Latest Updates
-
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಬಿಸಿಗಾಳಿ ಅಥವಾ ಭಾರಿ ಮಳೆ: ಮನೆಯಲ್ಲೇ ಫಿಟ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಜೂನ್ 11-12ರಂದು ಭಾರಿ ಮಳೆ: ಮದುವೆ ಸಮಾರಂಭಗಳಿಗೆ ಆತಂಕ, ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸಗಳನ್ನು ಮಾಡಿ! -
ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಕ್ರಮ ಪಾಲಿಸಿ: ರೋಗಗಳಿಂದ ದೂರವಿರಲು ಸರಳ ಟಿಪ್ಸ್ -
ದೆಹಲಿ ಮೆಟ್ರೋದಲ್ಲಿ ಬಟ್ಟೆಯ ವಿಚಾರಕ್ಕೆ ಕಿರುಕುಳ: ವೈರಲ್ ವಿಡಿಯೋದಿಂದ ಶುರುವಾಯ್ತು ಭಾರೀ ವಿವಾದ! -
ಸುಡುವ ಬಿಸಿಲಿನಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಮರೆಯದಿರಿ!
ಅತ್ತೇರಿ ಅವರೆಕಾಳು ಉಸಲಿ
ಅವರೆಕಾಯಿ ಉಪಯೋಗಿಸಿ ಮಾಡುವ ರುಚಿರುಚಿ ಅಡುಗೆಗಳಿಗೆ ಲೆಕ್ಕವಿಲ್ಲ. ಅವರೆಕಾಳಿನ ಕೋಡುಬಳೆ, ಹುಳಿ, ಬಸ್ಸಾರು, ಹಿದಕವರೆ ಬೇಳೆ ಸಾರು, ಅವರೆಕಾಳು ಮಸಾಲೆವಡೆ...ಹೀಗೇ ಪಟ್ಟಿ ಬೆಳೆಯುತ್ತಾ ಹೋಗಿ ಅವರೆಕಾಳಿನ ಉಸಲಿ ಬಳಿ ಬಂದು ನಿಲ್ಲುತ್ತದೆ!ಅದರ ರುಚಿ ಸವಿಯಬೇಕು ಅನ್ನಿಸುತ್ತದೆ.
- ಅರುಣಾ, ಮೈಸೂರು
ಅವರೆಕಾಯಿ ಕಾಲ ಇನ್ನೇನು ಮುಗೀತಾ ಇದೆ. ಅಡುಗೆ ಮನೆಯಲ್ಲಿ ಮಣಿಯಂತ ಅವರೆಯದ್ದೇ ಸಾಮ್ರಾಜ್ಯ. ,ಚಳಿನೂ ಸ್ವಲ್ಪ ಸ್ವಲ್ಪ ಕಮ್ಮಿ ಆಗ್ತಿದೆ. ರಾತ್ರಿಯ ಬೆಳದಿಂಗಳ ಜತೆಗೆ ಊಟಕ್ಕೆ ಅವರೆಕಾಳು ಉಸಲಿ ಇದ್ದರೆ ಇರುವ ಅಲ್ಪ ಸ್ವಲ್ಪ ಚಳಿ ನಿಮ್ಮಿಂದ ದೂರ ಸರಿಯುತ್ತದೆ. ತಡವೇಕೆ ಅವರೆಕಾಳಿನ ಉಸಲಿ ಮಾಡೋಣ ಬನ್ನಿ....
ಬೇಕಾಗುವ ಪಡಿಪದಾರ್ಥಗಳು:
ತಾಜಾ ಅವರೆಕಾಯಿಯ ಕಾಳು: 2 ಕಪ್ಪು
ಈರುಳ್ಳಿ : ಮಧ್ಯಮಗಾತ್ರದ ಎರಡು
ಹಸಿ ಮೆಣಸಿನ ಕಾಯಿ:ಒಂದು ಹಿಡಿ
ತೆಂಗಿನಕಾಯಿ ತುರಿ: ಒಂದು ಹಿಡಿ
ಜೀರಿಗೆ: ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಮೆಂತ್ಯ :ಅರ್ಧ ಚಮಚ
ಅರಿಶಿನ : ಎರಡು ಚಿಟಿಕೆ
ಎಣ್ಣೆ : 2 ಚಮಚ
ಬೆಣ್ಣೆ: ನಿಂಬೆಹಣ್ಣಿನ ಗಾತ್ರ
ತುಪ್ಪ.: 2 ಚಮಚ
ತಯಾರಿಸುವ ವಿಧಾನ :
ಅವರೆಕಾಳು, ಎಣ್ಣೆ, ಬೆಣ್ಣೆ, ತುಪ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ,ಹಾಗೂ ಹಸಿ ಮೆಣಸಿನಕಾಯಿಯನ್ನು ದಪ್ಪ ತಳ ಇರುವ ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ.ಪಾತ್ರೆಯನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಕಾಳು ಚೆನ್ನಾಗಿ ಬೆಂದ ಬಳಿಕ ಉಪ್ಪು, ತೆಂಗಿನಕಾಯಿ ತುರಿ, ಪುಡಿ ಮಾಡಿದ ಜೀರಿಗೆ, ಮೆಂತ್ಯ, ಅರಿಶಿನ ಹಾಕಿ.ನಂತರ, ಈ ಮಿಶ್ರಣವನ್ನು ಮತ್ತೊಮ್ಮೆ ಸಣ್ಣ ಉರಿಯ ಒಲೆಯ ಮೇಲೆ 10 ನಿಮಿಷ ಬೇಯಿಸಿ.ಪಾತ್ರೆಯ ಮೇಲೆ ಮುಚ್ಚಳ ಮುಚ್ಚುವುದನ್ನು ಮರೆಯಬೇಡಿ.
ಅರ್ಧಗಂಟೆಯಲ್ಲಿ, ರುಚಿಕರವಾದ ಅವರೆಕಾಳು ಉಸಲಿ ರೆಡಿ. ಅಗತ್ಯ ಇರುವವರು ಇಂಗು, ಸಾಸಿವೆ ಒಗ್ಗರಣೆ ಹಾಕಿಕೊಳ್ಳಬಹುದು.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications