Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ನಾಲಗೆ ಚಪಲ ತಣಿಸುವ ಅವರೆಕಾಳು ದೋಸೆ
ಅವರೆಕಾಳು ಎಂದರೆ ಹೆಚ್ಚಿನವರು ಉಪ್ಪಿಟ್ಟು ಅಥವಾ ಸಾರು ಮಾತ್ರ ಮಾಡಬಹುದು ಎಂದು ತಿಳಿದಿದ್ದಾರೆ. ಆದರೆ ಬಡವರ ಮೆಚ್ಚಿನ ಈ ಅವರೆಕಾಯಿಯಿಂದ ದೋಸೆಯನ್ನೂ ಮಾಡಬಹುದು ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ತಿಂಗಳಾವರೆ ಜಾತಿಗೆ ಸೇರಿದ Hyacinth bean ಎಂಬ ಹೆಸರಿನ ಈ ಪುಟ್ಟ ಅವರೆಕಾಳು ಸಾಮಾನ್ಯವಾಗಿ ಡಿಸೆಂಬರಿ ನಿಂದ ಮಾರ್ಚ್ವರೆಗೆ ಭರ್ಜರಿಯಾಗಿ ದೊರಕುತ್ತದೆ. ಸಿಪ್ಪೆ ಸುಲಿದು ಬೀಜ ಹೊರತೆಗೆಯಲು ಕೊಂಚ ಹೊತ್ತು ತಗಲುತ್ತದೆ ಎಂಬ ಒಂದು ಕಾರಣವನ್ನು ಹೊರತುಪಡಿಸಿದರೆ ಇನ್ನೆಲ್ಲಾ ಇದರಲ್ಲಿರುವುದು ಧನಾತ್ಮಕ ಅಂಶಗಳೇ. ಇದರಲ್ಲಿರುವ ಪ್ರೋಟೀನುಗಳ ಭಂಡಾರ ಇದನ್ನೊಂದು ಆರೋಗ್ಯಕರ ಆಹಾರವನ್ನಾಗಿಸಿದೆ.
ಇದರಿಂದ ತಯಾರಿಸಬಹುದಾದ ಅಡುಗೆಗಳ ಪಟ್ಟಿಯೂ ದೊಡ್ಡದಿದೆ. ಅವರೆಕಾಯಿಯ ಅಥವಾ ಅವರೆಕಾಳಿನ ಉಪ್ಪಿಟ್ಟು, ಸಾರು, ಸಾಂಬಾರು, ತಿಳಿಸಾರು ಇತ್ಯಾದಿಗಳು ನೆಚ್ಚಿನ ಖಾದ್ಯಗಳಾಗಿವೆ. ಇಂದು ಇದರಿಂದ ತಯಾರಿಸುವ ದೋಸೆಯ ಬಗ್ಗೆ ತಿಳಿಯೋಣ. ಇದು ಸುಲಭ ಹಾಗೂ ಪುಷ್ಟಿದಾಯಕವಾಗಿದ್ದು ಬೆಳಗ್ಗಿನ ಹೊತ್ತಿನ ಸೇವನೆಯಿಂದ ಇಡಿಯ ದಿನ ಚಟುವಟಿಕೆಯಲ್ಲಿಡಲು ನೆರವಾಗುತ್ತದೆ. ಇದರ ಉತ್ತಮ ಗುಣಗಳೆಂದರೆ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಹಾಗೂ ಜೀರ್ಣಕ್ರಿಯೆಗೆ ಸಹಕರಿಸುವುದು. ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಅವರೆಕಾಯಿ : ಮೂರು ಕಪ್
*ದೋಸೆ ಹಿಟ್ಟು: ಅರ್ಧ ಕೇಜಿ
*ಹಸಿಮೆಣಸು: ನಾಲ್ಕರಿಂದ ಐದು, ಚಿಕ್ಕದಾಗಿ ತುಂಡರಿಸಿದ್ದು
*ಈರುಳ್ಳಿ: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ತುರಿದ ಕ್ಯಾರೆಟ್ : ಅರ್ಧ ಕಪ್ (ತುರಿದದ್ದು)
*ಕೊತ್ತಂಬರಿ ಸೊಪ್ಪು: ಅರ್ಧ ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಉಪ್ಪು ರುಚಿಗನುಸಾರ
*ಎಣ್ಣೆ: ಕಾವಲಿಗೆ ಹಚ್ಚಲು
ವಿಧಾನ:
1) ಮೊದಲು ಕುಕ್ಕರ್ ನಲ್ಲಿ ಅವರೆಕಾಳು ಹಾಕಿ ಕೊಂಚ ನೀರಿನೊಂದಿಗೆ ನಾಲ್ಕು ಸೀಟಿ ಬರುವವರೆಗೆ ಬೇಯಿಸಿ ಒಲೆ ಆರಿಸಿ ತಣಿಯಲು ಬಿಡಿ.
2) ಇತ್ತ ಒಂದು ದಪ್ಪತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಯಾದ ಬಳಿಕ ಹಸಿಮೆಣಸು, ನೀರುಳ್ಳಿ, ಮತ್ತು ಕ್ಯಾರೆಟ್ ಹಾಕಿ ಎರಡು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬಾಡಿಸಿ.
3) ಉರಿ ಆರಿಸಿದ ಬಳಿಕ ಇದಕ್ಕೆ ದೋಸೆ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ.
4) ಇಷ್ಟು ಹೊತ್ತಿನಲ್ಲಿ ಕುಕ್ಕರ್ ತಣ್ಣಗಾಗಿರುತ್ತದೆ. ಇಲ್ಲದಿದ್ದರೆ ತಣ್ಣೀರಿನ ಕೆಳಗೆ ಸೀಟಿ ಹಿಡಿದು ಮುಚ್ಚಳ ತೆರೆಯಿರಿ. ಅವರೆಕಾಯಿ ಅತಿ ಹೆಚ್ಚು ಬೆಂದಿರಬಾರದು, ಅಂತೆಯೇ ಗಟ್ಟಿಯೂ ಇರಬಾರದು, ಹದವಾಗಿದ್ದರೆ ತಿನ್ನಲು ಚೆನ್ನಾಗಿರುತ್ತದೆ. ಈಗ ಬೆಂದ ಅವರೆಕಾಳುಗಳನ್ನು ದೋಸೆ ಮಿಶ್ರಣಕ್ಕೆ ಸೇರಿಸಿ ಮಿಶ್ರಣ ಮಾಡಿ.
5) ಇನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ
6) ದೋಸೆ ಕಾವಲಿಯನ್ನು ಬಿಸಿಮಾಡಿ ಕಾವು ಹತ್ತುವವರೆಗೆ ಹಾಗೇ ಬಿಡಿ.
7) ಸಾಮಾನ್ಯ ಉದ್ದಿನ ದೋಸೆಯಂತೆಯೇ ಈ ಹಿಟ್ಟನ್ನೂ ಕಾವಲಿಯ ಮೇಲೆ ಒಂದು ದೊಡ್ಡಚಮಚ ಸುರಿದು ಹರಡಿಸಿ ಮುಚ್ಚಳ ಮುಚ್ಚಿ ಸುಮಾರು ಮೂರರಿಂದ ನಾಲ್ಕು ನಿಮಿಷ ಬೇಯಿಸಿ. ಉರಿ ಮಧ್ಯಮ ಇರಲಿ.
8) ಬಿಸಿಯಾಗಿದ್ದಂತೆಯೇ ಕಾಯಿ ಚಟ್ನಿ ಮತ್ತು ತುಪ್ಪ ಸವರಿ ಅತಿಥಿಗಳಿಗೆ, ಮನೆಯವರಿಗೆ ಬಡಿಸಿ ಮೆಚ್ಚುಗೆ ಪಡೆಯಿರಿ. ಈ ವಿಧಾನ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.



Click it and Unblock the Notifications











