Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮೆಂತ್ಯೆ ಸೊಪ್ಪಿನ ಕಡುಬು: ಉತ್ತರ ಕರ್ನಾಟಕದ ಖಾದ್ಯ

ಬೇಕಾಗುವ ಸಾಮಾಗ್ರಿಗಳು :
1/4 ಕೆ.ಜಿ. ಗೋಧಿ ಹಿಟ್ಟು
1 ಚಮಚ ಜೀರಿಗೆ
2 ಗೆಡ್ಡೆ ಬೆಳ್ಳುಳ್ಳಿ
2 ಚಮಚ ಖಾರದ ಪುಡಿ
1/2 ಚಮಚ ಅರಿಶಿಣ ಪುಡಿ
1/2 ಬಟ್ಟಲು ತುರಿದ ಒಣ ಕೊಬ್ಬರಿ
2 ಕಟ್ಟು ಮೆಂತ್ಯೆ ಸೊಪ್ಪು
1 ಬಟ್ಟಲು ಕಡಲೆ ಕಾಯಿ ಬೀಜ
ಒಗ್ಗರಣೆಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು
* ಮೆಂತೆ ಸೊಪ್ಪನ್ನು ಸಣ್ಣಗೆ ಕತ್ತರಿಸಿ ನೀರಿನಲ್ಲಿ ತೊಳೆಯಬೇಕು
* ಕಡಲೆಕಾಯಿ ಬೀಜವನ್ನು ಉರಿದು ಪುಡಿ ಮಾಡಿಕೊಳ್ಳಬೇಕು
* ಬೆಳ್ಳುಳ್ಳಿಯನ್ನು ಸುಲಿದು, ಸಣ್ಣಗೆ ತುಂಡುಗಳಾಗಿ ಮಾಡಿ ಕೊಳ್ಳಬೇಕು.ಒಣ ಕೊಬ್ಬರಿಯನ್ನು ತುರಿಯಬೇಕು.
ತಯಾರಿಸುವ ವಿಧಾನ:
1. ಮೊದಲಿಗೆ, ಗೋಧಿ ಹಿಟ್ಟು, ಖಾರದ ಪುಡಿ, ಆರಿಶಿಣ, ಜೀರಿಗೆ, ಸ್ವಲ್ಪ ಉಪ್ಪು ಮಿಶ್ರಣ ಮಾಡಿ, ನಂತರ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು.
2. ಕಲಿಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಮಾಡಿದ ಉಂಡೆಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಬಿಲ್ಲೆ ಆಕಾರ ಬರುವ ಹಾಗೆ ಒತ್ತಬೇಕು. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಕುದಿಯುವ ನೀರಿನಲ್ಲಿ ಹಿಟ್ಟಿನ ಬಿಲ್ಲೆಗಳನ್ನು ಹಾಕಿ, ಐದು ನಿಮಿಷಗಳ ಕಾಲ ಕುದಿಸಬೇಕು. ನಂತರ ಉಳಿದ ನೀರನ್ನು ತೆಗೆದು, ಬಿಲ್ಲೆಗಳನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡಿ.
3. ಒಗ್ಗರಣೆಗಾಗಿ, ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಸುಲಿದ ಬೆಳ್ಳುಳ್ಳಿ ತುಂಡುಗಳು, ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪನ್ನು ಹಾಕಿ, ಹಸಿ ಹೋಗುವವರೆಗೂ ಎಣ್ಣೆಯಲ್ಲಿ ಬಾಡಿಸಬೇಕು. ನಂತರ ಬೇಯಿಸಿದ ಬಿಲ್ಲೆಗಳನ್ನು ಮತ್ತು ರುಚಿಗೆ ತಕ್ಕಷ್ಟು ಖಾರ ಮತ್ತು ಉಪ್ಪನ್ನು ಸೇರಿಸಿ.
4. ನಂತರ ಕಡಲೆಕಾಯಿ ಬೀಜದ ಪುಡಿ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಿಸ ಬೇಕು. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸವಿಯಲು ಕೊಡಿ. ಬೇಕಿದ್ದರೆ, ಟೊಮೆಟೊ ಸಾಸ್ ನೊಂದಿಗೆ ಸೇವಿಸಬಹುದು. ಬಿಸಿ ಇದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ.



Click it and Unblock the Notifications











