Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಳೆಗಾಲದಲ್ಲಿ ಜೀರ್ಣಶಕ್ತಿ ವರ್ಧಿಸುವ ಆಹಾರ

ವೈರಲ್ ಜ್ವರ, ಮಲೇರಿಯಾ, ಕಾಲರಾ, ಡೆಂಗ್ಯೂ, ಚಿಕೂನ್ ಗುನ್ಯಾದಂಥ ರೋಗಗಳು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತವೆ. ಇದೆಲ್ಲದಕ್ಕೂ ನೀರೇ ಮೂಲ ಕಾರಣ ಎಂಬುದನ್ನು ಗಮನದಲ್ಲಿಡಬೇಕು.
ಮನೆ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಿದರೆ ಅರ್ಧಕ್ಕರ್ಧ ರೋಗಗಳು ನಮ್ಮ ಮುಂದೆ ಸುಳಿಯುವುದಿಲ್ಲ. ಕುಡಿಯುವ ನೀರಿನ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕು. ಶುದ್ಧ ನೀರು ಎಲ್ಲ ರೋಗಗಳಿಗೂ ರಾಮಬಾಣ. ನಿರ್ಮಲ ನೀರು ದೇಹದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ.
ಬೇಸಿಗೆಯಲ್ಲಿ ಡಿಹೈಡ್ರೈಶನ್ ನಿಂದಾಗಿ ಜೀರ್ಣಕ್ರಿಯೆ ಕುಂಠಿತವಾಗಿರುತ್ತದೆ. ಮಳೆಗಾಲದ ವಾತಾವರಣ ಮತ್ತು ರೋಗಗಳು ಈ ಜೀರ್ಣಶಕ್ತಿಯನ್ನು ಮತ್ತಷ್ಟು ಕುಂಠಿತವಾಗಿಸುತ್ತವೆ. ಆದ್ದರಿಂದ ಜೀರ್ಣಶಕ್ತಿಯನ್ನು ವರ್ಧಿಸುವ ಆಹಾರ, ಪಾನೀಯಗಳತ್ತ ಗಮನ ಹರಿಸೋಣ.
ಆರೋಗ್ಯಕರ ಆಹಾರ
* ಕಾಯ್ದಾರಿನ ನೀರಿನಲ್ಲಿ ಒಂದು ಚಮಚ ಜೇನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
* ತಣ್ಣಗಿನ ಆಹಾರ ತಿನ್ನುವುದನ್ನು ಕಡಿಮೆಮಾಡಿ.
* ತಿಂಡಿ ತಿನಿಸಿನಲ್ಲಿ ಹಸಿ ಶುಂಠಿ ಹೆಚ್ಚು ಇರಲಿ.
* ಅಕ್ಕಿ, ಗೋಧಿಯಿಂದ ತಯಾರಿಸಿದ ಆಹಾರ ಹೆಚ್ಚಿರಲಿ.
* ತರಕಾರಿ ಸೂಪ್ ಅಥವಾ ಕ್ಯಾರಟ್ ಜ್ಯೂಸ್ ಕುಡಿಯುತ್ತಿರಿ.
* ಹೊರಗಿನ ತಿಂಡಿಯನ್ನು ತಿನ್ನಲೇಬೇಡಿ.
* ಕರಿದ ತಿಂಡಿ ತಿನ್ನಬೇಕೆನ್ನಿಸಿದರೆ ಮನೇಲೇ ತಯಾರಿಸಿ.
* ಪಲ್ಯ ತಯಾರಿಸುವ ಮುನ್ನ ತರಕಾರಿಯನ್ನು ಚೆನ್ನಾಗಿ ತೊಳೆಯಿರಿ.
* ಶುದ್ಧ ನೀರನ್ನು ಚೆನ್ನಾಗಿ ಕುಡಿಯಿರಿ. ಇದು ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳುತ್ತದೆ.
ಮತ್ತಷ್ಟು ಆರೋಗ್ಯ ಸಲಹೆ
* ಯಾರನ್ನೇ ಭೇಟಿಯಾದ ನಂತರ ಸೋಪಿನಲ್ಲಿ ಕೈ ತೊಳೆಯಿರಿ.
* ದೇಹವನ್ನು ಬೆಚ್ಚಗಿಟ್ಟುಕೊಳ್ಳಿ.
* ತಲೆಗೂದಲು ಒದ್ದೆಯಾದಾಗ ಎಸಿ ಕೋಣೆ ಪ್ರವೇಶಿಸಬೇಡಿ.
* ಪಾದ ಒಡೆದಿದ್ದರೆ ನಿಯಮಿತವಾಗಿ ಅರಿಷಿಣ ಮತ್ತು ಬೇವಿನ ಪುಡಿಯ ಪೇಸ್ಟ್ ಹಚ್ಚಿರಿ.
* ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿದಿನ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.



Click it and Unblock the Notifications
