Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಾಳೆಕಾಯಿ ಕಾಪು
ಎಲ್ಲಾ ರೆಸಿಪಿಗಳನ್ನು ಹೆಂಗಸರೇ ಮಾಡುತ್ತಾರೆ, ಗಂಡಸರು ಕೂತು ತಿನ್ನುವ ದಂಡಪಿಂಡಗಳು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ, ಅದನ್ನ ಹಿಂತೆಗೆದುಕೊಳ್ಳಿ. ಈ ರುಚಿಕಟ್ಟಾದ ತಿಂಡಿ ಮಾಡುವುದನ್ನು ನನಗೆ ಕಲಿಸಿಕೊಟ್ಟದ್ದು ನನ್ನ ತಂದೆ!
ಪ್ರಸಾದ ನಾಯಿಕ, ಬೆಂಗಳೂರು
ಈ ತಿಂಡಿಯ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ, ತಿಂದಿರಲಿಕ್ಕಿಲ್ಲ. ಈ ತಿಂಡಿಯನ್ನು ಮಾಡಲು ನೂರಾಎಂಟು ಪಾತ್ರೆ, ಸೌಟು ಎಂಥದೂ ಬೇಕಾಗಿಲ್ಲ. ಒಂದಿಷ್ಟು ಬಾಳೆಕಾಯಿ, ಉಪ್ಪು, ಕಾರ, ಕಡಲೆ ಹಿಟ್ಟು, ಇಂಗು, ಜೀರಿಗೆ ಜೊತೆಗೆ ಚಪಾತಿ ಮಾಡುವ ತವಾ ಇಷ್ಟಿದ್ದರೆ ಸಾಕು.
ಮಾರ್ಗಶಿರ ಮಾಸ ಪ್ರಾರಂಭವಾಗಿ ಮಾಗಿಯ ಚಳಿ ಮೈಕೊರೆಯುತ್ತಿದ್ದರೆ ನಾಲಿಗೆ ಚುರುಚುರು ಅನ್ನಿಸುವುದಕ್ಕೆ ಪ್ರಾರಂಭಿಸುತ್ತದೆ. ಪ್ರತಿದಿನ ಮನೆಗೆಲಸ ಮಾಡಿ ದುಡಿದು ಹಣ್ಣಾದ ಹೆಂಡತಿ, ತಾಯಿ, ಅಕ್ಕ-ತಂಗಿಯರನ್ನು ಅಡುಗೆಮನೆಯಿಂದ ಒಂದು ಸಾಯಂಕಾಲ ಹೊರಕ್ಕಟ್ಟಿ ಶಭಾಷ್ಗಿರಿಪಡೆಯಲು ಗಂಡಸರಿಗೆ ಇದು ಒಳ್ಳೇ ಅವಕಾಶ.
ನೆನಪಿರಲಿ, ಇದಕ್ಕೆ ತಗಲುವ ಸಮಯ ಕೂಡ ಅತಿ ಕಡಿಮೆ. ನಿಮ್ಮ ಹೆಂಡತಿ ಅಡುಗೆಮನೆಯಿಂದ ಹೊರಬಂದು ಮುಖ ತೊಳೆದು, ಕುಂಕುಮ ಇಟ್ಟು, ಹೂಮುಡಿದು ರೆಡಿಯಾಗಿ ಬರುವುದರೊಳಗಾಗಿ ಗರಿಗರಿ, ಬಿಸಿಬಿಸಿಯಾದ ಕಾಪು ರೆಡಿಯಾಗಿರುತ್ತದೆ! ಇನ್ನೊಂದು ಮಾತು ನೆನಪಿರಲಿ, ಇದು ಯಾರು ಬೇಕಾದರೂ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
ನಾಲ್ಕು ಬಾಳೆಕಾಯಿ
ಉಪ್ಪು, ಕಾರ, ಇಂಗು, ಕಡಲೆಹಿಟ್ಟು, ಜೀರಿಗೆ - ಎಲ್ಲ ಚಿಟಿಕೆಯಷ್ಟು
ಮಾಡುವ ವಿಧಾನ :
ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು, ಗಾಲಿ ರೂಪದಲ್ಲಿ ಕತ್ತರಿಸಿಕೊಳ್ಳಬೇಕು. ಅವುಗಳ ಮೇಲೆ ಉಪ್ಪು, ಕಾರ, ಕಡಲೆಹಿಟ್ಟು, ಜೀರಿಗೆ ಎಲ್ಲ ಸ್ವಲ್ಪ ಪ್ರಮಾಣದಲ್ಲಿ ಉದುರಿಸಿ ಕಾಯ್ದ ತವಾದ ಮೇಲೆ ಇರಿಸಬೇಕು. ಅವುಗಳ ಮೇಲೆ ದೋಸೆಯ ಮೇಲೆ ಹುಯ್ದಂತೆ ಶೇಂಗಾಎಣ್ಣೆಯನ್ನು ಹಾಕಿ ಚೆನ್ನಾಗಿ ತಾಳಿಸಬೇಕು. ದಟ್ಸಾಲ್! ರೆಡಿ. ಇಷ್ಟೇನಾ ಅಂತ ಆಶ್ಚರ್ಯಪಡಬೇಡಿ. ನಮ್ಮಪ್ಪನಾಣೆಗೂ ಇಷ್ಟೇ.
ಮುಂದಿನ ಆದಿತ್ಯವಾರ ಮತ್ತೊಂದು ಹೊಸರುಚಿಯನ್ನು ನೋಡೋಣ, ಅಲ್ಲಿಯವರೆಗೆ ಬಾಳೆಕಾಯಿ ಕಾಪನ್ನು ಮೆಲ್ಲುತಿರೋಣ.



Click it and Unblock the Notifications