Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಕನ್ನಡ ಹುಡುಗರ ಸಾಂಬಾರ್ ಸರೋಜ

ನಮ್ಮ ಫ್ಲ್ಯಾಟ್ ನ ಕೆಳಬದಿಯಲ್ಲಿ ಒಂದು ವಾಚ್ ಮನ್ ಶೆಡ್ ಇದೆ. ಅಲ್ಲಿ ಕಾವಲುಗಾರನ ಒಂದು ಸಂಸಾರ ಇದೆ. ಇವರು ಯೂನಿಫಾರಂ ಧರಿಸಿ, ಕೋಲು ಹಿಡಿದು ಕೆಲಸ ಮಾಡುವ ಸೆಕ್ಯೂರಿಟಿ ಟೈಪ್ ಅಲ್ಲ. ಕಟ್ಟಡ ನಿರ್ಮಾಣದ ಎಲ್ಲ ಕೆಲಸಗಳು ಮುಗಿದ ನಂತರ, ಫ್ಲಾಟ್ ಓನರ್ ಹೇಳಿದ ತಕ್ಷಣ ಜಾಗ ಖಾಲಿ ಮಾಡಬೇಕು. ಗಂಡನ ಹೆಸರು ವೇಲು, ಅವನ ಹೆಂಡತಿ ಸರೋಜ. ಮಕ್ಕಳಿಲ್ಲ. ತಾವೂ ಗಾರೆ ಕೆಲಸ ಮಾಡುವುದು ಮತ್ತು ನಿರ್ಮಾಣ ಸಾಮಗ್ರಿಗಳನ್ನು ದಿನರಾತ್ರಿ ಕಾಯುವುದು ಅವರ ಡ್ಯೂಟಿ. ಶನಿವಾರ ಸಂಬಳ. ಜಿಂಕ್ ಶೀಟ್ ರೂಮಿನಲ್ಲಿ ಹರಕ ಪುರುಕು ಸಾಮಾನು ಸರಂಜಾಮು, ಅಡುಗೆ, ಸ್ನಾನ, ನಿದ್ದೆ, ಎಲ್ಲ.
ಸರೋಜ ಯಾವಾಗಲೂ ಏನಾದರೊಂದು ಕೆಲಸ ಮಾಡುತ್ತಲೇ ಇರುವ ಮಹಿಳೆ. ಉಪಸಂಪಾದನೆಗಾಗಿ ನಮ್ಮ ಫ್ಲ್ಯಾಟ್ ನಲ್ಲಿರುವ ಎರಡು ಮನೆಯವರ ಬಟ್ಟೆಗಳನ್ನು ಒಗೆಯುವರು. ಇಬ್ಬರೂ ಹೆಚ್ಚು ಮಾತಾಡುವುದಿಲ್ಲ. ಕಾಂಪೌಂಡಿನಲ್ಲಿ ಬಟ್ಟೆ ತೊಳೆದು ತಂತಿಯ ದಾರದ ಮೇಲೆ ಒಣಗಿಹಾಕಿ, ಕ್ಲಿಪ್ ಹಾಕಿ ಒಣಗಿಸಿ ಆಮೇಲೆ ಮಡಿಚಿಕೊಡುವರು. ಇಸ್ತ್ರಿ ಮಾಡುವ ಬಟ್ಟೆಗಳನ್ನು ಅಲ್ಲೇ ಇರುವ ಗೋವಿಂದರಾಜು ಅಂಗಡಿಗೆ ಕೊಟ್ಟು ಇಸ್ತ್ರಿ ಮಾಡಿಸಿ ಮನೆಗೆ ತರುವುದು. ನಾವು ಮನೆಯಲ್ಲಿ ಇಲ್ಲದಿದ್ದರೆ ರಾತ್ರಿ ನಮ್ಮ ಬಟ್ಟೆಗಳನ್ನು ಅವರ ಮನೆಯಲ್ಲೇ ಇಟ್ಟುಕೊಂಡು ಮಾರನೆ ದಿನ ನಾವು ಎದ್ದ ನಂತರ ತಂದು ಒಪ್ಪಿಸುವರು.
ಸರೋಜ ಮತ್ತು ವೇಲು ಅವರಿಗೆ ನಮ್ಮ ಊಟ ತಿಂಡಿ ವ್ಯವಸ್ಥೆಯ ಬಗ್ಗೆ ಸದ್ದುಮಾಡದ ಕುತೂಹಲವಿದೆ. ನಮ್ಮ ಅಡುಗೆ ಸೆಟ್ ಹಾಗೂ ಖಾಲಿ ಪಾತ್ರೆಗಳನ್ನು ನೋಡಿ ಅವರಿಗೆ ಹೇಳಲಾಗದ ಬೇಸರ. "ಇಷ್ಟೆಲ್ಲ ಇದ್ದೂ ಇವರು ನಿತ್ಯ ಅಡುಗೆ ಮಾಡುವುದಿಲ್ಲ, ಊಟ ಹೇಗೆ ಮಾಡ್ತಾರೆ" ಎಂಬ ಕುತೂಹಲ ಅವರಿಗೆ ಇದ್ದೇಇತ್ತು. ಕಳೆದ ವಾರ ವಿಜಯದಶಮಿ ಹಬ್ಬದ ದಿವಸ ನಾವು ಊರಿಗೆ ಹೋಗದೆ ಫ್ಲಾಟ್ ನಲ್ಲೇ ಇಡೀ ದಿನ ಸೋಮಾರಿಗಳಾಗಿ ಇದ್ದೆವು. ಆಫೀಸಿನಲ್ಲಿ ಕೊಟ್ಟಿದ್ದ ಆಯುಧ ಪೂಜೆ ಸಿಹಿ ಖಾರಾ ತಿಂಡಿ ಪ್ಯಾಕೆಟ್ಟುಗಳನ್ನು ವೇಲುಗೆ ಕೊಟ್ಟೆವು.
ವಿಜಯದಶಮಿ ದಿವಸ ಮಧ್ಯಾನ್ಹ ಸರೋಜ ನಮ್ಮ ಮನೆಗೆ ಬಂದು ಇಸ್ತ್ರಿ ಮಾಡಿದ ಬಟ್ಟೆ ಕೊಟ್ಟರು. ಆಗ ನಮ್ಮ ಮನೆಯ ರೈಸ್ ಕುಕ್ಕರ್ ಕೂಗಿದ ಶಬ್ದ ಅವರಿಗೆ ಕೇಳಿಸಿತು. ಸಾಂಬಾರ್ ಪಣ್ಣಿಟ್ಟಿರಿಂಗಳಾ ಎಂದು ಕೇಳಿದರು. ನಾವು ಇಲ್ಲ ಎಂದು ಕೈಸನ್ನೆ ತಲೆ ಸನ್ನೆಯಲ್ಲಿ ಹೇಳಿ ಟಿವಿ ನೋಡುತ್ತಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ಸರೋಜ ಅವರು ಒಂದು ಸ್ಟೀಲ್ ಕ್ಯಾರಿಯರ್ನಲ್ಲಿ ಸಾಂಬಾರ್ ತಂದು ಅಡುಗೆ ಕಟ್ಟೆ ಮೇಲಿಟ್ಟು ಸಾಪಾಟಂಗೋ ಸಾರ್ ಎಂದರು.
ನಮಗೆ ಏನು ಹೇಳಲು ಗೊತ್ತಾಗಲಿಲ್ಲ. ಥ್ಯಾಂಕ್ಯೂ ಅಂದುಬಿಟ್ಟೆವು. ಥ್ಯಾಂಕ್ಯೂ ಪದದ ಬದಲಾಗಿ ಬೇರೆ ಏನಾದರೂ ಹೇಳಬೇಕಾಗಿತ್ತು ಎಂದೆನಿಸಿತಾದರೂ ನಮಗೆ ತಮಿಳು ಭಾಷೆ ಬರದ ಕಾರಣ ಸುಮ್ಮನಾದೆವು. ವಿಜಯ ದಶಮಿಯ ದಿವಸ ಲಂಚ್ ಮತ್ತು ಡಿನ್ನರ್ರಿಗೆ ಸರೋಜ ವೇಲು ಮನೆಯ ಸಾಂಬಾರ್ ಸವಿಯುವ ಯೋಗ ನಮ್ಮ ಹಣೆಯಲ್ಲಿ ಬರೆದಿತ್ತು. ಮತ್ತೆ ಇನ್ನೊಂದು ಭಾನುವಾರ ಬಂದಾಗ ನಾವು ಕೆಳಗೆ ಹೋಗಿ ಸಾಂಬಾರು ತುಂಬಾ ತುಂಬಾ ಚೆನ್ನಾಗಿತ್ತು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿ ಸಾಂಬಾರು ಮಾಡುವ ವಿಧಾನ ಹೇಗೆ ಎಂದು ಕೇಳಿದೆವು. ಸರೋಜ ಅವರು ನಮಗೆ ತಿಳಿಸಿದ ಸಾಂಬಾರು ರೆಸಿಪಿ ಹೀಗಿದೆ .



Click it and Unblock the Notifications
