Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅರಿಶಿಣವು ಸರ್ವರೋಗಗಳನ್ನು ನಿವಾರಿಸಿ ತಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೌಂದರ್ಯವರ್ಧಕವೂ ಹೌದು, ಆರೋಗ್ಯವರ್ಧಕವೂ ಹೌದು. ಹಾಗಾಗಿ ಗಾಯ ನಿವಾರಕವೂ ಹೌದು, ಅಲರ್ಜಿ ನಿವಾರಕವೂ ಹೌದು. ಇದರ ಪ್ರಯೋಜನಗಳ ಪಟ್ಟಿ ಬಹಳ ಉದ್ದವಿದೆ.

ಅಡುಗೆಯಲ್ಲೂ ಕೂಡ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅಡುಗೆ ಮನೆಯ ಸಾಂಬಾರ ಪದಾರ್ಥಗಳಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನ. ಅರಿಶಿಣದ ಗಡ್ಡೆಗಳಿಂದ ತಯಾರಿಸುವ ಪುಡಿ ಮಾತ್ರವಲ್ಲ ಬದಲಾಗಿ ಅರಿಶಿಣದ ಎಲೆಗಳಲ್ಲೂ ಕೂಡ ಬಹಳ ಶಕ್ತಿ ಇದೆ. ಅದರ ಘಮವೇ ಬಹಳ ಉತ್ತಮವಾಗಿರುತ್ತದೆ. ಅರಿಶಿಣದ ಎಲೆಯನ್ನು ಬಳಸಿ ಮಾಡುವ ಕಡುಬು ನೀವು ಕೇಳಿರಬಹುದು.

ಪಾಯಸ ಮಾಡುವಾಗ ಅರಿಶಿಣದ ಎಲೆಯನ್ನು ಪಾಯಸಕ್ಕೆ ಘಮ ಹೆಚ್ಚಿಸುವುದಕ್ಕೆ ಬಳಸಲಾಗುತ್ತದೆ. ಅದೇ ರೀತಿ ಅರಿಶಿಣದ ಎಲೆಯಿಂದ ತಂಬಳಿಯನ್ನೂ ಮಾಡಬಹುದು. ಅರೆ ಅರಿಶಿಣದ ಎಲೆಯ ತಂಬಳಿಯೇ ಎಂದು ಹುಬ್ಬೇರಿಸಬೇಡಿ. ಹೌದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ತಂಬಳಿಯನ್ನು ಮಾಡುವುದು ಹೇಗ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Tambuli
Serves: 3
-
ಬೇಕಾಗುವ ಸಾಮಗ್ರಿಗಳು
ಅರಿಶಿಣದ ಎಲೆಯ ಎಳೆಯ ಕುಡಿಗಳು- ಐದರಿಂದ ಆರು
ಕಾಳುಮೆಣಸು- ಐದಾರು
ಜೀರಿಗೆ- ಒಂದು ಸ್ಪೂನ್
ತೆಂಗಿನ ಕಾಯಿತುರಿ- ಒಂದು ಮುಷ್ಠಿ
ಕಡೆದ ಮಜ್ಜಿಗೆ- ಕಾಲು ಲೀಟರ್
ಬೆಲ್ಲ- ನಾಲ್ಕು ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಬೆಣ್ಣೆ - ನಾಲ್ಕು ಸ್ಪೂನ್
-
ಮಾಡುವ ವಿಧಾನ
ಅರಿಶಿನಣದ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ನಂತರ ಅದನ್ನು ಚಿಟಿಕೆ ಬೆಣ್ಣೆ ಹಾಕಿ ಹುರಿಯಿರಿ.
ಅದಕ್ಕೆ ಕಾಳುಮೆಣಸು, ಕಾಯಿತುರಿ,ಜೀರಿಗೆ ಹಾಕಿ ಹುರಿಯಿರಿ.
ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣದ ಜೊಗಟಿಯನ್ನು ಸೋಸಿಕೊಳ್ಳಿ.
ಸೋಸದೆಯೂ ಬಳಸಬಹುದು. ನಂತರ ಈ ರಸಕ್ಕೆ ಉಪ್ಪು,ಬೆಲ್ಲ ಮತ್ತು ಕಡೆದ ಮಜ್ಜಿಗೆ ಸೇರಿಸಿ ಚೆನ್ನಾಗಿ ಕೈಯಾಡಿ.
ನಂತರ ಬೆಣ್ಣೆಗೆ ಸ್ವಲ್ಪ ಜೀರಿಗೆ ಹಾಕಿ ಒಗ್ಗರಣೆ ಮಾಡಿದರೆ ಅರಿಶಿಣದ ಎಲೆ ತಂಬಳಿ ಸವಿಯಲು ಸಿದ್ಧ.
- ಅರಿಶಿಣದ ಎಲೆಯ ತಂಬಳಿ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಗಾಯವನ್ನು ಗುಣಗೊಳಿಸುವ ಶಕ್ತಿ ಇದಕ್ಕಿದೆ. ಊರಿಯೂತ ತಡೆಯುವ ಶಕ್ತಿ ಇದೆ. ಚರ್ಮದ ಕಾಂತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
- ಕ್ಯಾಲೋರಿ - - 29
- ಪ್ರೊಟೀನ್ - - 0.91ಗ್ರಾಮ್



Click it and Unblock the Notifications