Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ದೇವಸ್ಥಾನದ ಆವರಣಕ್ಕೆ ಬಂದ ಮೊಸಳೆಯನ್ನೇ ಪೂಜಿಸಿದರು ಜನರು!
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪ್ರಾಣಿ ಹಾಗೂ ಪಕ್ಷಿಗಳು ಯಾವುದಾದರೂ ದೇವ ದೇವತೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಪ್ರಾಣಿ ಪಕ್ಷಿಗಳು ಅವರ ವಾಹನವಾಗಿರುವುದು. ಹೀಗಾಗಿ ಮನುಷ್ಯರು ಕೂಡ ಅದನ್ನು ಪೂಜಿಸಿಕೊಂಡು ಬರುತ್ತದೆ. ಮುಖ್ಯವಾಗಿ ಈಶ್ವರನ ದೇವಸ್ಥಾನದಲ್ಲಿರುವಂತಹ ನಂದಿ, ಗಣಪತಿ ವಾಹನ ಇಲಿ, ಸುಬ್ರಹ್ಮಣ್ಯನ ದೇವರು ನವಿಲು ಹೀಗೆ ಹಲವಾರು ಉದಾಹರಣೆಗಳು ಇವೆ. ಹಿಂದೂ ಧರ್ಮದಲ್ಲಿ ಗೋವಿಗೂ ವಿಶೇಷವಾದ ಮಹತ್ವವಿದೆ. ಗೋವನ್ನು ದೇವತೆ ಎಂದೇ ಪೂಜಿಸಲಾಗುತ್ತದೆ ಮತ್ತು ಅದಕ್ಕೆ ಆಹಾರ ನೀಡುವುದು ಪುಣ್ಯದ ಕೆಲಸ ಎಂದೇ ಭಾವಿಸಲಾಗಿದೆ. ಆದರೆ ತುಂಬಾ ಅಪಾಯಕಾರಿ ಆಗಿರುವಂತಹ ಪ್ರಾಣಿಯನ್ನು ಪೂಜಿಸಿದರೆ ಹೇಗಿರಬಹುದು ಎಂದು ನೀವು ಊಹಿಸಿಕೊಳ್ಳಿ.

ಆದರೆ ಇಂತಹ ಒಂದು ಅಪಾಯಕಾರಿ ಪ್ರಾಣಿಯನ್ನು ಭಾರತೀಯರಾಗಿರುವಂತಹ ನಾವು ಪೂಜಿಸುತ್ತಿದ್ದೇವೆ. ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಪಲ್ಲ ಗ್ರಾಮದಲ್ಲಿರುವ ಖೊಡಿಯಾರ್ ಮಾತಾ ದೇವಾಲಯದಲ್ಲಿ ಅಪಾಯಕಾರಿ ಆದ ಮೊಸಳೆಯನ್ನು ಪೂಜಿಸಲಾಗಿದೆ.
ಖೊಡಿಯಾರ್ ದೇವಾಲಯದ ಆವರಣದಲ್ಲಿ ಸಂಜೆ ವೇಳೆಗೆ ಈ ಮೊಸಳೆಯು ಕಾಣಿಸಿಕೊಂಡಿದೆ. ಖೊಡಿಯರ್ ದೇವಸ್ಥಾನವು ಖೊಡಿಯಾ ಮಾತಾ'ವನ್ನು ಪೂಜಿಸುತ್ತಾರೆ. ಮೊಸಳೆಯು ಖೊಡಿಯಾರ್ ದೇವಿಯ ವಾಹನವೆಂದು ನಂಬಲಾಗಿದೆ. ಸಂಜೆ ವೇಳೆ ಬಂದ ಈ ಮೊಸಳೆಯನ್ನು ನೋಡಲು ದೂರದ ಊರುಗಳಿಂದಲೂ ಭಕ್ತರು ಬಂದು ಮೊಸಳೆಯನ್ನು ಪೂಜೆ ಮಾಡಿದರು.
ಹಸಿವಾದ ಮೊಸಳೆಯು ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇಲ್ಲಿನ ಜನರು ಮಾತ್ರ ಭಯಭೀತರಾಗಿಲ್ಲ. ಮೊಸಳೆ ಬಗ್ಗೆ ಭೀತಿ ಪಡುವ ಬದಲು ಸ್ಥಳೀಯರು ತುಂಬಾ ಭಿನ್ನ ಪ್ರತಿಕ್ರಿಯೆ ನೀಡಿರುವರು. ಮೊಸಳೆಯ ಸುತ್ತಲು ಸೇರುವ ಜನರು ಅದಕ್ಕೆ ಪ್ರಾರ್ಥನೆ ಮಾಡಿ ಬಳಿಕ ಆರತಿ ಬೆಳಗುವರು. ಅಪರೂಪದ ಅತಿಥಿಯೊಬ್ಬರು ದೇವಸ್ಥಾನಕ್ಕೆ ಬಂದಿರುವ ಬಗ್ಗೆ ಅರಣ್ಯ ಇಲಾಖೆಗೆ ತಿಳಿದಾಗ ಅವರು ನೇರವಾಗಿ ಅಲ್ಲಿಗೆ ಹೋಗಿ ಅದನ್ನು ರಕ್ಷಿಸಲು ಬಯಸಿದರು.
ಮಹಿಸಾಗರ್ ನ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿರುವ ಆರ್ ಎಂ ಪರ್ಮಾರ್ ಅವರು ಹೇಳುವ ಪ್ರಕಾರ, ಈ ಮೊಸಳೆಯನ್ನು ರಕ್ಷಿಸಲು ಜನರು ಸುಮಾರು ಎರಡು ಗಂಟೆ ಕಾಲ ವಿಳಂಬ ಮಾಡಿದರು. ಯಾಕೆಂದರೆ ಜನರು ಕೊನೇ ಕ್ಷಣದವರೆಗೆ ಮಂದಿರಕ್ಕೆ ದೌಡಾಯಿಸಿಕೊಂಡು ಬಂದು ಮೊಸಳೆಯ ಪ್ರಾರ್ಥನೆಯಲ್ಲಿ ತೊಡಗಿದ್ದರು. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲು ಬಯಸದೆ ಇದ್ದ ಕಾರಣದಿಂದಾಗಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ಕಾಯಬೇಕಾಯಿತು. ಅದಾಗ್ಯೂ, ಇದರ ಬಳಿಕ ಅಧಿಕಾರಿಗಳು ಹತ್ತಿರದಲ್ಲೇ ಇರುವ ಕೊಳವೊಂದಕ್ಕೆ ಇದನ್ನು ಬಿಟ್ಟುಬಿಟ್ಟರು.



Click it and Unblock the Notifications











