Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಸುಲಭ ಮತ್ತು ರುಚಿಕರ ಅಡುಗೆಗೆ 10 ಸಲಹೆಗಳು

ಚಪ್ಪಾತಿ ಮಾಡಿದರೆ ರಬ್ಬರ್ ತುಂಡು ರೀತಿ ಗಟ್ಟಿಯಾಗಬಹುದು, ನೀರು ಸರಿಯಾದ ಪ್ರಮಾಣದಲ್ಲಿ ಹಾಕದೆ ಅಡುಗೆ ಸೀದು ಹೋಗಬಹುದು. ಈ ಕೆಳಗಿನ ಅಡುಗೆ ಸಲಹೆಗಳು ಅಡುಗೆಯನ್ನು ಸುಲಭವಾಗಿ ಮತ್ತು ರುಚಿಕರವಾಗಿಸುವಲ್ಲಿ ಸಹಕಾರಿಯಾಗಿದೆ.
ಅಡುಗೆ ಸಲಹೆಗಳು:
1. ಒಂದು ಕಪ್ ಬೇಳೆ ಬೇಯಿಸಲು 2-3 ಕಪ್ ನೀರು ಹಾಕಬೇಕು.
2. ದವಸ ಧಾನ್ಯಗಳನ್ನು ಒಂದು ರಾತ್ರಿ ನೆನೆ ಹಾಕಿದರೆ ಕಾಳುಗಳು ಚೆನ್ನಾಗಿ ಬೇಯುತ್ತದೆ. ಅದದರಲ್ಲೂ ಮೊಳಕೆ ಬರಿಸಿದ ಸಾರು ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ.
3. ಗ್ರೇವಿ ತಯಾರಿಸುವಾಗ ಸ್ವಲ್ಪ ನೀರು ಸೇರಿಸುವುದಾದರೆ ತಣ್ಣೀರಿನ ಬದಲು ಬಿಸಿ ನೀರು ಹಾಕಿದರೆ ಗ್ರೇವಿ ರುಚಿ ಹೆಚ್ಚಾಗುವುದು.
4. ಮೈದಾ ಅಥವಾ ಗೋಧಿ ಹಿಟ್ಟು ಕಲೆಸುವಾಗ ಒಂದು ಚಮಚ ಬಿಸಿ ಎಣ್ಣೆ ಸೇರಿಸಿದರೆ ಹಿಟ್ಟು ಮೃದುವಾಗುವುದು.
5. ತಳಭಾಗ ದಪ್ಪವಿರುವ ಪಾತ್ರೆಗಳನ್ನು ಬಳಸಿದರೆ ಅಡುಗೆ ಅಷ್ಟು ಬೇಗನೆ ಸೀದು ಹೋಗುವುದಿಲ್ಲ.
6. ಅಡುಗೆಗೆ ಮೊಸರು ಸೇರಿಸುವ ಮುಂಚೆ ಚೆನ್ನಾಗಿ ಕದಡಬೇಕು ಮತ್ತು ಅಡುಗೆಗೆ ನಿಧಾನಕ್ಕೆ ಸುರಿಯಬೇಕು.
7. ತರಕಾರಿ ಬೇಯಿಸಿದ ನೀರನ್ನು ಬಿಸಾಡುವ ಬದಲು ಅದನ್ನು ಸಾರು ಮಾಡಲು ಬಳಸಿದರೆ ಅಡುಗೆ ಮತ್ತಷ್ಟು ರುಚಿಕರವಾಗಿರುತ್ತದೆ ಅಲ್ಲದೆ ತರಕಾರಿಯಲ್ಲಿರುವ ಪೋಷಕಾಂಶಗಳು ಹಾಳಾಗುವುದಿಲ್ಲ.
8. ಹಾಲನ್ನು ಕುದಿಸುವ ಮೊದಲು ಹಾಲಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ನಂತರ ಹಾಲು ಹಾಕಿ ಕುದಿಸಿದರೆ ಹಾಲು ಅಡಿ ಹಿಡಿಯುವುದಿಲ್ಲ.
9. ಟೊಮೆಟೊವನ್ನು ಬಿಸಿ ನೀರಿನಲ್ಲಿ ಹಾಕಿದರೆ ಅದರ ಸಿಪ್ಪೆ ಸುಲಭವಾಗಿ ಸುಲಿಯಬಹುದು.
10. ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ 20 ನಿಮಿಷ ಇಟ್ಟು ನಂತರ ಬೇಯಿಸಿದರೆ ಬೇಗನೆ ಬೇಯುವುದು.



Click it and Unblock the Notifications