Just In
Don't Miss
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಬ್ಬರಿ ಮಿಠಾಯಿ ಅಥವಾ ಕೊಬ್ಬರಿ ವಡೆ
ಇಂಥ ಸವಿರುಚಿಯಾದ ಕೊಬ್ಬರಿ ವಡೆಯನ್ನು ನಮ್ಮಮ್ಮನಿಂದಲೇ ನಾನು ಕಲಿತಿದ್ದು, ಅದೂ ಇತ್ತೀಚೆಗೆ. ಅದನ್ನೀಗ ನಿಮಗೆ ತಿಳಿಸುತ್ತಿದ್ದೇನೆ. ನೀವೆಲ್ಲ ಈ ಸಿಹಿಯನ್ನು ಅನೇಕ ಬಾರಿ ಮಾಡಿರಬಹುದು. ಆದರೂ ಗೊತ್ತಿಲ್ಲದವರ ಅವಗಾಹನೆಗಾಗಿ ಇರಲೆಂದು ಇಲ್ಲಿ ಸರಳ ವಿಧಾನವನ್ನು ತಿಳಿಸುತ್ತಿದ್ದೇನೆ.
* ಗಂಗೋತ್ರಿ, ಮೈಸೂರು
ಬೇಕಾಗುವ ಪದಾರ್ಥಗಳು
ತೆಂಗಿನಕಾಯಿ
ತುರಿ
1
ಬಟ್ಟಲು
ಸಕ್ಕರೆ
3/4
ಬಟ್ಟಲು
ಎಲ್ಲಕ್ಕಿ
8
ಪುಡಿ
ಮಾಡಿದ್ದು
ತುಪ್ಪ
1
ಚಮಚ
-ತಟ್ಟೆಗೆ
ಸವರಲು
ಮಾಡುವ ವಿಧಾನ
ಕಾಯಿತುರಿ ಅಳತೆ ಮಾಡಿದ ಬಟ್ಟಲಿನಲ್ಲೇ, ಸಕ್ಕರೆಯನ್ನು ಅಳತೆ ಮಾಡಿಕೊಳ್ಳಿ. ಪ್ರೆಶರ್ ಪಾನ್ ನಲ್ಲಿ ಅಥವಾ ದಪ್ಪತಳದ ಪಾತ್ರೆಗೆ ಕಾಯಿತುರಿ, ಸಕ್ಕರೆ ಮತ್ತು ಏಲಕ್ಕಿ ಪುಡಿ ಎಲ್ಲ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 2 ಗಂಟೆಗಳ ಕಾಲ ಮುಚ್ಚಿಡಿ.
ತಟ್ಟೆಗೆ ತುಪ್ಪ ಸವರಿ ಇಟ್ಟುಕೊಳ್ಳಿ. ಈಗ 2 ಗಂಟೆಗಳಾದ ಬಳಿಕ ಕಾಯಿತುರಿ, ಸಕ್ಕರೆ ಮಿಶ್ರಣವನ್ನು ಒಲೆಯ ಮೇಲಿಟ್ಟು ತಿರುವುತ್ತಿರಿ. ಸಕ್ಕರೆ ಎಲ್ಲ ಕರಗಿ ಚೆನ್ನಾಗಿ ಕಾಯುತ್ತದೆ. ಕೈ ಬಿಡದೆ ತಿರುವುತ್ತಿರುವಾಗ ಅದು ತಳದಿಂದ ಮೇಲೆ ಬಿಡುತ್ತದೆ.ತಳದಿಂದ ಬಿಟ್ಟು ಪೂರ್ತಿ ಉಂಡೆಯಾಗುವುದು. ಈಗ ಅದನ್ನು ತಕ್ಷಣ ತುಪ್ಪ ಸವರಿದ ತಟ್ಟೆಗೆ ಸುರಿದು ಸಮತಟ್ಟಾಗಿ ಹರಡುವುದು. ಮೇಲೆ ಸಮತಟ್ಟಾಗಿ ಬರಲು ಹಾಲಿನಿಂದ ಅದ್ದಿದ ಕೈ ಇಂದ ತಟ್ಟಿ. ತಕ್ಷಣ ಚಾಕುವಿನಿಂದ ನಮಗೆ ಬೇಕಾದ ಆಕಾರಕ್ಕೆ ಕೊಯ್ಯುಕೊಳ್ಳಿ. ಬಿಸಿ ಇರುವಾಗಲೇ ಕೊಯ್ಯಬೇಕು. ಬಾಯಿಗೆ ಹಾಕಿ ಕೊಂಡರೆ ಕರಗುವಂತ ಕೊಬ್ಬರಿ ಮಿಠಾಯಿ ರೆಡಿ.
ಅಕಸ್ಮಾತ್ ತಟ್ಟೆಗೆ ಹಾಕಿದ ತಕ್ಷಣ ಪುಡಿಯಾಯಿತು ಎನಿಸಿದರೆ ಬೇಸರ ಪಡದಿರಿ. ಮತ್ತೆ ಅದ್ದನ್ನು ಮತ್ತೆ ಪ್ಯಾನ್ ಗೆ ಹಾಕಿ. ಅದಕ್ಕೆ 1/4 ಲೋಟ ಹಾಲನ್ನು ಹಾಕಿ ಮತ್ತೆ ಕಾಯಿಸಿ. ತಳ ಬಿಟ್ಟು ಬರುವಾಗ ತಕ್ಷಣ ತಟ್ಟೆಗೆ ಸುರಿದು ಬೇಕಾದ ಆಕಾರಕ್ಕೆ ಕತ್ತರಿಸಿರಿ.