Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬಾಳೆಕಾಯಿ ಕಾಪು
ಎಲ್ಲಾ ರೆಸಿಪಿಗಳನ್ನು ಹೆಂಗಸರೇ ಮಾಡುತ್ತಾರೆ, ಗಂಡಸರು ಕೂತು ತಿನ್ನುವ ದಂಡಪಿಂಡಗಳು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ, ಅದನ್ನ ಹಿಂತೆಗೆದುಕೊಳ್ಳಿ. ಈ ರುಚಿಕಟ್ಟಾದ ತಿಂಡಿ ಮಾಡುವುದನ್ನು ನನಗೆ ಕಲಿಸಿಕೊಟ್ಟದ್ದು ನನ್ನ ತಂದೆ!
ಪ್ರಸಾದ ನಾಯಿಕ, ಬೆಂಗಳೂರು
ಈ ತಿಂಡಿಯ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ, ತಿಂದಿರಲಿಕ್ಕಿಲ್ಲ. ಈ ತಿಂಡಿಯನ್ನು ಮಾಡಲು ನೂರಾಎಂಟು ಪಾತ್ರೆ, ಸೌಟು ಎಂಥದೂ ಬೇಕಾಗಿಲ್ಲ. ಒಂದಿಷ್ಟು ಬಾಳೆಕಾಯಿ, ಉಪ್ಪು, ಕಾರ, ಕಡಲೆ ಹಿಟ್ಟು, ಇಂಗು, ಜೀರಿಗೆ ಜೊತೆಗೆ ಚಪಾತಿ ಮಾಡುವ ತವಾ ಇಷ್ಟಿದ್ದರೆ ಸಾಕು.
ಮಾರ್ಗಶಿರ ಮಾಸ ಪ್ರಾರಂಭವಾಗಿ ಮಾಗಿಯ ಚಳಿ ಮೈಕೊರೆಯುತ್ತಿದ್ದರೆ ನಾಲಿಗೆ ಚುರುಚುರು ಅನ್ನಿಸುವುದಕ್ಕೆ ಪ್ರಾರಂಭಿಸುತ್ತದೆ. ಪ್ರತಿದಿನ ಮನೆಗೆಲಸ ಮಾಡಿ ದುಡಿದು ಹಣ್ಣಾದ ಹೆಂಡತಿ, ತಾಯಿ, ಅಕ್ಕ-ತಂಗಿಯರನ್ನು ಅಡುಗೆಮನೆಯಿಂದ ಒಂದು ಸಾಯಂಕಾಲ ಹೊರಕ್ಕಟ್ಟಿ ಶಭಾಷ್ಗಿರಿಪಡೆಯಲು ಗಂಡಸರಿಗೆ ಇದು ಒಳ್ಳೇ ಅವಕಾಶ.
ನೆನಪಿರಲಿ, ಇದಕ್ಕೆ ತಗಲುವ ಸಮಯ ಕೂಡ ಅತಿ ಕಡಿಮೆ. ನಿಮ್ಮ ಹೆಂಡತಿ ಅಡುಗೆಮನೆಯಿಂದ ಹೊರಬಂದು ಮುಖ ತೊಳೆದು, ಕುಂಕುಮ ಇಟ್ಟು, ಹೂಮುಡಿದು ರೆಡಿಯಾಗಿ ಬರುವುದರೊಳಗಾಗಿ ಗರಿಗರಿ, ಬಿಸಿಬಿಸಿಯಾದ ಕಾಪು ರೆಡಿಯಾಗಿರುತ್ತದೆ! ಇನ್ನೊಂದು ಮಾತು ನೆನಪಿರಲಿ, ಇದು ಯಾರು ಬೇಕಾದರೂ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
ನಾಲ್ಕು ಬಾಳೆಕಾಯಿ
ಉಪ್ಪು, ಕಾರ, ಇಂಗು, ಕಡಲೆಹಿಟ್ಟು, ಜೀರಿಗೆ - ಎಲ್ಲ ಚಿಟಿಕೆಯಷ್ಟು
ಮಾಡುವ ವಿಧಾನ :
ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು, ಗಾಲಿ ರೂಪದಲ್ಲಿ ಕತ್ತರಿಸಿಕೊಳ್ಳಬೇಕು. ಅವುಗಳ ಮೇಲೆ ಉಪ್ಪು, ಕಾರ, ಕಡಲೆಹಿಟ್ಟು, ಜೀರಿಗೆ ಎಲ್ಲ ಸ್ವಲ್ಪ ಪ್ರಮಾಣದಲ್ಲಿ ಉದುರಿಸಿ ಕಾಯ್ದ ತವಾದ ಮೇಲೆ ಇರಿಸಬೇಕು. ಅವುಗಳ ಮೇಲೆ ದೋಸೆಯ ಮೇಲೆ ಹುಯ್ದಂತೆ ಶೇಂಗಾಎಣ್ಣೆಯನ್ನು ಹಾಕಿ ಚೆನ್ನಾಗಿ ತಾಳಿಸಬೇಕು. ದಟ್ಸಾಲ್! ರೆಡಿ. ಇಷ್ಟೇನಾ ಅಂತ ಆಶ್ಚರ್ಯಪಡಬೇಡಿ. ನಮ್ಮಪ್ಪನಾಣೆಗೂ ಇಷ್ಟೇ.
ಮುಂದಿನ ಆದಿತ್ಯವಾರ ಮತ್ತೊಂದು ಹೊಸರುಚಿಯನ್ನು ನೋಡೋಣ, ಅಲ್ಲಿಯವರೆಗೆ ಬಾಳೆಕಾಯಿ ಕಾಪನ್ನು ಮೆಲ್ಲುತಿರೋಣ.



Click it and Unblock the Notifications