Just In
- 1 hr ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 2 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 2 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 3 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವಿಯಲ್ : ಹೆಸರಷ್ಟೇ ವಿಚಿತ್ರ!
ಕೇರಳದಲ್ಲಿ ಎಲ್ಲೇ ಹೋಗಿ ಬಾಳೇಕಾಯಿ-ಕೊಬ್ಬರಿ ಎಣ್ಣೆ ವಾಸನೆ. ಕೊಬ್ಬರಿ ಎಣ್ಣೆ ತಲೆಗೆ ಹೊಯ್ದುಕೊಳ್ಳುವಂತೆ ಉದರಕ್ಕೂ ಉಪಯೋಗ ಅವರಲ್ಲಿ. ಕೇರಳಿಗರಿಗೆ ತಿರು ಓಣಂ ಈಗ ಮುಗಿದ ಸಂಭ್ರಮ. ಈ ಸಂದರ್ಭದಲ್ಲಿ ಅವಿಯಲ್ ಮುಖ್ಯ ಪಳದ್ಯ. ತಾಜಾ ತಾಜಾ ತರಕಾರಿ, ಕಾಯಿ-ಶುಂಠಿ ಮಸಾಲಾ, ಥಂಡೀ-ಥಂಡೀ ಗಟ್ಟಿ ಮೊಸರು..ಸೇರಿದರೆ ಹೇಗಿರುತ್ತೆ.. ಬಾಯಲ್ಲಿ ನೀರೂರತ್ತಾ.?
ಪದಾರ್ಥಗಳ ಪಟ್ಟಿ :
ಗಟ್ಟಿ
ಮೊಸರು
:
1
ಕಪ್
ತರಕಾರಿಗಳು
ಕ್ಯಾರೆಟ್
:1
ಕಪ್
ಹುರುಳೀಕಾಯಿ
:1
ಕಪ್
ಚೂರಣಗೆಡ್ಡೆ
:
1/2
ಕಪ್
ನುಗ್ಗೇಕಾಯಿ
:
2
ಬಟಾಣಿ
:
1/2
ಕಪ್
ಇವೇ ಅಲ್ಲದೆ ನಿಮಗಿಷ್ಟವಾದ ಸೀಮೆಬದನೆ, ಪಡುವಲ, ಹಲಸಿನ ಬೀಜ, ಅವರೆಕಾಳುಗಳನ್ನು ಸಹ ಉಪಯೋಗಿಸಬಹುದು. ತರಕಾರಿಗಳನ್ನು ಮಾತ್ರ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ.
ಮಸಾಲಾ ಸಾಮಾಗ್ರಿ :
ತುರಿದ
ತೆಂಗಿನಕಾಯಿ
:
1
ಕಪ್
ಜೀರಿಗೆ
:
1
ಟೀ
ಸ್ಪೂನ್
ಹಸಿರು
ಮೆ.ಕಾಯಿ
:
ಖಾರಕ್ಕೆ
ತಕ್ಕಂತೆ
ಶುಂಠಿ
:
ಚಿಕ್ಕ
ತುಂಡು
ಕೊತ್ತಂಬರಿ
ಸೊಪ್ಪು,
ಇವೆಲ್ಲವನ್ನೂ
ಸ್ವಲ್ಪ
ಗಟ್ಟಿಯಾಗಿ-ನುಣ್ಣಗೆ
ರುಬ್ಬಿಟ್ಟುಕೊಳ್ಳಿ.
ಮಾಡುವ ವಿಧಾನ :
ಹೆಚ್ಚಿದ ತರಕಾರಿಗಳಿಗೆ 2ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, 2ಸೀಟಿ ಕೂಗುವ ತನಕ ಕುಕ್ಕರಿನಲ್ಲಿ ಬೇಯಿಸಿ. ನಂತರ ರುಬ್ಬಿದ ಮಸಾಲೆಯನ್ನು ಬೆಂದ ತರಕಾರಿಗಳಿಗೆ ಸೇರಿಸಿ, ಮಂದ ಉರಿಯಲ್ಲಿ ಒಂದು ಕುದಿ ಬರುವ ತನಕ ಕುದಿಸಿ. ಸ್ವಲ್ಪ ಆರಿದ ನಂತರ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿ ಸ್ವಲ್ಪ ಬೆಚ್ಚಗಾಗುವ ತನಕ ಬಿಡಿ. ಬಡಿಸುವ ಮುನ್ನ ಅವಿಯಲ್ಗೆ 1 ಕಪ್ ಗಟ್ಟಿ ಮೊಸರು ಬೆರೆಸಿ ಚೆನ್ನಾಗಿ ಕಲಸಿ ಬಡಿಸಿ.
ಚಪಾತಿ, ಬಿಸಿ-ಬಿಸಿ ಅನ್ನ, ಖಾರದ ದೋಸೆ, ಪೂರಿ, ಪೊಂಗಲ್ ಎಲ್ಲದರೊಡನೆಯೂ ಸವಿ-ಸವಿ ಈ ಅವಿಯಲ್.
(ದಟ್ಸ್ ಕನ್ನಡ ಪಾಕಶಾಲೆ)