Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಸುಲಭ ಮತ್ತು ರುಚಿಕರ ಅಡುಗೆಗೆ 10 ಸಲಹೆಗಳು

ಚಪ್ಪಾತಿ ಮಾಡಿದರೆ ರಬ್ಬರ್ ತುಂಡು ರೀತಿ ಗಟ್ಟಿಯಾಗಬಹುದು, ನೀರು ಸರಿಯಾದ ಪ್ರಮಾಣದಲ್ಲಿ ಹಾಕದೆ ಅಡುಗೆ ಸೀದು ಹೋಗಬಹುದು. ಈ ಕೆಳಗಿನ ಅಡುಗೆ ಸಲಹೆಗಳು ಅಡುಗೆಯನ್ನು ಸುಲಭವಾಗಿ ಮತ್ತು ರುಚಿಕರವಾಗಿಸುವಲ್ಲಿ ಸಹಕಾರಿಯಾಗಿದೆ.
ಅಡುಗೆ ಸಲಹೆಗಳು:
1. ಒಂದು ಕಪ್ ಬೇಳೆ ಬೇಯಿಸಲು 2-3 ಕಪ್ ನೀರು ಹಾಕಬೇಕು.
2. ದವಸ ಧಾನ್ಯಗಳನ್ನು ಒಂದು ರಾತ್ರಿ ನೆನೆ ಹಾಕಿದರೆ ಕಾಳುಗಳು ಚೆನ್ನಾಗಿ ಬೇಯುತ್ತದೆ. ಅದದರಲ್ಲೂ ಮೊಳಕೆ ಬರಿಸಿದ ಸಾರು ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ.
3. ಗ್ರೇವಿ ತಯಾರಿಸುವಾಗ ಸ್ವಲ್ಪ ನೀರು ಸೇರಿಸುವುದಾದರೆ ತಣ್ಣೀರಿನ ಬದಲು ಬಿಸಿ ನೀರು ಹಾಕಿದರೆ ಗ್ರೇವಿ ರುಚಿ ಹೆಚ್ಚಾಗುವುದು.
4. ಮೈದಾ ಅಥವಾ ಗೋಧಿ ಹಿಟ್ಟು ಕಲೆಸುವಾಗ ಒಂದು ಚಮಚ ಬಿಸಿ ಎಣ್ಣೆ ಸೇರಿಸಿದರೆ ಹಿಟ್ಟು ಮೃದುವಾಗುವುದು.
5. ತಳಭಾಗ ದಪ್ಪವಿರುವ ಪಾತ್ರೆಗಳನ್ನು ಬಳಸಿದರೆ ಅಡುಗೆ ಅಷ್ಟು ಬೇಗನೆ ಸೀದು ಹೋಗುವುದಿಲ್ಲ.
6. ಅಡುಗೆಗೆ ಮೊಸರು ಸೇರಿಸುವ ಮುಂಚೆ ಚೆನ್ನಾಗಿ ಕದಡಬೇಕು ಮತ್ತು ಅಡುಗೆಗೆ ನಿಧಾನಕ್ಕೆ ಸುರಿಯಬೇಕು.
7. ತರಕಾರಿ ಬೇಯಿಸಿದ ನೀರನ್ನು ಬಿಸಾಡುವ ಬದಲು ಅದನ್ನು ಸಾರು ಮಾಡಲು ಬಳಸಿದರೆ ಅಡುಗೆ ಮತ್ತಷ್ಟು ರುಚಿಕರವಾಗಿರುತ್ತದೆ ಅಲ್ಲದೆ ತರಕಾರಿಯಲ್ಲಿರುವ ಪೋಷಕಾಂಶಗಳು ಹಾಳಾಗುವುದಿಲ್ಲ.
8. ಹಾಲನ್ನು ಕುದಿಸುವ ಮೊದಲು ಹಾಲಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ನಂತರ ಹಾಲು ಹಾಕಿ ಕುದಿಸಿದರೆ ಹಾಲು ಅಡಿ ಹಿಡಿಯುವುದಿಲ್ಲ.
9. ಟೊಮೆಟೊವನ್ನು ಬಿಸಿ ನೀರಿನಲ್ಲಿ ಹಾಕಿದರೆ ಅದರ ಸಿಪ್ಪೆ ಸುಲಭವಾಗಿ ಸುಲಿಯಬಹುದು.
10. ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ 20 ನಿಮಿಷ ಇಟ್ಟು ನಂತರ ಬೇಯಿಸಿದರೆ ಬೇಗನೆ ಬೇಯುವುದು.



Click it and Unblock the Notifications











