Just In
- 59 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Astrology tips: ನಿಮ್ಮ ರಾಶಿಚಕ್ರದ ಪ್ರಕಾರ ನೀವು ಯಾವ ಗಿಡವನ್ನು ಬೆಳೆಸಿದರೆ ಶುಭಫಲ
ಜ್ಯೋತಿಶಾಸ್ತ್ರ ನಮಗೆ ನಮ್ಮ ಬಗ್ಗೆ ಹಾಗೂ ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ. ಈ ಭವಿಷ್ಯವನ್ನು ಆಧರಿಸಿಯೇ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಇದನ್ನು ಆಧರಿಸಿಯೇ ಪ್ರತಿಯೊಂದು ಕೆಲಸ ಮಾಡುವವರು ನಮ್ಮ ಸುತ್ತಮುತ್ತ ಇದ್ದಾರೆ.
ಹಾಗೆಯೇ ನಿಮಗೆ ತಿಳಿದಿರಲಿ ಜ್ಯೋತಿಶಾಸ್ತ್ರ ನಮಗೆ ಹಲವಾರು ಅಚ್ಚರಿ ಎನಿಸುವ ವಿಚಾರಗಳ ಬಗ್ಗೆಯೂ ತಿಳಿಸಿಕೊಡುತ್ತದೆ. ಹೌದು ನಾವಿಂದು ಜ್ಯೋತಿಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ಗಿಡ ನೆಟ್ಟರೆ ಹಾಗೂ ಅವರ ಗುಣ ಸ್ವಭಾವದ ಪ್ರಕಾರ ಅವರು ಎಂಥಾ ಆಹಾರಗಳಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ:
1. ಬೆಂಕಿಯ ಚಿಹ್ನೆಯ ರಾಶಿಗಳಾದ ಮೇಷ, ಸಿಂಹ, ಧನು ರಾಶಿ
ಉರಿಯುತ್ತಿರುವ ಬೆಂಕಿಯ ಚಿಹ್ನೆಗಳಾದ ಮೇಷ, ಸಿಂಹ, ಧನು ರಾಶಿಯವರು ಸದಾ ಭಾವೋದ್ರಿಕ್ತರು ಮತ್ತು ಶಕ್ತಿಯಿಂದ ತುಂಬಿರುವ ರಾಶಿಯವರಾಗಿದ್ದಾರೆ. ಈ ರಾಶಿಯವರಿಗೆ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳು ಬೇಕಾಗುತ್ತದೆ. ಇವರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳಿಗೆ ಆದ್ಯತೆ ನೀಡಬೇಕು. ಈ ರಾಶಿಯವರು ಟೊಮೆಟೊಗಳು, ಸ್ಟ್ರಾಬೆರಿಗಳು ಮತ್ತು ಮೆಣಸಿನಂಥ ಗಿಡಗಳನ್ನು ನೆಡಿರಿ.
2. ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿ
ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿಯವರು ಭಾವನಾತ್ಮಕ ಮತ್ತು ಸೂಕ್ಷ್ಮವಾಗಿರುವ ರಾಶಿಚಕ್ರದವರಾಗಿರುತ್ತಾರೆ. ಇವರಿಗೆ ಪೋಷಣೆ ಮತ್ತು ಸಾಂತ್ವನ ನೀಡುವ ಆಹಾರಗಳು ಬೇಕಾಗುತ್ತವೆ. ಆದ್ದರಿಂದ ಇವರು ಪಾಲಕ್ನಂತಹ ಎಲೆಗಳ ಸೊಪ್ಪನ್ನು, ಹಾಗೆಯೇ ಆಲೂಗಡ್ಡೆ ಮತ್ತು ಕ್ಯಾರೆಟ್ಗಳಂತಹ ಬೇರು ತರಕಾರಿಗಳನ್ನು ನೆಡಬೇಕು.
3. ವಾಯು ಚಿಹ್ನೆಯ ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿ
ಗಾಳಿ ಚಿಹ್ನೆ ರಾಶಿಚಕ್ರಗಳಾದ ಮಿಥುನ, ತುಲಾ, ಕುಂಭ ರಾಶಿಯ ಬಗ್ಗೆ ಹೇಳಬೇಕೆಂದರೆ ಸಂವಹನ ಮತ್ತು ಸಂಪರ್ಕದಲ್ಲಿ ಇವು ಎತ್ತಿದ ಕೈ. ನಿಮಗೆ ಹಗುರವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳು ಬೇಕಾಗುತ್ತವೆ, ಆದ್ದರಿಂದ ನೀವು ನಿಮ್ಮ ಶಕ್ತಿಯನ್ನು ಮತ್ತು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸಿಕೊಳ್ಳಬಹುದು. ಕಿತ್ತಳೆ ಮತ್ತು ನಿಂಬೆಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು, ಹಾಗೆಯೇ ಕೋಸುಗಡ್ಡೆ ಮತ್ತು ಎಲೆಕೋಸುಗಳಂಥ ಗಿಡಗಳು ನಿಮಗೆ ಸಕಾರಾತ್ಮಕತೆಯನ್ನು ತರುತ್ತದೆ.
4. ಭೂಮಿಯ ಚಿಹ್ನೆಯ ರಾಶಿಗಳಾದ ವೃಷಭ, ಕನ್ಯಾ, ಮಕರ ರಾಶಿ
ಭೂಮಿಯ ಸಂಕೇತದ ರಾಶಿಚಕ್ರಗಳಾದ ವೃಷಭ, ಕನ್ಯಾ, ಮಕರ ರಾಶಿಯವರು ಸದಾ ಇತರರಿಗೆ ಆಧಾರವಾಗಿರುವಿರಿ ಮತ್ತು ಪ್ರಾಯೋಗಿಕವಾಗಿರುತ್ತೀರಿ. ನಿಮಗೆ ತೃಪ್ತಿಕರವಾದ ಆಹಾರಗಳು ಬೇಕಾಗುತ್ತವೆ. ಆಲೂಗಡ್ಡೆ ಮತ್ತು ಕ್ಯಾರೆಟ್ಗಳಂತಹ ಬೇರು ತರಕಾರಿಗಳನ್ನು, ಹಾಗೆಯೇ ಕುಂಬಳಕಾಯಿಯಂಥ ಬಳ್ಳಿಯ ಗಿಡಗಳನ್ನು ನೀವು ನೆಟ್ಟರೆ ಶುಭಫಲ.