Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ

ತುಂಬಾ ದಿನದಿಂದ ಕಾಪಾಡಿಕೊಂಡು ಬಂದ ಪ್ರೀತಿಯ ವಸ್ತುವೊಂದು ಕಳೆದು ಹೋದಾಗ... ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಪುಟ್ಟ ಕಂದನ ನೋಡಿದಾಗ... ಇಷ್ಟವಾದವರನ್ನು ಅಗಲಿ ದೂರವಾಗಲೇಬೇಕಾದ ಅನಿವಾರ್ಯತೆ ಬಂದಾಗ ಆಗುವ ವೇದನೆ ಅನುಭವಿಸಲಾಗದು ಕಣೇ ಹುಡುಗಿ. ತೀರ ಮುಗ್ಧ ಹುಡುಗಿ ಕಣೇ ನೀನು ಇದಾವುದರ ಪರಿವೇ ನಿನಗಿರದು.
ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ ಸ್ನೇಹದ ನಂಬಿಕೆಯಿಂದ ವಂಚಿತನಾಗಿ ಒಬ್ಬಂಟಿಯಾದವನ ನೆರಳು ನಿನ್ನ ಪಾದ ಸೇರಿ ಹೋಯಿತಲ್ಲೆ ಪ್ರೀತಿಯ ಚಿಲುಮೆ. ನೀ ದೂರವಾಗುವ ಕೊನೆಯ ಸಮಯದವರೆಗೂ ಅಲೆಗಳ ಅಪ್ಪಳಿಸುವಿಕೆಯ ನಡುವೆ ಸಮುದ್ರ ನೀರಿನ ಮುಂದೆ ನಿಂತು ನಿನ್ನ ಹೆಸರು ಹೇಳಿ ಕೂಗಿ ಕರೆಯುತ್ತಿತ್ತು ನನ್ನ ಧ್ವನಿ. ಆ ನಿನ್ನ ಮಹತ್ವಾಕಾಂಕ್ಷೆಗಳ ವಿಚಾರ, ಮೌನದಲ್ಲೆ ಎದ್ದು ಕಾಣುವ ಮುಗ್ದತೆ, ಒಮ್ಮೊಮ್ಮೆ ಹಾಗೆ ಗಂಭೀರ, ಮತ್ತೊಮ್ಮೆ ಮುನಿಸು, ಒಂದಿಷ್ಟು ಕುಚೇಷ್ಟೆ, ಬೇಸರದಲ್ಲಿನ ಸಾಂತ್ವನ, ದುಃಖ ಮಿತಿ ಮೀರಿದರೆ ಕಣ್ಣಂಚಲ್ಲಿ ಕಣ್ಣೀರಿನ ಭೋರ್ಗರೆತ ಎಲ್ಲವು ನಿನ್ನೆಯಷ್ಟೆ ಕಳೆದು ಹೋದ ದಿನಗಳಂತೆ ಕಾಡುತ್ತಲಿತ್ತು. ಅಂದು ನನ್ನ ಸ್ನೇಹವನ್ನು ದಿಕ್ಕರಿಸಿದ ಆ ನಿನ್ನ ಗಟ್ಟಿ ನಿರ್ಧಾರ ಕಷ್ಟವಾದರೂ ಇಷ್ಟವಾಯಿತು ಕಣೇ..
ಬಹುಷಃ ನೆನಪುಗಳೇ ಹೀಗೆ ಎಂದು ಅನಿಸುತ್ತದೆ. ಬೇಡ ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತದೆ. ಅತ್ತ ಅನುಭವಿಸಲೂ ಆಗದೇ ಮರೆಯಲು ಆಗದೆ ಪೇಚಿಗೆ ಸಿಲುಕಿಸುವಂತಹ ವೇದನೆಯನ್ನು ತಂದೊಡ್ಡುತ್ತವೆ. ನನ್ನ ಬದುಕಿಗೆ ನೀ ಬಂದ ಘಳಿಗೆಯಿದೆಯಲ್ಲ. ನನಗರಿವೇ ಇರಲಿಲ್ಲ ನೀ ಹೇಗೆ ಬಂದಿಯೆಂದು. ಅಂದು ನಾನೇಕೊ ಕೊಂಚ ಬೇಸರದಲ್ಲಿದ್ದೆ. ಏಕಾಂತವನ್ನು ಬಯಸಿದ್ದೆ. ನಿನ್ನ ಮೊದಲ ದರ್ಶನವಾದದ್ದು ಆವಾಗಲೇ. ಕ್ಷಣಮಾತ್ರದಲ್ಲಿಯೇ ಬೇಸರವೆಲ್ಲ ಮಾಯವಾಗಿ ಹೊಸ ಹುರುಪನ್ನು ಹುಟ್ಟುಹಾಕಿತ್ತು ನಿನ್ನ ಮೊದಲ ನೋಟ. ಅದಕ್ಕೇ ಅಂತಾರಾ ಲವ್ ಅಟ್ ಫಸ್ಟ್ ಸೈಟ್? ಒಂಟಿಯಾದಾಗ ಸಿಕ್ಕು ಒಂಟಿತನವ ನೀಗಿ ಮತ್ತೆ ಒಂಟಿಯನ್ನಾಗಿಸಿ ಸದ್ದಿಲ್ಲದೇ ಎದ್ದು ಹೋಗುತ್ತಿರುವ ನಿನಗೆ ಹೇಗೆತಾನೆ ಅರ್ಥವಾಗಬಲ್ಲದು ನನ್ನ ಕಾಡುತ್ತಿರುವ ಒಂಟಿಬಾವ..?
ನನ್ನ ಜೀವನದ ಪಯಣದಲ್ಲಿ ಯಾವುದೋ ಒಂದು ಹಂತದಲ್ಲಿ ಪರಿಚಯವಾಗಿ, ಸ್ನೇಹದ ಹೂವಾಗಿ ಬಾಡಿಹೋದ ಬಳ್ಳಿ ನೀನಾದೆ. ಬಾಡಿಹೋದ ಬಳ್ಳಿಯ ಮುಳ್ಳೊಂದು ಮನಸಿನಲ್ಲಿ ನಾಟಿ ಚುಚ್ಚುತ್ತಲಿದೆ ಕಣೇ. ಮುಳ್ಳಿನ ಮೇಲೆ ಅರಳಿದ ಹೂಗಳ ಸೌಂದರ್ಯ.. ಆ ಸುವಾಸನೆ.. ನೀನು ಉಳಿಸಿಹೋದ ನೆನಪುಗಳು, ಮನ ಕೆರಳಿಸುವ ಭಾವನೆಗಳು ಬದುಕಲು ಬಿಡಲಾರೆಯೆನ್ನುತ್ತಲಿವೆ. ಇಂದು ಭೌತಿಕವಾಗಿ ನೀ ನನ್ನೊಂದಿಗಿಲ್ಲದಿರಬಹುದು. ಆದರೆ ಮಾನಸಿಕವಾಗಿ ನನ್ನ ಹೃದಯದಲ್ಲಿ ಬೆಚ್ಚಗಿನ ನೆನಪುಗಳನ್ನು ಇರಿಸಿ ಅದರೊಂದಿಗೆ ಕಚಗುಳಿ ಇಡುತ್ತಿರುವೆಯಲ್ಲೆ ನಿನಗರಿವಿಲ್ಲದೆಯೇ. ನಿನ್ನ ಹೆಸರು ಚಿರಪರಿಚಿತವಾದರೂ ನೋವನ್ನು ನುಂಗುವ ವಿದ್ಯೆ ಕಲಿಸಿದ ದೇವತೆಯೇ ನಿನಗೆ ಎನೆಂದು ಕರೆಯಲಿ. ಮನದ ಕರೆ ನಿನಗೆ ಕೇಳುವದೆಂದು?



Click it and Unblock the Notifications