Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಕುಂದಾ ಹೇಗೆ ತಯಾರಾಗುತ್ತದೆ ಗೊತ್ತಾ?

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿ ಕನ್ನಡಿಗರ ಕಂದದ ಉತ್ಸಾಹಕ್ಕೆ ಸಾಕ್ಷಿಯಾದರೆ, ಬೆಳಗಾವಿಯ ಸ್ಪೆಷಲ್ ಸಿಹಿ ತಿನಿಸು ಕುಂದಾ ವಿಶ್ವ ಕನ್ನಡಿಗರ ಮನಗೆದ್ದಿದೆ. ಸಮ್ಮೇಳನಕ್ಕೆ ಬಂದವರೆಲ್ಲ ಗೋಕಾಕ್ ಕರದಂಟಿನ ಜೊತೆಗೆ ಬೆಳಗಾವಿ ಕುಂದಾ ಕೈಯಲ್ಲಿ ಹಿಡಿದು ಮರಳುವವರೆ. ಈ ಕನ್ನಡ ಹಬ್ಬವನ್ನು ಕಣ್ಣಾರೆ ಕಂಡಿರದ ಬಂಧುಬಾಂಧವರಿಗೆ ಕನ್ನಡ ಜಾತ್ರೆಯ ಬಗ್ಗೆ ವಿವರಿಸುತ್ತ ಕುಂದಾ ಮೆಲ್ಲುವುದು ಎಂತಹ ಸಂತಸದ ವಿಷಯ ಅಲ್ಲವೆ?
ಸಮ್ಮೇಳನದ ಮೊದಲೆರಡು ದಿನ ಅಂತಹ ಭಾರೀ ಇರದಿದ್ದ ಕುಂದಾ ವ್ಯಾಪಾರ ಕೊನೆಯ ದಿನ ಭರ್ಜರಿಯಾಗಿ ಕುದುರಿತ್ತು. ಬೆಳಗಾವಿಯ ನಂಬರ್ 1 ಕುಂದಾ ಮಾರಾಟಗಾರ ಅತುಲ್ ಪುರೋಹಿತ್ ತಮ್ಮ ಜೇಬನ್ನು ಸಖತ್ತಾಗಿಯೇ ತುಂಬಿಕೊಂಡಿದ್ದಾರೆ. ಆದರೆ, ಕುಂದಾ ಅವರೇ ತಯಾರಿಸುತ್ತಾರಾ? ಖಂಡಿತ ಇಲ್ಲ. ಕುಂದಾ ಸಿಹಿಗೆ ಅಂಗಡಿಯವರು ಅಂತಿಮ ಟಚ್ ನೀಡುತ್ತಾರೆಯೇ ವಿನಃ ಕುಂದಾವನ್ನು ಪೂರ್ತಿಯಾಗಿ ತಯಾರಿಸುವುದಿಲ್ಲ.
ನಿಮಗೆ ಆಶ್ಚರ್ಯವೆನಿಸಬಹುದು. ಕುಂದಾ ತಯಾರಿಸಲು ಬೇಕಾಗಿರುವುದು ಹಾಲು ಮತ್ತು ಸಕ್ಕರೆ ಎರಡೇ. ಆದರೆ, ಅದನ್ನು ತಯಾರಿಸುವ ವಿಧಾನ ಮಾತ್ರ ಅಷ್ಟು ಸರಳವಾಗಿಲ್ಲ. ಅದಕ್ಕೆ ನುರಿತ ಕೈಯೇ ಇರಬೇಕು. ಆ ನುರಿತ ಕೈಗಳು ಇರುವುದು ಬೆಳಗಾವಿ ಬಳಿಯ ಕೆಕೆ ಕೊಪ್ಪ ಎಂಬ ಹಳ್ಳಿಗಳಲ್ಲಿ. ಕೆಕೆ ಕೊಪ್ಪ ಅಂದರೆ, ಕಣವಿ ಕರುವಿನ ಕೊಪ್ಪ. ಈ ಹೆಸರು ಹೇಗೆ ಬಂತು, ಯಾಕೆ ಬಂತು ಎಂಬ ಮಾತುಗಳು ಒತ್ತಟ್ಟಿಗಿರಲಿ. ಅಪ್ಪಟ ಕನ್ನಡ ಮಣ್ಣಿನ ಕೆಕೆ ಕೊಪ್ಪದಲ್ಲಿ ಕುಂದಾಗೆ ಬೇಕಾದ ಖೋವಾ ತಯಾರಾಗಿ ಅಂಗಡಿಗಳಿಗೆ ರವಾನೆಯಾಗುತ್ತವೆ.
ಕುಸ್ತಿ ಪಟುಗಳಿಗೆ ಹೆಸರಾಗಿರುವ ಕೆಕೆ ಕೊಪ್ಪದಲ್ಲಿ ಸುಮಾರು 40ರಿಂದ 50 ಕುಟುಂಬಗಳು ಹಾಲಿನಿಂದ ಖೋವಾ ತಯಾರಿಸುವ ಕಾಯಕದಲ್ಲಿ ತೊಡಗಿವೆ. ಅವರ ಜೇಬುಗಳು ಕೂಡ ಈ ವ್ಯಾಪಾರದಿಂದ ಭರ್ತಿಯಾಗುತ್ತಿವೆ. ಮಾರುಕಟ್ಟೆಯ ನೈಪುಣ್ಯತೆಯ ಕೊರತೆಯಿಂದಾಗಿ ಖೋವಾವನ್ನು ಸ್ವೀಟ್ ಮಾರ್ಟ್ ಗಳಿಗೆ ಮಾರಾಟ ಮಾಡುತ್ತಾರೆ. ಕುಂದಾ ಸಿಹಿ ತಿನಿಸು ತಯಾರಿಸುವ ವಿಧಾನ ಹೀಗಿದೆ.
ತಯಾರಿಸುವ ವಿಧಾನ : ಮೊದಲೇ ಹೇಳಿದಂತೆ ಕುಂದಾಗೆ ಬೇಕಾಗಿರುವುದು ಹಾಲು ಮತ್ತು ಸಕ್ಕರೆ ಮಾತ್ರ. ಗಟ್ಟಿ ಹಾಲನ್ನು ದೊಡ್ಡ ಕಡಾಯಿಯಲ್ಲಿ ಹಾಕಿ ಅಧಿಕ ಉಷ್ಣದಲ್ಲಿ ಕುದಿಸುತ್ತಾರೆ. ಕುದ್ದು ಕುದ್ದು ಗಟ್ಟಿಯಾಗಿ ಹಾಲು ಖೋವಾ ಆಗಿ ಮಾರ್ಪಾಟಾಗುತ್ತದೆ. ಖೋವಾ ಆರಿದ ನಂತರ. ಇದಕ್ಕೆ ಸಕ್ಕರೆಯನ್ನು ಹಾಕಿ ಮತ್ತೆ ಕುದಿಸಲಾಗುತ್ತದೆ. ಇದು ತಳ ಹಿಡಿಯುವ ಸಂಭವನೀಯತೆ ಹೆಚ್ಚು ಇರುವುದರಿಂದ ದೊಡ್ಡ ಮಚ್ಚುಗದಲ್ಲಿ ಕೈಯಾಡಿಸುತ್ತಲೇ ಇರಬೇಕು. ಈ ಮಿಶ್ರಣ ಕಂದು ಬಣ್ಣಕ್ಕೆ, ಅಂದರೆ ಕುಂದಾ ಬಣ್ಣಕ್ಕೆ ಬರುತ್ತಿದ್ದಂತೆ ಇಳಿಸಿ ಆರಿಸಿ ತಿನ್ನಬಹುದು.



Click it and Unblock the Notifications











