Just In
- 2 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 3 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 3 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 3 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತ್ತಿ ಕುಡಿ ಚಿಗುರಿನ ತಂಬುಳಿ
* ತೇಜಸ್ವಿನಿ ಹೆಗಡೆ, ಬೆಂಗಳೂರು.
ಅತ್ತಿ ಮರದ ಉಪಯೋಗಗಳು ಹಲವಾರು. ಹಾಗಾಗಿ ಮೊದಲಿಗೆ ಅತ್ತಿ ಮರದ ಕಿರು ಪರಿಚಯ ಮಾಡಿಕೊಳ್ಳೋಣ : 10ರಿಂದ 15 ಮೀಟರ್ ಎತ್ತರ ಬೆಳೆಯುವ, ನಿತ್ಯ ಹರಿದ್ವರ್ಣ ಮರ ಎಂದೇ ಪರಿಚಿತವಾಗಿರುವ ಸಸ್ಯಪ್ರಬೇಧ ಅತ್ತಿಮರ. ಸಂಸ್ಕೃತದಲ್ಲಿ ಉದುಂಬರ(ಔದುಂಬರ**), ಹಿಂದಿಯಲ್ಲಿ ಗುಲೇರ್, ಇಂಗ್ಲೀಷಿನಲ್ಲಿ Fig, ತೆಲುಗಿನಲ್ಲಿ ಅತ್ತಿ ಮಾನು ಹಾಗೂ ತಮಿಳಿನಲ್ಲಿ ಅತ್ತಿ ಮರಂ ಎನ್ನುತ್ತಾರೆ. ಅತ್ತಿ ಮರದ ಎಲೆಗಳನ್ನು ವಿಶೇಷವಾಗಿ ಹೋಮ ಹವನಗಳಲ್ಲಿ ಸಮಿತ್ತಾಗಿಯೂ ಉಪಯೋಗಿಸುತ್ತಾರೆ.
ವೈದ್ಯ ಎ.ಅರ್.ಎಂ.ಸಾಹೇಬ್ ಅವರ 'ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು' ಎಂಬ ಪುಸ್ತಕದಲ್ಲಿ ಯಾವ ರೀತಿ ಈ ಅತ್ತಿ ಮರದ ಎಲೆ, ಕಾಯಿ, ಹಣ್ಣು, ತೊಗಟೆ, ಹಣ್ಣಿನಿಂದೊಸರುವ ಬಿಳಿ ಹಾಲು ಎಲ್ಲವೂ ಸರಳ ಚಿಕಿತ್ಸೆಗಳಿಗೆ, ಕಾಯಿಲೆಗಳಿಗೆ ಮದ್ದು ಎಂಬುದನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಉರಿಮೂತ್ರ, ವಿಪರೀತ ಬಾಯಾರಿಕೆ, ಬಾವು, ಸಕ್ಕರೆ ಕಾಯಿಲೆ ಮುಂತಾದ ರೋಗಗಳ ಉಪಶಮನಕ್ಕೆ ಅತ್ತಿ ಮರದ ವಿವಿಧ ಭಾಗಗಳಿಂದ ತಯಾರಿಸಿದ ಮನೆಮದ್ದುಗಳು ತುಂಬಾ ಪರಿಣಾಮಕಾರಿ.
ಅತ್ತಿ ಮರ ಸಸ್ಯಪ್ರಬೇಧದ ಕೆಲವು ವಿವರಣೆಗಳು ಇಂತಿವೆ:
Kingdom:
Plantae
Division:
Magnoliophyta
Class:
Magnoliopsida
Order:
Rosales
Family:
Moraceae
Genus:
Ficus
Species:
F.
racemosa
ಹೆಚ್ಚಿನ ವಿವರಣೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ಲಿಂಕ್ಗಳಿಂದ ಬಡೆಯಬಹುದಾಗಿದೆ.
ಅತ್ತಿ
ಮರದ
ಚಿಗುರೆಲೆಗಳಿಂದ
ತಯಾರಿಸುವ
ಈ
ತಂಬುಳಿ
ದೇಹಕ್ಕೆ
ತುಂಬಾ
ತಂಪು.
ಅತ್ತಿ
ಮರ
ತುಂಬಾ
ಎತ್ತರವಿರುವುದರಿಂದ
ಚಿಗುರು(ಕುಡಿ)ಗಳನ್ನು
ತೆಗೆಯಲು
ತುಸು
ಕಷ್ಟವಾಗಬಹುದು.
ಆದರೆ
ಎಲ್ಲೆಂದರಲ್ಲಿ,
ದಾರಿಯಂಚಿನಲ್ಲೆಲ್ಲಾ
ಬೆಳೆಯುವ
ಈ
ಮರದ
ಸಣ್ಣ
ಸಣ್ಣ
ಗಿಡಗಳಿಂದ
ಕುಡಿಗಳನ್ನು
ಧಾರಾಳವಾಗಿ
ಹೆಕ್ಕಬಹುದು.
ಉತ್ತರ ಕನ್ನಡದ ಕಡೆ ವಿಶೇಷವಾಗಿ ತಯಾರಿಸುವ ಈ ಅತ್ತಿ ಕುಡಿ ತಂಬುಳಿ ಉಷ್ಣದೇಹದ ಪ್ರಕೃತಿಯವರಿಗೆ, ಬಾಯಿ ಹುಣ್ಣಿನಿಂದ ಬಳಲುತ್ತಿರುವವರೆ ತುಂಬಾ ಉಪಯುಕ್ತ. ತಯಾರಿಸಲೂ ಬಹು ಸುಲಭ ಹಾಗೂ ಸರಳ. ಕೇವಲ 15 ನಿಮಿಷಗಳ ಒಳಗೆ ತಯಾರಿಸಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
*
ಅತ್ತಿ
ಕುಡಿಯ
ಹಸಿರಾದ
ಚಿಗುರೆಲೆಗಳು,
ಬಲಿತ
ದೊಡ್ಡ
ಎಲೆಗಳಲ್ಲ.
10-15
*
ಜೀರಿಗೆ
-
1/4
ಚಮಚ
*
ಬಿಳೇ
ಎಳ್ಳು
-
1/2
ಚಮಚ
*
ಚಿಟಿಕೆ
ಇಂಗು
*
ಕಡೆದ
ಮಜ್ಜಿಗೆ
-
1
ಲೋಟ
*
ಹುರಿಯಲು
ತುಪ್ಪ
-
2
ಚಮಚ
*
ತೆಂಗಿನ
ತುರಿ
-
1/4
ಭಾಗ
*
ಬೆಲ್ಲ
-
ರುಚಿಗೆ
ತಕ್ಕಷ್ಟು
(ಬೆಲ್ಲ
ಹಾಕಲು
ಇಷ್ಟಪಡದವರು
ಸಿಹಿ
ಹಾಕದೆಯೂ
ತಯಾರಿಸಬಹುದು)
*
ರುಚಿಗೆ
ತಕ್ಕಷ್ಟು
ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಅತ್ತಿ ಕುಡಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಳ್ಳಬೇಕು. ಬಾಣಲೆಗೆ 2 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಜೀರಿಗೆ, ಇಂಗು ಹಾಗೂ ಬಿಳೇ ಎಳ್ಳುಗಳನ್ನು ಹಾಕಿ ಹುರಿಯಬೇಕು. ಜೀರಿಗೆ ಹಾಗೂ ಎಳ್ಳುಗಳು ಚಟಗುಡಲು ಹೆಚ್ಚಿಟ್ಟಿರುವ ಅತ್ತಿ ಕುಡಿಗಳನ್ನು ಹಾಕಿ ಸಣ್ಣ ಉರಿಯಲ್ಲೇ ಹುರಿಯಬೇಕು. 10 ನಿಮಿಷದೊಳಗೇ ಕುಡಿಗಳೆಲ್ಲಾ ಹುರಿದು ಗರಿಗರಿಯಾಗುತ್ತವೆ.
ಹುರಿದಿಟ್ಟ ಪದಾರ್ಥಗಳು ಚೆನ್ನಾಗಿ ತಣಿದ ನಂತರ ಕಾಯಿತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಪದಾರ್ಥಕ್ಕೆ ಕಡೆದ ಮಜ್ಜಿಗೆಯನ್ನೂ, ರುಚಿಗೆ ತಕ್ಕಷ್ಟು ಉಪ್ಪನ್ನೂ, ಬೆಲ್ಲವನ್ನೂ ಹಾಕಿ ಕಲಕಿದರೆ ರುಚಿಯಾದ ಆರೋಗ್ಯಕರ ತಂಬುಳಿ ಸಿದ್ಧ. ಅತ್ತಿಕುಡಿ ತಂಬುಳಿಯನ್ನು ಅನ್ನಕ್ಕೆ ಕಲಸಿಕೊಂಡೋ ಇಲ್ಲಾ ಹಾಗೇ ಕುಡಿಯಲೂಬಹುದು.
** ಔದುಂಬರ : ತಮ್ಮ ಜೀವನದ ಒಂದು ಭಾಗವೇ ಎಂಬಂತಿದ್ದ ಅತ್ತಿ ಮರ ಅಥವಾ ಔದುಂಬರ ಮರದ ಕುರಿತು ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 'ಔದುಂಬರ ಗಾಥೆ' ಎಂಬ ಕವನವನ್ನು ಬರೆದಿದ್ದಾರೆ. ಇದರ ಬಗ್ಗೆ ಬಲ್ಲವರು ಇನ್ನಷ್ಟು ಬೆಳಕು ಚೆಲ್ಲಬೇಕಾಗಿ ವಿನಂತಿ.