Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಎಡ ಕೈ ಮೂಳೆ ಮುರಿದರೆ ಬಲದ ಕೈಗೆ ಪ್ಲಾಸ್ಟರ್ ಹಾಕಿದ ವೈದ್ಯರು!!
ನಾವು ಏನಾದರೂ ಆಸ್ಪತ್ರೆಗೆ ಹೋದರೆ ಆಗ ಅಲ್ಲಿ ವೈದ್ಯರು ನಮ್ಮ ಸಮಸ್ಯೆಯ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಎಲ್ಲಿ ನೋವಿದೆ ಎನ್ನುವ ಬಗ್ಗೆ ರೋಗಿಯಿಂದ ಮಾಹಿತಿ ಪಡೆದುಕೊಂಡ ಬಳಿಕ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಕೆಲವೊಂದು ಸಮಸ್ಯೆಗಳು ಕಾಡುವುದು. ಹೀಗೆ ವೈದ್ಯಕೀಯ ಲೋಕದಲ್ಲಿ ಕೆಲವೊಂದು ಸಲ ತಪ್ಪುಗಳು ನಡೆಯುವುದು ಸಹಜ. ಯಾಕೆಂದರೆ ವೈದ್ಯರು ಕೂಡ ಮನುಷ್ಯರಾಗಿರುವ ಕಾರಣದಿಂದಾಗಿ ತಪ್ಪು ನಡೆಯುತ್ತದೆ. ಇನ್ನು ಕೆಲವು ಸಲ ದೀರ್ಘಕಾಲದ ತನಕ ಪಾಳಿಯಲ್ಲಿರುವುದು ಮತ್ತು ಉದಾಸೀನದಿಂದಲೂ ತಪ್ಪುಗಳು ನಡೆಯುವುದು.
ಇಲ್ಲೊಂದು ಇಂತಹ ಘಟನೆ ಬಗ್ಗೆ ನಿಮಗೆ ಹೇಳಲಿದ್ದೇವೆ. ಅದೇನೆಂದರೆ ಇಲ್ಲಿ ಬಾಲಕನೊಬ್ಬ ಕೈ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗುತ್ತಾನೆ. ಆದರೆ ಆತನ ಗಾಯವಿಲ್ಲದ ಕೈಗೆ ವೈದ್ಯರು ಪ್ಲಾಸ್ಟರ್ ಹಾಕಿರುವರು. ಈ ನಿರ್ಲಕ್ಷ್ಯದ ಬಗ್ಗೆ ನೀವು ಈ ಲೇಖನದಲ್ಲಿ ಓದಿಕೊಂಡು ತಿಳಿಯಿರಿ.

ಬಿಹಾರದ ದರ್ಬಾಂಗ್ ಜಿಲ್ಲೆಯಲ್ಲಿರುವ ಅತೀ ದೊಡ್ಡ ಸರ್ಕಾರ ಆಸ್ಪತ್ರೆಯಲ್ಲಿ ಈ ಘಟನೆಯು ನಡೆದಿದೆ. ಏಳರ ಹರೆಯದ ಬಾಲಕ ಫೈಝನ್ ಮರದಿಂದ ಬಿದ್ದು ಕೈಗೆ ಗಾಯ ಮಾಡಿಕೊಂಡಿದ್ದಾನೆ. ಆತನ ಮೂಳೆ ಮುರಿದಿದೆ ಮತ್ತು ಆತನನ್ನು ತಕ್ಷಣವೇ ದರ್ಬಾಂಗ್ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್(ಡಿಎಂಸಿಎಚ್)ಗೆ ದಾಖಲಿಸಲಾಯಿತು.
ಮರದಿಂದ ಬಿದ್ದ ಬಾಲಕನ ಎಡ ಕೈಯ ಮೂಳೆ ಮುರಿತಕ್ಕೆ ಒಳಗಾಗಿತ್ತು ಮತ್ತು ಆತನ ಕೈಗೆ ಪ್ಲಾಸ್ಟರ್ ಮಾಡುವ ಅಗತ್ಯವಿತ್ತು. ಆದರೆ ವೈದ್ಯರು ನಿರ್ಲಕ್ಷ್ಯದಿಂದಾಗಿ ಬಾಲಕನ ಬಲದ ಕೈಗೆ ಪ್ಲಾಸ್ಟರ್ ಹಾಕಿ ಬಿಟ್ಟರು. ಬಾಲಕನು ತನ್ನ ಎಡದ ಕೈಗೆ ನೋವಾಗಿದೆ ಎಂದು ಹೇಳುತ್ತಲಿದ್ದರೂ ವೈದ್ಯರು ಮಾತ್ರ ಇದನ್ನು ಪರಿಗಣಿಸಲೇ ಇಲ್ಲ.
ಎಲ್ಲವೂ ಸರಿಯಾಗಿಯೇ ಇದ್ದ ಬಲ ಕೈಗೆ ವೈದ್ಯರು ಪ್ಲಾಸ್ಟರ್ ಹಾಕಿದರು. ಎಕ್ಸ ರೇಯಲ್ಲಿ ಕೂಡ ಬಾಲಕನ ಎಡ ಕೈಯ ಮೂಳೆ ಮುರಿತಕ್ಕೆ ಒಳಗಾಗಿರುವುದು ತಿಳಿದುಬರುತ್ತಿತ್ತು. ಆದರೂ ವೈದ್ಯರು ಇದನ್ನೆಲ್ಲಾ ಕಡೆಗಣಿಸಿ ಬಲ ಕೈಗೆ ಪ್ಲಾಸ್ಟರ್ ಹಾಕಿಬಿಟ್ಟರು. ವೈದ್ಯರು ಪ್ಲಾಸ್ಟರ್ ಹಾಕುವ ವೇಳೆ ಬಾಲಕನು ಅವರ ತಪ್ಪಿನ ಬಗ್ಗೆ ಹೇಳಿದರೂ ಅದನ್ನು ಕೂಡ ವೈದ್ಯರು ಕಡೆಗಣಿಸಿದರು. ವೈದ್ಯರು ಬಾಲಕನ ಮಾತನ್ನು ಕೂಡ ನಿರ್ಲಕ್ಷ್ಯ ಮಾಡಿದರು.
ಇನ್ನೊಬ್ಬ ವೈದ್ಯರು ನೀಡಿರುವಂತಹ ವರದಿಯಲ್ಲಿ ಕೂಡ ಬಾಲಕನ ಎಡದ ಕೈಯ ಮೂಳೆ ಮುರಿತಕ್ಕೆ ಒಳಗಾಗಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು. ಬಾಲಕನ ಕುಟುಂಬಸ್ಥರು ಈ ಬಗ್ಗೆ ಆಸ್ಪತ್ರೆಯ ಅಧೀಕ್ಷಕರಿಗೆ ದೂರು ನೀಡಿದರು ಮತ್ತು ಅವರು ಈ ಬಗ್ಗೆ ತನಿಖೆ ಮಾಡಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಈ ಘಟನೆಗೆ ತಾನು ಕಾರಣವೆಂದು ವೈದ್ಯರು ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಾಲಕನ ಮನೆಯವರು ಒತ್ತಾಯಿಸಿದ್ದಾರೆ. ಬಿಹಾರದ ಸರ್ಕಾರಿ ಆಸ್ಪತ್ರೆಗಳು ಮತ್ತು ಇಲ್ಲಿನ ವೈದ್ಯರ ನಿರ್ಲಕ್ಷ್ಯಗಳು ಆಗಾಗ ವರದಿಯಾಗುತ್ತಲೇ ಇದೆ. ಇಲ್ಲಿ ಮಕ್ಕಳು ಮೆದುಳು ಜ್ವರದಿಂದ ಬಳಲುತ್ತಿರುವುದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಲಿದೆ.



Click it and Unblock the Notifications


