Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕನ್ನಡ ಹುಡುಗರ ಸಾಂಬಾರ್ ಸರೋಜ

ನಮ್ಮ ಫ್ಲ್ಯಾಟ್ ನ ಕೆಳಬದಿಯಲ್ಲಿ ಒಂದು ವಾಚ್ ಮನ್ ಶೆಡ್ ಇದೆ. ಅಲ್ಲಿ ಕಾವಲುಗಾರನ ಒಂದು ಸಂಸಾರ ಇದೆ. ಇವರು ಯೂನಿಫಾರಂ ಧರಿಸಿ, ಕೋಲು ಹಿಡಿದು ಕೆಲಸ ಮಾಡುವ ಸೆಕ್ಯೂರಿಟಿ ಟೈಪ್ ಅಲ್ಲ. ಕಟ್ಟಡ ನಿರ್ಮಾಣದ ಎಲ್ಲ ಕೆಲಸಗಳು ಮುಗಿದ ನಂತರ, ಫ್ಲಾಟ್ ಓನರ್ ಹೇಳಿದ ತಕ್ಷಣ ಜಾಗ ಖಾಲಿ ಮಾಡಬೇಕು. ಗಂಡನ ಹೆಸರು ವೇಲು, ಅವನ ಹೆಂಡತಿ ಸರೋಜ. ಮಕ್ಕಳಿಲ್ಲ. ತಾವೂ ಗಾರೆ ಕೆಲಸ ಮಾಡುವುದು ಮತ್ತು ನಿರ್ಮಾಣ ಸಾಮಗ್ರಿಗಳನ್ನು ದಿನರಾತ್ರಿ ಕಾಯುವುದು ಅವರ ಡ್ಯೂಟಿ. ಶನಿವಾರ ಸಂಬಳ. ಜಿಂಕ್ ಶೀಟ್ ರೂಮಿನಲ್ಲಿ ಹರಕ ಪುರುಕು ಸಾಮಾನು ಸರಂಜಾಮು, ಅಡುಗೆ, ಸ್ನಾನ, ನಿದ್ದೆ, ಎಲ್ಲ.
ಸರೋಜ ಯಾವಾಗಲೂ ಏನಾದರೊಂದು ಕೆಲಸ ಮಾಡುತ್ತಲೇ ಇರುವ ಮಹಿಳೆ. ಉಪಸಂಪಾದನೆಗಾಗಿ ನಮ್ಮ ಫ್ಲ್ಯಾಟ್ ನಲ್ಲಿರುವ ಎರಡು ಮನೆಯವರ ಬಟ್ಟೆಗಳನ್ನು ಒಗೆಯುವರು. ಇಬ್ಬರೂ ಹೆಚ್ಚು ಮಾತಾಡುವುದಿಲ್ಲ. ಕಾಂಪೌಂಡಿನಲ್ಲಿ ಬಟ್ಟೆ ತೊಳೆದು ತಂತಿಯ ದಾರದ ಮೇಲೆ ಒಣಗಿಹಾಕಿ, ಕ್ಲಿಪ್ ಹಾಕಿ ಒಣಗಿಸಿ ಆಮೇಲೆ ಮಡಿಚಿಕೊಡುವರು. ಇಸ್ತ್ರಿ ಮಾಡುವ ಬಟ್ಟೆಗಳನ್ನು ಅಲ್ಲೇ ಇರುವ ಗೋವಿಂದರಾಜು ಅಂಗಡಿಗೆ ಕೊಟ್ಟು ಇಸ್ತ್ರಿ ಮಾಡಿಸಿ ಮನೆಗೆ ತರುವುದು. ನಾವು ಮನೆಯಲ್ಲಿ ಇಲ್ಲದಿದ್ದರೆ ರಾತ್ರಿ ನಮ್ಮ ಬಟ್ಟೆಗಳನ್ನು ಅವರ ಮನೆಯಲ್ಲೇ ಇಟ್ಟುಕೊಂಡು ಮಾರನೆ ದಿನ ನಾವು ಎದ್ದ ನಂತರ ತಂದು ಒಪ್ಪಿಸುವರು.
ಸರೋಜ ಮತ್ತು ವೇಲು ಅವರಿಗೆ ನಮ್ಮ ಊಟ ತಿಂಡಿ ವ್ಯವಸ್ಥೆಯ ಬಗ್ಗೆ ಸದ್ದುಮಾಡದ ಕುತೂಹಲವಿದೆ. ನಮ್ಮ ಅಡುಗೆ ಸೆಟ್ ಹಾಗೂ ಖಾಲಿ ಪಾತ್ರೆಗಳನ್ನು ನೋಡಿ ಅವರಿಗೆ ಹೇಳಲಾಗದ ಬೇಸರ. "ಇಷ್ಟೆಲ್ಲ ಇದ್ದೂ ಇವರು ನಿತ್ಯ ಅಡುಗೆ ಮಾಡುವುದಿಲ್ಲ, ಊಟ ಹೇಗೆ ಮಾಡ್ತಾರೆ" ಎಂಬ ಕುತೂಹಲ ಅವರಿಗೆ ಇದ್ದೇಇತ್ತು. ಕಳೆದ ವಾರ ವಿಜಯದಶಮಿ ಹಬ್ಬದ ದಿವಸ ನಾವು ಊರಿಗೆ ಹೋಗದೆ ಫ್ಲಾಟ್ ನಲ್ಲೇ ಇಡೀ ದಿನ ಸೋಮಾರಿಗಳಾಗಿ ಇದ್ದೆವು. ಆಫೀಸಿನಲ್ಲಿ ಕೊಟ್ಟಿದ್ದ ಆಯುಧ ಪೂಜೆ ಸಿಹಿ ಖಾರಾ ತಿಂಡಿ ಪ್ಯಾಕೆಟ್ಟುಗಳನ್ನು ವೇಲುಗೆ ಕೊಟ್ಟೆವು.
ವಿಜಯದಶಮಿ ದಿವಸ ಮಧ್ಯಾನ್ಹ ಸರೋಜ ನಮ್ಮ ಮನೆಗೆ ಬಂದು ಇಸ್ತ್ರಿ ಮಾಡಿದ ಬಟ್ಟೆ ಕೊಟ್ಟರು. ಆಗ ನಮ್ಮ ಮನೆಯ ರೈಸ್ ಕುಕ್ಕರ್ ಕೂಗಿದ ಶಬ್ದ ಅವರಿಗೆ ಕೇಳಿಸಿತು. ಸಾಂಬಾರ್ ಪಣ್ಣಿಟ್ಟಿರಿಂಗಳಾ ಎಂದು ಕೇಳಿದರು. ನಾವು ಇಲ್ಲ ಎಂದು ಕೈಸನ್ನೆ ತಲೆ ಸನ್ನೆಯಲ್ಲಿ ಹೇಳಿ ಟಿವಿ ನೋಡುತ್ತಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ಸರೋಜ ಅವರು ಒಂದು ಸ್ಟೀಲ್ ಕ್ಯಾರಿಯರ್ನಲ್ಲಿ ಸಾಂಬಾರ್ ತಂದು ಅಡುಗೆ ಕಟ್ಟೆ ಮೇಲಿಟ್ಟು ಸಾಪಾಟಂಗೋ ಸಾರ್ ಎಂದರು.
ನಮಗೆ ಏನು ಹೇಳಲು ಗೊತ್ತಾಗಲಿಲ್ಲ. ಥ್ಯಾಂಕ್ಯೂ ಅಂದುಬಿಟ್ಟೆವು. ಥ್ಯಾಂಕ್ಯೂ ಪದದ ಬದಲಾಗಿ ಬೇರೆ ಏನಾದರೂ ಹೇಳಬೇಕಾಗಿತ್ತು ಎಂದೆನಿಸಿತಾದರೂ ನಮಗೆ ತಮಿಳು ಭಾಷೆ ಬರದ ಕಾರಣ ಸುಮ್ಮನಾದೆವು. ವಿಜಯ ದಶಮಿಯ ದಿವಸ ಲಂಚ್ ಮತ್ತು ಡಿನ್ನರ್ರಿಗೆ ಸರೋಜ ವೇಲು ಮನೆಯ ಸಾಂಬಾರ್ ಸವಿಯುವ ಯೋಗ ನಮ್ಮ ಹಣೆಯಲ್ಲಿ ಬರೆದಿತ್ತು. ಮತ್ತೆ ಇನ್ನೊಂದು ಭಾನುವಾರ ಬಂದಾಗ ನಾವು ಕೆಳಗೆ ಹೋಗಿ ಸಾಂಬಾರು ತುಂಬಾ ತುಂಬಾ ಚೆನ್ನಾಗಿತ್ತು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿ ಸಾಂಬಾರು ಮಾಡುವ ವಿಧಾನ ಹೇಗೆ ಎಂದು ಕೇಳಿದೆವು. ಸರೋಜ ಅವರು ನಮಗೆ ತಿಳಿಸಿದ ಸಾಂಬಾರು ರೆಸಿಪಿ ಹೀಗಿದೆ .



Click it and Unblock the Notifications