Latest Updates
-
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ!
Vinayaka Chaturthi March 2021: ಗಣೇಶನ ಭಕ್ತರಿಗೆ ಈ ದಿನ ತುಂಬಾ ಮಹತ್ವವಾದದ್ದು ಏಕೆ?
ಮಾರ್ಚ್ 17ಕ್ಕೆ ವಿನಾಯಕ ಚತುರ್ಥಿ. ವಿಘ್ನ ನಿವಾರಕನನ್ನು ಆರಾಧಿಸುವ ದಿನ. ವಿಘ್ನ ನಿವಾರಕನನ್ನು ಆರಾಧಿಸಿದರೆ ಆತ ಎಂದಿಗೂ ತನ್ನ ಭಕ್ತರನ್ನು ಕೈ ಬಿಡುವುದಿಲ್ಲ. ವಿನಾಯಕ ಚತುರ್ಥಿಯನ್ನು ಪ್ರತಿ ತಿಂಗಳು ಆಚರಿಸಲಾಗುವುದು.

ಈ ದಿನ ಭಕ್ತರು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿ ಮಧ್ಯಾಹ್ನ ವಿನಾಯಕನಿಗೆ ಪೂಜೆ ಮಾಡಿ ಸೂರ್ಯ ಮುಳುಗುವವರೆಗೆ ಉಪವಾಸ ವ್ರತ ಪಾಲಿಸುತ್ತಾರೆ.
ನಾವಿಲ್ಲಿ ವಿನಾಯಕ ಚತುರ್ಥಿ ಮುಹೂರ್ತ, ತಿಥಿ ಸಮಯ, ವ್ರತದ ನಿಯಮಗಳ ಕುರಿತು ಹೇಳಲಾಗಿದೆ ನೋಡಿ:

ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ
ಕೃಷ್ಣ ಪಕ್ಷದಲ್ಲಿ ಸಂಕಷ್ಟಿ ಆಚರಿಸಿದರೆ ಶುಕ್ಲ ಪಕ್ಷದ ನಾಲ್ಕನೇ ದಿನ ವಿನಾಯಕ ಚತುರ್ಥಿ ಆಚರಿಸಲಾಗುವುದು. ಈ ದಿನ ಭಕ್ತರು ಬೆಳಗ್ಗೆಯಿಂದ ಉಪವಾಸವಿದ್ದು ಸೂರ್ಯಾಸ್ತವಾದ ಮೇಲೆ ಉಪವಾಸ ವ್ರತ ಮುಕ್ತಾಯವಾಗುವುದು.

ಮುಹೂರ್ತ, ತಿಥಿ ಸಮಯ
ವಿನಾಯಕ ಚತುರ್ಥಿಯ ತಿಥಿ ಪ್ರಾರಂಭ ಮಾರ್ಚ್ 16, 8:58ಕ್ಕೆ ಪ್ರಾರಂಭ
ಮುಕ್ತಾಯ: ಮಾರ್ಚ್ 17, ರಾತ್ರಿ 11:28
ಪೂಜೆಗೆ ಸಮಯ: ಬೆಳಗ್ಗೆ 11:17ರಿಂದ ಮಧ್ಯಾಹ್ನ 1:42

ವಿನಾಯಕ ಚತುರ್ಥಿಯಂದು ಪಾಲಿಸಬೇಕಾದ ನಿಯಮಗಳು
* ಬೆಳಗ್ಗೆ ಬೇಗನೆ ಅಂದ್ರೆ ಸೂರ್ಯೋದಯಕ್ಕಿಂತ 2 ಗಂಟೆ ಮುಂಚೆ ಎದ್ದೇಳಿ.
* ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ.
* ಈ ದಿನ ಏನಾದರೂ ಸಂಕಲ್ಪ ಕೈಗೊಳ್ಳಿ.
* ಗಣೇಶನಿಗೆ ಧ್ಯಾನ ಮಾಡಿ.
* ದೇವರಿಗೆ ಅರ್ಘ್ಯ ನೀಡಿ.
* ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಸೇವಿಸಬೇಡಿ.
* ಈ ದಿನ ತಂಬಾಕು ಹಾಗೂ ಮದ್ಯ ಸೇವನೆ ಒಳ್ಳೆಯದಲ್ಲ.
* ಪೂಜಾ ಸಮಯದಲ್ಲಿ ಪೂಜೆ ಸಲ್ಲಿಸಿ.
* ಗಣೇಶನಿಗೆ ಮೋದಕ, ಹಣ್ಣುಮ ಹಂಪಲು ಅರ್ಪಿಸಿ.

ಮಹತ್ವ
ಈ ದಿನ ಗಣೇಶನನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತೆ ಅಲ್ಲದೆ ಏನಾದರೂ ಸಂಕಲ್ಪ ತೆಗೆದುಕೊಂಡರೆ ಅದು ನೆರವೇರಲು ಗಣೇಶ ಸಹಾಯ ಮಾಡುತ್ತಾನೆ ಎಂಬ ಅಚಲ ನಂಬಿಕೆ ಆತನನ್ನು ನಂಬಿದ ಭಕ್ತರಲ್ಲಿ ಇರುತ್ತದೆ.



Click it and Unblock the Notifications