Latest Updates
-
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ!
ಹೊಸರುಚಿ : ಹಾಲು ಹೋಳಿಗೆ ಸಿಹಿ ತಿನಿಸು

ಬೇಕಾಗುವ ಪದಾರ್ಥಗಳು
* ಗೋದಿ ಹಿಟ್ಟು ಒಂದು ಕಪ್
* ಮೈದಾ ಒಂದು ಕಪ್
* ಚಿರೋಟಿ ರವೆ ಒಂದು ಕಪ್
* ಚಿಟಿಕೆ ಉಪ್ಪು
* 2 ಚಮಚ ಎಣ್ಣೆ
ಇವಿಷ್ಟನ್ನು ಗಟ್ಟಿಯಾಗಿ ಕಲೆಸಿಟ್ಟು ಅರ್ಧ ಗಂಟೆ ನೆನೆಯಲು ಬಿಡಿ.
* ಬೆಲ್ಲ ಒಂದು ಕಪ್
* ಕೊಬ್ಬರಿ/ಕಾಯಿತುರಿ ಒಂದು ಕಪ್
* ಹುರಿದ ಗಸಗಸೆ ಒಂದು ಚಮಚ
* ಹುರಿಗಡಲೆ ಒಂದು ಚಮಚ
* ಏಲಕ್ಕಿ ಪುಡಿ
* ಒಣದ್ರಾಕ್ಷಿ ಮತ್ತು ಗೋಡಂಬಿ
ಹಾಲು ಹೋಳಿಗೆ ತಯಾರಿಸುವ ವಿಧಾನ
1. ಒಣದ್ರಾಕ್ಷಿ ಮತ್ತು ಗೋಡಂಬಿ ಬಿಟ್ಟು ಉಳಿದವನ್ನು ನುಣ್ಣಗೆ ರುಬ್ಬಿಟ್ಟುಕೊಂಡು ಒಂದು ಪಾತ್ರೆಗೆ ಹಾಕಿ ಕುದಿಯಲು ಇಡಿ. ಇದು ಗಟ್ಟಿ ಪಾಯಸದಷ್ಟು ಹದವಾಗಿ ಇರಬೇಕು. ಚೆನ್ನಾಗಿ ಕುದ್ದ ಬಳಿಕ ಒಲೆಯಿಂದ ಇಳಿಸಿ.
2. ತುಪ್ಪದಲ್ಲಿ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಕರಿದಿಟ್ಟುಕೊಳ್ಳಿ.
3. ಈಗ ಒಂದು ಬಾಣಲೆಗೆ ಕರಿಯಲು ಎಣ್ಣೆಯನ್ನು ಹಾಕಿ.
4. ಕಲೆಸಿಟ್ಟುಕೊಂಡ ಹಿಟ್ಟನ್ನು ಪೂರಿಯಂತೆ ಲಟ್ಟಿಸಿಕೊಂಡು ಗರಿ ಗರಿಯಾಗಿ ಕರಿದು, ಎಣ್ಣೆ ಇಂದ ತೆಗೆದ ತಕ್ಷಣ ಕುದಿಸಿಟ್ಟುಕೊಂಡ ಮಿಶ್ರಣಕ್ಕೆ ಹಾಕಿ ತಕ್ಷಣ ತೆಗೆದು ಒಂದು ತಟ್ಟೆಗೆ ಹಾಕಿ. ಇದೇ ರೀತಿ ಎಲ್ಲವನ್ನು ಮಾಡಿಟ್ಟುಕೊಳ್ಳಿ. ಮಿಶ್ರಣಕ್ಕೆ ಹಾಕಿದ ತಕ್ಷಣ ತೆಗೆದು ಬಿಡಿ.
4. ತಿನ್ನಲು ಕೊಡುವಾಗ ತುಪ್ಪದಲ್ಲಿ ಕರಿದ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಮೇಲೆ ಇಟ್ಟು ಅಲಂಕರಿಸಿ ಕೊಡಿ.



Click it and Unblock the Notifications