Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಸ್ತು ಸಲಹೆ: ಮನೆಯಲ್ಲಿ ಹಿತ್ತಾಳೆ ಸಿಂಹ ಇಟ್ಟರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತೆ, ಯಾವ ದಿಕ್ಕಿನಲ್ಲಿ ಗೊತ್ತಾ?
ಸಮಸ್ಯೆ ಇಲ್ಲದವರು ಯಾರು ಇಲ್ಲ, ಎಲ್ಲರಿಗೂ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇರುತ್ತದೆ. ಆದರ ವಾಸ್ತುಶಾಸ್ತ್ರಜ್ಞರ ಪ್ರಕಾರ ನಮಗೆ ಕಾಡುವ ಬಹುತೇಕ ಸಮಸ್ಯೆಗಳಿಗೆ ವಾಸ್ತು ದೋಷವೇ ಕಾರಣ ಎನ್ನುತ್ತಾರೆ.
ಆದ್ದರಿಂದ ನಮ್ಮ ಬದುಕಿನಲ್ಲಿ ಯಾವುದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮಗೆ ವಾಸ್ತುಶಾಸ್ತ್ರದ ಮೇಲೆ ನಂಬಿಕ ಇದ್ದರೆ ಮೊದಲು ವಾಸ್ತುತಜ್ಞರ ಸಲಹೆಯನ್ನು ಪಡೆಯಬಹುದು. ಇವರ ಸಲಹೆಯನ್ನು ಪಾಲಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸಹ ದೂರಮಾಡಬಹುದು.

ಮನುಷ್ಯನಿಗೆ ಕಾಡುವ ಹಲವು ಸಮಸ್ಯೆಗಳಲ್ಲಿ ಒಂದು ಆತ್ಮವಿಶ್ವಾಸದ ಕೊರತೆ. ತನ್ನಲ್ಲಿ ಎಷ್ಟೇ ಜ್ಞಾನ ಇದ್ದರೂ ಆತ್ಮವಿಶ್ವಾಸ ಒಂದು ಇಲ್ಲವಾದರೆ ಜ್ಞಾನ ಇದ್ದೂ ಪ್ರಯೋಜನವಿಲ್ಲ. ಇಂಥಾ ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಲು ವಾಸ್ತುಶಾಸ್ತ್ರದಲ್ಲಿ ಒಂದು ಸರಳ ಪರಿಹಾರವಿದೆ, ಏನದು ಅದನ್ನು ಪಾಲಿಸುವುದು ಹೇಗೆ ಮುಂದೆ ನೋಡೋಣ:

ಹಿತ್ತಾಳೆ ಸಿಂಹ
ನೀವು ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ಮತ್ತು ನಿಮ್ಮ ಕೆಲಸದಲ್ಲಿ ಅನೇಕ ಕೆಲಸಗಳು ವಿಫಲವಾಗುತ್ತಿದ್ದರೆ ಅಥವಾ ನಿಮ್ಮ ಕೆಲಸದಲ್ಲಿ ಕೇವಲ ತಪ್ಪುಗಳೇ ಹೆಚ್ಚು ಕಾಣುತ್ತಿದ್ದರೆ ಇದು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ. ಅಂತಹ ಸಂದರ್ಭಗಳನ್ನು ಎದುರಿಸಲು, ಮನೆಯಲ್ಲಿ ಸಿಂಹದ ಪ್ರತಿಮೆಯನ್ನು ಇರಿಸಿ, ಏಕೆಂದರೆ ಅದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಹಾಗೆಯೇ ಹಿತ್ತಾಳೆಯ ಸಿಂಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಎಂಬುದು ಸಹ ಬಹಳ ಮುಖ್ಯ ಮತ್ತು ಹಾಗೆ ಮಾಡದಿದ್ದರೆ ಲಾಭದ ಬದಲು ನಷ್ಟವನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಈ ಪರಿಸ್ಥಿತಿಯು ನಮ್ಮನ್ನು ಅತಿಯಾದ ಆಕ್ರಮಣಶೀಲತೆಯ ಕಡೆಗೆ ಎಳೆಯುತ್ತದೆ.
ಆದ್ದರಿಂದ ಹಿತ್ತಾಳೆ ಸಿಂಹವನ್ನು ಯಾವ ದಿಕ್ಕಿನಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಯಾವ ದಿಕ್ಕಿನಲ್ಲಿ ಅಶುಭ ಮತ್ತು ಅದರ ಲಾಭ ಮತ್ತು ಅನಾನುಕೂಲಗಳನ್ನು ತಿಳಿಯೋಣ.

ಹಿತ್ತಾಳೆಯ ಸಿಂಹದ ವಿಗ್ರಹ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಿತ್ತಾಳೆಯ ಸಿಂಹದ ವಿಗ್ರಹವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಮನೆಯವರು ಎಂದಿಗೂ ಸೋಲನ್ನು ಎದುರಿಸುವುದಿಲ್ಲ. ಇದರೊಂದಿಗೆ ಕುಟುಂಬ ಸದಸ್ಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಮನೆಯಲ್ಲಿ ಹಿತ್ತಾಳೆಯ ಸಿಂಹವನ್ನು ಇಟ್ಟುಕೊಳ್ಳುವುದರಿಂದ ಯಾವುದೇ ರೀತಿಯ ಭಯವನ್ನು ಎದುರಿಸುವ ಶಕ್ತಿ ಬರುತ್ತದೆ.

ಹಿತ್ತಾಳೆ ಗುರುವಿನ ವಾಸಸ್ಥಾನ ಎಂದು ನಂಬಲಾಗಿದೆ
ಹಿತ್ತಾಳೆಯು ಹಳದಿ ಬಣ್ಣದ ಲೋಹವಾಗಿದ್ದು ಗುರುಗ್ರಹದ ವಾಸಸ್ಥಾನ ಎಂದು ನಂಬಲಾಗಿದೆ. ಮನೆಯಲ್ಲಿ ಹಿತ್ತಾಳೆಯ ಸಿಂಹವನ್ನು ಇಟ್ಟುಕೊಳ್ಳುವುದರಿಂದ ಜಾತಕದಲ್ಲಿ ಗುರುವು ದುರ್ಬಲವಾಗಿರುವವರ ದೋಷವನ್ನು ಕಡಿಮೆ ಮಾಡುತ್ತದೆ.

ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು
ವಾಸ್ತು ಶಾಸ್ತ್ರದ ಪ್ರಕಾರ, ಹಿತ್ತಾಳೆ ಸಿಂಹವನ್ನು ಲಾಭಕ್ಕಾಗಿ ಸರಿಯಾದ ದಿಕ್ಕಿನಲ್ಲಿ ಇಡುವುದು ಅವಶ್ಯಕ. ಹಿತ್ತಾಳೆ ಸಿಂಹವನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಅಲ್ಲದೆ, ಈ ಹಿತ್ತಾಳೆಯ ಸಿಂಹದ ಮುಖವು ಮನೆಯ ಮಧ್ಯದಲ್ಲಿರಬೇಕು. ಈ ಹಿತ್ತಾಳೆ ಸಿಂಹದ ಮೇಲೆ ಯಾವುದೇ ಧೂಳು ಅಥವಾ ಮಣ್ಣು ಬರಬಾರದು ಎಂಬುದನ್ನೂ ನೆನಪಿನಲ್ಲಿಡಬೇಕು.

ಹಿತ್ತಾಳೆ ಸಿಂಹವನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ ಈ ಸಮಸ್ಯೆ ಬರುತ್ತದೆ
ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಹಿತ್ತಾಳೆ ಸಿಂಹವನ್ನು ಮನೆಯಲ್ಲಿ ಇರಿಸಿದರೆ ಅದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಇದು ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ. ಆದರೆ ಇಲ್ಲಿ ಅದನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಡುವುದನ್ನು ನೆನಪಿನಲ್ಲಿಡಬೇಕು. ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಳ್ಳದಿದ್ದರೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಹಿತ್ತಾಳೆ ಸಿಂಹವನ್ನು ಮನೆಯಲ್ಲಿ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಸ್ಥಾಪಿಸುವುದು ಅತ್ಯವಶ್ಯಕ. ಅಲ್ಲದೆ, ನೀವು ಮನೆಯಲ್ಲಿ ಹಿತ್ತಾಳೆ ಸಿಂಹವನ್ನು ಸ್ಥಾಪಿಸಲು ಯೋಚಿಸುತ್ತಿದ್ದರೆ ಮೊದಲು ವಾಸ್ತು ತಜ್ಞರ ಸಲಹೆಯನ್ನು ಪಡೆಯಬೇಕು.



Click it and Unblock the Notifications