Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಪಾಕಮಂದಿರದಲ್ಲಿ ಜಟಾಪಟ್ ಕಲಾಕಂದ್ ಮಾಡಿ
ಭಾರತದ ಪ್ರಸಿದ್ಧ ಹಾಲಿನ ತಿಂಡಿ ಕಲಾಕಂದ್ ನೀವೆಂದಿಗಾದರೂ ಮನೆಯಲ್ಲಿ ಮಾಡಿದ್ದೀರ? ಇಲ್ಲವೆಂದರೆ ಈ ದಿನ ಕಲಾಕಂದ್ ಮಾಡುವುದಕ್ಕೆ ಸೂಕ್ತ ಕಾಲ. ಕೃಷ್ಣ ಜನ್ಮಾಷ್ಟಮಿಗೆ ಕಲಾಕಂದ್ ಸಿಹಿ ತಿಂಡಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಹಂಚಬಹುದು. ಎಲ್ಲ ಹಬ್ಬಹರಿದಿನಗಳಿಗೂ ಒಪ್ಪುವ ವಿಶೇಷವಾದ ಕಲಾಕಂದ್ ರುಚಿಯನ್ನು ನೀವೂ ಟೇಸ್ಟ್ ಮಾಡಬಹುದು.
ಬೇಕಾಗುವ ಪದಾರ್ಥಗಳು:
* 1 ಲೀಟರ್ ಹಾಲು
* 1/2 ಕೆ.ಜಿ. ತಾಜಾ ಪನ್ನೀರು
* 1/2 ಕಪ್ ಸಕ್ಕರೆ
* ಬಾದಾಮಿ ಮತ್ತು ಪಿಸ್ತಾ ಚೂರುಗಳು
* 1/2 ಚಮಚ ಯಾಲಕ್ಕಿ ಪುಡಿ
* ಬೆಣ್ಣೆ
ಕಲಾಕಂದ್ ತಯಾರಿಸುವುದು ಹೇಗೆ?
* ತಳ ಗಟ್ಟಿಯಿರುವ ಪಾತ್ರೆಯಲ್ಲಿ ಹಾಲು ಹಾಕಿ ಅದು ಗಟ್ಟಿಗೊಳ್ಳುವವರೆಗೂ ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು. ಪನ್ನೀರನ್ನು ಚೆನ್ನಾಗಿ ಹಿಂಡಿ ಹಾಲಿಗೆ ಬೆರೆಸಬೇಕು.
* ಈಗ ಸಕ್ಕರೆ ಮತ್ತು ಯಾಲಕ್ಕಿ ಪುಡಿಯನ್ನು ಹಾಲಿಗೆ ಹಾಕಿ ಅದು ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು.
* ಈ ಮಿಶ್ರಣವನ್ನು ಬೆಣ್ಣೆ ಹಚ್ಚಿದ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹಾಕಬೇಕು. ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಆರಿದ ನಂತರ ಕತ್ತರಿಸಿಕೊಳ್ಳಬಹುದು.
ಈಗ ಸ್ವಾದಭರಿತ ಕಲಾಕಂದ್ ರೆಡಿಯಾಗಿದೆ. ಎಲ್ಲ ಹಬ್ಬಹರಿದಿನಗಳಲ್ಲೂ ಬಲು ಸುಲಭವಾಗಿ ಮಾಡಿ ಮುಗಿಸಬಹುದಾದಂತಹ ಈ ಹಾಲಿನ ಕೇಕ್ ಕಲಾಕಂದರ್ ಅನ್ನು ನೀವೂ ತಯಾರು ಮಾಡಿ.



Click it and Unblock the Notifications




