Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
'ಗಾರ್ಬೆಜ್ ಕೆಫೆ': ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಚಿತ ಊಟ ಪಡೆಯಿರಿ!
ಪ್ಲಾಸ್ಟಿಕ್ ಎನ್ನುವ ಮಹಾಮಾರಿಯು ಈಗ ವಿಶ್ವದೆಲ್ಲೆಡೆ ಹಾಹಾಕಾರ ಉಂಟು ಮಾಡಿದೆ. ಮಣ್ಣಿನಲ್ಲಿ ಕರಗದೆ ಇರುವಂತಹ ಪ್ಲಾಸ್ಟಿಕ್ನ್ನು ವಿಲೇವಾರಿ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಪ್ಲಾಸ್ಟಿಕ್ ಎನ್ನುವುದು ಪ್ರಕೃತಿ ಮೇಲೆ ಮಾರಕ ಪರಿಣಾಮ ಬೀರುತ್ತಿದ. ಇದು ಸಮುದ್ರದ ಆಳಕ್ಕೆ ತೆರಳಿ ಮೀನುಗಳಿಗೆ ಉಸಿರಾಡದಂತೆ ಮಾಡುತ್ತಿದೆ. ಹೀಗಾಗಿ ಹೆಚ್ಚಿನ ರಾಷ್ಟ್ರಗಳು ಪ್ಲಾಸ್ಟಿಕ್ ನಿಷೇಧ ಮಾಡುತ್ತಿದೆ. ಭಾರತವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ಪ್ಲಾಸ್ಟಿಕ್ ಕಸದ ವಿಲೇವಾರಿ ಮಾಡಲು ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿವೆ. ಕಸವು ತುಂಬಿರುವ ಕಾರಣದಿಂದಾಗಿ ಸ್ವಚ್ಛ ಭಾರತ್ ಅಭಿಯಾನವನ್ನು ಕೇಂದ್ರ ಸರ್ಕಾರವು ಆರಂಭಿಸಿದೆ.
ಪ್ರತಿನಿತ್ಯವು ದೇಶದೆಲ್ಲೆಡೆಯಲ್ಲಿ ಲೋಡ್ ಗಟ್ಟಲೆ ಕಸವು ಬೀಳುತ್ತಲೇ ಇದೆ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ದಿನಕ್ಕೆ 1.50 ಲಕ್ಷ ಮೆಟ್ರಿಕ್ ಟನ್ ಘನತ್ಯಾಜ್ಯ ಮತ್ತು ಶೇ.90ರಷ್ಟು ಸಂಪೂರ್ಣವಾಗಿ ಸಂಗ್ರಹವಾದ ಕಸವು ಸಂಗ್ರಹವಾಗುತ್ತಿದೆ. ಕೇವಲ ಇದು ಮಾತ್ರ ದೇಶದ ಸಮಸ್ಯೆಯಲ್ಲ, ಇದರೊಂದಿಗೆ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡುವುದು ಕೂಡ ದೊಡ್ಡ ಸವಾಲಾಗಿದೆ.
ಛತ್ತೀಸಗಢದಲ್ಲಿ ಇರುವಂತಹ ಅಂಬಿಕಾಪುರ ಮಹಾನಗರ ಪಾಲಿಕೆ(ಎಎಂಸಿ)ಯು ಗಾರ್ಬೆಜ್ ಕೆಫೆ'ಎನ್ನುವುದನ್ನು ಆರಂಭಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಆಹಾರ ಪಡೆಯಬಹುದು. ಇದು ತುಂಬಾ ಒಳ್ಳೆಯ ಅಭಿಯಾನವಲ್ಲವೇ? ಕೇವಲ ಎರಡು ಲಕ್ಷ ಜನಸಂಖ್ಯೆಯಿರುವ ಈ ನಗರ ಇದಾಗಿದೆ. ಛತ್ತೀಸಗಢ ರಾಜ್ಯವು ಅತೀ ಸ್ವಚ್ಛ ನಗರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಂತಹ ಅದ್ಭುತವಾದ ಅಭಿಯಾನದಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ. ಇಲ್ಲಿ ಕಸದ ವಿಲೇವಾರಿಯೂ ಆಗುವುದು ಮತ್ತು ಹಸಿವು ಕೂಡ ನೀಗುವುದು. ಇದು ಕೇವಲ ಕಸದ ವಿಲೇವಾರಿಗಾಗಿ ಮಾಡಿರುವಂತಹ ಕಾರ್ಯಕ್ರಮವಲ್ಲ, ಇಲ್ಲಿ ಹೆಚ್ಚಾಗಿ ನಿರ್ವಸತಿಗರಿಗೆ ಆಹಾರ ನೀಡುವ ಮಹತ್ತರ ಉದ್ದೇಶವಿದೆ.

ಈ ಅಭಿಯಾನ ಹೇಗೆ ಹೊಳೆದಿದೆ?
ಅಂಬಿಕಾಪುರ ನಗರ ಪಾಲಿಕೆ ಮೇಯರ್ ಅಜಯ್ ತಿರ್ಕೆ ಅವರು ತನ್ನ ಬಜೆಟ್ ನಲ್ಲಿ ಈ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದಾರೆ ಮತ್ತು 5.5 ಲಕ್ಷ ರೂ. ಅನುದಾನದ ಜತೆಗೆ ಇದನ್ನು ಆರಂಭಿಸಿದ್ದಾರೆ. ಗಾರ್ಬೆಜ್ ಕೆಫೆ ಅಭಿಯಾನವು ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಬರುತ್ತದೆ. ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಈ ಕೆಫೆಯು ಅಂಬಿಕಾಪುರ ಬಸ್ ನಿಲ್ದಾಣದ ಬಳಿಯಲ್ಲೇ ಇದೆ. ಈ ಯೋಜನೆಗೆ ಹಣದ ಕೊರತೆಯಾದರೆ ಆಗ ಶಾಸಕರ ಕ್ಷೇತ್ರ ನಿಧಿ ಮತ್ತು ಸಂಸದ ನಿಧಿಯಿಂದ ಇದನ್ನು ಪಡೆದುಕೊಂಡು, ಇದು ಸರಾಗವಾಗಿ ಸಾಗಲು ಪ್ರಯತ್ನಿಸಲಾಗುವುದು ಎಂದು ಎಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಆಹಾರಕ್ಕೆ ಪ್ಲಾಸ್ಟಿಕ್ ತ್ಯಾಜ್ಯ
ಈ ಯೋಜನೆಯಲ್ಲಿ ಕಸ ಹೆಕ್ಕುವವರು ಅಥವಾ ತುಂಬಾ ಬಡತನದಲ್ಲಿರುವ ಜನರು ಇಲ್ಲಿ ಒಂದು ಅರ್ಧ ಅಥವಾ ಒಂದು ಕಿ.ಲೋ. ಪ್ಲಾಸ್ಟಿಕ್ ತ್ಯಾಜ್ಯ ನೀಡಿ ಉಚಿತ ಆಹಾರ ಪಡೆಯಬಹುದು. 500 ಗ್ರಾಂ ತ್ಯಾಜ್ಯಕ್ಕೆ ಉಪಾಹಾರ ಮತ್ತು ಒಂದು ಕಿ.ಲೋ. ತ್ಯಾಜ್ಯಕ್ಕೆ ಊಟ ಸಿಗುತ್ತದೆ. ತ್ಯಾಜ್ಯವು ಸಂಗ್ರಹಣೆಯಾದ ಬಳಿಕ ಇದನ್ನು ಸಾಲಿಡ್ ಆ್ಯಂಡ್ ಲಿಕ್ವಿಡ್ ರಿಸೋರ್ಸ್ ಮ್ಯಾನೇಜ್ ಮೆಂಟ್(ಎಸ್ ಎಲ್ ಆರ್ ಎಂ)ಗೆ ಕಳುಹಿಸಿಕೊಡಲಾಗುತ್ತದೆ. ಇದು ಕಸ ಹೆಕ್ಕುವವರಿಗೆ ಉಚಿತ ಕೂಪನ್ ನೀಡುತ್ತದೆ. ಈ ಕೂಪನ್ ನ್ನು ಕ್ಯಾಂಟೀನ್ ನಲ್ಲಿ ಉಚಿತ ಉಪಾಹಾರ ಮತ್ತು ಊಟ ಪಡೆಯಲು ಬಳಸಬಹುದು.
ಪ್ಲಾಸ್ಟಿಕ್ ತ್ಯಾಜ್ಯ ಪಡೆದ ಬಳಿಕ ಇದನ್ನು ಅವುಗಳ ಪ್ಲಾಂಟ್ ನಲ್ಲಿ ಮರುಬಳಕೆ ಮಾಡಲಾಗುತ್ತದೆ ಮತ್ತು ಪ್ಲಾಸ್ಟಿಕ್ ಕಣಗಳನ್ನು ಮತ್ತೆ ಮಾರಲಾಗುವುದು. ಮೇಯರ್ ಅಜಯ್ ಟಿರ್ಕೆ ಅವರು ಹೇಳುವ ಪ್ರಕಾರ, ಮರುಬಳಕೆಯ ಪ್ಲಾಸ್ಟಿಕ್ ಕಣ ಮತ್ತು ಪೇಪರ್ ತಿಂಗಳೀಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ನೀಡುತ್ತದೆ ಎನ್ನುತ್ತಾರೆ.
ಇನ್ನಷ್ಟು ಗಾರ್ಬೆಜ್ ಕೆಫೆ ಯಾಕೆ ಬೇಕು?
ಗಾರ್ಬೆಜ್ ಕೆಫೆಯು ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲಿದೆ ಮತ್ತು ತ್ಯಾಜ್ಯದಿಂದ ಆಗುವಂತಹ ಕಾಯಿಲೆಗಳನ್ನು ತಡೆಯುವುದು. ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ಮಾಡಿದರೆ, ಅದು ನೀರನ್ನು ಹೀರಿಕೊಳ್ಳುವುದಿಲ್ಲ ಮತ್ತು ಅದು ಪ್ರವಾಹದ ಸಂದರ್ಭದಲ್ಲೂ ಹೆಚ್ಚು ಕಾಲ ಬಾಳಿಕೆ ಬರುವುದು. ಇದರಿಂದಾಗಿ ರಸ್ತೆಗೆ ತಗಲುವ ಖರ್ಚು ಕೂಡ ಕಡಿಮೆ. ಭಾರತವನ್ನು ಕಸ ಮತ್ತು ಹಸಿವಿನಿಂದ ಮುಕ್ತಗೊಳಿಸಲು ಶಪಥ ಮಾಡುವ...



Click it and Unblock the Notifications












