Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
Vinayaka Chaturthi March 2021: ಗಣೇಶನ ಭಕ್ತರಿಗೆ ಈ ದಿನ ತುಂಬಾ ಮಹತ್ವವಾದದ್ದು ಏಕೆ?
ಮಾರ್ಚ್ 17ಕ್ಕೆ ವಿನಾಯಕ ಚತುರ್ಥಿ. ವಿಘ್ನ ನಿವಾರಕನನ್ನು ಆರಾಧಿಸುವ ದಿನ. ವಿಘ್ನ ನಿವಾರಕನನ್ನು ಆರಾಧಿಸಿದರೆ ಆತ ಎಂದಿಗೂ ತನ್ನ ಭಕ್ತರನ್ನು ಕೈ ಬಿಡುವುದಿಲ್ಲ. ವಿನಾಯಕ ಚತುರ್ಥಿಯನ್ನು ಪ್ರತಿ ತಿಂಗಳು ಆಚರಿಸಲಾಗುವುದು.

ಈ ದಿನ ಭಕ್ತರು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿ ಮಧ್ಯಾಹ್ನ ವಿನಾಯಕನಿಗೆ ಪೂಜೆ ಮಾಡಿ ಸೂರ್ಯ ಮುಳುಗುವವರೆಗೆ ಉಪವಾಸ ವ್ರತ ಪಾಲಿಸುತ್ತಾರೆ.
ನಾವಿಲ್ಲಿ ವಿನಾಯಕ ಚತುರ್ಥಿ ಮುಹೂರ್ತ, ತಿಥಿ ಸಮಯ, ವ್ರತದ ನಿಯಮಗಳ ಕುರಿತು ಹೇಳಲಾಗಿದೆ ನೋಡಿ:

ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ
ಕೃಷ್ಣ ಪಕ್ಷದಲ್ಲಿ ಸಂಕಷ್ಟಿ ಆಚರಿಸಿದರೆ ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ ಆಚರಿಸಲಾಗುವುದು. ಈ ದಿನ ಭಕ್ತರು ಬೆಳಗ್ಗೆಯಿಂದ ಉಪವಾಸವಿದ್ದು ಸೂರ್ಯಾಸ್ತವಾದ ಮೇಲೆ ಉಪವಾಸ ವ್ರತ ಮುಕ್ತಾಯವಾಗುವುದು.

ಮುಹೂರ್ತ, ತಿಥಿ ಸಮಯ
ವಿನಾಯಕ ಚತುರ್ಥಿಯ ತಿಥಿ ಪ್ರಾರಂಭ ಮಾರ್ಚ್ 16, 8:58ಕ್ಕೆ ಪ್ರಾರಂಭ
ಮುಕ್ತಾಯ: ಮಾರ್ಚ್ 17, ರಾತ್ರಿ 11:28
ಪೂಜೆಗೆ ಸಮಯ: ಬೆಳಗ್ಗೆ 11:17ರಿಂದ ಮಧ್ಯಾಹ್ನ 1:42

ವಿನಾಯಕ ಚತುರ್ಥಿಯಂದು ಪಾಲಿಸಬೇಕಾದ ನಿಯಮಗಳು
* ಬೆಳಗ್ಗೆ ಬೇಗನೆ ಅಂದ್ರೆ ಸೂರ್ಯೋದಯಕ್ಕಿಂತ 2 ಗಂಟೆ ಮುಂಚೆ ಎದ್ದೇಳಿ.
* ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ.
* ಈ ದಿನ ಏನಾದರೂ ಸಂಕಲ್ಪ ಕೈಗೊಳ್ಳಿ.
* ಗಣೇಶನಿಗೆ ಧ್ಯಾನ ಮಾಡಿ.
* ದೇವರಿಗೆ ಅರ್ಘ್ಯ ನೀಡಿ.
* ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಸೇವಿಸಬೇಡಿ.
* ಈ ದಿನ ತಂಬಾಕು ಹಾಗೂ ಮದ್ಯ ಸೇವನೆ ಒಳ್ಳೆಯದಲ್ಲ.
* ಪೂಜಾ ಸಮಯದಲ್ಲಿ ಪೂಜೆ ಸಲ್ಲಿಸಿ.
* ಗಣೇಶನಿಗೆ ಮೋದಕ, ಹಣ್ಣುಮ ಹಂಪಲು ಅರ್ಪಿಸಿ.

ಮಹತ್ವ
ಈ ದಿನ ಗಣೇಶನನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತೆ ಅಲ್ಲದೆ ಏನಾದರೂ ಸಂಕಲ್ಪ ತೆಗೆದುಕೊಂಡರೆ ಅದು ನೆರವೇರಲು ಗಣೇಶ ಸಹಾಯ ಮಾಡುತ್ತಾನೆ ಎಂಬ ಅಚಲ ನಂಬಿಕೆ ಆತನನ್ನು ನಂಬಿದ ಭಕ್ತರಲ್ಲಿ ಇರುತ್ತದೆ.



Click it and Unblock the Notifications