Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಮೆಂತ್ಯೆ ಸೊಪ್ಪಿನ ಕಡುಬು: ಉತ್ತರ ಕರ್ನಾಟಕದ ಖಾದ್ಯ

ಬೇಕಾಗುವ ಸಾಮಾಗ್ರಿಗಳು :
1/4 ಕೆ.ಜಿ. ಗೋಧಿ ಹಿಟ್ಟು
1 ಚಮಚ ಜೀರಿಗೆ
2 ಗೆಡ್ಡೆ ಬೆಳ್ಳುಳ್ಳಿ
2 ಚಮಚ ಖಾರದ ಪುಡಿ
1/2 ಚಮಚ ಅರಿಶಿಣ ಪುಡಿ
1/2 ಬಟ್ಟಲು ತುರಿದ ಒಣ ಕೊಬ್ಬರಿ
2 ಕಟ್ಟು ಮೆಂತ್ಯೆ ಸೊಪ್ಪು
1 ಬಟ್ಟಲು ಕಡಲೆ ಕಾಯಿ ಬೀಜ
ಒಗ್ಗರಣೆಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು
* ಮೆಂತೆ ಸೊಪ್ಪನ್ನು ಸಣ್ಣಗೆ ಕತ್ತರಿಸಿ ನೀರಿನಲ್ಲಿ ತೊಳೆಯಬೇಕು
* ಕಡಲೆಕಾಯಿ ಬೀಜವನ್ನು ಉರಿದು ಪುಡಿ ಮಾಡಿಕೊಳ್ಳಬೇಕು
* ಬೆಳ್ಳುಳ್ಳಿಯನ್ನು ಸುಲಿದು, ಸಣ್ಣಗೆ ತುಂಡುಗಳಾಗಿ ಮಾಡಿ ಕೊಳ್ಳಬೇಕು.ಒಣ ಕೊಬ್ಬರಿಯನ್ನು ತುರಿಯಬೇಕು.
ತಯಾರಿಸುವ ವಿಧಾನ:
1. ಮೊದಲಿಗೆ, ಗೋಧಿ ಹಿಟ್ಟು, ಖಾರದ ಪುಡಿ, ಆರಿಶಿಣ, ಜೀರಿಗೆ, ಸ್ವಲ್ಪ ಉಪ್ಪು ಮಿಶ್ರಣ ಮಾಡಿ, ನಂತರ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು.
2. ಕಲಿಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಮಾಡಿದ ಉಂಡೆಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಬಿಲ್ಲೆ ಆಕಾರ ಬರುವ ಹಾಗೆ ಒತ್ತಬೇಕು. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಕುದಿಯುವ ನೀರಿನಲ್ಲಿ ಹಿಟ್ಟಿನ ಬಿಲ್ಲೆಗಳನ್ನು ಹಾಕಿ, ಐದು ನಿಮಿಷಗಳ ಕಾಲ ಕುದಿಸಬೇಕು. ನಂತರ ಉಳಿದ ನೀರನ್ನು ತೆಗೆದು, ಬಿಲ್ಲೆಗಳನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡಿ.
3. ಒಗ್ಗರಣೆಗಾಗಿ, ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಸುಲಿದ ಬೆಳ್ಳುಳ್ಳಿ ತುಂಡುಗಳು, ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪನ್ನು ಹಾಕಿ, ಹಸಿ ಹೋಗುವವರೆಗೂ ಎಣ್ಣೆಯಲ್ಲಿ ಬಾಡಿಸಬೇಕು. ನಂತರ ಬೇಯಿಸಿದ ಬಿಲ್ಲೆಗಳನ್ನು ಮತ್ತು ರುಚಿಗೆ ತಕ್ಕಷ್ಟು ಖಾರ ಮತ್ತು ಉಪ್ಪನ್ನು ಸೇರಿಸಿ.
4. ನಂತರ ಕಡಲೆಕಾಯಿ ಬೀಜದ ಪುಡಿ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಿಸ ಬೇಕು. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸವಿಯಲು ಕೊಡಿ. ಬೇಕಿದ್ದರೆ, ಟೊಮೆಟೊ ಸಾಸ್ ನೊಂದಿಗೆ ಸೇವಿಸಬಹುದು. ಬಿಸಿ ಇದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ.



Click it and Unblock the Notifications