Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
'ಗಾರ್ಬೆಜ್ ಕೆಫೆ': ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಚಿತ ಊಟ ಪಡೆಯಿರಿ!
ಪ್ಲಾಸ್ಟಿಕ್ ಎನ್ನುವ ಮಹಾಮಾರಿಯು ಈಗ ವಿಶ್ವದೆಲ್ಲೆಡೆ ಹಾಹಾಕಾರ ಉಂಟು ಮಾಡಿದೆ. ಮಣ್ಣಿನಲ್ಲಿ ಕರಗದೆ ಇರುವಂತಹ ಪ್ಲಾಸ್ಟಿಕ್ನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಪ್ಲಾಸ್ಟಿಕ್ ಎನ್ನುವುದು ಪ್ರಕೃತಿ ಮೇಲೆ ಮಾರಕ ಪರಿಣಾಮ ಬೀರುತ್ತಿದ. ಇದು ಸಮುದ್ರದ ಆಳಕ್ಕೆ ತೆರಳಿ ಮೀನುಗಳಿಗೆ ಉಸಿರಾಡದಂತೆ ಮಾಡುತ್ತಿದೆ. ಹೀಗಾಗಿ ಹೆಚ್ಚಿನ ರಾಷ್ಟ್ರಗಳು ಪ್ಲಾಸ್ಟಿಕ್ ನಿಷೇಧ ಮಾಡುತ್ತಿದೆ. ಭಾರತವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ಪ್ಲಾಸ್ಟಿಕ್ ಕಸದ ವಿಲೇವಾರಿ ಮಾಡಲು ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿವೆ. ಕಸವು ತುಂಬಿರುವ ಕಾರಣದಿಂದಾಗಿ ಸ್ವಚ್ಛ ಭಾರತ್ ಅಭಿಯಾನವನ್ನು ಕೇಂದ್ರ ಸರ್ಕಾರವು ಆರಂಭಿಸಿದೆ.
ಪ್ರತಿನಿತ್ಯವು ದೇಶದೆಲ್ಲೆಡೆಯಲ್ಲಿ ಲೋಡ್ ಗಟ್ಟಲೆ ಕಸವು ಬೀಳುತ್ತಲೇ ಇದೆ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ದಿನಕ್ಕೆ 1.50 ಲಕ್ಷ ಮೆಟ್ರಿಕ್ ಟನ್ ಘನತ್ಯಾಜ್ಯ ಮತ್ತು ಶೇ.90ರಷ್ಟು ಸಂಪೂರ್ಣವಾಗಿ ಸಂಗ್ರಹವಾದ ಕಸವು ಸಂಗ್ರಹವಾಗುತ್ತಿದೆ. ಕೇವಲ ಇದು ಮಾತ್ರ ದೇಶದ ಸಮಸ್ಯೆಯಲ್ಲ, ಇದರೊಂದಿಗೆ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡುವುದು ಕೂಡ ದೊಡ್ಡ ಸವಾಲಾಗಿದೆ.
ಛತ್ತೀಸಗಢದಲ್ಲಿ ಇರುವಂತಹ ಅಂಬಿಕಾಪುರ ಮಹಾನಗರ ಪಾಲಿಕೆ(ಎಎಂಸಿ)ಯು ಗಾರ್ಬೆಜ್ ಕೆಫೆ'ಎನ್ನುವುದನ್ನು ಆರಂಭಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಆಹಾರ ಪಡೆಯಬಹುದು. ಇದು ತುಂಬಾ ಒಳ್ಳೆಯ ಅಭಿಯಾನವಲ್ಲವೇ? ಕೇವಲ ಎರಡು ಲಕ್ಷ ಜನಸಂಖ್ಯೆಯಿರುವ ಈ ನಗರ ಇದಾಗಿದೆ. ಛತ್ತೀಸಗಢ ರಾಜ್ಯವು ಅತೀ ಸ್ವಚ್ಛ ನಗರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಂತಹ ಅದ್ಭುತವಾದ ಅಭಿಯಾನದಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ. ಇಲ್ಲಿ ಕಸದ ವಿಲೇವಾರಿಯೂ ಆಗುವುದು ಮತ್ತು ಹಸಿವು ಕೂಡ ನೀಗುವುದು. ಇದು ಕೇವಲ ಕಸದ ವಿಲೇವಾರಿಗಾಗಿ ಮಾಡಿರುವಂತಹ ಕಾರ್ಯಕ್ರಮವಲ್ಲ, ಇಲ್ಲಿ ಹೆಚ್ಚಾಗಿ ನಿರ್ವಸತಿಗರಿಗೆ ಆಹಾರ ನೀಡುವ ಮಹತ್ತರ ಉದ್ದೇಶವಿದೆ.

ಈ ಅಭಿಯಾನ ಹೇಗೆ ಹೊಳೆದಿದೆ?
ಅಂಬಿಕಾಪುರ ನಗರ ಪಾಲಿಕೆ ಮೇಯರ್ ಅಜಯ್ ತಿರ್ಕೆ ಅವರು ತನ್ನ ಬಜೆಟ್ ನಲ್ಲಿ ಈ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದಾರೆ ಮತ್ತು 5.5 ಲಕ್ಷ ರೂ. ಅನುದಾನದ ಜತೆಗೆ ಇದನ್ನು ಆರಂಭಿಸಿದ್ದಾರೆ. ಗಾರ್ಬೆಜ್ ಕೆಫೆ ಅಭಿಯಾನವು ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಬರುತ್ತದೆ. ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಈ ಕೆಫೆಯು ಅಂಬಿಕಾಪುರ ಬಸ್ ನಿಲ್ದಾಣದ ಬಳಿಯಲ್ಲೇ ಇದೆ. ಈ ಯೋಜನೆಗೆ ಹಣದ ಕೊರತೆಯಾದರೆ ಆಗ ಶಾಸಕರ ಕ್ಷೇತ್ರ ನಿಧಿ ಮತ್ತು ಸಂಸದ ನಿಧಿಯಿಂದ ಇದನ್ನು ಪಡೆದುಕೊಂಡು, ಇದು ಸರಾಗವಾಗಿ ಸಾಗಲು ಪ್ರಯತ್ನಿಸಲಾಗುವುದು ಎಂದು ಎಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಆಹಾರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ
ಈ ಯೋಜನೆಯಲ್ಲಿ ಕಸ ಹೆಕ್ಕುವವರು ಅಥವಾ ತುಂಬಾ ಬಡತನದಲ್ಲಿರುವ ಜನರು ಇಲ್ಲಿ ಒಂದು ಅರ್ಧ ಅಥವಾ ಒಂದು ಕಿ.ಲೋ. ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಚಿತ ಆಹಾರ ಪಡೆಯಬಹುದು. 500 ಗ್ರಾಂ ತ್ಯಾಜ್ಯಕ್ಕೆ ಉಪಾಹಾರ ಮತ್ತು ಒಂದು ಕಿ.ಲೋ. ತ್ಯಾಜ್ಯಕ್ಕೆ ಊಟ ಸಿಗುತ್ತದೆ. ತ್ಯಾಜ್ಯವು ಸಂಗ್ರಹಣೆಯಾದ ಬಳಿಕ ಇದನ್ನು ಸಾಲಿಡ್ ಆ್ಯಂಡ್ ಲಿಕ್ವಿಡ್ ರಿಸೋರ್ಸ್ ಮ್ಯಾನೇಜ್ ಮೆಂಟ್(ಎಸ್ ಎಲ್ ಆರ್ ಎಂ)ಗೆ ಕಳುಹಿಸಿಕೊಡಲಾಗುತ್ತದೆ. ಇದು ಕಸ ಹೆಕ್ಕುವವರಿಗೆ ಉಚಿತ ಕೂಪನ್ ನೀಡುತ್ತದೆ. ಈ ಕೂಪನ್ ನ್ನು ಕ್ಯಾಂಟೀನ್ ನಲ್ಲಿ ಉಚಿತ ಉಪಾಹಾರ ಮತ್ತು ಊಟ ಪಡೆಯಲು ಬಳಸಬಹುದು.
ಪ್ಲಾಸ್ಟಿಕ್ ತ್ಯಾಜ್ಯ ಪಡೆದ ಬಳಿಕ ಇದನ್ನು ಅವುಗಳ ಪ್ಲಾಂಟ್ ನಲ್ಲಿ ಮರುಬಳಕೆ ಮಾಡಲಾಗುತ್ತದೆ ಮತ್ತು ಪ್ಲಾಸ್ಟಿಕ್ ಕಣಗಳನ್ನು ಮತ್ತೆ ಮಾರಲಾಗುವುದು. ಮೇಯರ್ ಅಜಯ್ ಟಿರ್ಕೆ ಅವರು ಹೇಳುವ ಪ್ರಕಾರ, ಮರುಬಳಕೆಯ ಪ್ಲಾಸ್ಟಿಕ್ ಕಣ ಮತ್ತು ಪೇಪರ್ ತಿಂಗಳೀಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ನೀಡುತ್ತದೆ ಎನ್ನುತ್ತಾರೆ.
ಇನ್ನಷ್ಟು ಗಾರ್ಬೆಜ್ ಕೆಫೆ ಯಾಕೆ ಬೇಕು?
ಗಾರ್ಬೆಜ್ ಕೆಫೆಯು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲಿದೆ ಮತ್ತು ತ್ಯಾಜ್ಯದಿಂದ ಆಗುವಂತಹ ಕಾಯಿಲೆಗಳನ್ನು ತಡೆಯುವುದು. ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ಮಾಡಿದರೆ, ಅದು ನೀರನ್ನು ಹೀರಿಕೊಳ್ಳುವುದಿಲ್ಲ ಮತ್ತು ಅದು ಪ್ರವಾಹದ ಸಂದರ್ಭದಲ್ಲೂ ಹೆಚ್ಚು ಕಾಲ ಬಾಳಿಕೆ ಬರುವುದು. ಇದರಿಂದಾಗಿ ರಸ್ತೆಗೆ ತಗಲುವ ಖರ್ಚು ಕೂಡ ಕಡಿಮೆ. ಭಾರತವನ್ನು ಕಸ ಮತ್ತು ಹಸಿವಿನಿಂದ ಮುಕ್ತಗೊಳಿಸಲು ಶಪಥ ಮಾಡುವ...



Click it and Unblock the Notifications

