Just In
- 5 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 6 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 6 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 7 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Karka Rashi Ugadi Bhavishya 2022 :ಯುಗಾದಿ ಪಂಚಾಂಗ 2022-23: ಹೇಗಿದೆ ಕರ್ಕ ರಾಶಿಯ ಭವಿಷ್ಯ?
ಯುಗಾದಿ ಎಂದರೆ ಹೊಸ ಸಂವತ್ಸರ, ಯುಗಾದಿ ಪಂಚಾಂಗ ಪ್ರಕಾರ ದ್ವಾದಶಗಳ ರಾಶಿಫಲ ಹೇಳಲಾಗುವುದು. ನಾವು ಪ್ರತೀ ರಾಶಿಯ ವಾರ್ಷಿಕ ರಾಶಿಫಲ ವಿವರವಾಗಿ ನೀಡಿದ್ದೇವೆ. ಇಲ್ಲಿ ಕರ್ಕ ರಾಶಿಯವರ ಉದ್ಯೋಗ, ವ್ಯಾಪಾರ, ಕುಟುಂಬ, ಶಿಕ್ಷಣ, ಆರೋಗ್ಯ ಯುಗಾದಿ ಪಂಚಾಂಗ ಪ್ರಕಾರ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:
ಕರ್ಕ ರಾಶಿ
ಕರ್ಕ ರಾಶಿಯವರ ಅಧಿಪತಿ ಚಂದ್ರ. ಕರ್ಕ ರಾಶಿಯೆಂದರೆ ಪುನರ್ವಸು ನಕ್ಷತ್ರ 4ನೇ ಪಾದ, ಪುಷ್ಯಾ ನಕ್ಷತ್ರ 1, 2, 3, 4, ಆಶ್ಲೇಷ, 1,2, 3 ನಕ್ಷತ್ರ ಸೇರಿ ಆಗಿದೆ. ಈ ರಾಶಿಯವರಿಗೆ ಯೋಗ, ಅವಮಾನ 2 ಇದೆ. ಕರ್ಕ ರಾಶಿಯವರ ವೃತ್ತಿ ಜೀವನ ಚೆನ್ನಾಗಿರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ.
ಶಿಕ್ಷಣದ ಬಗ್ಗೆ ನೋಡುವುದಾದರೆ ಈ ವರ್ಷ ವಿದ್ಯಾರ್ಥಿಗಳಿಗೆ ಶುಭವಾಗಿದೆ. ಏಪ್ರಿಲ್ನಲ್ಲಿ ಗುರು ಗ್ರಹವು ಮೀನ ಪ್ರವೇಶಿಸಿದಾಗ ಈ ರಾಶಿಯ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚುವುದು.
ಆರ್ಥಿಕವಾಗಿಯೂ ತುಂಬಾ ಚೆನ್ನಾಗಿದೆ. 11ನೇ ಮನೆಯಲ್ಲಿ ರಾಹು ಇರುವುದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಮತ್ತಷ್ಟು ಕಠಿಣ ಪರಿಶ್ರಮ ಹಾಕಿ. ಅಲ್ಲದೆ ಕುಟುಂಬದಲ್ಲಿ ಶುಭ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ.
ಅಷ್ಟಮ ಗುರುವಿನ ಕಾರಣದಿಂದ ಪ್ರಥಮಾರ್ಧದಲ್ಲಿ ಸ್ವಲ್ಪ ಸಂಕಷ್ಟ ಎದುರಾಗಬಹುದು. ನೀವು ಯಾರಿಗೂ ಜಾಮೀನು ನಿಲ್ಲಬೇಡಿ, ನೀಡಿದರೆ ನೀವೇ ಸಂಕಷ್ಟಕ್ಕೆ ಒಳಗಾಗುವಿರಿ. ಕಂಟಕ ಶನಿಕೂಡ ಇರುತ್ತದೆ. ಹೋಟೆಲ್, ಹೈನುಗಾರಿಕೆ, ಲೆದರ್ ವ್ಯಾಪಾರ ಮಾಡುವವರು ತಮ್ಮ ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಇರಬೇಕು. ಕೇತುವಿನ ನಾಲ್ಕನೇ ಮನೆ ಮನೆಯ ನೆಮ್ಮದಿಯ ವಾತಾವರಣದಲ್ಲಿ ಸ್ವಲ್ಪ ಏರು-ಪೇರು ಉಂಟು ಮಾಡುತ್ತದೆ. ರಾಹು 10ನೇ ಮನೆಯಲ್ಲಿ ಇರುವುದರಿಂದ ಕೆಲಸದಲ್ಲಿ ಒತ್ತಡವನ್ನು ಉಂಟು ಮಾಡುತ್ತೆ.
ಕುಟುಂಬ ಜೀವನ ಚೆನ್ನಾಗಿರುತ್ತದೆ,ನಿಮ್ಮ ಸಾಮಾಜಿಕ ಗೌರವ ಹೆಚ್ಚುವುದು. ನವ ದಂಪತಿಗಳು ಶುಭ ಸುದ್ದಿ ನೀಡುವಿರಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಅಡೆತಡೆಗಳು ಇರಬಹುದು, ಆದರೆ ಕ್ರಮೇಣ ಎಲ್ಲವೂ ಸರಿ ಹೋಗುವುದು, ವರ್ಷದ ಕೊನೆಯಲ್ಲಿ ಎಲ್ಲವೂ ಸರಿ ಹೋಗುವುದು. ಮಕ್ಕಳ ವರ್ತನೆಯ ಚಿಂತೆ ಕಾಡಬಹುದು. ಇನ್ನು ಮೂರನೇಯ ವ್ಯಕ್ತಿ ನಿಮ್ಮ ಜೀವನದಲ್ಲಿ ಮೂಗು ತೂರಿಸಲು ಬಿಡಬೇಡಿ.
ಶನೇಶ್ವರ ಕೃಪೆಯಿಂದಾಗಿ ವ್ಯಾಪಾರದಲ್ಲಿ ಯಶಸ್ಸು ಪಡೆಯುತ್ತೀರಿ,ಅನಿರೀಕ್ಷಿತ ಲಾಭ ಕೂಡ ಬರುವುದು. ಒಳ್ಳೆಯ ಉಳಿತಾಯ ಮಾಡುವಿರಿ, ಆಸ್ತಿ, ವಾಹನ ಖರೀದಿಸುವ ಯೋಗವಿದೆ. ಇನ್ನು ಆಸ್ತಿಯನ್ನು ಮಾರಾಟ ಮಾಡಬಯಸುವವರಿಗೆ ಮಾರಾಟದಿಂದ ಲಾಭ ಗಳಿಸುವಿರಿ. ಇನ್ನು ಹೂಡಿಕೆ ಮಾಡುವಾಗ ಎಚ್ಚರಿಕೆವಹಿಸಿ.
ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ವರ್ಷದ ಪ್ರಾರಂಭದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿದರೂ ವೈದ್ಯರಿಗೆ ತೋರಿಸಬೇಕು. ವರ್ಷದ ದ್ವಿತೀಯಾರ್ಧದಲ್ಲಿ ಆರೋಗ್ಯ ಸ್ಥಿರವಾಗಿರುತ್ತೆ. ನೀವು ಸಕಾರಾತ್ಮಕ ಯೋಚಿಸಿದರೆ ಅದರಿಂದ ಆರೋಗ್ಯ ಉತ್ತಮವಾಗಿರುತ್ತೆ. ಒಟ್ಟಿನಲ್ಲಿ ನೋಡುವುದಾದರೆ ಯುಗಾದಿ ಪಂಚಾಂಗ ಪ್ರಕಾರ ಕರ್ಕ ರಾಶಿಯವರಿಗೆ ಈ ವರ್ಷ ಶುಭವಾಗಿದೆ.
ಅದೃಷ್ಟ ಬಣ್ಣ: ಬಿಳಿ
ಪರಿಹಾರ
ರಾಜಕಾರಣಿಗಳು
ಚಂದ್ರ,
ಗುರು
ಹಾಗೂಈ
ಶನೇಶ್ವರನ
ಶಾಂತಿ
ಮಾಡಿಸಲೇಬೇಕು.
ಇದರಿಂದ
ಒಳ್ಳೆಯದಾಗಲಿದೆ.
ದುರ್ಗೆಯನ್ನು
ಆರಾಧಿಸಿ.
ಬಡ
ಮಕ್ಕಳಿಗೆ
ವಿದ್ಯೆಗೆ
ಸಂಬಂಧಿಸಿದ
ವಸ್ತುಗಳನ್ನು
ದಾನ
ಮಾಡಿ.
ಯುಗಾದಿ ಪಂಚಾಂಗ ಪ್ರಕಾರ 2022 ಮಿಥುನ ರಾಶಿಯ ವಾರ್ಷಿಕ ಫಲ
ಯುಗಾದಿ ಪಂಚಾಂಗ: ವೃಷಭ ರಾಶಿಯವರಿಗೆ ಹೊಸ ಸಂವತ್ಸರ ತುಂಬಾನೇ ಒಳ್ಳೆಯದಿದೆ
ಮೇಷ ರಾಶಿ: ಯುಗಾದಿ ಪಂಚಾಂಗ ಪ್ರಕಾರ 2022-23ರ ವಾರ್ಷಿಕ ಭವಿಷ್ಯ