Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಗಸಗಸೆ ಹಾಲು, ಮಾವಿನಕಾಯಿ ಶರಬತ್ತು, ಪಪ್ಪಾಯಿ ಜ್ಯೂಸ್

* ಶಾಂತಾ ಬಟವಿ, ಹಾವೇರಿ
ಗಸಗಸೆ ಹಾಲು
ಬೇಕಾಗುವ ಪದಾರ್ಥಗಳು :
ಗಸಗಸೆ- 50 ಗ್ರಾಂ
ಸಕ್ಕರೆ- 100 ಗ್ರಾಂ
ಏಲಕ್ಕಿ- 7
ಶುಂಠಿ- ಒಂಚೂರು
ಮಾಡುವ ವಿಧಾನ : ರಾತ್ರಿ ಮಲಗುವ ಮುನ್ನ ಗಸಗಸೆಯನ್ನು ನೆನೆಹಾಕಿರಿ. ಮರುದಿನ ನೀರೆಲ್ಲ ಬಸಿದು ಮಿಕ್ಸಿಯಲ್ಲಿ ಶುಂಠಿ, ಗಸಗಸೆ, ಏಲಕ್ಕಿ ಮೂರನ್ನೂ ಸೇರಿಸಿ ಗ್ರೈಂಡ್ ಮಾಡಿ, ಸೋಸಿಕೊಳ್ಳಿ. ಹೀಗೆ 2-3 ಬಾರಿ ಮಾಡಿ ನಂತರ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಐಸ್ ತುಂಡುಗಳನ್ನು ಹಾಕಿ ಕೊಡುವುದರಿಂದ ಬಿಸಿಲಿನಲ್ಲಿ ದಣಿದವರಿಗೆ ಆಯಾಸವನ್ನೂ, ದಣಿವನ್ನು ನೀಗಿಸಿ ದೇಹಕ್ಕೆ ತಂಪೆರೆಯುತ್ತದೆ. ಚೆನ್ನಾದ ನಿದ್ದೆಯೂ ಬರುತ್ತದೆ.
ಮಾವಿನಕಾಯಿ ಶರಬತ್ತು
ಬೇಕಾಗುವ ಸಾಮಾನುಗಳು :
ಮಾವಿನಕಾಯಿ, ಸಕ್ಕರೆ, ಏಲಕ್ಕಿ-8
ಮಾಡುವ ವಿಧಾನ : ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ಬೇಯಿಸಬೇಕು. ನಂತರ ಸಿಪ್ಪೆ , ವಾಟೆ ತೆಗೆದು ರಸವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿ ಸೋಸಿಕೊಳ್ಳಬೇಕು. ನಂತರ ಸಕ್ಕರೆ ಹಾಕಿ ಕರಗಿಸಬೇಕು. ಇದಕ್ಕೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಸೇರಿಸಬೇಕು. ಮಾವಿನಕಾಯಿ ಹುಳಿ ಇದ್ದರೆ ಇನ್ನೂ ಸ್ವಲ್ಪ ಸಕ್ಕರೆಯನ್ನು ಸೇರಿಸಬಹುದು. ಐಸ್ ತುಂಡು ಸೇರಿಸಿ ಸೇವಿಸಿದರೆ ತುಂಬಾ ಹಿತವೆನಿಸುತ್ತದೆ. ಬೇಕಾದಲ್ಲಿ ಬಣ್ಣ ಸೇರಿಸಬಹುದು.
ಪಪ್ಪಾಯಿ ಜ್ಯೂಸ್
ಬೇಕಾಗುವ ಪದಾರ್ಥಗಳು :
ಪರಂಗಿ ಅಥವಾ ಪಪ್ಪಾಯಿ- 1 ಹಣ್ಣು
ಹಾಲು- 1 ಲೋಟ
ಸಕ್ಕರೆ, ಏಲಕ್ಕಿ ಹಾಗೂ ಗೋಡಂಬಿ ಚೂರುಗಳು.
ಮಾಡುವ ವಿಧಾನ : ಚೆನ್ನಾಗಿ ಹಣ್ಣಾದ ಒಂದು ಹಣ್ಣನ್ನು ತೊಳೆದು, ಸಿಪ್ಪೆ ಮತ್ತು ಬೀಜ ತೆಗೆದು, ಕತ್ತರಿಸಿ. ತುಂಡು ಮಾಡಿದ ಹಣ್ಣಿನ ಹೋಳುಗಳನ್ನು ಮಿಕ್ಸಿ ಯಲ್ಲಿ ರುಬ್ಬಿ , ಪಾತ್ರೆಗೆ ಸುರಿಯಿರಿ. ಸಕ್ಕರೆ, ಹಾಲು ಹಾಕಿ ಮಿಶ್ರಣ ಮಾಡಿ. ಸಕ್ಕರೆ ಕರಗಿದ ನಂತರ ಏಲಕ್ಕಿ ಪುಡಿ ಸೇರಿಸಿ, ಐಸ್ ತುಂಡುಗಳನ್ನು ಹಾಕಿ. ಗೋಡಂಬಿಯನ್ನು ಚೂರು ಚೂರು ಮಾಡಿ ಅಲಂಕರಿಸಿ. ಅತಿಥಿ ಅಭ್ಯಾಗತರಿಗೂ, ಬಿಸಿಲಲ್ಲಿ ದಣಿದವರಿಗೆ ಇದು ಉತ್ತಮ ಪಾನೀಯವಾಗಬಲ್ಲದು. ಇದರಲ್ಲಿ ಎ ಮತ್ತು ಸಿ ಜೀವಸತ್ವ ಹೆಚ್ಚಾಗಿ ಇರುವುದರಿಂದ ಕಣ್ಣುಗಳಿಗೆ ಒಳ್ಳೆಯದು.



Click it and Unblock the Notifications