Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
Astrology tips: ನಿಮ್ಮ ರಾಶಿಚಕ್ರದ ಪ್ರಕಾರ ನೀವು ಯಾವ ಗಿಡವನ್ನು ಬೆಳೆಸಿದರೆ ಶುಭಫಲ
ಜ್ಯೋತಿಶಾಸ್ತ್ರ ನಮಗೆ ನಮ್ಮ ಬಗ್ಗೆ ಹಾಗೂ ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ. ಈ ಭವಿಷ್ಯವನ್ನು ಆಧರಿಸಿಯೇ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಇದನ್ನು ಆಧರಿಸಿಯೇ ಪ್ರತಿಯೊಂದು ಕೆಲಸ ಮಾಡುವವರು ನಮ್ಮ ಸುತ್ತಮುತ್ತ ಇದ್ದಾರೆ.
ಹಾಗೆಯೇ ನಿಮಗೆ ತಿಳಿದಿರಲಿ ಜ್ಯೋತಿಶಾಸ್ತ್ರ ನಮಗೆ ಹಲವಾರು ಅಚ್ಚರಿ ಎನಿಸುವ ವಿಚಾರಗಳ ಬಗ್ಗೆಯೂ ತಿಳಿಸಿಕೊಡುತ್ತದೆ. ಹೌದು ನಾವಿಂದು ಜ್ಯೋತಿಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ಗಿಡ ನೆಟ್ಟರೆ ಹಾಗೂ ಅವರ ಗುಣ ಸ್ವಭಾವದ ಪ್ರಕಾರ ಅವರು ಎಂಥಾ ಆಹಾರಗಳಿಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ:

1. ಬೆಂಕಿಯ ಚಿಹ್ನೆಯ ರಾಶಿಗಳಾದ ಮೇಷ, ಸಿಂಹ, ಧನು ರಾಶಿ
ಉರಿಯುತ್ತಿರುವ ಬೆಂಕಿಯ ಚಿಹ್ನೆಗಳಾದ ಮೇಷ, ಸಿಂಹ, ಧನು ರಾಶಿಯವರು ಸದಾ ಭಾವೋದ್ರಿಕ್ತರು ಮತ್ತು ಶಕ್ತಿಯಿಂದ ತುಂಬಿರುವ ರಾಶಿಯವರಾಗಿದ್ದಾರೆ. ಈ ರಾಶಿಯವರಿಗೆ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳು ಬೇಕಾಗುತ್ತದೆ. ಇವರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳಿಗೆ ಆದ್ಯತೆ ನೀಡಬೇಕು. ಈ ರಾಶಿಯವರು ಟೊಮೆಟೊಗಳು, ಸ್ಟ್ರಾಬೆರಿಗಳು ಮತ್ತು ಮೆಣಸಿನಂಥ ಗಿಡಗಳನ್ನು ನೆಡಿರಿ.

2. ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿ
ನೀರಿನ ಚಿಹ್ನೆಯ ರಾಶಿಗಳಾದ ಕರ್ಕ, ವೃಶ್ಚಿಕ, ಮೀನ ರಾಶಿಯವರು ಭಾವನಾತ್ಮಕ ಮತ್ತು ಸೂಕ್ಷ್ಮವಾಗಿರುವ ರಾಶಿಚಕ್ರದವರಾಗಿರುತ್ತಾರೆ. ಇವರಿಗೆ ಪೋಷಣೆ ಮತ್ತು ಸಾಂತ್ವನ ನೀಡುವ ಆಹಾರಗಳು ಬೇಕಾಗುತ್ತವೆ. ಆದ್ದರಿಂದ ಇವರು ಪಾಲಕ್ನಂತಹ ಎಲೆಗಳ ಸೊಪ್ಪನ್ನು, ಹಾಗೆಯೇ ಆಲೂಗಡ್ಡೆ ಮತ್ತು ಕ್ಯಾರೆಟ್ಗಳಂತಹ ಬೇರು ತರಕಾರಿಗಳನ್ನು ನೆಡಬೇಕು.

3. ವಾಯು ಚಿಹ್ನೆಯ ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿ
ಗಾಳಿ ಚಿಹ್ನೆ ರಾಶಿಚಕ್ರಗಳಾದ ಮಿಥುನ, ತುಲಾ, ಕುಂಭ ರಾಶಿಯ ಬಗ್ಗೆ ಹೇಳಬೇಕೆಂದರೆ ಸಂವಹನ ಮತ್ತು ಸಂಪರ್ಕದಲ್ಲಿ ಇವು ಎತ್ತಿದ ಕೈ. ನಿಮಗೆ ಹಗುರವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳು ಬೇಕಾಗುತ್ತವೆ, ಆದ್ದರಿಂದ ನೀವು ನಿಮ್ಮ ಶಕ್ತಿಯನ್ನು ಮತ್ತು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸಿಕೊಳ್ಳಬಹುದು. ಕಿತ್ತಳೆ ಮತ್ತು ನಿಂಬೆಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು, ಹಾಗೆಯೇ ಕೋಸುಗಡ್ಡೆ ಮತ್ತು ಎಲೆಕೋಸುಗಳಂಥ ಗಿಡಗಳು ನಿಮಗೆ ಸಕಾರಾತ್ಮಕತೆಯನ್ನು ತರುತ್ತದೆ.

4. ಭೂಮಿಯ ಚಿಹ್ನೆಯ ರಾಶಿಗಳಾದ ವೃಷಭ, ಕನ್ಯಾ, ಮಕರ ರಾಶಿ
ಭೂಮಿಯ ಸಂಕೇತದ ರಾಶಿಚಕ್ರಗಳಾದ ವೃಷಭ, ಕನ್ಯಾ, ಮಕರ ರಾಶಿಯವರು ಸದಾ ಇತರರಿಗೆ ಆಧಾರವಾಗಿರುವಿರಿ ಮತ್ತು ಪ್ರಾಯೋಗಿಕವಾಗಿರುತ್ತೀರಿ. ನಿಮಗೆ ತೃಪ್ತಿಕರವಾದ ಆಹಾರಗಳು ಬೇಕಾಗುತ್ತವೆ. ಆಲೂಗಡ್ಡೆ ಮತ್ತು ಕ್ಯಾರೆಟ್ಗಳಂತಹ ಬೇರು ತರಕಾರಿಗಳನ್ನು, ಹಾಗೆಯೇ ಕುಂಬಳಕಾಯಿಯಂಥ ಬಳ್ಳಿಯ ಗಿಡಗಳನ್ನು ನೀವು ನೆಟ್ಟರೆ ಶುಭಫಲ.



Click it and Unblock the Notifications