುಚ್ಚುತ್ತಾ ಇರುತ್ತದೆ.
ಅದೇ, ದೂರ ಹೋದರೆ ಆ ಸಂಬಂಧಗಳು ಮನಸ್ಸಿನಿಂದ ಮರೆಯಾಗುವುದು, ಇಲ್ಲದಿದ್ದರೆ ಹಳೆ ಹೊಸ ಬದುಕಿನ ಸಂತೋಷವನ್ನು ಕಿತ್ತು ಕೊಳ್ಳುವುದು. ಹಳೆ ಸಂಬಂಧದ ಜೊತೆ ಗೆಳತನವಿದ್ದು ಮುಂದೆ ನಿಮ್ಮ ಬಾಳ ಸಂಗಾತಿಗೆ ನಿಮ್ಮ ಹಳೆಯ ಪ್ರೇಮದ ಬಗ್ಗೆ ಗೊತ್ತಾಗಿ 'ಈಗ ಬರೀ ಫ್ರೆಂಡ್ ಅಷ್ಟೆ' ಎಂದು ಹೇಳಿದರೂ ಬಾಳ ಸಂಗಾತಿಯಾದವರು ನಂಬಲು ತಯಾರಿರುವುದಿಲ್ಲ.
ಪರಸ್ಪರ ಹೊಂದಾಣಿಕೆಯಾಗದೆ ದೂರವಾದರೆ ಸುಲಭವಾಗಿ ದೂರ ಆಗುತ್ತಾರೆ. ಆದರೆ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಟ್ಟು ನಂತರ ಮನೆಯವರ ಕಾರಣಕ್ಕೆ ಅಥವಾ ಮತ್ಯಾವುದೊ ಕಾರಣಕ್ಕೆ ದೂರವಾಗುವ ಅನಿವಾರ್ಯ ಬಂದರೆ ಅಂತಹವರು ತಮ್ಮ ಸಂಬಂಧವನ್ನು ಮುರಿಯಲು ಬಯಸುವುದಿಲ್ಲ. ಈ ರೀತಿಯ ಅಗುಲುವಿಕೆ ತುಂಬಾ ನೋವು ತರುವುದಾದರೂ , ಅವರಿಗೆ ಹಿತವನ್ನು ಬಯಸಿ ದೂರ ಹೋಗುವುದೇ ಇಬ್ಬರ ಜೀವನಕ್ಕೂ ನೆಮ್ಮದಿಯನ್ನು ತರುವುದು.
ಗೆಳತನದ ಮುಖವಾಡದಲ್ಲಿ ಹಳೆಯ ನೆನಪಿನಿಂದ ನೋವನ್ನು ನುಂಗುವುದಕ್ಕಿಂತ, ದೂರ ಹೋಗಿ ನೋವನ್ನು ಮರೆಯುವುದರಿಂದ ಇಬ್ಬರೂ ಬಾಳಲ್ಲಿ ಸಂತೋಷವನ್ನು ಕಾಣಬಹುದು.



Click it and Unblock the Notifications











