Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಬಾಳೆಕಾಯಿ ಕಾಪು
ಎಲ್ಲಾ ರೆಸಿಪಿಗಳನ್ನು ಹೆಂಗಸರೇ ಮಾಡುತ್ತಾರೆ, ಗಂಡಸರು ಕೂತು ತಿನ್ನುವ ದಂಡಪಿಂಡಗಳು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ, ಅದನ್ನ ಹಿಂತೆಗೆದುಕೊಳ್ಳಿ. ಈ ರುಚಿಕಟ್ಟಾದ ತಿಂಡಿ ಮಾಡುವುದನ್ನು ನನಗೆ ಕಲಿಸಿಕೊಟ್ಟದ್ದು ನನ್ನ ತಂದೆ!
ಪ್ರಸಾದ ನಾಯಿಕ, ಬೆಂಗಳೂರು
ಈ ತಿಂಡಿಯ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ, ತಿಂದಿರಲಿಕ್ಕಿಲ್ಲ. ಈ ತಿಂಡಿಯನ್ನು ಮಾಡಲು ನೂರಾಎಂಟು ಪಾತ್ರೆ, ಸೌಟು ಎಂಥದೂ ಬೇಕಾಗಿಲ್ಲ. ಒಂದಿಷ್ಟು ಬಾಳೆಕಾಯಿ, ಉಪ್ಪು, ಕಾರ, ಕಡಲೆ ಹಿಟ್ಟು, ಇಂಗು, ಜೀರಿಗೆ ಜೊತೆಗೆ ಚಪಾತಿ ಮಾಡುವ ತವಾ ಇಷ್ಟಿದ್ದರೆ ಸಾಕು.
ಮಾರ್ಗಶಿರ ಮಾಸ ಪ್ರಾರಂಭವಾಗಿ ಮಾಗಿಯ ಚಳಿ ಮೈಕೊರೆಯುತ್ತಿದ್ದರೆ ನಾಲಿಗೆ ಚುರುಚುರು ಅನ್ನಿಸುವುದಕ್ಕೆ ಪ್ರಾರಂಭಿಸುತ್ತದೆ. ಪ್ರತಿದಿನ ಮನೆಗೆಲಸ ಮಾಡಿ ದುಡಿದು ಹಣ್ಣಾದ ಹೆಂಡತಿ, ತಾಯಿ, ಅಕ್ಕ-ತಂಗಿಯರನ್ನು ಅಡುಗೆಮನೆಯಿಂದ ಒಂದು ಸಾಯಂಕಾಲ ಹೊರಕ್ಕಟ್ಟಿ ಶಭಾಷ್ಗಿರಿಪಡೆಯಲು ಗಂಡಸರಿಗೆ ಇದು ಒಳ್ಳೇ ಅವಕಾಶ.
ನೆನಪಿರಲಿ, ಇದಕ್ಕೆ ತಗಲುವ ಸಮಯ ಕೂಡ ಅತಿ ಕಡಿಮೆ. ನಿಮ್ಮ ಹೆಂಡತಿ ಅಡುಗೆಮನೆಯಿಂದ ಹೊರಬಂದು ಮುಖ ತೊಳೆದು, ಕುಂಕುಮ ಇಟ್ಟು, ಹೂಮುಡಿದು ರೆಡಿಯಾಗಿ ಬರುವುದರೊಳಗಾಗಿ ಗರಿಗರಿ, ಬಿಸಿಬಿಸಿಯಾದ ಕಾಪು ರೆಡಿಯಾಗಿರುತ್ತದೆ! ಇನ್ನೊಂದು ಮಾತು ನೆನಪಿರಲಿ, ಇದು ಯಾರು ಬೇಕಾದರೂ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
ನಾಲ್ಕು ಬಾಳೆಕಾಯಿ
ಉಪ್ಪು, ಕಾರ, ಇಂಗು, ಕಡಲೆಹಿಟ್ಟು, ಜೀರಿಗೆ - ಎಲ್ಲ ಚಿಟಿಕೆಯಷ್ಟು
ಮಾಡುವ ವಿಧಾನ :
ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು, ಗಾಲಿ ರೂಪದಲ್ಲಿ ಕತ್ತರಿಸಿಕೊಳ್ಳಬೇಕು. ಅವುಗಳ ಮೇಲೆ ಉಪ್ಪು, ಕಾರ, ಕಡಲೆಹಿಟ್ಟು, ಜೀರಿಗೆ ಎಲ್ಲ ಸ್ವಲ್ಪ ಪ್ರಮಾಣದಲ್ಲಿ ಉದುರಿಸಿ ಕಾಯ್ದ ತವಾದ ಮೇಲೆ ಇರಿಸಬೇಕು. ಅವುಗಳ ಮೇಲೆ ದೋಸೆಯ ಮೇಲೆ ಹುಯ್ದಂತೆ ಶೇಂಗಾಎಣ್ಣೆಯನ್ನು ಹಾಕಿ ಚೆನ್ನಾಗಿ ತಾಳಿಸಬೇಕು. ದಟ್ಸಾಲ್! ರೆಡಿ. ಇಷ್ಟೇನಾ ಅಂತ ಆಶ್ಚರ್ಯಪಡಬೇಡಿ. ನಮ್ಮಪ್ಪನಾಣೆಗೂ ಇಷ್ಟೇ.
ಮುಂದಿನ ಆದಿತ್ಯವಾರ ಮತ್ತೊಂದು ಹೊಸರುಚಿಯನ್ನು ನೋಡೋಣ, ಅಲ್ಲಿಯವರೆಗೆ ಬಾಳೆಕಾಯಿ ಕಾಪನ್ನು ಮೆಲ್ಲುತಿರೋಣ.



Click it and Unblock the Notifications