Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟವಾದ ಕೂಡಲೇ ಹಣ್ಣು ತಿಂದೀರಿ ಜೋಕೆ!

ಈ ಸುಲಭ ಪ್ರಶ್ನೆಗೆ ಉತ್ತರ ಅನೇಕರಲ್ಲಿ ಒಂದೇ. ಅದು ಊಟವಾದ ನಂತರ ಅಂತ ಸುಲಿದ ಬಾಳೆಹಣ್ಣನ್ನು ಊಟವಾದನಂತರ ಹೊಟ್ಟೆಗಿಳಿಸಿದಂತೆ ಸುಲಭವಾಗಿ ಉತ್ತರ ನೀಡಿಬಿಡುತ್ತಾರೆ. ಇದು ತಪ್ಪು ಅಂತ ಹೇಳಿದರೆ ನೀವು ನಂಬಬೇಕು. ನಿಮ್ಮ ಮೇಲೆ ನಿಮಗೆ ಪ್ರೀತಿಯಿದ್ದರೆ ದಯವಿಟ್ಟು ಈ ಲೇಖನವನ್ನೊಮ್ಮೆ ಓದಿಬಿಡಿ.
ಹಸ್ತ ಹಲಸು ಉಂಡ ಮಾವು ಎಂಬ ಮಾತು ಚಾಲ್ತಿಯಲ್ಲಿದೆ. ಅಂದರೆ, ಹಸಿದ ಹೊಟ್ಟೆಯಲ್ಲಿ ಹಲಸಿನ ಹಣ್ಣು ತಿನ್ನಬೇಕು ಮತ್ತು ಉಂಡ ನಂತರ ಮಾವಿನ ಹಣ್ಣನ್ನು ತಿನ್ನಬೇಕು. ಇದು ಹಳೇ ಕಾಲದ ಮಾತು. ಇಂದಿನ ಕಾಲದಲ್ಲಿ ಪ್ರತಿಯೊಂದನ್ನೂ ನಿಯಮಗಳಿಗೆ ತಕ್ಕಂತೆ ಮಾಡಬೇಕು. ಇಷ್ಟೇ ತಿನ್ನಬೇಕು, ಇಷ್ಟೇ ಕುಡಿಯಬೇಕು, ಇಷ್ಟೊತ್ತೇ ಮಲಗಬೇಕು... ಹೀಗೆ ಖಾಲಿ ಹೊಟ್ಟೆಯಲ್ಲಿಯೇ ಹಣ್ಣನ್ನೂ ತಿನ್ನಬೇಕು ಎಂಬುದನ್ನೂ ನಿಯಮದಂತೆ ಪಾಲಿಸಬೇಕು.
ಇದು ನಮ್ಮ ಆರೋಗ್ಯದ ಮೇಲೆ, ನಮ್ಮ ದೈಹಿಕ ಸೌಂದರ್ಯದ ಮೇಲೆ, ನಮ್ಮ ಜೀವನಕ್ರಮದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕೆಲವರು ಊಟವಾದ ಕೂಡಲೆ ಸಿಕ್ಕಾಪಟ್ಟೆ ತೇಗಲು ಶುರು ಮಾಡುತ್ತಾರೆ, ಕೆಲವರು ವಾಂತಿ ಬಂದಂಗೆ ಆಗುತ್ತಿದೆ ಅಂತಾರೆ, ಕೆಲವರು ಯಾಕೋ ಟಾಯ್ಲೆಟ್ಟಿಗೆ ಹೋಗಬೇಕು ಅನ್ನಿಸುತ್ತಿದೆ ಅಂತಾರೆ. ಇದಕ್ಕೆ ಕಾರಣ, ಯರ್ರಾಬಿರ್ರಿ ಊಟ ಮಾಡಿದ ಮೇಲೆ ಸಖತ್ತಾಗಿ ಹಣ್ಣನ್ನು ಇಳಿಸಿರುತ್ತಾರೆ. ಇದಕ್ಕೆಲ್ಲ ಕಾರಣ ಊಟವಾದ ಕೂಡಲೆ ಹಣ್ಣು ತಿಂದದ್ದು.
ಜಠರದಲ್ಲಿ ಸೇರಿದ ಆಹಾರದ ಜೊತೆ ಹಣ್ಣು ಕೂಡ ಸೇರುತ್ತಿದ್ದಂತೆ ಹೆಚ್ಚಿನ ಆಮ್ಲ ಬಿಡುಗಡೆಯಾಗಿ ಮೇಲಿನ ತಳಮಳಗಳು ಪ್ರಾರಂಭವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ತಿಂದರೆ ಅದು ಜಠರದ ಮೂಲಕ ನೇರವಾಗಿ ಸಣ್ಣಕರುಳನ್ನು ಸೇರುತ್ತದೆ. ಊಟವಾದ ಮೇಲೆ ತಿಂದರೆ ಸಣ್ಣಕರುಳಿಗೆ ನೇರವಾಗಿ ಸೇರದೆ ಆಹಾರದೊಡನೆ ಕೂಡಿ ಹೊಟ್ಟೆಯೂ ಹಾಳು, ಆರೋಗ್ಯವೂ ಹಾಳು.
ಪ್ರಯೋಜನಗಳು : ಖಾಲಿ ಹೊಟ್ಟೆಯಲ್ಲಿ ತಿಂದರೆ ಅನೇಕ ಪ್ರಯೋಜನಗಳಿವೆ. ಹಣ್ಣುಗಳು ನಮ್ಮ ಪಚನಕ್ರಿಯೆಯನ್ನು ಸರಳವಾಗಿಸುತ್ತವೆ. ಜಠರದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ. ಚೈತನ್ಯದ ಚಿಲುಮೆಯನ್ನಾಗಿ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಹಣ್ಣು ತಿಂದರೆ ಕೂದಲು ಬೇಗನೆ ನೆರೆಯುವುದನ್ನು, ತಲೆ ಬೋಳಾಗುವುದನ್ನು, ಕಣ್ಣಿನ ಸುತ್ತ ಕಪ್ಪು ಕಲೆಗಳಾಗುವುದನ್ನು, ಬೇಗನೆ ಸುಸ್ತಾಗುವುದನ್ನು ತಪ್ಪಿಸುತ್ತದೆ.
ಈ ವಿಷಯ ಕುರಿತಂತೆ ಸಾಕಷ್ಟು ಸಂಶೋಧನೆ ಮಾಡಿರುವ ಡಾ. ಹರ್ಬರ್ಟ್ ಶೆಲ್ಟನ್ ಪ್ರಕಾರ, ಹಣ್ಣು ತಿನ್ನವುದು ಕೂಡ ಒಂದು ಕಲೆಯೆ. ಇಂಥದೇ ಸಮಯದಲ್ಲಿ ತನ್ನಬೇಕು, ಇಷ್ಟೇ ತಿನ್ನಬೇಕು, ಇಂತಿಂಥ ಪ್ರಕೃತಿಯವರು ಇಂತಿಂಥವೇ ಹಣ್ಣು ತಿನ್ನಬೇಕು ಎಂಬುದು ಕೂಡ ಒಂದು ನಿಯಮವೇ. ಈ ನಿಯಮವನ್ನು ಅತ್ಯಂತ ನಿಷ್ಠರಾಗಿ ಪಾಲಿಸಿದರೆ ಮನೋಕಾಂತಿ, ದೇಹಸೌಂದರ್ಯ, ಆರೋಗ್ಯಭಾಗ್ಯ ನಮ್ಮದಾಗುತ್ತದೆ. ದೇಹದ ತೂಕವನ್ನು ಕೂಡ ಹಣ್ಣುಗಳು ಸಮತೋಲನದಲ್ಲಿ ಇಡುತ್ತದೆ.
ಇನ್ನು ಹಣ್ಣುಗಳನ್ನು ಹೇಗೆ ತಿನ್ನಬೇಕು, ಯಾವ್ಯಾವ ಹಣ್ಣಿನಲ್ಲಿ ಏನೇನು ಗುಣಗಳಿರುತ್ತವೆ ಎಂಬುದನ್ನು ಮುಂದಿನ ಲೇಖನದಲ್ಲಿ ನೋಡೋಣ.



Click it and Unblock the Notifications