Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದರೂ, ಇನ್ನೂ ಉತ್ತರ ಸಿಗುತ್ತಿಲ್ಲ!
ಏಕತೆಯಲ್ಲಿ ಅನೇಕತೆ ಎಂಬುದು ಭಾರತಕ್ಕಿರುವ ಹೆಮ್ಮೆಯಾಗಿದೆ. ವಿವಿಧ ಸಂಸ್ಕೃತಿ, ಅನೇಕ ಆಚಾರ ವಿಚಾರಗಳು, ಸಂಪ್ರದಾಯಗಳು, ವಿವಿಧ ಧರ್ಮಗಳು ಹೀಗೆ ಬೇರೆ ದೇಶಗಳಿಗಿಂತಲೂ ಭಾರತ ಅನೂಹ್ಯವಾದುದು ಐಕ್ಯತೆಯನ್ನು ಹೊಂದಿರುವಂಥದ್ದು.
ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಸ್ವಾಂತತ್ರ್ಯಕ್ಕೆ ಏನೂ ಕೊರತೆಯಿಲ್ಲ. ಆಚಾರ ವಿಚಾರಗಳನ್ನು ಯಾವುದೇ ಕಟ್ಟುಪಾಡುಗಳಿಲ್ಲದೆ, ಮುಕ್ತವಾಗಿ ಇಲ್ಲಿ ಪ್ರಕಟಿಸಬಹುದು. ಆದ್ದರಿಂದಲೇ ನಮ್ಮ ದೇಶ ವಿದೇಶದವರನ್ನು ಸೆಳೆಯುತ್ತಿದೆ. ನಮ್ಮ ಪದ್ಧತಿಗಳನ್ನು ಅವರೂ ಆಚರಿಸುವಂತೆ ಈ ಆಚರಣೆಗಳು ಅವರನ್ನು ಪ್ರೇರೇಪಿಸಿವೆ. ಒಂದು ರೀತಿಯಲ್ಲಿ ಇಲ್ಲಿರುವ ಜನರಿಗೆ ಸರ್ವ ಸ್ವಾತಂತ್ರ್ಯವೂ ದೊರೆಯುತ್ತದೆ.
ದೇಶದಲ್ಲಿ
ಹೇಗೆ
ಸಮಗ್ರತೆ
ಒಂದಾಗಿ
ಮಿಳಿತಗೊಂಡಿದೆಯೋ
ಹಾಗೆಯೇ
ಕೆಲವೊಂದು
ನಿಗೂಢಗಳನ್ನು
ತನ್ನಲ್ಲಿ
ಬಚ್ಚಿಟ್ಟುಕೊಂಡಿದೆ.
ಈ
ನಿಗೂಢತೆಗಳು
ಬರೀ
ರಹಸ್ಯವನ್ನು
ಮಾತ್ರ
ಒಳಗೊಂಡಿರದೇ
ತನ್ನದೇ
ವಿಶೇಷತೆಯನ್ನು
ಒಳಗೊಂಡಿದೆ.
ಪ್ರಪಂಚದ
ಯಾವ
ಮೂಲೆಗಳಲ್ಲೂ
ಈ
ರೀತಿಯ
ಅತಿ
ವಿಶೇಷ
ನಿಗೂಢತೆಗಳನ್ನು
ನಿಮಗೆ
ಕಾಣಲು
ಕಂಡಿರಲು
ಸಾಧ್ಯವಿಲ್ಲ.
ಹಾಗಿದ್ದರೆ
ಬನ್ನಿ
ಇಂದಿನ
ಲೇಖನದಲ್ಲಿ
ಭಾರತದಲ್ಲಿರುವ
ಅತಿ
ವಿಸ್ಮಯಕಾರಿ
ಅಂಶಗಳನ್ನು
ನೋಡೋಣ.
ಅವಳಿ ಹಳ್ಳಿಗಳು
ಕೇರಳದಲ್ಲಿರುವ ಕೊಡಿನ್ಹಿ ಗ್ರಾಮವು ಅವಳಿಗಳಿಗಾಗಿ ಭಾರೀ ಖ್ಯಾತಿಯನ್ನು ಪಡೆದಿದೆ. ಈ ಪುಟ್ಟ ಗ್ರಾಮದಲ್ಲಿ ಸುಮಾರು 2000 ದಷ್ಟು ಜನರು ವಾಸವಾಗಿದ್ದಾರೆ. ಅದರಲ್ಲಿ ಬರೋಬ್ಬರಿ 200 ಅವಳಿ-ಜವಳಿಗಳು ಇದ್ದಾರೆ.
Image courtesy - www.thebinnews.com
ಅವಳಿ ಹಳ್ಳಿಗಳು
ವಿಜ್ಞಾನಿಗಳು ಅದರ ಹಿಂದಿನ ಕಾರಣಗಳನ್ನು ಇಂದಿಗೂ ಹುಡುಕುತ್ತಲೇ ಇದ್ದಾರೆ. ಇಡಿ ದೇಶದಲ್ಲಿ ಅವಳಿಗಳ ಅನುಪಾತ ಕಡಿಮೆ ಇದ್ದಾಗಲೂ ಸಹ ಈ ಗ್ರಾಮದಲ್ಲಿ ಅವಳಿಗಳ ಸಂಖ್ಯೆ ಅಧಿಕ ಮಟ್ಟದಲ್ಲಿ ಏಕೆ ಇದೆ ಎಂಬ ಕುರಿತು ನಿಖರ ಕಾರಣ ಇಂದಿಗೂ ಸಿಕ್ಕಿಲ್ಲ.
Image courtesy - www.thebinnews.com
ಜೋಧ್ಪುರ್ನ ಸ್ಫೋಟ
ಡಿಸೆಂಬರ್ 18 2012 ರಂದು ಕಿವಿಗಡಚಿಕ್ಕುವ ಒಂದು ಆ ಸ್ಫೋಟಕಾರಿ ಸದ್ದಿಗೆ ಜೋಧ್ಪುರ್ ಸಾಕ್ಷಿಯಾಯಿತು. ವಿವರಿಸಲು ಸಾಧ್ಯವಾಗದ ಒಂದು ಸ್ಫೋಟವನ್ನು ಇಲ್ಲಿನ ಜನರು ಕೇಳಿದಾರೆ. ಇದು ಆಕಾಶದಲ್ಲಿ ಸಂಭವಿಸಿತು ಎನ್ನುವುದು ಮತ್ತೊಂದು ವಿಸ್ಮಯ. ವಿಜ್ಞಾನಿಗಳ ಪ್ರಕಾರ ಇಂತಹ ಸದ್ದನ್ನು ಅವರು ಇದುವರೆಗೂ ಕೇಳಿರಲಿಲ್ಲವಂತೆ. ಇಂದಿಗೂ ಸಹ ಜೋಧ್ಪುರ್ ಸ್ಫೋಟವು ವಿವರಣೆಗೆ ನಿಲುಕದೆ ಹಾಗೆಯೇ ಇದೆ.
Photo Courtesy: Ghirlandajo
9 ಅನಾಮಿಕರು
ಭಾರತವು ತನ್ನದೆ ಆದ ಗುಪ್ತ ಕತೆಗಳನ್ನು ಹೊಂದಿದೆ. 9 ಅನಾಮಿಕರು ಅಥವಾ ಗೊತ್ತಿರದ ಜನರು ಒಂದು ರಹಸ್ಯ ಸಂಘಕ್ಕೆ ಸೇರಿದವರಂತೆ. ಸಾಮ್ರಾಟ ಅಶೋಕನಿಂದ ಖುದ್ದಾಗಿ ಆರಂಭಿಸಲ್ಪಟ್ಟ ಈ ಪಂಥವು 9 ಜನ ಅನಾಮಿಕರನ್ನು ಒಳಗೊಂಡಿರುತ್ತದೆ. ಇವರು ಮನಃಶಾಸ್ತ್ರೀಯ ಯುದ್ಧ ಕಲೆ, ಬಾಹ್ಯಾಕಾಶ ಜೀವಿಗಳ ಜೊತೆಗೆ ಸಂವಾದ ನಡೆಸುವುದು, ಗುರುತ್ವಾಕರ್ಷಣೆಯನ್ನು ಇಲ್ಲವಾಗಿಸುವುದು ಇತರೆ ಕಲೆಗಳಲ್ಲಿ ಪರಿಣತಿಯನ್ನು ಪಡೆದಿದ್ದಾರಂತೆ. ಈ ಪಂಥವು ಇಂದಿಗು ಅಸ್ತಿತ್ವದಲ್ಲಿದೆ ಎಂಬ ನಂಬಿಕೆಗಳು ಚಾಲ್ತಿಯಲ್ಲಿವೆ. ಆದರೆ ಈ 9 ಜನರನ್ನು ನೋಡಿದವರು ಯಾರೂ ಇಲ್ಲ. ಅದು ಇಂದಿಗು ರಹಸ್ಯವಾಗಿ ಉಳಿದಿದೆ.
Pic - shanepedia.wordpress.com
ಶಾಪಗ್ರಸ್ಥ ಗ್ರಾಮ - ಕುಲ್ಧಾರಾ
ಕುಲ್ಧಾರಾ ಎಂಬ ಗ್ರಾಮವು ರಾಜಸ್ಥಾನದಲ್ಲಿದೆ. ಇದು ಇಂದಿಗೂ ಸಹ ಅವಶೇಷಗಳಲ್ಲಿಯೇ ಇದೆ. ಒಂದು ಶಾಪದ ನಿಮಿತ್ತವಾಗಿ ಈ ಗ್ರಾಮವು ಶಾಪಗ್ರಸ್ತವಾಗಿ ಇಂದಿನ ಸ್ಥಿತಿಗೆ ತಲುಪಿತು ಎಂದು ಹೇಳಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
www.rajasthangk.net
ಶಾಪಗ್ರಸ್ಥ ಗ್ರಾಮ - ಕುಲ್ಧಾರಾ
ಒಂದಾನೊಂದು ಕಾಲದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಈ ಗ್ರಾಮವು ರಾತ್ರೋ ರಾತ್ರಿ ಜನರಿಲ್ಲದೆ ಸ್ಮಶಾನದಂತಾಗಿದ್ದು ಮಾತ್ರ ಇಂದಿಗು ಬಗೆಹರಿಸಲಾಗದ ರಹಸ್ಯವಾಗಿ ಉಳಿದಿದೆ.
www.rajasthangk.net
ಕೊಂಗ್ಕ ಲಾ ಪಾಸ್ ಬಾಹ್ಯಾಕಾಶ ಜೀವಿಗಳ ನೌಕಾ ನೆಲೆ
ಭಾರತ ಚೀನಾ ಗಡಿಯಲ್ಲಿ ಕೊಂಗ್ಕ ಲಾ ಪಾಸ್ ಎಂಬ ಸ್ಥಳವಿದೆ. ಇಲ್ಲಿ ಆಗಮಿಸುವವರು ಆಕಾಶವನ್ನೇ ನೋಡುತ್ತಾ ಇರುತ್ತಾರೆ. ಇಲ್ಲಿ ನೀರವ ಮೌನ, ವಿಚಿತ್ರವಾದ ಸದ್ದು ಇತ್ಯಾದಿಗಳನ್ನು ನಾವು ಗಮನಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
Pic - ufosightingshotspot
ಕೊಂಗ್ಕ ಲಾ ಪಾಸ್ ಬಾಹ್ಯಾಕಾಶ ಜೀವಿಗಳ ನೌಕಾ ನೆಲೆ
ಈ ಸ್ಥಳವು ನಮ್ಮ ಪಟ್ಟಿಯಲ್ಲಿ ಸ್ಥಾನಪಡೆಯಲು ಕಾರಣ ಇದು ಬಾಹ್ಯಾಕಾಶ ಜೀವಿಗಳ ನೌಕಾ ನೆಲೆಯಂತೆ. (ಅಂದರೆ ಯುಎಫ್ಒ ಬೇಸ್) ಹೌದು ಇಲ್ಲಿನ ಜನರು ಚಿತ್ರ ವಿಚಿತ್ರ ಬಾಹ್ಯಾಕಾಶ ನೌಕೆಗಳನ್ನು ನೋಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದಾಗ ನೀವು ಒಂದನ್ನು ನೋಡಬಹುದು ಎಂಬುದು ಅವರ ನಂಬಿಕೆ.
Pic - ufosightingshotspot
ಸುಭಾಷ್ ಚಂದ್ರ ಬೋಸ್ರ ಮರಣ
ನೇತಾಜಿ ಎಂದು ಕರೆಯುವ ನಮ್ಮ ಹೆಮ್ಮೆಯ ನಾಯಕನ ಕಣ್ಮರೆ ಇಂದಿಗೂ ನಿಗೂಢ. ಇತಿಹಾಸದ ಪ್ರಕಾರ ಅವರು 1945 ರಲ್ಲಿ ವಿಮಾನ ಅಪಘಾತದಲ್ಲಿ ಮಡಿದರು.
ಸುಭಾಷ್ ಚಂದ್ರ ಬೋಸ್ರ ಮರಣ
ಮತ್ತೊಂದು ವಾದದ ಪ್ರಕಾರ ಇವರನ್ನು ಸ್ಟಾಲಿನ್ ಹತ್ಯೆ ಮಾಡಿದನಂತೆ. ಇನ್ನೂ ಕೆಲವರ ವಾದದ ಪ್ರಕಾರ ಇವರು ಭೂಗತರಾಗಿ ಜೀವಿಸಿದರಂತೆ, ಇನ್ನೂ ಕೆಲವರು 1985ರಲ್ಲಿಯೇ ಅವರು ಸಹಜ ಸಾವನ್ನಪ್ಪಿದರೆಂದು ಅಭಿಪ್ರಾಯಪಡುತ್ತಾರೆ. ಆದರೆ ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.
ಅನಂತಪುರದ ನೇತಾಡುವ ಕಂಬ
ಅನಂತಪುರದಲ್ಲಿರುವ ಲೇಪಾಕ್ಷಿಯ ನೇತಾಡುವ ಕಂಬು ವಿಸ್ಮಯಗಳ ತಾಣವಾಗಿದೆ. ಇಲ್ಲಿ 70 ಸದೃಢ ಕಂಬಗಳು ದೇವಾಲಯದ ಭಾರವನ್ನು ಹೊತ್ತುಕೊಂಡಿವೆ. ಆದರೂ ಇಲ್ಲಿ ಒಂದು ಕಂಬ ಜನರ ಆಕರ್ಷಣೆಗೆ ಪಾತ್ರವಾಗಿದೆ. ಅದನ್ನು ನೇತಾಡುವ ಕಂಬವೆಂದು ಗುರುತಿಸಲಾಗುತ್ತದೆ. ಅದು ನೆಲವನ್ನು ತಾಕದೆ, ಸ್ವಲ್ಪ ಮೇಲೆಯೇ ನಿಂತಿದೆ. ಒಂದು ಪೇಪರ್ ಅಥವಾ ತೆಳುವಾದ ಕಟ್ಟಿಗೆಯನ್ನು ಅದರ ಕೆಳಗೆ ಹಾಯಿಸಿ ಬೇಕಾದರೂ ನೀವು ಪರೀಕ್ಷಿಸಬಹುದು. ಈ ಕಂಬ ಹೇಗೆ ನೇತಾಡುತ್ತಿದೆ ಎಂಬುದೇ ರಹಸ್ಯವಾಗಿ ಇಂದಿಗೂ ಉಳಿದುಕೊಂಡಿದೆ.
courtesy - http://allindiaroundup.com