Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಆಲೂ ಖೀಮಾ ರೆಸಿಪಿ, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರದಲ್ಲಿ ಪರೋಟ ಅಥವಾ ರೊಟ್ಟಿಯೊಂದಿಗೆ ಆಲು ಖೀಮಾ ಇದ್ದರೆ ಇಡಿಯ ದಿನದ ಚಟುವಟಿಕೆಯಲ್ಲಿ ಶಕ್ತಿಯ ಕೊರತೆ ಉಂಟಾಗದು. ಏಕೆಂದರೆ ಖೀಮಾದಲ್ಲಿ ಅಧಿಕ ಪ್ರಮಾಣದಲ್ಲಿರುವ ಪ್ರೋಟೀನುಗಳು ನಿಧಾನವಾಗಿ ಜೀರ್ಣವಾಗುತ್ತಾ ದಿನದ ಚಟುವಟಿಕೆಗಳಲ್ಲಿ ಸಹಕರಿಸುತ್ತದೆ. ಅಲ್ಲದೇ ಇದರಲ್ಲಿ ಆಲುಗಡ್ಡೆಯನ್ನು ಪ್ರಮುಖವಾಗಿ ಬಳಸಿರುವುದರಿಂದ ಉತ್ತಮ ಪ್ರಮಾಣದ ಪಿಷ್ಟವೂ ದೊರಕುತ್ತದೆ.
ಉಪಾಹಾರದ ಹೊರತಾಗಿ ಮಧ್ಯಾಹ್ನದ ಮತ್ತು ರಾತ್ರಿಯೂಟದಲ್ಲಿಯೂ ಒಂದು ಪಲ್ಯದ ರೂಪದಲ್ಲಿ ಬಳಸಬಹುದಾದುದರಿಂದ ಎಲ್ಲರ ಮೆಚ್ಚುಗೆಯ ಖಾದ್ಯವಾಗಿದೆ. ಇಂದು ಇದನ್ನು ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ.
*ಪ್ರಮಾಣ: ನಾಲ್ವರಿಗಾಗಿ
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಮೂವತ್ತು ನಿಮಿಷಗಳು ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!

ಅಗತ್ಯವಿರುವ ಸಾಮಾಗ್ರಿಗಳು:
*ಈರುಳ್ಳಿ - 2
*ಖೀಮಾ 500 ಗ್ರಾಂ (ಕೋಳಿಮಾಂಸ/ಕುರಿಮಾಂಸ ಅಥವಾ ಬೀಫ್)
*ಆಲುಗಡ್ಡೆ - 300 ಗ್ರಾಮ್
*ಹಸಿಶುಂಠಿ ಪೇಸ್ಟ್ - 1 ಚಿಕ್ಕಚಮಚ
*ಬೆಳ್ಳುಳ್ಳಿ ಪೇಸ್ಟ್ - 1 ಚಿಕ್ಕಚಮಚ
*ಒಣಮೆಣಸಿನ ಪುಡಿ - 2 ಚಿಕ್ಕಚಮಚ
*ಕೊತ್ತೊಂಬರಿ ಪುಡಿ - 1 ಚಿಕ್ಕಚಮಚ
*ಅರಿಶಿನ ಪುಡಿ - ½ ಚಿಕ್ಕಚಮಚ
*ಮೊಸರು - 2 ಚಿಕ್ಕಚಮಚ
*ಟೊಮೇಟೊ - 1 ಕಪ್ (ಚಿಕ್ಕದಾಗಿ ತುಂಡುಮಾಡಿದ್ದು)
*ಗರಂ ಮಸಾಲಾ ಪುಡಿ - 1 ಚಿಕ್ಕಚಮಚ
*ಹಸಿ ಮೆಣಸು - 1
*ಕೊತ್ತಂಬರಿ ಸೊಪ್ಪು -ಅರ್ಧ ಕಟ್ಟು (ಚಿಕ್ಕದಾಗಿ ಹೆಚ್ಚಿದ್ದು)
*ಉಪ್ಪು - ರುಚಿಗನುಸಾರ
*ಅಡುಗೆ ಎಣ್ಣೆ - ಎರಡರಿಂದ ಮೂರು ದೊಡ್ಡ ಚಮಚ
ವಿಧಾನ:
1) ಒಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ
2) ಇದಕ್ಕೆ ಖೀಮಾ ಹಾಕಿ ಎರಡು ನಿಮಿಷ ಹುರಿಯಿರಿ.
3) ಇದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಹಾಕಿ ಮಧ್ಯಮ ಉರಿಯಲ್ಲಿ ಐದು ನಿಮಿಷ ತಿರುವಿ.
4) ಇದಕ್ಕೆ ಉಳಿದ ಎಲ್ಲಾ ಸಾಮಾಗ್ರಿ ಮತ್ತು ಉಪ್ಪು ಹಾಕಿ ತಿರುವಿ ಚೆನ್ನಾಗಿ ಮಿಶ್ರಣ ಮಾಡಿ
5) ಒಂದು ಕಪ್ ನೀರು ಹಾಕಿ ಸುಮಾರು ಐದು ನಿಮಿಷ ಮದ್ಯಮ ಉರಿಯಲ್ಲಿ ಬೇಯಿಸಿ
6) ನೀರು ಪೂರ್ಣವಾಗಿ ಇಂಗುವವರೆಗೆ ತಿರುವಿದ ಬಳಿಕ ಟೊಮೇಟೊ ಮತ್ತು ಮೊಸರು ಹಾಕಿ ಹತ್ತು ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
7) ಈಗ ಆಲುಗಡ್ಡೆ ಹಾಕಿ ತಿರುವಿ ಒಂದೂವರೆ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಹದಿನೈದು ನಿಮಿಷ ಅಥವಾ ಆಲುಗಡ್ಡೆ ಬೇಯುವವರೆಗೆ ಬೇಯಿಸಿ.
8) ಈಗ ಗರಂ ಮಸಾಲಾ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ತಿರುವಿ ಒಲೆ ನಂದಿಸಿ.
9) ಬಿಸಿ ಬಿಸಿ ಇದ್ದಂತೆಯೇ ರೊಟ್ಟಿ, ಪರೋಟ, ನಾನ್ ಅಥವಾ ಅನ್ನದೊಂದಿಗೆ ಬಡಿಸಿ.
ಸಲಹೆ
1) ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪೋಷಕಾಂಶಗಳಿರುವುದರಿಂದ ತೂಕ ಇಳಿಸುವವರಿಗೆ ಇದು ಸೂಕ್ತವಲ್ಲ.
2) ಬಡಿಸುವ ವೇಳೆ ಇದರ ಮೇಲೆ ಒಂದು ಚಮಚ ಕ್ರೀಂ ಹಾಕಿದರೆ ಇನ್ನಷ್ಟು ರುಚಿಯಾಗುತ್ತದೆ.



Click it and Unblock the Notifications
