Just In
Don't Miss
- News Namma Metro: ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Vinayaka Chaturthi March 2021: ಗಣೇಶನ ಭಕ್ತರಿಗೆ ಈ ದಿನ ತುಂಬಾ ಮಹತ್ವವಾದದ್ದು ಏಕೆ?
ಮಾರ್ಚ್ 17ಕ್ಕೆ ವಿನಾಯಕ ಚತುರ್ಥಿ. ವಿಘ್ನ ನಿವಾರಕನನ್ನು ಆರಾಧಿಸುವ ದಿನ. ವಿಘ್ನ ನಿವಾರಕನನ್ನು ಆರಾಧಿಸಿದರೆ ಆತ ಎಂದಿಗೂ ತನ್ನ ಭಕ್ತರನ್ನು ಕೈ ಬಿಡುವುದಿಲ್ಲ. ವಿನಾಯಕ ಚತುರ್ಥಿಯನ್ನು ಪ್ರತಿ ತಿಂಗಳು ಆಚರಿಸಲಾಗುವುದು.
ಈ ದಿನ ಭಕ್ತರು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿ ಮಧ್ಯಾಹ್ನ ವಿನಾಯಕನಿಗೆ ಪೂಜೆ ಮಾಡಿ ಸೂರ್ಯ ಮುಳುಗುವವರೆಗೆ ಉಪವಾಸ ವ್ರತ ಪಾಲಿಸುತ್ತಾರೆ.
ನಾವಿಲ್ಲಿ ವಿನಾಯಕ ಚತುರ್ಥಿ ಮುಹೂರ್ತ, ತಿಥಿ ಸಮಯ, ವ್ರತದ ನಿಯಮಗಳ ಕುರಿತು ಹೇಳಲಾಗಿದೆ ನೋಡಿ:
ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ
ಕೃಷ್ಣ ಪಕ್ಷದಲ್ಲಿ ಸಂಕಷ್ಟಿ ಆಚರಿಸಿದರೆ ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ ಆಚರಿಸಲಾಗುವುದು. ಈ ದಿನ ಭಕ್ತರು ಬೆಳಗ್ಗೆಯಿಂದ ಉಪವಾಸವಿದ್ದು ಸೂರ್ಯಾಸ್ತವಾದ ಮೇಲೆ ಉಪವಾಸ ವ್ರತ ಮುಕ್ತಾಯವಾಗುವುದು.
ಮುಹೂರ್ತ, ತಿಥಿ ಸಮಯ
ವಿನಾಯಕ ಚತುರ್ಥಿಯ ತಿಥಿ ಪ್ರಾರಂಭ ಮಾರ್ಚ್ 16, 8:58ಕ್ಕೆ ಪ್ರಾರಂಭ
ಮುಕ್ತಾಯ: ಮಾರ್ಚ್ 17, ರಾತ್ರಿ 11:28
ಪೂಜೆಗೆ ಸಮಯ: ಬೆಳಗ್ಗೆ 11:17ರಿಂದ ಮಧ್ಯಾಹ್ನ 1:42
ವಿನಾಯಕ ಚತುರ್ಥಿಯಂದು ಪಾಲಿಸಬೇಕಾದ ನಿಯಮಗಳು
* ಬೆಳಗ್ಗೆ ಬೇಗನೆ ಅಂದ್ರೆ ಸೂರ್ಯೋದಯಕ್ಕಿಂತ 2 ಗಂಟೆ ಮುಂಚೆ ಎದ್ದೇಳಿ.
* ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ.
* ಈ ದಿನ ಏನಾದರೂ ಸಂಕಲ್ಪ ಕೈಗೊಳ್ಳಿ.
* ಗಣೇಶನಿಗೆ ಧ್ಯಾನ ಮಾಡಿ.
* ದೇವರಿಗೆ ಅರ್ಘ್ಯ ನೀಡಿ.
* ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಸೇವಿಸಬೇಡಿ.
* ಈ ದಿನ ತಂಬಾಕು ಹಾಗೂ ಮದ್ಯ ಸೇವನೆ ಒಳ್ಳೆಯದಲ್ಲ.
* ಪೂಜಾ ಸಮಯದಲ್ಲಿ ಪೂಜೆ ಸಲ್ಲಿಸಿ.
* ಗಣೇಶನಿಗೆ ಮೋದಕ, ಹಣ್ಣುಮ ಹಂಪಲು ಅರ್ಪಿಸಿ.
ಮಹತ್ವ
ಈ ದಿನ ಗಣೇಶನನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತೆ ಅಲ್ಲದೆ ಏನಾದರೂ ಸಂಕಲ್ಪ ತೆಗೆದುಕೊಂಡರೆ ಅದು ನೆರವೇರಲು ಗಣೇಶ ಸಹಾಯ ಮಾಡುತ್ತಾನೆ ಎಂಬ ಅಚಲ ನಂಬಿಕೆ ಆತನನ್ನು ನಂಬಿದ ಭಕ್ತರಲ್ಲಿ ಇರುತ್ತದೆ.