Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
ಚಾಣಕ್ಯ ಪ್ರಕಾರ ನಮ್ಮ ಬಗ್ಗೆಈ ಮೂರು ವ್ಯಕ್ತಿಗಳನ್ನ ದೂರುವುದಕ್ಕೆ ಅವಕಾಶ ಕೊಡಲೇಬಾರದು, ಆ ಮೂರು ವ್ಯಕ್ತಿಗಳಾರು ಎಂದು ನೋಡೋಣ ಬನ್ನಿ:
ಚಾಣಕ್ಯ ಹೇಳಿರುವ ಯಾವುದೇ ಅಂಶವನ್ನು ತಳ್ಳಿ ಹಾಕುವಂತಿಲ್ಲ, ಪ್ರತಿಯೊಂದು ವಿಷಯವೂ ನಮಗೇ ಹೇಳಿದಷ್ಟು ಅನ್ವಯಿಸುತ್ತದೆ, ಆದ್ದರಿಂದಲೇ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ, ಮುಂದೆಯೂ ಅನ್ವಯಿಸುತ್ತದೆ. ಸುಖ ಹಾಗೂ ದುಃಖ ಎಂಬುವುದು ಜೀವನದ ಭಾಗ, ಖುಷಿಯನ್ನು ಹಂಚಿಕೊಂಡರೆ ಖುಷಿ ಹೆಚ್ಚಾಗುತ್ತದೆ, ದುಃಖವನ್ನು ಮತ್ತೊಬ್ಬರ ಜೊತೆ ಹಂಚಿಕೊಂಡಾಗ ನಮ್ಮ ದುಃಖ ಕಡಿಮೆಯಾಗುತ್ತದೆ. ಚಾಣಕ್ಯ ಪ್ರಕಾರ ಎಂಥದ್ದೇ ಪರಿಸ್ಥಿತಿಯಲ್ಲಿ ನಮ್ಮ ಜೊತೆ ಮೂವರು ವ್ಯಕ್ತಿಗಳು ನಿಲ್ಲುತ್ತಾರೆ, ಅವರನ್ನು ಎಂದಿಗೂ ದೂರ ತಳ್ಳಬಾರದು, ಆದ್ದರಿಂದ ಈ ವ್ಯಕ್ತಿಗಳು ಜೀವನದಲ್ಲಿ ತುಂಬಾನೇ ಮುಖ್ಯ, ಆ ಮೂವರು ವ್ಯಕ್ತಿಗಳಾರು ಎಂದು ನೋಡುವುದಾದರೆ

ಸಂಸ್ಕಾರವಂತ ಹೆಂಡತಿ
ಸಂಸ್ಕಾರವಂತ ಹೆಂಡತಿ ತನ್ನ ಗಂಡನಿಗೆ ಸದಾ ನೆರಳಾಗಿರುತ್ತದೆ, ಪ್ರತಿಯೊಂದು ಕಷ್ಟ-ಸುಖದಲ್ಲಿ ಗಂಡನ ಜೊತೆಯಾಗಿರುತ್ತಾಳೆ. ಕಷ್ಟ ಸಂದರ್ಭದಲ್ಲಿ ಗಂಡನಿಗೆ ಧೈರ್ಯವನ್ನು ತುಂಬುತ್ತಾಳೆ, ಕುಟುಂಬಕ್ಕೆ ಕಷ್ಟ ಅಂತ ಬಂದಾಗ ಕುಟುಂಬದ ರಕ್ಷಣೆಗೆ ನಿಲ್ಲುತ್ತಾಳೆ. ಇಂಥ ಹೆಂಡತಿ ಸಿಕ್ಕರೆ ಅಂಥ ಗಂಡ ಪುಣ್ಯವಂತ.
ಯಾವುದೇ ಕಾರಣಕ್ಕೆ ಇಂಥ ಪತ್ನಿಯನ್ನು ದೂರ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ.
ಚಾಣಕ್ಯ ಹೇಳಿರುವ ಈ ಅಂಶ ಎಷ್ಟು ಸತ್ಯ ಅಲ್ವಾ? ಒಂದು ಒಳ್ಳೆಯ ಹೆಂಡತಿ ಸಿಕ್ಕರೆ ಅವನ ಬದುಕು ಸುಂದರವಾಗಿರುತ್ತದೆ, ಇಲ್ಲದಿದ್ದರೆ ಬದುಕು ನರಕವಾಗುವುದು. ಹೆಂಡತಿಯಾದವಳು ಗಂಡನ ಕಷ್ಟ-ಸುಖದಲ್ಲಿ ಭಾಗಿಯಾಗಬೇಕು, ಅದುವೇ ಪತ್ನಿ ಧರ್ಮ. ಹೀಗಿದ್ದರೆ ಗಂಡನಿಗೆ ಜೀವನದಲ್ಲಿ ಎಂಥದ್ದೇ ಕಷ್ಟ ಬಂದರೂ ಕಷ್ಟ ಅನಿಸಲ್ಲ.
ಇನ್ನು ಗಂಡಸರು ಅಷ್ಟೇ ಇಂಥ ಪತ್ನಿ ಸಿಕ್ಕರೆ ಅದು ನಿಮ್ಮ ಅದೃಷ್ಟವೆಂದು ಭಾವಿಸಬೇಕು, ಅವಳಿಗೆ ನೋವಾಗುವಂತೆ ನಡೆದುಕೊಳ್ಳಲು ಹೋಗಬೇಡಿ, ಇಂಥ ಹೆಂಡತಿಯನ್ನು ಯಾವುದೋ ಕಾರಣಕ್ಕೆ ದೂರ ಮಾಡಿದರೆ ಖಂಡಿತ ಬದುಕಿನಲ್ಲಿ ನೆಮ್ಮದಿ ಇರಲ್ಲ. ಆದ್ದರಿಂದ ಸಂಸ್ಕಾರವಂತ ಹೆಂಡತಿ ಒಬ್ಬ ಪುರುಷನ ಬದುಕಿನಲ್ಲಿ ಅದೃಷ್ಟ ತರುತ್ತಾಳೆ ಎಂಬುವುದು ಚಾಣಕ್ಯನ ಮಾತಾಗಿದೆ.

ಗುಣವಂತ ಮಕ್ಕಳು
ಮಕ್ಕಳು ಎಲ್ಲಾ ಸಂದರ್ಭದಲ್ಲಿ ಪೋಷಕರ ಜೊತೆ ನಿಲ್ಲಬೇಕು. ನಮ್ಮ ಮಕ್ಕಳಲ್ಲಿ ಒಳ್ಳೆಯ ಗುಣಗಳಿರಬೇಕು ಎಂದು ಪ್ರತಿಯೊಬ್ಬ ಪೋಷಕರು ಬಯಸುತ್ತಾರೆ. ಮಕ್ಕಳನ್ನು ಗುಣವಂತರಾಗಿ ಬೆಳೆಸಿದರೆ ಅಂಥ ಮಕ್ಕಳು ಪೋಷಕರಿಗೆ ವಯಸ್ಸಾದಾಗ ಅವರ ರಕ್ಷಣೆ ಮಾಡುತ್ತಾರೆ. ಮಕ್ಕಳಲ್ಲಿ ಯಾವುದೇ ಕೆಟ್ಟ ಚಟಗಳಿರಬಾರದು, ಯಾರಿಗೂ ಅಂಥ ಮಕ್ಕಳಿರುತ್ತದೋ ಅವರು ದುಃಖ ಪಡಬೇಕಾಗಿಲ್ಲ, ಏಕೆಂದರೆ ಯಾವುದೇ ಸಂದರ್ಭದಲ್ಲಿ ಮಕ್ಕಳು ನಿಮ್ಮ ಕೈ ಬಿಡಲ್ಲ ಎಂಬುವುದಾಗಿ ಚಾಣಕ್ಯ ಹೇಳುತ್ತಾರೆ.
ಪೋಷಕರಿಗೆ ಮಕ್ಕಳೇ ಆಸ್ತಿ, ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಬೇಕು, ಆಗ ಮಾತ್ರ ಆ ಮಕ್ಕಳು ನಿಮಗೆ ನೆಮ್ಮದಿ ನೀಡಲು ಸಾಧ್ಯ, ಮಕ್ಕಳ ಗುಣ ಸರಿಯಿಲ್ಲದಿದ್ದರೆ ಪೋಷಕರ ನೆಮ್ಮದಿ ದೂರಾಗುವುದು, ಸಮಾಜದಲ್ಲಿ ಕೆಟ್ಟ ಹೆಸರು ತಂದುಕೊಡುತ್ತಾರೆ. ಅದೇ ಒಳ್ಳೆಯ ಗುಣದ ಮಕ್ಕಳಿದ್ದರೆ ಯಾವ ಕಾರಣಕ್ಕೂ ಚಿಂತಿಸಬೇಕಾಗಿ ಅವರು ಸದಾ ತಮ್ಮ ಪೋಷಕರನ್ನು ಕಾಪಾಡುತ್ತಾರೆ. ಯಾವ ವೃದ್ಧಾಶ್ರಮವೂ ಈ ಸಮಾಜದಲ್ಲಿ ಇರಲ್ಲ, ಆದ್ದರಿಂದ ಒಳ್ಳೆಯ ಮಕ್ಕಳನ್ನು ಪಡೆದವರೇ ಅದೃಷ್ಟವಂತವರು.

ಒಳ್ಳೆಯ ಸ್ನೇಹಿತರು
ಒಳ್ಳೆಯ ಸ್ನೇಹಿತರು ನಮ್ಮ ಜೊತೆಗಿದ್ದರೆ ಅದುವೇ ನಮಗೆ ದೊಡ್ಡ ಶಕ್ತಿ. ಒಳ್ಳೆಯವರ ಸಂಗ ಮಾಡಿದರೆ ನಮ್ಮ ಬದುಕಿನಲ್ಲಿ ಒಳ್ಲೆಯದಾಗುತ್ತದೆ, ಅವರು ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುತ್ತಾರೆ. ಒಬ್ಬ ಒಳ್ಳೆಯ ಸ್ನೇಹಿತ ಇದ್ದರೆ ನಾವು ತಪ್ಪು ಹೆಜ್ಜೆ ಇಡಲು ಬಿಡುವುದಿಲ್ಲ, ನಮ್ಮ ಕಷ್ಟ-ಸುಖದಲ್ಲಿ ಜೊತೆ ನಿಲ್ಲುತ್ತಾರೆ. ಒಳ್ಳೆಯ ಸ್ನೇಹಿತ ಸಿಕ್ಕರೆ ಅವರನ್ನು ಬಿಡಲೇಬಾರದು ಎಂದು ಚಾಣಕ್ಯ ಹೇಳುತ್ತಾರೆ.
ಎಲ್ಲರಿಗೂ ಸ್ನೇಹಿತರು ಇರುತ್ತಾರೆ, ಆದರೆ ನಿಜವಾದ ಸ್ನೇಹಿತರು ಯಾರು ಎಂಬುವುದು ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ತಿಳಿಯುವುದು. ಯಾರು ನಮ್ಮ ಕಷ್ಟದಲ್ಲಿ ಜೊತೆಗಿದ್ದು ನಮ್ಮ ಕಣ್ಣೀರು ಒರೆಸಲು ಸಹಾಯ ಮಾಡುತ್ತಾರೋ ಅಂಥ ಸ್ನೇಹಿತರನ್ನು ಯಾವುದೇ ಕಾರಣಕ್ಕೆ ದೂರ ಮಾಡಬಾರದು, ಅಂಥ ಸ್ನೇಹಿತರನ್ನು ಕಳೆದುಕೊಂಡರೆ ತುಂಬಾನೇ ನಷ್ಟ.
ಆದ್ದರಿಂದ ಒಳ್ಳೆಯ ಸ್ನೇಹಿತರನ್ನು ಯಾವತ್ತಿಗೂ ದೂರ ಮಾಡಬೇಡಿ.
ಮೇಲೆ ಹೇಳಿದ ಮೂರು ವ್ಯಕ್ತಿಗಳು ನಿಮ್ಮ ಬದುಕಿನಲ್ಲಿದ್ದರೆ ಅಂಥ ಪುರುಷನೇ ಅದೃಷ್ಟವಂತ ಎಂದು ಚಾಣಕ್ಯ ನೀತಿ ಹೇಳುತ್ತದೆ, ಈ ಮಾತು ನೀವೂ ಒಪ್ಪುತ್ತೀರಿ ತಾನೆ?



Click it and Unblock the Notifications