Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಪಾಕಮಂದಿರದಲ್ಲಿ ಜಟಾಪಟ್ ಕಲಾಕಂದ್ ಮಾಡಿ
ಭಾರತದ ಪ್ರಸಿದ್ಧ ಹಾಲಿನ ತಿಂಡಿ ಕಲಾಕಂದ್ ನೀವೆಂದಿಗಾದರೂ ಮನೆಯಲ್ಲಿ ಮಾಡಿದ್ದೀರ? ಇಲ್ಲವೆಂದರೆ ಈ ದಿನ ಕಲಾಕಂದ್ ಮಾಡುವುದಕ್ಕೆ ಸೂಕ್ತ ಕಾಲ. ಕೃಷ್ಣ ಜನ್ಮಾಷ್ಟಮಿಗೆ ಕಲಾಕಂದ್ ಸಿಹಿ ತಿಂಡಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಹಂಚಬಹುದು. ಎಲ್ಲ ಹಬ್ಬಹರಿದಿನಗಳಿಗೂ ಒಪ್ಪುವ ವಿಶೇಷವಾದ ಕಲಾಕಂದ್ ರುಚಿಯನ್ನು ನೀವೂ ಟೇಸ್ಟ್ ಮಾಡಬಹುದು.
ಬೇಕಾಗುವ ಪದಾರ್ಥಗಳು:
* 1 ಲೀಟರ್ ಹಾಲು
* 1/2 ಕೆ.ಜಿ. ತಾಜಾ ಪನ್ನೀರು
* 1/2 ಕಪ್ ಸಕ್ಕರೆ
* ಬಾದಾಮಿ ಮತ್ತು ಪಿಸ್ತಾ ಚೂರುಗಳು
* 1/2 ಚಮಚ ಯಾಲಕ್ಕಿ ಪುಡಿ
* ಬೆಣ್ಣೆ
ಕಲಾಕಂದ್ ತಯಾರಿಸುವುದು ಹೇಗೆ?
* ತಳ ಗಟ್ಟಿಯಿರುವ ಪಾತ್ರೆಯಲ್ಲಿ ಹಾಲು ಹಾಕಿ ಅದು ಗಟ್ಟಿಗೊಳ್ಳುವವರೆಗೂ ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು. ಪನ್ನೀರನ್ನು ಚೆನ್ನಾಗಿ ಹಿಂಡಿ ಹಾಲಿಗೆ ಬೆರೆಸಬೇಕು.
* ಈಗ ಸಕ್ಕರೆ ಮತ್ತು ಯಾಲಕ್ಕಿ ಪುಡಿಯನ್ನು ಹಾಲಿಗೆ ಹಾಕಿ ಅದು ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು.
* ಈ ಮಿಶ್ರಣವನ್ನು ಬೆಣ್ಣೆ ಹಚ್ಚಿದ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹಾಕಬೇಕು. ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಆರಿದ ನಂತರ ಕತ್ತರಿಸಿಕೊಳ್ಳಬಹುದು.
ಈಗ ಸ್ವಾದಭರಿತ ಕಲಾಕಂದ್ ರೆಡಿಯಾಗಿದೆ. ಎಲ್ಲ ಹಬ್ಬಹರಿದಿನಗಳಲ್ಲೂ ಬಲು ಸುಲಭವಾಗಿ ಮಾಡಿ ಮುಗಿಸಬಹುದಾದಂತಹ ಈ ಹಾಲಿನ ಕೇಕ್ ಕಲಾಕಂದರ್ ಅನ್ನು ನೀವೂ ತಯಾರು ಮಾಡಿ.



Click it and Unblock the Notifications