Latest Updates
-
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ
ಬಡವರ ಬಾದಾಮಿ ಬಳಸಿ ಹಾಗಲಕಾಯಿ ಕರಿ ಮಾಡಿ
ಉತ್ತರ ಭಾರತದ ಶೈಲಿಯಲ್ಲಿ ಅಡುಗೆ ಮಾಡುವಾಗ ಗೋಡಂಬಿ ಪೇಸ್ಟ್ ಗೆ ಬಹಳ ಪ್ರಾಧ್ಯಾನತೆ ಇದೆ. ಆದರೆ ಗೋಡಂಬಿ ಖರೀದಿಸುವುದು ಅಷ್ಟು ಸುಲಭದ ಮಾತೇ.ಅಬ್ಬಬ್ಬಾ ಬಾಯಿಗೇನೊ ರುಚಿ ನಿಜ ಆದರೆ ಜೇಬಿಗೆ ಅಷ್ಟೇ ಕತ್ತರಿ. ಕೆಜಿ ಗೋಡಂಬಿ ಬೆಲೆ ಸಾವಿರದ ಹತ್ತಿರಹತ್ತಿರ ಇರುತ್ತದೆ. ಹಾಗಾಗಿ ಗೋಡಂಬಿ ಪೇಸ್ಟ್ ಬದಲಿಗೆ ಏನಾದರೂ ಬಳಸಿ ಉತ್ತರ ಭಾರತದ ಶೈಲಿಯ ಅಡುಗೆ ಮಾಡುವುದಾದರೆ ಹೇಗೆ ಮಾಡಬಹುದು? ಸರಳ ಉಪಾಯವಿರುವ ಒಂದು ರೆಸಿಪಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.


ದುಬಾರಿಯೂ ಅಲ್ಲದ, ಆರೋಗ್ಯಕ್ಕೂ ಹಿತವಾದ ಅಡುಗೆಯನ್ನು ಮಾಡುವುದರಿಂದಾಗಿ ಮನೆಮಂದಿಯ ಆರೋಗ್ಯ ಜೊತೆಗೆ ಬಜೆಟ್ ಎರಡನ್ನೂ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಹಾಗಾದ್ರೆ ಈ ರೆಸಿಪಿ ಮಾಡುವುದಕ್ಕೆ ಏನೆಲ್ಲಾ ಬೇಕು ನೋಡೋಣ ಬನ್ನಿ.
Recipe By: Sushma
Recipe Type: Curry
Serves: 4
-
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ - ಸಣ್ಣ ಜಾತಿಯ ಅರ್ಧ ಕೆಜಿ
ಬೆಳ್ಳುಳ್ಳಿ - 10 ರಿಂದ 12 ಎಸಳು
ನೆಲಗಡಲೆ ಬೀಜಗಳು- ಒಂದು ವರೆ ಮುಷ್ಟಿ
ಶುಂಠಿ - ಎರಡು ಬೆಳ್ಳುಳ್ಳಿ ಎಸಳಿನ ಗಾತ್ರ
ಗರಂ ಮಸಾಲೆ - ಎರಡು ಸ್ಪೂನ್
ಅರಿಶಿನದ ಪುಡಿ- ಅರ್ಧ ಸ್ಪೂನ್
ಅಚ್ಚಖಾರದ ಪುಡಿ - ಮೂರು ಸ್ಪೂನ್
ಟೊಮೆಟೋ - ಎರಡು
ಈರುಳ್ಳಿ- ಎರಡು
ಬೆಲ್ಲ - ಎರಡು ಮುಷ್ಟಿ
ಹುಣಸೆ ಹಣ್ಣು - ಎರಡು ಅಡಿಕೆ ಗಾತ್ರದಷ್ಟು( ಹಾಗಲದ ಕಹಿಯನ್ನು ಆಧರಿಸಿ ಬೆಲ್ಲ ಮತ್ತು ಹುಣಸೆ ಹೆಚ್ಚು ಬಳಸಬೇಕಾಗಬಹುದು)
ಉಪ್ಪು- ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ - ನಾಲ್ಕರಿಂದ ಐದು ಸ್ಪೂನ್
ಬೇವಿನ ಸೊಪ್ಪು - 20 ಎಸಳು
ಚಬಿಳಿ ಎಳ್ಳು - ಅರ್ಧ ಸ್ಪೂನ್
ಏಲಕ್ಕಿ - ಎರಡು
ಲವಂಗ - ಎರಡು
ಜೀರಿಗೆ- ಅರ್ಧ ಸ್ಪೂನ್
-
{recipe}ಮಾಡುವ ವಿಧಾನ:
ನೆಲಗಡಲೆ ಬೀಜಗಳನ್ನು ಅಡುಗೆ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ. ಕೆಂಬಣ್ಣಕ್ಕೆ ಬಂದಾಗ ಅದನ್ನು ಎಣ್ಣೆಯಿಂದ ಬೇರ್ಪಡಿಸಿ ತಣಿಯಲು ಬಿಡಿ.
ನಂತರ ಅದೇ ಎಣ್ಣೆಯಲ್ಲಿ ಬೆಳ್ಳಿಳ್ಳಿಯನ್ನು ಕೆಂಬಣ್ಣಕ್ಕೆ ಹುರಿದು ತೆಗೆಯಿರಿ.
ನಂತರ ಅದೇ ಎಣ್ಣೆಗೆ ಜೀರಿಗೆ ಹಾಕಿ.
ಜೀರಿಗೆ ಪರಿಮಳ ಬರುತ್ತಿದ್ದ ಹಾಗೆ ಇಡೀ ಇಡೀ ಹಾಗಲಕಾಯಿಯನ್ನು ಮಧ್ಯ ಮಧ್ಯ ಸಿಗಿದಂತೆ ಮಾಡಿ ಎಣ್ಣೆಗೆ ಹಾಕಿ ಬಾಣಲೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
ಕೆಲ ನಿಮಿಷದ ನಂತರ ಹಾಗಲಕಾಯಿ ಬಾಡಿದಂತೆ ಕಾಣುತ್ತದೆ. ಆಗ ಅದಕ್ಕೆ ಉಪ್ಪು ಹಾಕಿ. ಈ ಸಮಯದಲ್ಲೇ ಉಪ್ಪು ಸೇರಿಸುವುದರಿಂದ ಹಾಗಲಕಾಯಿಯು ಉಪ್ಪನ್ನು ಕುಡಿಯುತ್ತದೆ ಮತ್ತು ರುಚಿ ಹೆಚ್ಚುತ್ತದೆ.
ತಣ್ಣಗಾದ ಕಡಲೆಬೀಜಕ್ಕೆ ಟೊಮೆಟೋ, ಈರುಳ್ಳಿ, ಲವಂಗ, ಏಲಕ್ಕಿ, ಹುರಿದ ಬೆಳ್ಳುಳ್ಳಿ, ಶುಂಠಿ, ಬಿಳಿ ಎಳ್ಳು,ಅಚ್ಚಖಾರದ ಪುಡಿ, ಗರಂಮಸಾಲೆ ಹಾಕಿ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಬೇಯುತ್ತಿರುವ ಹಾಗಲಕಾಯಿಗೆ ಸೇರಿಸಿ.
ಸ್ವಲ್ಪ ಸಮಯದ ನಂತರ ಹುಣಸೆರಸವನ್ನು ತಯಾರಿಸಿ ಅದಕ್ಕೆ ಸೇರಿಸಿ.
ನಂತರ ಬೆಲ್ಲವನ್ನು ಸೇರಿಸಿ. ಸಿಹಿ ಹೆಚ್ಚು ಇಷ್ಟ ಪಡುವವರು ಅಥವಾ ಹಾಗಲಕಾಯಿಯ ಕಹಿ ಹೆಚ್ಚಿದ್ದರೆ ಉಪ್ಪು,ಹುಳಿ, ಖಾರ, ಸಿಹಿ ಎಲ್ಲವೂ ಹೆಚ್ಚು ಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ರುಬ್ಬಿದ ಮಿಶ್ರಣ ಸೇರಿಸುವ ಮೊದಲೆ ಹುಣಸೆ ರಸ ಹಾಕಬೇಡಿ. ಹುಣಸೆ ರಸ ಮತ್ತು ಬೆಲ್ಲವನ್ನು ಮೊದಲೇ ಸೇರಿಸಿದರೆ ಹಾಗಲಕಾಯಿ ಬೇಯುವುದು ತಡವಾಗುತ್ತದೆ.
ನಂತರ ರುಬ್ಬಿದ ಮಿಶ್ರಣದ ಹಸಿವಾಸನೆ ಹೋಗಿ ಎಣ್ಣೆ ಮೇಲೆ ಬರುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಕೊತ್ತುಂಬರಿ ಸೊಪ್ಪು ಮತ್ತು ಕರಿಬೇವಿನ ಎಸಳು ಸೇರಿಸಿ ಒಂದೆರಡು ಕುದಿ ಬರುವವರೆಗೂ ಕಾಯಿರಿ.
ಚಪಾತಿ ಮತ್ತು ಬಿಳಿ ಅಕ್ಕಿರೊಟ್ಟಿಗೆ ಅಧ್ಬುತ ಕಾಂಬಿನೇಷನ್ ಆಗಿರುತ್ತದೆ. ಆದರೆ ಅನ್ನದ ಜೊತೆ ಸೇವಿಸುವುದಕ್ಕೆ ಅಷ್ಟೇನು ರುಚಿಯಾಗುವುದಿಲ್ಲ ಎಂಬುದು ನಿಮಗೆ ನೆನಪಿರಲಿ.
- ಹಾಗಲಕಾಯಿ ಮಧುಮೇಹಿಗಳಿಗೆ ಅತ್ಯುತ್ತಮವಾದ ಔಷಧಿ ಅಂಶವುಳ್ಳ ಆಹಾರವಾಗಿದೆ. ಇದಕ್ಕೆ ಹಡಲೆಬೀಜ ಹಾಕಿ ಮಾಡುವುದರಿಂದ ಇದರಲ್ಲಿರುವ ಕಹಿ ಅಂಶ ಕೊಂಚ ಕಡಿಮೆ ಯಾಗುತ್ತದೆ ಹಾಗೂ ಚಪಾತಿಗೆ ಹೇಳಿ ಮಾಡಿಸಿದ ಕರಿ ಇದಾಗಿದೆ.
- ಕ್ಯಾಲೋರಿ - 3
- ಕೊಲೆಸ್ಟ್ರಾಲ್ - 0 ಮಿಲಿ ಗ್ರಾಂ
- ಸೋಡಿಯಂ - 13 ಮಿಲಿ ಗ್ರಾಂ
- ಶುಗರ್ - 1 ಗ್ರಾಂ
- ಪೊಟಾಷಿಯಂ - 602 ಮಿಲಿ ಗ್ರಾಂ
- ಫೈಬರ್ - 1.9 ಗ್ರಾಂ



Click it and Unblock the Notifications