Latest Updates
-
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ?
ಬಾಳೆಕಾಯಿ ಕಾಪು
ಎಲ್ಲಾ ರೆಸಿಪಿಗಳನ್ನು ಹೆಂಗಸರೇ ಮಾಡುತ್ತಾರೆ, ಗಂಡಸರು ಕೂತು ತಿನ್ನುವ ದಂಡಪಿಂಡಗಳು ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ, ಅದನ್ನ ಹಿಂತೆಗೆದುಕೊಳ್ಳಿ. ಈ ರುಚಿಕಟ್ಟಾದ ತಿಂಡಿ ಮಾಡುವುದನ್ನು ನನಗೆ ಕಲಿಸಿಕೊಟ್ಟದ್ದು ನನ್ನ ತಂದೆ!
ಪ್ರಸಾದ ನಾಯಿಕ, ಬೆಂಗಳೂರು
ಈ ತಿಂಡಿಯ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ, ತಿಂದಿರಲಿಕ್ಕಿಲ್ಲ. ಈ ತಿಂಡಿಯನ್ನು ಮಾಡಲು ನೂರಾಎಂಟು ಪಾತ್ರೆ, ಸೌಟು ಎಂಥದೂ ಬೇಕಾಗಿಲ್ಲ. ಒಂದಿಷ್ಟು ಬಾಳೆಕಾಯಿ, ಉಪ್ಪು, ಕಾರ, ಕಡಲೆ ಹಿಟ್ಟು, ಇಂಗು, ಜೀರಿಗೆ ಜೊತೆಗೆ ಚಪಾತಿ ಮಾಡುವ ತವಾ ಇಷ್ಟಿದ್ದರೆ ಸಾಕು.
ಮಾರ್ಗಶಿರ ಮಾಸ ಪ್ರಾರಂಭವಾಗಿ ಮಾಗಿಯ ಚಳಿ ಮೈಕೊರೆಯುತ್ತಿದ್ದರೆ ನಾಲಿಗೆ ಚುರುಚುರು ಅನ್ನಿಸುವುದಕ್ಕೆ ಪ್ರಾರಂಭಿಸುತ್ತದೆ. ಪ್ರತಿದಿನ ಮನೆಗೆಲಸ ಮಾಡಿ ದುಡಿದು ಹಣ್ಣಾದ ಹೆಂಡತಿ, ತಾಯಿ, ಅಕ್ಕ-ತಂಗಿಯರನ್ನು ಅಡುಗೆಮನೆಯಿಂದ ಒಂದು ಸಾಯಂಕಾಲ ಹೊರಕ್ಕಟ್ಟಿ ಶಭಾಷ್ಗಿರಿಪಡೆಯಲು ಗಂಡಸರಿಗೆ ಇದು ಒಳ್ಳೇ ಅವಕಾಶ.
ನೆನಪಿರಲಿ, ಇದಕ್ಕೆ ತಗಲುವ ಸಮಯ ಕೂಡ ಅತಿ ಕಡಿಮೆ. ನಿಮ್ಮ ಹೆಂಡತಿ ಅಡುಗೆಮನೆಯಿಂದ ಹೊರಬಂದು ಮುಖ ತೊಳೆದು, ಕುಂಕುಮ ಇಟ್ಟು, ಹೂಮುಡಿದು ರೆಡಿಯಾಗಿ ಬರುವುದರೊಳಗಾಗಿ ಗರಿಗರಿ, ಬಿಸಿಬಿಸಿಯಾದ ಕಾಪು ರೆಡಿಯಾಗಿರುತ್ತದೆ! ಇನ್ನೊಂದು ಮಾತು ನೆನಪಿರಲಿ, ಇದು ಯಾರು ಬೇಕಾದರೂ ಮಾಡಬಹುದು.
ಬೇಕಾಗುವ ಸಾಮಗ್ರಿಗಳು :
ನಾಲ್ಕು ಬಾಳೆಕಾಯಿ
ಉಪ್ಪು, ಕಾರ, ಇಂಗು, ಕಡಲೆಹಿಟ್ಟು, ಜೀರಿಗೆ - ಎಲ್ಲ ಚಿಟಿಕೆಯಷ್ಟು
ಮಾಡುವ ವಿಧಾನ :
ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು, ಗಾಲಿ ರೂಪದಲ್ಲಿ ಕತ್ತರಿಸಿಕೊಳ್ಳಬೇಕು. ಅವುಗಳ ಮೇಲೆ ಉಪ್ಪು, ಕಾರ, ಕಡಲೆಹಿಟ್ಟು, ಜೀರಿಗೆ ಎಲ್ಲ ಸ್ವಲ್ಪ ಪ್ರಮಾಣದಲ್ಲಿ ಉದುರಿಸಿ ಕಾಯ್ದ ತವಾದ ಮೇಲೆ ಇರಿಸಬೇಕು. ಅವುಗಳ ಮೇಲೆ ದೋಸೆಯ ಮೇಲೆ ಹುಯ್ದಂತೆ ಶೇಂಗಾಎಣ್ಣೆಯನ್ನು ಹಾಕಿ ಚೆನ್ನಾಗಿ ತಾಳಿಸಬೇಕು. ದಟ್ಸಾಲ್! ರೆಡಿ. ಇಷ್ಟೇನಾ ಅಂತ ಆಶ್ಚರ್ಯಪಡಬೇಡಿ. ನಮ್ಮಪ್ಪನಾಣೆಗೂ ಇಷ್ಟೇ.
ಮುಂದಿನ ಆದಿತ್ಯವಾರ ಮತ್ತೊಂದು ಹೊಸರುಚಿಯನ್ನು ನೋಡೋಣ, ಅಲ್ಲಿಯವರೆಗೆ ಬಾಳೆಕಾಯಿ ಕಾಪನ್ನು ಮೆಲ್ಲುತಿರೋಣ.



Click it and Unblock the Notifications











