Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ

ತುಂಬಾ ದಿನದಿಂದ ಕಾಪಾಡಿಕೊಂಡು ಬಂದ ಪ್ರೀತಿಯ ವಸ್ತುವೊಂದು ಕಳೆದು ಹೋದಾಗ... ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಪುಟ್ಟ ಕಂದನ ನೋಡಿದಾಗ... ಇಷ್ಟವಾದವರನ್ನು ಅಗಲಿ ದೂರವಾಗಲೇಬೇಕಾದ ಅನಿವಾರ್ಯತೆ ಬಂದಾಗ ಆಗುವ ವೇದನೆ ಅನುಭವಿಸಲಾಗದು ಕಣೇ ಹುಡುಗಿ. ತೀರ ಮುಗ್ಧ ಹುಡುಗಿ ಕಣೇ ನೀನು ಇದಾವುದರ ಪರಿವೇ ನಿನಗಿರದು.
ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ ಸ್ನೇಹದ ನಂಬಿಕೆಯಿಂದ ವಂಚಿತನಾಗಿ ಒಬ್ಬಂಟಿಯಾದವನ ನೆರಳು ನಿನ್ನ ಪಾದ ಸೇರಿ ಹೋಯಿತಲ್ಲೆ ಪ್ರೀತಿಯ ಚಿಲುಮೆ. ನೀ ದೂರವಾಗುವ ಕೊನೆಯ ಸಮಯದವರೆಗೂ ಅಲೆಗಳ ಅಪ್ಪಳಿಸುವಿಕೆಯ ನಡುವೆ ಸಮುದ್ರ ನೀರಿನ ಮುಂದೆ ನಿಂತು ನಿನ್ನ ಹೆಸರು ಹೇಳಿ ಕೂಗಿ ಕರೆಯುತ್ತಿತ್ತು ನನ್ನ ಧ್ವನಿ. ಆ ನಿನ್ನ ಮಹತ್ವಾಕಾಂಕ್ಷೆಗಳ ವಿಚಾರ, ಮೌನದಲ್ಲೆ ಎದ್ದು ಕಾಣುವ ಮುಗ್ದತೆ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೆ, ಬೇಸರದಲ್ಲಿನ ಸಾಂತ್ವನ, ದುಃಖ ಮಿತಿ ಮೀರಿದರೆ ಕಣ್ಣಂಚಲ್ಲಿ ಕಣ್ಣೀರಿನ ಭೋರ್ಗರೆತ ಎಲ್ಲವು ನಿನ್ನೆಯಷ್ಟೆ ಕಳೆದು ಹೋದ ದಿನಗಳಂತೆ ಕಾಡುತ್ತಲಿತ್ತು. ಅಂದು ನನ್ನ ಸ್ನೇಹವನ್ನು ದಿಕ್ಕರಿಸಿದ ಆ ನಿನ್ನ ಗಟ್ಟಿ ನಿರ್ಧಾರ ಕಷ್ಟವಾದರೂ ಇಷ್ಟವಾಯಿತು ಕಣೇ..
ಬಹುಷಃ ನೆನಪುಗಳೇ ಹೀಗೆ ಎಂದು ಅನಿಸುತ್ತದೆ. ಬೇಡ ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತದೆ. ಅತ್ತ ಅನುಭವಿಸಲೂ ಆಗದೇ ಮರೆಯಲು ಆಗದೆ ಪೇಚಿಗೆ ಸಿಲುಕಿಸುವಂತಹ ವೇದನೆಯನ್ನು ತಂದೊಡ್ಡುತ್ತವೆ. ನನ್ನ ಬದುಕಿಗೆ ನೀ ಬಂದ ಘಳಿಗೆಯಿದೆಯಲ್ಲ. ನನಗರಿವೇ ಇರಲಿಲ್ಲ ನೀ ಹೇಗೆ ಬಂದಿಯೆಂದು. ಅಂದು ನಾನೇಕೊ ಕೊಂಚ ಬೇಸರದಲ್ಲಿದ್ದೆ. ಏಕಾಂತವನ್ನು ಬಯಸಿದ್ದೆ. ನಿನ್ನ ಮೊದಲ ದರ್ಶನವಾದದ್ದು ಆವಾಗಲೇ. ಕ್ಷಣಮಾತ್ರದಲ್ಲಿಯೇ ಬೇಸರವೆಲ್ಲ ಮಾಯವಾಗಿ ಹೊಸ ಹುರುಪನ್ನು ಹುಟ್ಟುಹಾಕಿತ್ತು ನಿನ್ನ ಮೊದಲ ನೋಟ. ಅದಕ್ಕೇ ಅಂತಾರಾ ಲವ್ ಅಟ್ ಫಸ್ಟ್ ಸೈಟ್? ಒಂಟಿಯಾದಾಗ ಸಿಕ್ಕು ಒಂಟಿತನವ ನೀಗಿ ಮತ್ತೆ ಒಂಟಿಯನ್ನಾಗಿಸಿ ಸದ್ದಿಲ್ಲದೇ ಎದ್ದು ಹೋಗುತ್ತಿರುವ ನಿನಗೆ ಹೇಗೆತಾನೆ ಅರ್ಥವಾಗಬಲ್ಲದು ನನ್ನ ಕಾಡುತ್ತಿರುವ ಒಂಟಿಬಾವ..?
ನನ್ನ ಜೀವನದ ಪಯಣದಲ್ಲಿ ಯಾವುದೋ ಒಂದು ಹಂತದಲ್ಲಿ ಪರಿಚಯವಾಗಿ, ಸ್ನೇಹದ ಹೂವಾಗಿ ಬಾಡಿಹೋದ ಬಳ್ಳಿ ನೀನಾದೆ. ಬಾಡಿಹೋದ ಬಳ್ಳಿಯ ಮುಳ್ಳೊಂದು ಮನಸಿನಲ್ಲಿ ನಾಟಿ ಚುಚ್ಚುತ್ತಲಿದೆ ಕಣೇ. ಮುಳ್ಳಿನ ಮೇಲೆ ಅರಳಿದ ಹೂಗಳ ಸೌಂದರ್ಯ.. ಆ ಸುವಾಸನೆ.. ನೀನು ಉಳಿಸಿಹೋದ ನೆನಪುಗಳು, ಮನ ಕೆರಳಿಸುವ ಭಾವನೆಗಳು ಬದುಕಲು ಬಿಡಲಾರೆಯೆನ್ನುತ್ತಲಿವೆ. ಇಂದು ಭೌತಿಕವಾಗಿ ನೀ ನನ್ನೊಂದಿಗಿಲ್ಲದಿರಬಹುದು. ಆದರೆ ಮಾನಸಿಕವಾಗಿ ನನ್ನ ಹೃದಯದಲ್ಲಿ ಬೆಚ್ಚಗಿನ ನೆನಪುಗಳನ್ನು ಇರಿಸಿ ಅದರೊಂದಿಗೆ ಕಚಗುಳಿ ಇಡುತ್ತಿರುವೆಯಲ್ಲೆ ನಿನಗರಿವಿಲ್ಲದೆಯೇ. ನಿನ್ನ ಹೆಸರು ಚಿರಪರಿಚಿತವಾದರೂ ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ ನಿನಗೆ ಎನೆಂದು ಕರೆಯಲಿ. ಮನದ ಕರೆ ನಿನಗೆ ಕೇಳುವದೆಂದು?



Click it and Unblock the Notifications
