Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಇಡ್ಲಿಗೆ ಬೆಸ್ಟ್ ಜೋಡಿ ಘಮ ಘಮ ಈರುಳ್ಳಿ ಸಾಂಬಾರ್

ಈರುಳ್ಳಿ ಸಾಂಬಾರ್ ಗೆ ಬೇಕಾಗುವ ಸಾಮಗ್ರಿ: 2 ಚಮಚ ಧನಿಯಾ, 2 ಚಮಚ ಉದ್ದಿನ ಬೇಳೆ, 2 ಕೆಂಪು ಮೆಣಸಿನಕಾಯಿ, 1/2 ಕಪ್ ತೆಂಗಿನ ತುರಿ, 1/4 ಕಪ್ ಜೀರಿಗೆ, 1/4 ಕೆ.ಜಿ ಚಿಕ್ಕ ಈರುಳ್ಳಿ (ನಾಟಿ), 1 ಟೊಮೆಟೊ, ಕೊತ್ತಂಬರಿ, ಸಾಸಿವೆ, ಎಣ್ಣೆ, ಉಪ್ಪು, 1 ಚಮಚ ತುಪ್ಪ
ಈರುಳ್ಳಿ ಸಾಂಬಾರ್ ಮಾಡುವುದು ಹೇಗೆ?
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಉದ್ದಿನ ಬೇಳೆಯನ್ನು ಸ್ವಲ್ಪ ಕೆಂಪಗಾಗುವ ತನಕ ಹುರಿದುಕೊಳ್ಳಬೇಕು. ಇದಾದ ನಂತರ ಅದರಲ್ಲಿ ಧನಿಯಾ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಹುರಿದು ಪಕ್ಕಕ್ಕಿಟ್ಟುಕೊಳ್ಳಬೇಕು.
* ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಟೊಮೆಟೊ, ಈರುಳ್ಳಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಹಾಕಬೇಕು. (ಸಾಂಬಾರ್ ಸ್ವಲ್ಪ ಖಾರವಿರಬೇಕೆಂದರೆ ಮೆಣಸಿನಕಾಯಿಪುಡಿ ಅಥವಾ ಸಾಂಬಾರ್ ಪುಡಿ ಬೆರೆಸಬಹುದು). 5-10 ನಿಮಿಷ ಸಣ್ಣ ಉರಿಯಲ್ಲಿ ಈ ಮಿಶ್ರಣವನ್ನು ಬೇಯಿಸುತ್ತಿರಬೇಕು.
* ಹುರಿದಿಟ್ಟುಕೊಂಡಿದ್ದ ಮಿಶ್ರಣವನ್ನು ಪೇಸ್ಟ್ ನಂತೆ ರುಬ್ಬಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಬೆರೆಸಬೇಕು. ಮಸಾಲೆಯ ವಾಸನೆ ಬರುವವರೆಗೂ ಸಾಂಬಾರನ್ನು ತಿರುಗಿಸುತ್ತಿರಬೇಕು.
* ನಂತರ ಒಲೆ ಆರಿಸಿ, ಸಾಂಬಾರಿಗೆ ಸಾಸಿವೆ ಒಗ್ಗರಣೆ ನಿಡಬೇಕು. ಕೊನೆಯಲ್ಲಿ ಇದಕ್ಕೆ ಒಂದು ಚಮಚ ತುಪ್ಪ ಬೆರೆಸಿದರೆ ಸಾಕು ಸಾಂಬಾರ್ ಘಂ ಅಂತಿರುತ್ತೆ.



Click it and Unblock the Notifications











